Wednesday 6 June 2018

Samyutta nikaya 41.ಚಿತ್ತ ಸಂಯುತ್ತ

41.ಚಿತ್ತ ಸಂಯುತ್ತ


 1.ಸಂಯೋಜನ ಸುತ್ತಂ

343. ಒಮ್ಮೆ ಮಚ್ಛಿಕಾಸಂಡೆಯ ಅಂಬಟ್ಟಕವನದಲ್ಲಿ ಅಸಂಖ್ಯಾತ ಹಿರಿಯ ಬಿಕ್ಖುಗಳು ವಿಹರಿಸುತ್ತಿದ್ದರು, ಆ ಸಂದರ್ಭದಲ್ಲಿ ಹಿರಿಯ ಭಿಕ್ಖುಗಳು ಆಹಾರವನ್ನು ಸ್ವೀಕರಿಸಿ ಹಿಂತಿರುಗಿದ್ದರು, ಅವರು ತಮ್ಮ ಆಹಾರ ಸೇವನೆಯ ನಂತರ ದೊಡ್ಡ ಗುಡಾರದಲ್ಲಿ ಕುಳಿತಿದ್ದರು. ಆಗ ಅವರಲ್ಲಿ ಧಮ್ಮಚಚರ್ೆಯುಂಟಾಯಿತು; ಆಯುಷ್ಮಂತರೇ ಸಂಯೋಜನ(ಸಂಕೋಲೆ) ಮತ್ತು ಯಾವ ವಿಷಯಗಳು ಸಮಯೋಜನ್ನುಂಟು ಮಾಡುವವೋ; ಈ ವಿಷಯಗಳ ಅರ್ಥಗಳು ವಿಭಿನ್ನವೇ ? ಮತ್ತು ಪದಗಳು ವಿಬಿನ್ನವೇ ಅತವಾ ಒಂದೇ ಅರ್ಥವಾಗಿದ್ದು ವಿಭಿನ್ನ ಪದಗಳಿಂದ ಕೂಡಿದೆಯೆ ? ಆಗ ಕೆಲವು ಹಿರಿಯರು ಹೀಗೆ ಉತ್ತರಿಸಿದರು : ಮಿತ್ರರೇ ಸಂಯೋಜನ ಹಾಗು ಸಂಯೋಜನಕಾರಿ ಇವೆರಡು ವಿಭಿನ್ನ ಅರ್ಥವನ್ನು ಹೊಂದಿವೆ ಹಾಗೆಯೇ ವಿಭಿನ್ನ ಪದಗಳನ್ನು ಹೊಂದಿವೆ. ಆಗ ಇತರ ಹಿರಿಯರು ಹೀಗೆ ಉತ್ತರಿಸಿದರು.: ಮಿತ್ರರೇ, ಸಂಯೋಜನೆ ಹಾಗು ಸಂಯೋಜನಕಾರಿ ಇವೆರಡು ಒಂದೆ ಅರ್ಥವನ್ನು ಹೊಂದಿದ್ದು ಕೇವಲ ಪದಗಳು ವಿಭಿನ್ನವಾಗಿದೆಯಷ್ಟೆ.
ಆ ಸಮಯದಲ್ಲಿ ಚಿತ್ತನೆಂಬ ಗೃಹಸ್ಥನು ಮಿಗಪಥಕದಲ್ಲಿ ಯಾವುದೋ ಕಾರ್ಯನಿಮಿತ್ತ ಬಂದಿದ್ದನು. ನಂತರ ಚಿತ್ತನು ಈ ರೀತಿ ಕೇಳಿದನು : ಅಸಂಖ್ಯಾತ ಹಿರಿಯ ಭಿಕ್ಖುಗಳು ಆಹಾರ ಸ್ವೀಕರಿಸಿ ಹಿಂತಿರುಗಿದ್ದು ಚಚರ್ೆಯಲ್ಲಿ ತೊಡಗಿದ್ದಾರೆ ಇದನ್ನು ಆಲಿಸಿದ   ಚಿತ್ತನು ಆ ಹಿರಿಯ ಭಿಕ್ಖುಗಳಿರುವಡೆಯಲ್ಲಿ ಬಂದನು, ಹಾಗು ಭಕ್ತಿಪೂರ್ವಕವಾಗಿ ವಂದಿಸಿ, ಒಂದೆಡೆ ಕುಳಿತನು, ನಂತರ ಹೀಗೆ ಹೇಳಿದನು; ಪೂಜ್ಯರೇ ತಮ್ಮಲ್ಲಿ  ಸಂಯೋಜನ(ಸಂಕೋಲೆ) ಮತ್ತು ಯಾವ ವಿಷಯಗಳು ಸಮಯೋಜನ್ನುಂಟು ಮಾಡುವವೋ; ಈ ವಿಷಯಗಳ ಅರ್ಥಗಳು ವಿಭಿನ್ನವೇ ? ಮತ್ತು ಪದಗಳು ವಿಬಿನ್ನವೇ ಅತವಾ ಒಂದೇ ಅರ್ಥವಾಗಿದ್ದು ವಿಭಿನ್ನ ಪದಗಳಿಂದ ಕೂಡಿದೆಯೆ ? ಎಂಬ ವಿಷಯದಲ್ಲಿ ಚಚರ್ೆಯಿರುವುದೆಂದು ಕೇಳಿದ್ದೇನೆ .ಹಾಗು ಆಗ ಕೇಲವು ಹಿರಿಯರು ಹೀಗೆ ಉತ್ತರಿಸಿದ್ದಾರೆ ಮಿತ್ರರೇ ಸಂಯೋಜನ ಹಾಗು ಸಂಯೋಜನಕಾರಿ ಇವೆರಡು ವಿಭಿನ್ನ ಅರ್ಥವನ್ನು ಹೊಂದಿವೆ ಹಾಗೆಯೇ ವಿಭಿನ್ನ ಪದಗಳನ್ನು ಹೊಂದಿವೆ. ಹಾಗು ಆಗ ಇತರ ಹಿರಿಯರು ಹೀಗೆ ಉತ್ತರಿಸಿದ್ದಾರೆ: ಮಿತ್ರರೇ, ಸಂಯೋಜನೆ ಹಾಗು ಸಂಯೋಜನಕಾರಿ ಇವೆರಡು ಒಂದೆ ಅರ್ಥವನ್ನು ಹೊಂದಿದ್ದು ಕೇವಲ ಪದಗಳು ವಿಭಿನ್ನವಾಗಿದೆಯಷ್ಟೆ.  ಹೀಗೇ ಕೇಳಿದ ವಿಷಯಗಳು  ನಿಜವೇ? ಹೌದು ಗೃಹಪತಿಯೇ ನಿಜವೇ ಆಗಿದೆ..
ಭಂತೆ ಸಂಯೋಜನ ಹಾಗು ಸಂಯೋಜನಕಾರಿ ಇವೆರಡು ವಿಭಿನ್ನ ಅರ್ಥವನ್ನು ಹೊಂದಿವೆ ಹಾಗೆಯೇ ವಿಭಿನ್ನ ಪದಗಳನ್ನು ಹೊಂದಿವೆ.ಇದನ್ನು ನಾನು ಉಪಮೆಯ ಮೂಲಕ ತಿಳಿಸುತ್ತೇನೆ, ಏಕೆಂದರೆ ಬುದ್ಧಿವಂತರು ಉಪಮೆಯ ಮೂಲಕ ಚೆನ್ನಾಗಿ ಅರ್ಥಮಾಡಿಕೋಳ್ಳಬಲ್ಲರು. ಒಂದು ವೇಳೆ ಬಿಳಿಯ ಎತ್ತು ಹಾಗು ಕರಿಯ ಎತ್ತನ್ನು ನೇಗಿಲಿಗೆ ಕಟ್ಟಿದಾಗ  ಕರಿಯ ಎತ್ತು ಬಿಳಿಯ ಎತ್ತಿಗೆ ಕಟ್ಟಲ್ಪಟ್ಟಿದೆ ಅಥವಾ ಬಿಳಿಯ ಎತ್ತು ಕರಿಯ ಎತ್ತಿಗೆ ಕಟ್ಟಲ್ಪಟ್ಟಿದೆ ಎಂದರೆ ಸಮಂಜಸವಾಗಿರುತ್ತದೆಯೇ ?  ಇಲ್ಲ ಗೃಹಸ್ಥನೇ, ಹಾಗೆ ಹೇಳಲು ಆಗದು ,ಬದಲಾಗಿ  ಎರಡು ನೇಗಿಲಿಗೆ ಕಟ್ಟಲ್ಪಟ್ಟಿದೆ, ಅದೇ ಅಲ್ಲಿ ಬಂಧನವಾಗಿದೆ. ಅದೇ ರೀತಿ ಪೂಜ್ಯರೇ, ಕಣ್ಣು, ರೂಪಗಳಿಗೆ ಬಂಧನವಲ್ಲ, ಹಾಗೇಯೆ ರೂಪಗಳು ಕಣ್ಣಿಗೆ ಬಂಧನವಲ್ಲ, ಬದಲಾಗಿ ಇವೆರಡರ ಪರಸ್ಪರ ಅವಲಂಬನೆಯಿಂದಾಗಿ ಆಸೆ ಹಾಗು ರಾಗಗಳು ಉಂಟಾಗುತ್ತವೆ,ಅದೇ ಅಲ್ಲಿ ಸಂಯೋಜನವಾಗಿದೆ  ಅದೇ ರೀತಿ ಕಿವಿಯು ಶಬ್ದಕ್ಕೆ ಸಂಯೋಜನವಾಗಿಲ್ಲ, ...........ಅದೇ ರೀತಿ ಮೂಗು ವಾಸನೆಗೆ ಸಂಯೋಜನವಾಗಿಲ್ಲ...........ಅದೇ ರೀತಿ ನಾಲಿಗೆಯು ರುಚಿಗೆ ಸಂಯೋಜನವಾಗಿಲ್ಲ................ಅದೇ ರೀತಿ ದೇಹವು ಸ್ಪರ್ಶಕ್ಕೆ ಸಂಯೋಜನವಾಗಿಲ್ಲ...........ಅದೇ ರೀತಿ ಮನಸ್ಸು ಧಮ್ಮಕ್ಕೆ(ಮಾನಸಿಕ ವಿಷಯಗಳಿಗೆ) ಸಂಯೋಜನವಾಗಿಲ್ಲ.ಅಥವಾ ಧಮ್ಮವು ಮನಸ್ಸಿಗೆ ಸಂಯೋಜನವಾಗಿಲ್ಲ, ಬದಲಾಗಿ ಇವೆರೆಡರ ಪರಸ್ಪರ ಅವಲಂಬನೆಯಿಂದಾಗಿ ಆಸೆ ಮತ್ತು ರಾಗಗಳು ಉಂಟಾಗುತ್ತವೆ.; ಅದೇ ಅಲ್ಲಿ ಸಂಯೋಜನವಾಗಿದೆ. ಗೃಹಪತಿಯೇ ಖಂಡಿತವಾಗಿಯು ಲಾಭವನ್ನು ಪಡೆದಿರುವೆ ,ಸುಲಾಭವನ್ನೇ ಪಡೆದಿರುವೆ, ಗಂಭೀರವಾದ ಬುದ್ಧವಚನದಲ್ಲಿ ಪ್ರಜ್ಞಚಕ್ಷುವನ್ನು ಪಡೆದಿರುವೆ.


2. ಪಠಮ ಇಸಿದತ್ತ ಸುತ್ತಂ

344. ಒಮ್ಮೆ ಅಸಂಖ್ಯ ಹಿರಿಯ ಭಿಕ್ಖುಗಳು ಮಚ್ಛಿಕಾಸಣ್ಣೆಯಲ್ಲಿನ ಆಮ್ರವನದಲ್ಲಿ (ಮಾವಿನ ತೋಪು) ವಿಹರಿಸುತ್ತಿದ್ದರು. ಆಗ ಗೃಹಸ್ಥ ಚಿತ್ತನು ಆ ಹಿರಿಯ ಭಿಕ್ಖುಗಳ ಸಮೀಪಕ್ಕೆ ಬಂದು ಗೌರವದಿಂದ ವಂದಿಸಿ ಒಂದೆಡೆ ನಿಂತು ಅವರಿಗೆ ಹೀಗೆ ಹೇಳಿದನು: ಪೂಜ್ಯನೀಯ ಭಂತೆಯವರೆ, ನಾಳೆ ನಮ್ಮಲ್ಲಿ ಭೋಜನವನ್ನು ಸ್ವೀಕರಿಸಬೇಕೆಂದು ಕೋರಿಕೊಳ್ಳುತ್ತೇನೆ. ಆ ಹಿರಿಯ ಭಿಕ್ಖುಗಳು ಮೌನದಿಂದ ಸಮ್ಮತಿಸಿದರು. ಇದನ್ನು ಅರಿತ ಗೃಹಸ್ಥ ಚಿತ್ತನು ಸಂತೃಪ್ತನಾಗಿ ತನ್ನ ಆಸನದಿಂದೆದ್ದು, ಭಿಕ್ಖುಗಳಿಗೆ ಗೌರವ ಸಮಪರ್ಿಸಿ ಅವರ ಬಲಗಡೆಯಿಂದ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರಟನು. ರಾತ್ರಿಯು ಮುಗಿದು ಮುಂಜಾನೆ ಭಿಕ್ಖುಗಳು ಶುಚಿಯಾಗಿ, ಚೀವರಧರಿಸಿ, ಪಿಂಡಪಾತ್ರೆಗಳನ್ನು ತೆಗೆದುಕೊಂಡು ಗೃಹಸ್ಥ ಚಿತ್ತನ ವಾಸಸ್ಥಳದ ಬಳಿಗೆ ಬಂದರು. ನಂತರ ಆಹ್ವಾನಿತರಾಗಿ ಒಳಗೆ ಪ್ರವೇಶಿಸಿ ತಮಗೆ ಸಿದ್ಧಪಡಿಸಿದ್ದ ಆಸನಗಳಲ್ಲಿ ಕುಳಿತರು.
ನಂತರ ಚಿತ್ತ ಗೃಹಸ್ಥನು ಆ ಭಿಕ್ಖುಗಳನ್ನು ಸಮೀಪಿಸಿ, ವಂದಿಸಿ ಒಂದೆಡೆ ಕುಳಿತನು. ಅವರಿಗೆ ಹೀಗೆ ಪ್ರಶ್ನಿಸಿದನು: ಧಾತುಗಳ ನಾನತ್ವ ಧಾತುಗಳ ನಾನತ್ವ ಎನ್ನುತ್ತಾರಲ್ಲ, ಭಗವಾನರಿಂದ ಯಾವ ವಿಧದಲ್ಲಿ ಈ ಧಾತುಗಳ ನಾನತ್ವವು ವಿವರಿಸಲ್ಪಟ್ಟಿದೆ. ಯಾವಾಗ ಈ ಬಗೆಯಲ್ಲಿ ಪ್ರಶ್ನೆಯು ಕೇಳಲಾಯಿತೋ ಆ ಹಿರಿಯರು ನಿಶ್ಶಬ್ಧರಾದರು. ಆಗ ಚಿತ್ತ ಗೃಹಸ್ಥನು ಎರಡನೆಯಬಾರಿ ಹಾಗು ಮೂರನೆಯಬಾರಿ ಅದೇ ಪ್ರಶ್ನೆಯನ್ನು ಕೇಳಿದಾಗಲೂ ಸಹಾ ಆ ಹಿರಿಯರು ನಿಶ್ಶಬ್ಧರಾದರು.
ಆ ಸಂದರ್ಭದಲ್ಲಿ ಪೂಜ್ಯ ಇಸಿದತ್ತನೆಂಬ ಕಿರಿಯ ಭಿಕ್ಖುವು ಇತ್ತೀಚೆಗೆ ಅಷ್ಟೇ ಸಂಘಕ್ಕೆ ಸೇರಿದ್ದನು. ಆ ಇಸಿದತ್ತನು ಸಂಘದ ಹಿರಿಯರೊಂದಿಗೆ ಹೀಗೆ ಕೋರಿಕೆ ನಿವೇದಿಸಿಕೊಂಡನು: ಪೂಜ್ಯ ಭಂತೆಯವರೇ, ಗೃಹಸ್ಥ ಚಿತ್ತನ ಪ್ರಶ್ನೆಗೆ ಉತ್ತರಿಸಲು ನನಗೆ ಅನುಮತಿಯನ್ನು ನೀಡಿರಿ. ಉತ್ತರಿಸು ಇಸಿದತ್ತ. ಗೃಹಸ್ಥನೇ, ನೀವು ಕೇಳಿದ ಪ್ರಶ್ನೆಯು ಹೀಗಿದೆಯೇ? ಅಂದರೆ ಧಾತುಗಳ ನಾನತ್ವ, ಧಾತುಗಳ ನಾನತ್ವ ಎನ್ನುತ್ತಾರಲ್ಲ, ಯಾವ ವಿಧದಲ್ಲಿ ಭಗವಾನರಿಂದ ಈ ಧಾತುಗಳ ನಾನತ್ವವು ವಿವಿರಿಸಲ್ಪಟ್ಟಿದೆ. ಹೌದು ಪೂಜ್ಯರೇ. ಓ ಗೃಹಸ್ಥನೇ, ಭಗವಾನರಿಂದ ಈ ಧಾತುಗಳ ನಾನತ್ವವು ಹೀಗೆ ವಿವರಿಸಲ್ಪಟ್ಟಿದೆ, ಹೇಗೆಂದರೆ, ಚಕ್ಷುಧಾತು, ರೂಪಧಾತು, ಚಕ್ಷುವಿನ್ಯಾನಧಾತು... ಅದೇರೀತಿಯಲ್ಲಿ ಉಳಿದ ಇಂದ್ರೀಯ ಧಾತುಗಳು, ಇಂದ್ರೀಯ ವಿಷಯಗಳ ಧಾತು, ಅವುಗಳ ವಿನ್ಯಾನ ಧಾತುಗಳು... ಮನೋಧಾತು, ಧಮ್ಮಧಾತು, ಮನೋವಿಞ್ಞಾನಧಾತು. ಹೀಗೆ ಈ ಬಗೆಯಲ್ಲಿ ಗೃಹಸ್ಥನೇ, ಭಗವಾನರಿಂದ ಧಾತುಗಳ ನಾನತ್ವವು ವಿವರಿಸಲ್ಪಟ್ಟಿದೆ.
ಆಗ ಚಿತ್ತ ಗೃಹಸ್ಥನು ಪೂಜ್ಯ ಇಸಿದತ್ತರ ವಚನಗಳಿಂದ ಆ ಹಿರಿಯ ಭಿಕ್ಷುಗಳನ್ನು ತನ್ನ ಕೈಯಿಂದಲೇ ಆಹಾರ ಬಡಿಸಿ ಸೇವೆ ಮಾಡಿದನು. ಆ ಹಿರಿಯ ಭಿಕ್ಷುಗಳಿಗೆ ಬಗೆಬಗೆಯ ಸ್ವಾದಿಷ್ಟ ಭೋಜನಗಳಿಂದ ಸಂತೃಪ್ತಿಪಡಿಸಿದನು. ನಂತರ ಆ ಹಿರಿಯ ಭಿಕ್ಷುಗಳು ತಮ್ಮ ಆಹಾರ ಸೇವನೆಯ ನಂತರ ತಮ್ಮ ಆಸನಗಳಿಂದ ಎದ್ದು ಅಲ್ಲಿಂದ ಹೊರಟರು. ಆ ಸಂದರ್ಭದಲ್ಲಿ ಹಿರಿಯ ಭಿಕ್ಷುವೊಬ್ಬರು ಇಸಿದತ್ತನಿಗೆ ಹೀಗೆ ಹೇಳಿದರು: ಆಯುಷ್ಮಂತ ಇಸಿದತ್ತ ಸಾಧು ಸಾಧು. ನಿನ್ನಿಂದ ಉತ್ತರವು ಉತ್ತಮವಾಗಿ ಹೊರಹೊಮ್ಮಿತು. ಅಂತಹ ಉತ್ತರವು ನನ್ನಲ್ಲಿ ಉಂಟಾಗಲಿಲ್ಲ. ಆದ್ದರಿಂದ ಆಯುಷ್ಮಂತ ಇಸಿದತ್ತನೇ, ಯಾವಾಗಲಾದರೂ ಇಂತಹುದೇ ಪ್ರಶ್ನೆ ಉಗಮಿಸಿದರೆ, ನೀನು ಅವನ್ನು ಬಗೆಹರಿಸಬೇಕು.


3. ದುತಿಯ ಇಸಿದತ್ತ ಸುತ್ತಂ

(ಅದೇ ಪೀಠಿಕೆ ಸೇರಿಸಿ ಓದಬೇಕು)
345. ಒಮ್ಮೆ ಅಸಂಖ್ಯಾ ಹಿರಿಯ ಭಿಕ್ಷುಗಳು ಮಚ್ಛಿಕಾಸಣ್ಣೆಯಲ್ಲಿನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಗೃಹಸ್ಥ ಚಿತ್ತನು ಹಿರಿಯ ಥೇರರ ಬಳಿಗೆ ಬಂದು ಗೌರವದಿಂದ ವಂದಿಸಿ ಒಂದೆಡೆ ನಿಂತು ಹೀಗೆ ಹೇಳಿದನು: ಪೂಜ್ಯನೀಯ ಭಂತೆ ಥೇರರವರೇ, ಈ ಲೋಕದಲ್ಲಿ ಲೋಕಗಳ ಬಗ್ಗೆ ಹಲವಾರು ದೃಷ್ಟಿಗಳು ಉಂಟಾಗುತ್ತವೆ ಹೇಗೆಂದರೆ: ಲೋಕವು ಶಾಶ್ವತ ಅಥವಾ ಲೋಕವು ಅಶಾಶ್ವತ, ಲೋಕಕ್ಕೆ ಅಂತ್ಯವಿದೆ ಅಥವಾ ಲೋಕವು ಅನಂತವೂ ಆಗಿದೆ, ಜೀವ ಹಾಗು ಶರೀರವೂ ಒಂದೇ, ಜೀವ ಹಾಗು ಶರೀರವು ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ, ತಥಾಗತರು ಮರಣದ ನಂತರ ಇರುವುದಿಲ್ಲ, ಹಾಗೆಯೇ ಇಲ್ಲವೆಂದೂ ಇಲ್ಲ ಇವೆಲ್ಲ ಹಾಗೆಯೇ ಬ್ರಹ್ಮಜಾಲ ಸುತ್ತದಲ್ಲಿರುವ 62 ಮಿಥ್ಯಾದೃಷ್ಟಿಗಳಾಗಿರುವ ಇವೆಲ್ಲಾ ಯಾವಾಗ ಯಾವುದರ ಇರುವಿಕೆಯಿಂದಾಗಿ ಉದಯಿಸುತ್ತವೆ? ಹಾಗು ಯಾವಾಗ ಯಾವುದರ ಇರುವಿಕೆ ಇಲ್ಲದಿರುವಾಗ ಇವೆಲ್ಲಾ ಉದಯಿಸುವುದಿಲ್ಲ?
ಯಾವಾಗ ಹೀಗೆ ಪ್ರಶ್ನೆಗಳು ಹಾಕಲ್ಪಟ್ಟಾಗ ಹಿರಿಯ ಥೇರರು ನಿಶ್ಶಬ್ಧರಾದರು. ಆದರೆ ಗೃಹಸ್ಥ ಚಿತ್ತನು ಎರಡನೆಯಬಾರಿ ಹಾಗು ಮೂರನೆಯಬಾರಿಯು ಇದೇ ಪ್ರಶ್ನೆಯನ್ನು ಕೇಳಿದನು. ಆಗಲು ಸಹಾ ಹಿರಿಯ ಥೇರರು ನಿಶ್ಶಬ್ಧರಾದರು. ಆ ಸಂದರ್ಭದಲ್ಲಿ ಪೂಜ್ಯ ಇಸಿದತ್ತರು ಅಲ್ಲಿಯೇ ಇದ್ದರು. ಅವರು ಇತ್ತೀಚೆಗಷ್ಟೇ ಸಂಘಕ್ಕೆ ಸೇರಿದ ಅತ್ಯಂತ ಕಿರಿಯ ಭಿಕ್ಖುಗಳಾಗಿದ್ದರು. ಇಸಿದತ್ತರು ಥೇರರ ಬಳಿಯಲ್ಲಿ ಹೀಗೆ ಕೇಳಿಕೊಂಡರು: ಭಂತೆಯವರೇ, ಈ ಗೃಹಸ್ಥ ಚಿತ್ತನ ಪ್ರಶ್ನೆಗೆ  ಉತ್ತರಿಸಲು ಅನುಮತಿಯನ್ನು ನೀಡಿರಿ. ಉತ್ತರಿಸು ಆಯುಷ್ಮಂತ ಇಸಿದತ್ತ. ಈಗ ಗೃಹಸ್ಥನೇ, ನೀನು ಕೇಳುತ್ತಿರುವುದು ಹೀಗಿದೆಯಲ್ಲವೆ? ಅದೆಂದರೆ: ಲೋಕವು ಶಾಶ್ವತ ಅಥವಾ ಲೋಕವು ಅಶಾಶ್ವತ, ಲೋಕಕ್ಕೆ ಅಂತ್ಯವಿದೆ ಅಥವಾ ಲೋಕವು ಅನಂತವೂ ಆಗಿದೆ, ಜೀವ ಹಾಗು ಶರೀರವೂ ಒಂದೇ, ಜೀವ ಹಾಗು ಶರೀರವು ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ, ತಥಾಗತರು ಮರಣದ ನಂತರ ಇರುವುದಿಲ್ಲ, ಹಾಗೆಯೇ ಇಲ್ಲವೆಂದೂ ಇಲ್ಲ ಇವೆಲ್ಲ ಹಾಗೆಯೇ ಬ್ರಹ್ಮಜಾಲ ಸುತ್ತದಲ್ಲಿರುವ 62 ಮಿಥ್ಯಾದೃಷ್ಟಿಗಳಾಗಿರುವ ಇವೆಲ್ಲಾ ಯಾವಾಗ ಯಾವುದರ ಇರುವಿಕೆಯಿಂದಾಗಿ ಉದಯಿಸುತ್ತವೆ? ಹಾಗು ಯಾವಾಗ ಯಾವುದರ ಇರುವಿಕೆ ಇಲ್ಲದಿರುವಾಗ ಇವೆಲ್ಲಾ ಉದಯಿಸುವುದಿಲ್ಲ? ಹೌದು ಪೂಜ್ಯರೇ. ಲೋಕಗಳ ಬಗೆಗಿನ ಹಲವಾರು ದೃಷ್ಟಿಕೋನಗಳಾಗಲಿ ಅಥವಾ ಬ್ರಹ್ಮಜಾಲ ಸುತ್ತದಲ್ಲಿ ಬರುವಂತಹ ದೃಷ್ಟಿಕೋನಗಳೇ ಆಗಲಿ ಇವೆಲ್ಲಾ ಸಕ್ಕಾಯ ದಿಟ್ಟಿಯು (ಆತ್ಮವಾದ/ದೇಹ ಹಾಗು ಮನಸ್ಸನ್ನು ತಾನು ಅಥವಾ ತನ್ನದು ಎಂದು ಭಾವಿಸುವಿಕೆ) ಇದ್ದಾಗ ಉದಯಿಸುತ್ತದೆ. ಸಕ್ಕಾಯದಿಟ್ಟಿಯು ಇಲ್ಲದಿದ್ದಾಗ ಉದಯಿಸುವುದಿಲ್ಲ.
ಆದರೆ ಭಂತೆ, ಸಕ್ಕಾಯದಿಟ್ಟಿಯು ಹೇಗೆ ಉದಯಿಸುತ್ತದೆ? ಗೃಹಸ್ಥನೇ, ಇಲ್ಲಿ ಸುಶಿಕ್ಷಿತನಲ್ಲದ ಪ್ರಾಪಂಚಿಕನು, ಆರ್ಯರಿಗೆ ಗೌರವ ನೀಡದವನು, ಕುಶಲನಲ್ಲದವನು, ಆರಿಯ ಧಮ್ಮವನ್ನು ಅರಿಯದವನು, ಶಿಸ್ತಿಲ್ಲದವನು, ವಿನಯವಿಲ್ಲದವನು ಆದ ಅಂತಹವನು ಶರೀರ ಅಥವಾ ರೂಪವನ್ನು ತಾನೆಂದು ಭಾವಿಸುತ್ತಾನೆ ಅಥವಾ ತನ್ನದೆಂದು ಭಾವಿಸುತ್ತಾನೆ. ಶರೀರದಲ್ಲಿ ಆತ್ಮವಿದೆಯೆಂದು ಅಥವಾ ಆತ್ಮದಲ್ಲಿ ಶರೀರವಿದೆಯೆಂದು ಭಾವಿಸತೊಡಗುತ್ತಾನೆ. ಹಾಗೆಯೇ ವೇದನೆಗಳನ್ನು ತಾನೆಂದು... ಅಥವಾ ಸನ್ಯ (ಗ್ರಹಿಕೆಗಳಿಗೆ) ತಾನೆಂದು.... ಅಥವಾ ಸಂಖಾರಗಳಿಗೆ ತಾನೆಂದು.... ಅಥವಾ ವಿಞ್ಞಾನಕ್ಕೆ ತಾನೆಂದು ಅಥವಾ ವಿಞ್ಞಾನವನ್ನು ತನ್ನದೆಂದು ಅಥವಾ ವಿಞ್ಞಾನದಲ್ಲಿ ತಾನಿರುವುದೆಂದು ಅಥವಾ ತನ್ನಲ್ಲಿ ವಿಞ್ಞಾನವಿರುವುದೆಂದು ಭಾವಿಸತೊಡಗುತ್ತಾನೆ. ಇದೇರೀತಿಯಾಗಿ ಸಕ್ಕಾಯದಿಟ್ಟಿಗಳು ಬರುವುವು.
ಪೂಜ್ಯನೀಯ ಭಂತೆ, ಮತ್ತೆ ಈ ಸಕ್ಕಾಯ ದಿಟ್ಟಿಗಳು ಯಾವಾಗ ಬರುವುದಿಲ್ಲ? ಗೃಹಸ್ಥನೇ, ಇಲ್ಲಿ ಆರ್ಯಶ್ರಾವಕರಿಂದ ಕೇಳಲ್ಪಟ್ಟಿರುವವನು, ಸುಶಿಕ್ಷಿತನು, ಆರಿಯರನ್ನು ಗೌರವಿಸುವವನು, ಕುಶಲಿಯು, ಶಿಸ್ತಿನಿಂದ ಕೂಡಿರುವವನು, ಆರ್ಯ ಧಮ್ಮವನ್ನು ಅರಿತಿರುವಂತಹ ಕೋವಿದನು, ಸುವಿನಿತನು, ಸತ್ಪುರುಷರನ್ನು ದಶರ್ಿಸುವವನು ಆದ ಅಂತಹವನು ರೂಪವನ್ನು (ದೇಹವನ್ನು) ತಾನೆಂದು ಭಾವಿಸುವುದಿಲ್ಲ ಅಥವಾ ತನ್ನದೆಂದು ಭಾವಿಸುವುದಿಲ್ಲ ಅಥವಾ ರೂಪದಲ್ಲಿ ಆತ್ಮವಿದೆ ಎಂತಲೂ ಅಥವಾ ಆತ್ಮದಲ್ಲಿ ರೂಪವಿದೆ ಎಂತಲೂ ಭಾವಿಸುವುದಿಲ್ಲ. ಹಾಗೆಯೇ ವೇದನೆಗಳಿಗೆ ತಾನೆಂದು... ಅಥವಾ ಸಞ್ಞಾವೇ ತಾನೆಂದು... ಅಥವಾ ಸಂಖಾರಗಳೇ ತಾನೆಂದು... ಅಥವಾ ವಿಞ್ಞಾನವೇ ತಾನೆಂದು ಭಾವಿಸುವುದಿಲ್ಲ. ವಿಞ್ಞಾನ ತನ್ನದೆಂದಾಗಲಿ, ವಿಞ್ಞಾನದಲ್ಲಿ ಆತ್ಮವಿದೆ ಎಂದಾಗಲಿ, ತನ್ನಲ್ಲಿ ವಿಞ್ಞಾನವಿದೆ ಎಂತಾಗಲಿ ಭಾವಿಸಲಾರನು. ಈ ರೀತಿಯಾಗಿ ಗೃಹಸ್ಥನೇ, ಸಕ್ಕಾಯದಿಟ್ಟಿಯು ಉದಯಿಸಲಾರದು.
ಪೂಜ್ಯನೀಯ ಭಂತೆ, ಗುರುಗಳಾದ ಇಸಿದತ್ತರು ಎಲ್ಲಿಂದ ಬಂದಿಹರು? ಓಹ್ ಗೃಹಸ್ಥನೇ, ನಾನು ಅವಂತಿನಗರದಿಂದ ಬಂದಿಹೆನು. ಭಂತೆ, ಅವಂತಿನಗರದಲ್ಲಿ ಇಸಿದತ್ತನಾಮದ ಕುಲಪುತ್ರನೋರ್ವನು ಪಬ್ಬಜಿತನಾಗಿರುವನೆಂದು ಕೇಳಿದ್ದೇನೆ. ತಾವು ಆತನನ್ನು ಭೇಟಿಯಾಗಿರುವಿರಾ? ಹೌದು ಗೃಹಸ್ಥನೇ. ಆ ಪೂಜ್ಯರು ಈಗ ಎಲ್ಲಿ ವಾಸಿಸುತ್ತಿರುವರು? ಇದನ್ನು ಆಲಿಸಿದ ಇಸಿದತ್ತರು ನಿಶ್ಶಬ್ಧರಾದರು. ತಾವೇ ಏನಾದರೂ ಇಸಿದತ್ತರೇ? ಹೌದು ಗೃಹಪತಿಯೇ. ಪೂಜ್ಯರು ಮಚ್ಛಿಕಾಸಂಡೆಯ ಆಮ್ರವನದಲ್ಲಿ ಆನಂದದಿಂದ ನೆಲೆಸಲಿ, ನಾನು ಆನಂದೋತ್ಸಾಹದಿಂದ ಪೂಜ್ಯರಿಗೆ ಚೀವರಗಳನ್ನು, ಆಹಾರವನ್ನು, ವಸತಿಯನ್ನು ಹಾಗು ಔಷಧ ಇತ್ಯಾದಿ ಉಪಚಾರವನ್ನು ಮಾಡುವೆನು. ಕಲ್ಯಾಣಕಾರಿಯಾದುದನ್ನು ನುಡಿದೆ ಗೃಹಪತಿಯೇ.
ನಂತರ ಚಿತ್ತಗೃಹಸ್ಥನು ಆಯುಷ್ಮಂತರಾದ ಇಸಿದತ್ತರ ಮಾತು ಕೇಳಿ ಆನಂದಿಸಿ ಅವನ್ನು ತನ್ನ ಕೈಯಾರೆ ವಿವಿಧ ಆಹಾರಗಳನ್ನು ಬಡಿಸಿ, ಹಿರಿಯ ಭಿಕ್ಷುಗಳನ್ನು ತೃಪ್ತಿಪಡಿಸಿದನು. ಯಾವಾಗ ಹಿರಿಯ ಭಿಕ್ಷುಗಳ ಆಹಾರ ಸೇವನೆಯು ಮುಗಿಯಿತೋ ಆಗ ಅವರು ತಮ್ಮ ಪಿಂಡಪಾತ್ರೆಗಳನ್ನು ತೆಗೆದುಕೊಂಡರು. ತಮ್ಮ ಆಸನದಿಂದೆದ್ದು, ಅಲ್ಲಿಂದ ಹೊರಟರು. ನಂತರ ಥೇರರಲ್ಲಿ ಮುಖ್ಯರಾದವರು ಪೂಜ್ಯ ಇಸಿದತ್ತರಿಗೆ ಹೀಗೆ ಹೇಳಿದರು: ಆಯುಷ್ಮಂತ ಇಸಿದತ್ತ, ಆ ಪ್ರಶ್ನೆಗೆ ನಿನ್ನಲ್ಲಿ ಉಂಟಾದ ಉತ್ತರವು ನನ್ನಲ್ಲಿ ಉಂಟಾಗಲಿಲ್ಲ. ಆದ್ದರಿಂದ ಆಯುಷ್ಮಂತನೇ, ಇಂತಹ ಪ್ರಶ್ನೆಗಳು ಮುಂದೆಂದಾದರೂ ಉಂಟಾದರೆ ಆಗ ಪರಿಹರಿಸಬೇಕು. ನಂತರ ಭಂತೆ ಇಸಿದತ್ತರು ವಾಸಸ್ಥಳಕ್ಕೆ ಹಿಂತಿರುಗಿದರು. ಕೆಲಕಾಲ ಅಲ್ಲಿ ನೆಲೆಸಿದ ನಂತರ ಅವರು ಪಿಂಡಪಾತ್ರೆ, ಚೀವರ ತೆಗೆದುಕೊಂಡು ಮಚ್ಛಿಕಾಸಂಡೆಯಿಂದ ಹೊರಟರು. ಅವರು ಅಲ್ಲಿಂದ ಹೊರಟಿದ್ದು ಒಳಿತಿಗಾಗಿ ಆಗಿತ್ತು ಹಾಗು ಅಲ್ಲಿಂದ ಪುನಃ ಹಿಂತಿರುಗಲಿಲ್ಲ.


4. ಮಹಾಕಪಾಟಿಹಾರಿಯ ಸುತ್ತಂ (ಮಹಕನ ಅತೀಂದ್ರಿಯ ಶಕ್ತಿ)

346. ಒಮ್ಮೆ ಅಸಂಖ್ಯಾತ ಹಿರಿಯ ಭಿಕ್ಖುಗಳು ಮಚ್ಛಿಕಾಸಂಡೆಯ ಆಮ್ರವನದಲ್ಲಿ ನೆಲೆಸಿದ್ದರು. ಆಗ ಗೃಹಸ್ಥ ಚಿತ್ತನು ಹಿರಿಯ ಥೇರರ ಬಳಿಗೆ ಸಮೀಪಿಸಿ ವಂದಿಸಿದನು. ನಂತರ ಗೌರವಯುತವಾಗಿ ಒಂದೆಡೆ ಕುಳಿತನು ಹಾಗು ನಂತರ ಹೀಗೆ ಹೇಳಿದನು: ಪೂಜ್ಯ ಭಂತೆಯವರೆ, ನಮ್ಮ ಗೋಕುಲದಲ್ಲಿ (ಮನೆಯಲ್ಲಿ) ನಾಳೆ ತಮಗಾಗಿ ಔತಣವನ್ನು ಏರ್ಪಡಿಸಿದ್ದೇನೆ. ತಾವುಗಳು ಈ ಔತಣವನ್ನು ಸ್ವೀಕರಿಸಿ ಕೃತಾರ್ಥನನ್ನಾಗಿಸುವುದು. ಥೇರರು ಮೌನವಾಗಿ ಒಪ್ಪಿಗೆ ಸೂಚಿಸಿದರು. ಥೇರರು ಒಪ್ಪಿರುವುದನ್ನು ಅರಿತಂಥಹ ಚಿತ್ತ ಗೃಹಪತಿಯು ಅಲ್ಲಿಂದ ಎದ್ದು, ಅವರಿಗೆ ವಂದಿಸಿ, ಬಲಗಡೆಯಿಂದ ಪ್ರದಶರ್ಿಸಿ, ಅಲ್ಲಿಂದ ಹೊರಟನು. ಯಾವಾಗ ರಾತ್ರಿಯು ಕಳೆಯಿತೋ, ಮುಂಜಾನೆ ಥೇರರು ಚೀವರ ಧರಿಸಿ, ಪಿಂಡಪಾತ್ರೆಗಳನ್ನು ತೆಗೆದುಕೊಂಡು, ಚಿತ್ತನ ಗೋಕುಲದತ್ತ ಬಂದರು. ಅಲ್ಲಿ ತಮಗೆಂದು ಏರ್ಪಡಿಸಿದ ಆಸನಗಳಲ್ಲಿ ಕುಳಿತರು. ನಂತರ ಚಿತ್ತಗೃಹಪತಿಯು ತನ್ನ ಕೈಯಾರೆ ಹಿರಿಯ ಭಿಕ್ಷುಗಳಿಗೆ ತೃಪ್ತಿಯಾಗುವಂತೆ ಸ್ವಾದಿಷ್ಟಕರವಾದ ತುಪ್ಪಯುತ ಅಕ್ಕಿಯ ಪಾಯಸವನ್ನು ಬಡಿಸಿದನು. ನಂತರ ಹಿರಿಯ ಭಿಕ್ಷುಗಳು ಆಹಾರವನ್ನು ಸೇವಿಸಿದ ನಂತರ ತಮ್ಮ ಪಿಂಡಪಾತ್ರೆಗಳನ್ನು ತೆಗೆದುಕೊಂಡು ತಮ್ಮ ಆಸನದಿಂದೆದ್ದು ಅಲ್ಲಿಂದ ಹೊರಟರು. ಆಗ ಗೃಹಪತಿ ಚಿತ್ತನು ತನ್ನ ಮನೆಯವರಿಗೆ ಉಳಿದುದನ್ನು ವಿಸಜರ್ಿಸಿ ಎಂದು ತಿಳಿಸಿ, ತಾನು ಆ ಹಿರಿಯ ಭಿಕ್ಷುಗಳನ್ನು ಹಿಂಬಾಲಿಸಿದನು. ಆ ಸಮಯದಲ್ಲಿ ಬಿಸಿಲು ಕೆಂಡದಂತೆ ಸುಡುತ್ತಿತ್ತು. ವಿಪರೀತ ಬೆವರು ಬರುತ್ತಿತ್ತು. ಜೊತೆಗೆ ಅವರು ಸೇವಿಸಿದ್ದ ಆಹಾರದ ಪರಿಣಾಮದಿಂದಲೂ ಸಹಾ ಅವರ ದೇಹವು ಕರಗಿಹೋಗುವಂತಹ ಬೇಗೆಯನ್ನು ಅನುಭವಿಸುತ್ತಿದ್ದರು.
ಆ ಸಮಯದಲ್ಲಿ ಪೂಜ್ಯ ಮಹಕರು ಸಂಘಕ್ಕೆ ಸೇರಿದ ಕಿರಿಯ ಭಿಕ್ಷುಗಳಾಗಿದ್ದರು. ಥೇರರ ಈ ಸ್ಥಿತಿಯನ್ನು ಗಮನಿಸಿದ ಮಹಕರು ಹೀಗೆ ನುಡಿದರು: ಪೂಜ್ಯ ಭಂತೆಗಳೇ, ಈಗ ತಂಪಾದ ತಂಗಾಳಿಯು ಆಹ್ಲಾದಕರವಾಗಿ ಬೀಸಿ, ಅಂತರಿಕ್ಷದಲ್ಲಿ ಮೋಡಗಳು ಆವರಿಸಿ, ಗಗನದಿಂದ ಜಿನುಗು ಮಳೆಯ ಹನಿಗಳು ಸಿಂಪಡಿಸುವಂತಾದರೆ ಹೇಗಿರುತ್ತದೆ?
ಆಗ ನಿಜಕ್ಕೂ ಚೆನ್ನಾಗಿರುತ್ತದೆ ಎಂದರು. ತಕ್ಷ ಪೂಜ್ಯ ಮಹಕರು ತಮ್ಮ ಇದ್ದಿಬಲದಿಂದಾಗಿ ಇಡೀ ಆಕಾಶದಲ್ಲಿ ಮೋಡಗಳ ಶ್ರೇಣಿಯನ್ನು ಆಗಮಿಸುವಂತೆ ಮಾಡಿ, ಹಾಗೆಯೇ ತಂಪಾದ ಗಾಳಿಯನ್ನು ಸೃಷ್ಟಿಸಿ ಅದು ಎಲ್ಲರನ್ನು ಬೀಸಿ, ಅತ್ಯಂತ ತಂಪನ್ನು ನೀಡುವಂತೆ ಮಾಡಿದರು. ಹಾಗೆಯೇ ಹನಿಹನಿಗಳ ಜಿನುಗು ಮಳೆಯನ್ನು ತರಿಸಿದರು. ಇದನ್ನೆಲ್ಲಾ ಗಮನಿಸಿದಂತಹ ಚಿತ್ತ ಗೃಹಪತಿಯು ಹೀಗೆ ಯೋಚಿಸಿದನು: ಈ ಕಿರಿಯ ಭಿಕ್ಷುವಿಗೆ ಇಂತಹ ಅಸಾಧಾರಣವಾದ ಇದ್ದಿ (ಅತೀಂದ್ರಿಯ ಬಲ) ಬಲವು ಇರಬೇಕಾದರೆ ಉಳಿದವರಿಗೆ ಎಂಥೆಂಥ ಬಲವಿರುತ್ತದೆ. ನಿಜಕ್ಕೂ ಈ ಕಿರಿಯ ಭಿಕ್ಷುವಿನ ಈ ಶಕ್ತಿಯು ಅಸಾಧಾರಣವಾದುದು, ಬೃಹತ್ತಗಿರುವಂತಹುದು. ನಂತರ ಪೂಜ್ಯ ಮಹಕನು ವಿಹಾರದತ್ತ ಸಮೀಪಿಸಿದನು. ಆಗ ಹಿರಿಯ ಥೇರರಿಗೆ ಹೀಗೆ ಕೇಳಿದನು: ಇಷ್ಟು ಸಾಕಲ್ಲವೆ ಭಂತೆ? ಓಹ್ ಸಾಕಷ್ಟು ಆಯಿತು, ಯಾವುದೆಲ್ಲವೂ ಮಾಡಲಾಗಿದೆಯೋ ಸಾಕಾಗಿದೆ, ಯಾವುದೆಲ್ಲವೂ ಅಪರ್ಿಸಲಾಗಿದೆಯೋ ಸಾಕಷ್ಟಾಯಿತು ಎಂದರು. ನಂತರ ಹಿರಿಯ ಭಿಕ್ಷುಗಳ ತಮ್ಮ ವಿಹಾರಕ್ಕೆ ಹಾಗು ಮಹಕರು ತಮ್ಮ ನಿವಾಸಕ್ಕೆ ಹಿಂತಿರುಗಿದರು.
ನಂತರ ಚಿತ್ತ ಗೃಹಪತಿಯು ಪೂಜ್ಯ ಮಹಕರತ್ತ ಸಮೀಪಿಸಿ ವಂದಿಸಿದನು. ನಂತರ ಒಂದೆಡೆ ಕುಳಿತನು. ನಂತರ ಹೀಗೆ ಹೇಳಿದನು: ಸಾಧು ಭಂತೆಯವರೆ ಸಾಧು. ತಮ್ಮಿಂದ ಅದ್ಭುತವಾದ, ಮಾನವಾತೀತವಾದ ಇದ್ದಿಬಲವು ಪ್ರದಶರ್ಿತವಾಯಿತು. ಹಾಗೆಯೇ ಮಹಕರವರೇ ತಾವು ಇನ್ನೊಂದು ಈ ಬಗೆಗೆ ಇದ್ದಿಬಲವನ್ನು ತೋರಿಸಬಲ್ಲಿರಾ? ಹಾಗಾದರೆ ಗೃಹಪತಿಯೇ ನಿನ್ನ ಮೇಲಂಗಿಯನ್ನು ಜಗುಲಿಯ ಮೇಲೆ ಹರಡಿಸು ಮತ್ತು ಅದರ ಮೇಲೆ ಹುಲ್ಲಿನ ಕಟ್ಟನ್ನು ಬಿಡಿಸಿ ಇಡು ಎಂದರು. ಅದರಂತೆ ಚಿತ್ತ ಗೃಹಪತಿಯು ತನ್ನ ಮೇಲಂಗಿಯನ್ನು ಜಗುಲಿಯ ಮೇಲೆ ಹರಡಿ ಅದರ ಮೇಲೆ ಹುಲ್ಲಿನ ಕಟ್ಟನ್ನು ಬಿಚ್ಚಿ ಹರಡಿದನು. ನಂತರ ಅವರು ವಿಹಾರದಲ್ಲಿ ಪ್ರವೇಶಿಸಿ ಚಿಲಕವನ್ನು ಹಾಕಿಕೊಂಡರು. ನಂತರ ಮಹಕರು ಆ ಕೋಣೆಯಲ್ಲಿದ್ದುಕೊಂಡೇ ಇದ್ದಿಬಲವನ್ನು ಆರಂಭಿಸಿದರು. ಆ ಕೋಣೆಯ ಒಳಗಿನಿಂದ ಬಂದಂತಹ ಸಣ್ಣ ಜ್ವಾಲೆಯು ಬೀಗದ ರಂಧ್ರ ಹಾಗು ಬಾಗಿಲಿನ ಸಂದಿನಿಂದ ಬಂದು ಆ ಹುಲ್ಲನ್ನೆಲ್ಲಾ ಸುಟ್ಟು ಭಸ್ಮ ಮಾಡಿತು. ಆದರೆ ಮೇಲಂಗಿಗೆ ಏನೂ ಆಗಲಿಲ್ಲ. ಇಂತಹ ಅತೀಂದ್ರಿಯ ಶಕ್ತಿ ಪ್ರದಶರ್ಿಸಿದರು. ಚಿತ್ತಗೃಹಪತಿಯು ಮೇಲಂಗಿಯನ್ನು ಒದರಿ ಪರೀಕ್ಷಿಸಿದರು. ಅದಕ್ಕೆ ಏನೂ ಆಗಿರಲಿಲ್ಲ. ಚಿತ್ತನು ಆಘಾತಕ್ಕೆ ಒಳಗಾಗಿ ಗೌರವ ಹಾಗೂ ಭಯದಿಂದ ಕೂಡಿ ಒಂದೆಡೆ ನಿಂತನು. ಆಗ ಕೋಣೆಯಿಂದ ಹೊರಬಂದಂತಹ ಮಹಕರು ಚಿತ್ತನಿಗೆ ಹೀಗೆ ಪ್ರಶ್ನಿಸಿದರು: ಇಷ್ಟು ಸಾಕೆ ಗೃಹಪತಿಯೇ?.
ಸಾಕು, ಪೂಜ್ಯ ಮಹಕರವರೇ, ಏನೆಲ್ಲಾ ತಾವು ಮಾಡಿದಿರೋ ಅದು ಸಾಕಷ್ಟಾಯಿತು. ಭಂತೆ ಮಹಕರವರೇ, ತಮ್ಮ ಈ ಕ್ರಿಯೆಯು ಸಾಕಷ್ಟಾಯಿತು. ಪೂಜ್ಯರಾದ ತಾವು ಮಚ್ಛಿಕಾಸಂಡೆಯಲ್ಲಿನ ಆಮ್ರವನದಲ್ಲಿ ಆನಂದದಿಂದ ಇರುವಂತಾಗಲಿ, ನಾನು ತಮಗೆ ಬೇಕಾಗಿರುವಂತಹ ಚೀವರ, ಆಹಾರ, ಔಷಧ ಇತ್ಯಾದಿಗಳನ್ನು ಪೂರೈಸುವೆನು. ಕಲ್ಯಾಣಕಾರಿಯಾಗಿರುವುದನ್ನು ನುಡಿದೆ ಗೃಹಪತಿಯೇ ಎಂದು ಮಹಕರು ನುಡಿದರು. ನಂತರ ಪೂಜ್ಯ ಮಹಕರು ತಮ್ಮ ನಿವಾಸಕ್ಕೆ ಹಿಂತಿರುಗಿದರು. ಕೆಲಕಾಲದ ನಂತರ ಅವರು ಪಿಂಡಪಾತ್ರೆ ಹಾಗು ಚೀವರವನ್ನು ತೆಗೆದುಕೊಂಡು ಮಚ್ಛಿಕಾಸಂಡೆಯಿಂದ ಹೊರಟರು. ಕಲ್ಯಾಣಕಾರಿ ಉದ್ದೇಶದಿಂದ ಹೊರಟ ಅವರು ಪುನಃ ಅಲ್ಲಿಗೆ ಹಿಂತಿರುಗಲಿಲ್ಲ.


5. ಪಠಮ ಕಾಮಭೂ ಸುತ್ತಂ

347. ಒಮ್ಮೆ ಆಯುಷ್ಮಂತ ಕಾಮಭೂ ಮಚ್ಛಿಕಾಸಂಡೆಯ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಚಿತ್ತ ಗೃಹಪತಿಯು ಪೂಜ್ಯ ಕಾಮಭೂರ ಸಮೀಪಕ್ಕೆ ಬಂದು ವಂದಿಸಿ ಒಂದೆಡೆ ಕುಳಿತರು. ಆಗ ಭಂತೆ ಕಾಮಭೂರವರು ಆತನಿಗೆ ಹೀಗೆ ಹೇಳಿದರು:
ಹೀಗೆ ಹೇಳಲಾಗಿದೆ ಗೃಹಪತಿ -
ದೋಷರಹಿತ ಚಕ್ರಸಹಿತ ಹಾಗು ಶ್ವೇತಛತ್ರಿಯುತ-
ಏಕಅರದ ರಥವು ಉರುಳುತಿಹುದು,
ನೋಡು ಅದು ಬರುತ್ತಿದೆ, ತ್ರಾಸತೀತವಾದುದು, ಶ್ರೋತಚ್ಛೇದವಾಗಿರುವ ಬಂಧನಮುಕ್ತವಾದುದು.
ಗೃಹಪತಿಯೇ, ಈ ಸಂಕ್ಷಿಪ್ತ ಗಾಥೆಗೆ ವಿಸ್ತಾರದ ಅರ್ಥ ತಿಳಿಯುವುದು ಹೇಗೆ ಗೊತ್ತೆ? ಭಂತೆ, ಇದು ಭಗವಾನರಿಂದ ನುಡಿಯಲ್ಪಟ್ಟಿದೆಯೋ? ಹೌದು ಗೃಹಪತಿಯೇ. ಹಾಗಾದರೆ ಮುಹೂರ್ತಕಾಲ ತಡೆಯಿರಿ. ನಾನು ಅರ್ಥವನ್ನು ಗ್ರಹಿಸುತ್ತೇನೆ. ನಂತರ ಚಿತ್ತ ಗೃಹಸ್ಥನು ಮುಹೂರ್ತಕಾಲ ಮೌನವಹಿಸಿ ಹೀಗೆ ಅರ್ಥವನ್ನು ಆಯುಷ್ಮಂತ ಕಾಮಭೂರವರಿಗೆ ನುಡಿದನು:
ದೋಷರಹಿತವೆಂದರೆ ಭಂತೆ ಶೀಲದ ಅಂಕಿತವಾಗಿದೆ. ಶ್ವೇತಛತ್ರಿಯೆಂದರೆ ವಿಮುಕ್ತಿಯ ಹೆಸರಾಗಿದೆ. ಏಕಅರ ಎಂದರೆ ಸಮ್ಯಕ್ಸ್ಮೃತಿಯ ಅಂಕಿತವಾಗಿದೆ ಹಾಗು ಇಲ್ಲಿ ಉರುಳುವಿಕೆ ಎಂದರೆ ಮುಂದೆ ಚಲಿಸುವಂತಹುದು ಹಿಂದೆ ಬಾರದಂತಹುದು. ರಥವೆಂದರೆ ನಾಲ್ಕು ಮಹಾಮಾತುಗಳಿಂದ ರಚಿತವಾದ ಮಾತಪಿತೃವಿನಿಂದ ಉದಯಿಸಿದ, ಆಹಾರದಿಂದ ಪೋಷಿತವಾದ ಶರೀರವಾಗಿದೆ. ಇದು ಶಿಥಿಲವಾಗುವಂತಹುದು ಹಾಗು ಉದುರಿಹೋಗುವಂತಹುದು, ಮುರಿದುಬೀಳುವಂತಹುದು ಹಾಗು ಚದುರಿಹೋಗುವಂತಹುದು ಆಗಿದೆ. ಇಲ್ಲಿ ರಾಗವೇ ತ್ರಾಸವಾಗಿದೆ. ಭಂತೆ, ಹಾಗೆಯೇ ದ್ವೇಷವು ತ್ರಾಸವಾಗಿದೆ ಹಾಗು ಮೋಹವು ತ್ರಾಸವಾಗಿದೆ. ಆದರೆ ಯಾವ ಭಿಕ್ಖುವಿನಲ್ಲಿ ಈ ಆಸ್ರವಗಳು ಕ್ಷೀಣವಾಗಿ ಖೀಣಾಸವರಾಗಿರುವರೋ, ತಾಳೆಮರದ ಕಾಂಡದ ರೀತಿ ಕತ್ತರಿಸಲ್ಪಟ್ಟಿದೆಯೋ, ಬುಡಮೇಲಾಗಿದೆಯೋ, ಭವಿಷ್ಯದ ಉದಯಿಸುವಿಕೆ ಯಾರಿಗೆ ಇಲ್ಲವೋ ಅಂತಹ ಭಿಕ್ಷುವು ತ್ರಾಸತೀತನಾಗುತ್ತಾನೆ (ಅನಿಘೋ), ಬರುತಿಹುದು ಅಥವಾ ಬರುತ್ತಿರುವವನೂ ಎಂದರೆ ಅಂತಹ ಅರಹಂತರೆಂದರ್ಥ. ಹಾಗೆಯೇ ಶ್ರೋತವೆಂದರೆ ತೃಷ್ಣೆಗೆ ಇನ್ನೊಂದು ಹೆಸರಾಗಿದೆ. ಯಾವ ಭಿಕ್ಷುವಿನ ಆಸವಗಳು ಕ್ಷೀಣವಾಗಿ ಖೀಣಾಸವರಾಗಿದ್ದಾರೋ ಯಾರ ಆಸವಗಳು ಬುಡಮೇಲಾಗಿದೆಯೋ, ತಾಳೆಮರದಂತೆ ಕತ್ತರಿಸಿ ಹಾಕಲ್ಪಟ್ಟಿದೆಯೋ, ಯಾರಿಗೆ ಭವಿಷ್ಯವೂ ಇಲ್ಲವೋ, ಅಂತಹ ಭಿಕ್ಷುವು ಶ್ರೋತವನ್ನು ಛೇದಿಸುತ್ತಾರೆ. ಅಂತಹ ಖೀಣಾಸವ ಭಿಕ್ಷುವಿಗೆ ಬಂಧನಮುಕ್ತರೆಂದು ಹೇಳುತ್ತಾರೆ. ಆದ್ದರಿಂದಲೇ ಭಗವಾನರು ಹೀಗೆ ಹೇಳಿದ್ದಾರೆ:
ದೋಷರಹಿತ ಚಕ್ರಸಹಿತ ಹಾಗು ಶ್ವೇತಛತ್ರಿಯುತ ಏಕಅರದ ರಥವು ಉರುಳುತಿಹುದು, ನೋಡು ಅದು ಬರುತ್ತಿದೆ, ತ್ರಾಸತೀತವಾದುದು, ಶ್ರೋತಚ್ಛೇದವಾಗಿರುವ ಬಂಧನಮುಕ್ತವಾದುದು.
ಈ ರೀತಿಯಾಗಿ ಭಗವಾನರ ಈ ಗಾಥೆಯನ್ನು ವಿಸ್ತಾರವಾಗಿ ನಾನು ಅರ್ಥ ಮಾಡಿಕೊಂಡಿದ್ದೇನೆ. ನಿನಗೆ ಲಾಭವಾಗಿದೆ, ಗೃಹಪತಿಯೇ, ಶ್ರೇಷ್ಠತ್ವದ ಲಭ್ಯವಾಗಿದೆ. ಗಂಭೀರವಾದ ಬುದ್ಧವಚನ ಕೇಳುವಂತಹ ಪಞ್ಞಾಚಕ್ಷುವನ್ನು ಹೊಂದಿರುವೆ.


6. ದುತಿಯ ಕಾಮಭೂ ಸುತ್ತಂ

348. ಒಮ್ಮೆ ಪೂಜ್ಯ ಕಾಮಭೂರವರು ಮಚ್ಛಿಕಾಸಂಡೆಯಲ್ಲಿನ ಆಮ್ರವನದಲ್ಲಿ ತಂಗಿದ್ದರು. ಆಗ ಗೃಹಸ್ಥ ಚಿತ್ತನು ಪೂಜ್ಯ ಕಾಮಭೂರವರತ್ತ ಸಮೀಪಿಸಿ, ವಂದಿಸಿ, ಒಂದೆಡೆ ಕುಳಿತು ಹೀಗೆ ಕೇಳಿದನು: ಭಂತೆಯವರೇ, ಎಷ್ಟು ವಿಧದ ಸಂಖಾರಗಳಿವೆ? ಗೃಹಪತಿಯೇ, ಮೂರು ವಿಧದ ಸಂಖಾರಗಳಿವೆ. ಅವೆಂದರೆ: ಕಾಯಸಂಖಾರ, ವಚಿ (ಮಾತಿನ ಸಂಖಾರ ಮತ್ತು ಚಿತ್ತಸಂಖಾರ. ಸಾಧು ಭಂತೆ ಎಂದು ಅಭಿನಮಿಸಿದ ಚಿತ್ತನು ಆನಂದಿತನಾಗಿ ಪುನಃ ಹೀಗೆ ಪ್ರಶ್ನಿಸಿದನು: ಭಂತೆ, ಯಾವುದನ್ನು ಕಾಯಸಂಖಾರ, ಯಾವುದನ್ನು ವಚಿಸಂಖಾರ ಮತ್ತು ಯಾವುದನ್ನು ಚಿತ್ತಸಂಖಾರವೆಂದು ಕರೆಯಲಾಗುತ್ತದೆ. ಗೃಹಪತಿಯೇ, ಉಶ್ವಾಸ (ಉಸಿರನ್ನು ಒಳತೆಗೆದುಕೊಳ್ಳುವಿಕೆ) ಹಾಗು ನಿಶ್ವಾಸ (ಉಸಿರನ್ನು ಹೊರಬಿಡುವಿಕೆ)ವನ್ನು ಕಾಯಸಂಖಾರಕ್ಕೆ ಉದಾಹರಿಸಬಹುದು. ವಿತರ್ಕ ಹಾಗು ವಿಚಾರವೇ ವಚಿಸಂಖಾರವಾಗಿದೆ ಮತ್ತು ಸಞ್ಞಾ ಹಾಗು ವೇದನಾವೇ ಚಿತ್ತಸಂಖಾರವಾಗಿದೆ.
ಸಾಧು ಭಂತೆ ಎಂದು ಅಭಿನಂದಿಸಿದ ಚಿತ್ತನು ಆನಂದಿತನಾಗಿ ಪುನಃ ಹೀಗೆ ಪ್ರಶ್ನಿಸಿದನು: ಆದರೆ ಭಂತೆ, ಉಶ್ವಾಸ ಮತ್ತು ನಿಶ್ವಾಸವು ಏಕೆ ಕಾಯಸಂಖಾರವಾಗುವುದು. ವಿತರ್ಕ ವಿಚಾರವು ಏಕೆ ವಚಿಸಂಖಾರವಾಗುವುದು? ಹಾಗು ಏತಕ್ಕಾಗಿ ಸಞ್ಞಾ ಮತ್ತು ವೇದನಾವು ಚಿತ್ತಸಂಖಾರವಾಗುವುದು. ಗೃಹಪತಿಯೇ, ಉಶ್ವಾಸ ಮತ್ತು ನಿಶ್ವಾಸವು ಶಾರೀರಿಕವಾದುದು ಹಾಗು ಇವು ಶರೀರವನ್ನು ಅವಲಂಬಿಸಿದೆ, ಆದ್ದರಿಂದ ಉಸಿರಾಟವು ಕಾಯಸಂಖಾರವಾಗಿದೆ. ಹಾಗೆಯೇ ಮೊದಲು ಒಬ್ಬನು ಯೋಚಿಸುತ್ತಾನೆ (ವಿತರ್ಕ) ನಂತರ ಪರೀಕ್ಷಿಸುತ್ತಾನೆ (ವಿಚಾರ) ನಂತರ ಅವೆಲ್ಲವೂ ಮಾತಿನ ಮೂಲಕ ಹೊರಹೊಮ್ಮುವುದು. ಆದ್ದರಿಂದಾಗಿ ವಿತರ್ಕ ಹಾಗು ವಿಚಾರದ ವಚಿಸಂಖಾರ ಆಗಿದೆ. ಅದೇರೀತಿ ಸಞ್ಞಾ ಮತ್ತು ವೇದನಾಗಳು ಮಾನಸಿಕವಾಗಿದೆ ಹಾಗು ಮನಸ್ಸನ್ನು ಅವಲಂಬಿಸಿದೆ ಆದ್ದರಿಂದಾಗಿ ಸನ್ಯಾವೇದನವನ್ನು ಚಿತ್ತಸಂಖಾರವೆಂದು ಪರಿಗಣಿಸಲಾಗಿದೆ.
ಸಾಧು ಭಂತೆ, ಸಾಧು ಎಂದು ಅಭಿನಂದಿಸಿದ ಚಿತ್ತನು ಪುನಃ ಹೀಗೆ ಪ್ರಶ್ನಿಸಿದನು: ಭಂತೆ, ಸಞ್ಞಾ ಹಾಗು ವೇದನಾಗಳ ನಿರೋಧ ಸಮಾಪತ್ತಿಯು ಹೇಗೆ ಆಗುವುದು? ಗೃಹಪತಿಯೇ, ಯಾವಾಗ ಭಿಕ್ಖುವು ಸಂಜ್ಞಾವೇದನಾ ನಿರೋಧ ಪ್ರಾಪ್ತಿಮಾಡುವೆ ಅಥವಾ ಪ್ರಾಪ್ತಿಮಾಡುತ್ತಿದ್ದೇನೆ ಅಥವಾ ಪ್ರಾಪ್ತಿಮಾಡಿದೆನು ಎಂದು ಆತನಿಗೆ ಅನಿಸುವುದಿಲ್ಲ. ಬದಲಾಗಿ ಆತನ ಮನಸ್ಸೇ ಅಂತಹ ಮಹೋನ್ನತ ಸ್ಥಿತಿಗೆ ಈ ಬಗೆಯಲ್ಲಿ ಸಿದ್ಧವಾಗಿ ಇಂತಹ ಸ್ಥಿತಿಯು ಸಾಧ್ಯವಾಗುವುದು.
ಸಾಧು ಭಂತೆ, ಸಾಧು. ಬಹುಚೆನ್ನಾಗಿ ಉತ್ತರಿಸಿದಿರಿ. ಭಂತೆ ಮತ್ತೆ ಯಾವಾಗ ಭಿಕ್ಖುವು ಈ ಪರಮಶ್ರೇಷ್ಠಕರವಾದ ಸಂಜ್ಞವೇದನ ನಿರೋದ ಸಮಾಪತ್ತಿಯನ್ನು ಪ್ರಾಪ್ತಿಮಾಡುತ್ತಿರುವಾಗ ಯಾವ ಸಂಖಾರಗಳು ಮೊದಲಿಗೆ ನಿರೋಧವಾಗುವುವು? ಕಾಯಸಂಖಾರಗಳೋ ಅಥವಾ ವಚಿಸಂಖಾರಗಳೋ ಅಥವಾ ಚಿತ್ತಸಂಖಾರಗಳೋ? ಗೃಹಪತಿಯೇ, ಯಾವಾಗ ಭಿಕ್ಖುವು ಸಂಜ್ಞವೇದನಾಗಳ ನಿರೋಧವನ್ನು ಪ್ರಾಪ್ತಿಮಾಡುತ್ತಿರುವನೋ ಆಗ ಮೊದಲಿಗೆ ವಚಿಸಂಖಾರಗಳು (ಮಾತುಗಳಿಗೆ ಮೂಲವಾಗಿರುವ ಯೋಚನೆಗಳು) ನಿರೋಧಗೊಳ್ಳುವುದು.
ಸಾಧು ಭಂತೆ, ಸಾಧು ಸಾಧು, ತುಂಬ ಚೆನ್ನಾಗಿ ಉತ್ತರಿಸಿದಿರಿ. ಮತ್ತೆ ಭಂತೆ ಯಾರು ಕಾಲವಾಗಿರುವನೋ ಹಾಗು ಯಾವ ಭಿಕ್ಖು ಸಂಜ್ಞವೇದನೆಗಳ ನಿರೋಧಪ್ರಾಪ್ತಿ ಮಾಡಿರುವನೋ ಇವರಿಬ್ಬರಲ್ಲಿನ ವ್ಯತ್ಯಾಸವೇನು? ಗೃಹಪತಿಯೇ, ಯಾರು ಕಾಲವಾಗಿರುತ್ತಾನೆಯೋ (ಮರಣ ಹೊಂದುತ್ತಾನೆಯೋ) ಆತನ ಕಾಯ ಸಂಖಾರವು ಸ್ಥಗಿತಗೊಂಡಿರುತ್ತದೆ ಹಾಗು ಉಡುಗಿಹೋಗುತ್ತದೆ. ಆತನ ವಚಿ (ಮಾತಿನ) ಸಂಖಾರ ಸಹಾ ಸ್ಥಗಿತಗೊಳ್ಳುತ್ತದೆ ಹಾಗು ಉಡುಗಿಹೋಗುತ್ತದೆ. ಆತನ ಮಾನಸಿಕ ಸಂಖಾರವು ಸಹಾ ಸ್ಥಗಿತಗೊಳ್ಳುತ್ತದೆ ಹಾಗು ಉಡುಗಿಹೋಗುತ್ತದೆ. ಆತನ ಆಯು (ಪ್ರಾಣ) ಮುಗಿದುಹೋಗಿರುತ್ತದೆ ಹಾಗು ಆತನ ಶಾರೀರಿಕ ಲಕ್ಷ್ಯತೆಯು ಇಲ್ಲದಂತಾಗುತ್ತದೆ. ಮತ್ತು ಆತನ ಇಂದ್ರೀಯಗಳು ಮುರಿದುಹೋಗುತ್ತವೆ. ಆದರೆ ಯಾವ ಭಿಕ್ಖುವು ಸಂಜ್ಞವೇದನ ನಿರೋಧ ಸಮಾಪತ್ತಿಯನ್ನು ಸಾಧಿಸಿರುವನೋ ಆತನ ಕಾಯಸಂಖಾರ (ಶಾರೀರಿಕ ಚಟುವಟಿಕೆಗಳು) ನಿಂತಿರುತ್ತದೆ ಹಾಗು ನಿಶ್ಚಲವಾಗಿರುತ್ತದೆ. ಆತನ ವಚಿಸಂಖಾರವು (ಮಾತಿನ ಕ್ರಿಯೆಗಳು) ನಿಂತಿರುತ್ತವೆ ಹಾಗು ನಿಶ್ಚಲವಾಗಿರುತ್ತದೆ. ಹಾಗು ಆತನ ಚಿತ್ತಸಂಖಾರವು ನಿಂತಿರುತ್ತದೆ ಹಾಗು ನಿಶ್ಚಲವಾಗಿರುತ್ತದೆ. ಆದರೆ ಆತನ ಆಯುವು ಮುಗಿದಿರುವುದಿಲ್ಲ. ಆತನ ದೇಹದ ಉಷ್ಣತೆಯು ಇಲ್ಲವಾಗುವುದಿಲ್ಲ ಮತ್ತು ಆತನ ಇಂದ್ರೀಯಗಳು ಶಾಂತವಾಗಿರುತ್ತವೆ. ಇದೇ ಒಬ್ಬ ಕಾಲವಾಗಿರುವವನಿಗೂ ಹಾಗು ಒಬ್ಬ ಭಿಕ್ಖುವು ಸಂಜ್ಞವೇದನಾ ನಿರೋಧ ಪ್ರಾಪ್ತಿಮಾಡಿರುವವನಿಗೂ ಇರುವ ವ್ಯತ್ಯಾಸವಾಗಿದೆ.
ಸಾಧು ಭಂತೆ, ಸಾಧು. ತುಂಬಾ ಚೆನ್ನಾಗಿ ಉತ್ತರಿಸಿರಿ, ಮತ್ತೆ ಭಂತೆ, ಒಬ್ಬನು ಹೇಗೆ ಈ ಸಂಜ್ಞಾವೇದನಾ ನಿರೋಧ ಸ್ಥಿತಿಯಿಂದ ಹೊರಬರುತ್ತಾನೆ? ಗೃಹಪತಿಯೇ, ಯಾವ ಭಿಕ್ಖುವು ಈ ಸಂಜ್ಞವೇದನಾ ನಿರೋಧ ಸ್ಥಿತಿಯಿಂದ ಹೊರಬರುತ್ತಾನೋ ಆತನಿಗೆ ನಾನು ಈ ಸಂಜ್ಞವೇದನಾ ನಿರೋಧದಿಂದ ಹೊರಬರುತ್ತೇನೆ ಅಥವಾ ಹೊರಬಂದಿದ್ದೇನೆ ಎಂದು ಅನಿಸುವುದಿಲ್ಲ. ಬದಲಾಗಿ ಆತನ ಚಿತ್ತವು ಹಿಂದೆಯೇ ಸಾಕಷ್ಟು ಅಭಿವೃದ್ಧಿಯಾಗಿ ಅದರಿಂದಾಗಿ ಆ ಸ್ಥಿತಿಯಿಂದ ಹೊರಬರುತ್ತಾನೆ.
ಸಾಧು ಭಂತೆ, ಸಾಧು. ತುಂಬಾ ಚೆನ್ನಾಗಿ ವಿವರಿಸಿದಿರಿ. ಮತ್ತೆ ಭಂತೆ, ಯಾವ ಭಿಕ್ಖುವು ಈ ಸಂಜ್ಞವೇದನಾ ನಿರೋಧದಿಂದ ಹೊರಬರುತ್ತಾನೋ ಆತನ ಯಾವ ಸಂಖಾರವು ಮೊದಲಿಗೆ ಉದಯಿಸುತ್ತದೆ. ಕಾಯಸಂಖಾರವೋ ಅಥವಾ ವಚಿಸಂಖಾರವೋ ಅಥವಾ ಚಿತ್ತ ಸಂಖಾರವೋ? ಗೃಹಪತಿಯೇ ಯಾವ ಭಿಕ್ಖುವು ಸಂಜ್ಞವೇದನಾ ನಿರೋಧ ಸ್ಥಿತಿಯಿಂದ ಹೊರಬರುತ್ತಾನೋ ಆತನಲ್ಲಿ ಚಿತ್ತಸಂಖಾರವು ಮೊದಲಿಗೆ ಉದಯಿಸುತ್ತದೆ ನಂತರ ಕಾಯಸಂಖಾರವು ತದನಂತರ ವಚಿಸಂಖಾರವು ಉದಯಿಸುತ್ತದೆ.
ಸಾಧು ಭಂತೆ, ಸಾಧು. ತುಂಬಾ ಚೆನ್ನಾಗಿ ವಿವರಿಸಿದಿರಿ. ಮತ್ತೆ ಭಂತೆ, ಯಾವ ಭಿಕ್ಖುವು ಈ ಸಂಜ್ಞಾವೇದನ ನಿರೋಧ ಸ್ಥಿತಿಯಿಂದ ಹೊರಬರುತ್ತಾನೋ ಆತನಿಗೆ ಎಷ್ಟುಬಗೆಯ ಸ್ಪರ್ಶಗಳು ಸಂಪರ್ಕಕ್ಕೆ ಬರುವುವು? ಗೃಹಪತಿಯೇ, ಯಾವ ಭಿಕ್ಖುವು ಸಂಜ್ಞಾವೇದನಾ ನಿರೋಧ ಸ್ಥಿತಿಯಿಂದ ಹೊರಬಂದಾಗ ಆತನಿಗೆ ಮೂರು ವಿಧವಾದ ಸ್ಪರ್ಶಗಳು ಸಂಪರ್ಕಕ್ಕೆ ಬರುವುವು. ಅವೆಂದರೆ, ಶೂನ್ಯತೆಯ ಸ್ಪರ್ಶ, ಸಂಕೇತರಹಿತತೆಯ ಸ್ಪರ್ಶ ಮತ್ತು ಅಪ್ಪಣಿಹಿತೋ (ಆಸೆರಹಿತ) ಸ್ಪರ್ಶ.
ಸಾಧು ಭಂತೆ, ಸಾಧು. ತುಂಬಾ ಚೆನ್ನಾಗಿ ವಿವರಿಸಿದಿರಿ. ಮತ್ತೆ ಭಂತೆ, ಯಾರು ಈ ಸಂಜ್ಞವೇದನಾ ನಿರೋಧ ಸಮಾಪತ್ತಿಯಿಂದ ಹೊರಬಂದಿರುವರೋ ಅವರ ಚಿತ್ತವು ಯಾವುದರ ಕಡೆಗೆ ಬಾಗಿರುತ್ತದೆ, ಯಾವುದರ ಕಡೆಗೆ ಹರಿಯುತ್ತದೆ ಹಾಗು ಯಾವುದರ ಕಡೆಗೆ ವಾಲಿರುತ್ತದೆ? ಗೃಹಪತಿಯೇ, ಯಾರು ಈ ಸಂಜ್ಞವೇದನಾ ನಿರೋಧ ಸ್ಥಿತಿಯಿಂದ ಹೊರಬಂದಿರುತ್ತಾರೋ ಅವರ ಚಿತ್ತವು ಏಕಾಂತದೆಡೆಗೆ ಬಾಗಿರುತ್ತದೆ, ವಾಲಿರುತ್ತದೆ ಹಾಗು ಹರಿಯುತ್ತಿರುತ್ತದೆ.
ಸಾಧು ಭಂತೆ, ಸಾಧು. ತುಂಬಾ ಚೆನ್ನಾಗಿ ವಿವರಿಸಿದಿರಿ. ಆತನಿಗೆ ಆನಂದವು ಉಂಟಾಗಿತ್ತು. ಆನಂದಿತನಾಗಿ ಭಂತೆ ಕಾಮಭೂರಲ್ಲಿ ಪುನಃ ಹೀಗೆ ಪ್ರಶ್ನಿಸಿದನು: ಭಂತೆ, ಈ ಸಂಜ್ಞಾವೇದನಾ ಸ್ಥಿತಿಗೆ ಎಷ್ಟು ಅಂಶಗಳು ಸಹಕಾರಿಯಾಗುತ್ತವೆ? ಗೃಹಪತಿಯೇ, ನಿಜಕ್ಕೂ ನೀನು ಮೊದಲು ಕೇಳಬೇಕಿದ್ದ ಪ್ರಶ್ನೆಯನ್ನೇ ಈಗ ಕೇಳುತ್ತಿರುವೆ. ಆದರೆ ನಾನು ಉತ್ತರಿಸುವೆ. ಈ ಸಂಜ್ಞವೇದನಾ ನಿರೋಧ ಸ್ಥಿತಿಗೆ, ಎರಡು ಅಂಶಗಳು ಸಹಕಾರಿಯಾಗಿವೆ. ಅವೆಂದರೆ ಸಮಥಾ ಧ್ಯಾನ ಹಾಗು ವಿಪಸ್ಸನ ಧ್ಯಾನ.


7. ಗೋದತ್ತ ಸುತ್ತಂ

349. ಒಮ್ಮೆ ಪೂಜ್ಯ ಗೊದತ್ತರವರು ಮಾಚ್ಛಿಕಾಸಂಡೆಯಲ್ಲಿನ ಆಮ್ರವನದಲ್ಲಿ ತಂಗಿದ್ದರು. ಆಗ ಚಿತ್ತ ಗೃಹಸ್ಥನು ಪೂಜ್ಯ ಗೊದತ್ತರ ಬಳಿಗೆ ಬಂದನು. ಭಕ್ತಿಯುತವಾಗಿ ವಂದಿಸಿ, ಒಂದೆಡೆಗೆ ಕುಳಿತನು. ಆಗ ಪೂಜ್ಯ ಗೊದತ್ತರು ಹೀಗೆ ಹೇಳಿದರು: ಗೃಹಪತಿಯೇ, ಅಪ್ರಮಾಣ ಚೇತೋವಿಮುಕ್ತಿಗಳಾದ ಅಕಿಂಚಾ ಚೇತೋವಿಮುಕ್ತಿ (ಏನೂ ಇಲ್ಲವೆಂಬ ಚಿತ್ತವಿಮುಕ್ತಿ), ಶೂನ್ಯತಾ ಚೇತೋವಿಮುಕ್ತಿ, ಅನಿಮಿತ್ತ (ಜಿಹ್ವಾತೀತ) ಚೇತೋವಿಮುಕ್ತಿ. ಇವೆಲ್ಲ ವಿಭಿನ್ನ ಅರ್ಥಗಳನ್ನು ಹೊಂದಿವೆಯೇ? ಅಥವಾ ವಿಭಿನ್ನ ವಾಕ್ಯಗಳೇ? ಒಂದೇ ಅರ್ಥವುಳ್ಳದ್ದಾಗಿ ವಾಕ್ಯಗಳು ವಿಭಿನ್ನವೇ? ಪೂಜ್ಯರೇ, ಇಂಥಹದೊಂದು ವಿಧಾನವಿದೆ. ಅದರಿಂದಾಗಿ ಈ ವಿಷಯಗಳು ವಿಭಿನ್ನ ಅರ್ಥವುಳ್ಳದ್ದಾಗಿ ಹಾಗೆಯೇ ವಿಭಿನ್ನ ವಾಕ್ಯಗಳಾಗುತ್ತವೆ ಮತ್ತು ಇನ್ನೊಂದು ವಿಧಾನವಿದೆ ಅದರಿಂದಾಗಿ ಅವೆಲ್ಲಾ ಒಂದೇ ಅರ್ಥವುಳ್ಳದ್ದಾಗಿ ಕೇವಲ ವಾಕ್ಯಗಳು ವಿಭಿನ್ನ ಆಗುವುವು.
ಮತ್ತೆ ಭಂತೆ, ಯಾವ ವಿಧಾನದಿಂದಾಗಿ ಇವು ವಿಭಿನ್ನ ಅರ್ಥವುಳ್ಳದ್ದಾಗಿ, ಹಾಗೆಯೇ ವಿಭಿನ್ನ ವಾಕ್ಯದವಾಗುತ್ತವೆ. ಹೇಗೆಂದರೆ ಇಲ್ಲಿ ಭಿಕ್ಷುವೊಬ್ಬನು ಒಂದು ದಿಕ್ಕಿನತ್ತ ಮೆತ್ತವನ್ನು ಹರಡುತ್ತಾ ಪ್ರಸರಿಸುತ್ತಾನೆ. ಅದೇರೀತಿಯಾಗಿ ಇನ್ನೊಂದು ದಿಕ್ಕಿನತ್ತ ಮೆತ್ತಭಾವನವನ್ನು ಹರಡುತ್ತಾ ಪ್ರಸರಿಸುತ್ತಾನೆ. ಹಾಗೆಯೇ ಮೂರನೆಯ, ನಾಲ್ಕನೆಯ ದಿಕ್ಕಿಗೆ, ಸುತ್ತಲೂ, ಊಧ್ರ್ವ ಹಾಗು ಅಧೋ ದಿಕ್ಕಿನಲ್ಲಿಯೂ ಮೈತ್ರಿಯನ್ನು ಹರಡುತ್ತಾ ಪ್ರಸರಿಸುತ್ತಾನೆ. ಹಾಗೆಯೇ ಆತನು ಪರರನ್ನೆಲ್ಲಾ ತನ್ನಂತೆ ಭಾವಿಸಿ ಇಡೀ ಲೋಕಗಳಿಗೆಲ್ಲಾ ಪರಿಶುದ್ಧವಾದ ಮೆತ್ತವನ್ನು ಪ್ರಸರಿಸುತ್ತಾ ವಿಹರಿಸುತ್ತಾನೆ. ಆತನ ಮೈತ್ರಿಯು ಅತ್ಯಂತ ವೈಶಾಲ್ಯಯುತವಾಗಿ, ಉನ್ನತವಾಗಿ, ಅನಂತವಾಗಿ ಅಳತೆಗೆ ನಿಲುಕದಂತಹುದಾಗಿ, ದ್ವೇಷರಹಿತವಾಗಿ, ವೈರರಹಿತವಾಗಿರುತ್ತದೆ. ಅದೇರೀತಿಯಾಗಿ ಆತನು ಒಂದು ದಿಕ್ಕಿನತ್ತ ಕರುಣೆಯನ್ನು ಹರಡುತ್ತ ಪ್ರಸರಿಸುತ್ತಾನೆ. ಹಾಗೆಯೇ ಎರಡನೆಯ ದಿಕ್ಕಿಗೆ, ಮೂರನೆಯ, ನಾಲ್ಕನೆಯ ದಿಕ್ಕಿಗೆ, ಸುತ್ತಲೂ, ಮೇಲೆ, ಕೆಳಗೆ ಸರ್ವ ದಿಕ್ಕುಗಳಲ್ಲಿಯೂ ಕರುಣೆಯನ್ನು ಹರಡುತ್ತಾ ನೆಲೆಸುತ್ತಾನೆ. ಅದೇರೀತಿಯಾಗಿ ಆತನು ಒಂದು ದಿಕ್ಕಿನತ್ತ ಮುದಿತಾವನ್ನು ಹರಡುತ್ತಾ ಪ್ರಸರಿಸುತ್ತಾನೆ. ಅದೇರೀತಿಯಾಗಿ ಆತನು ಉಪೇಕ್ಖಾ (ಉಪೇಕ್ಷೆ) ಭಾವನೆಯಿಂದ ತುಂಬಿದವನಾಗಿ ಒಂದು ದಿಕ್ಕಿನತ್ತ ಅದನ್ನು ಹರಡುತ್ತಾನೆ. ಹಾಗೆಯೇ ಎರಡನೆಯ ದಿಕ್ಕಿಗೆ... ಮೂರನೆಯ ದಿಕ್ಕಿಗೆ.... ನಾಲ್ಕನೆಯ ದಿಕ್ಕಿಗೆ.... ಸುತ್ತಲೂ ಮೇಲೆ... ಕೆಳಗೆ ಸರ್ವದಿಕ್ಕುಗಳಲ್ಲಿಯೂ ಉಪೇಕ್ಷಾ ಭಾವನೆಯನ್ನು ಅತ್ಯಂತ ವೈಶಾಲ್ಯಯುತವಾಗಿ, ಉನ್ನತವಾಗಿ, ಅನಂತವಾಗಿ, ಅಳತೆಗೆ ಸಿಲುಕದಂತೆ, ವೈರಹಿತವಾಗಿ, ದ್ವೇಷರಹಿತವಾಗಿ, ಪ್ರಸರಿಸುತ್ತಾ ವಿಹರಿಸುತ್ತಾನೆ. ಇದಕ್ಕೆ ಭಂತೆ ಅಪ್ರಮಾಣ ಚೇತವಿಮುಕ್ತಿ ಎನ್ನುವರು.
ಭಂತೆ, ಯಾವುದನ್ನು ಅಕಿಂಚ ಚೇತೋವಿಮುಕ್ತಿ ಎನ್ನುವರು? ಇಲ್ಲಿ ಭಂತೆ, ಭಿಕ್ಖುವು ವಿಞ್ಞಾನಯಾತನವನ್ನು ಪೂರ್ಣವಾಗಿ ದಾಟಿದವನಾಗಿ, ಏನೂ ಇಲ್ಲ ಎಂಬ ಸಮಾಪತ್ತಿಯಲ್ಲಿ ಜಾಗ್ರತನಾಗಿ, ಸ್ಥಾಪಿತನಾಗಿ ವಿಹರಿಸುವನು. ಇದಕ್ಕೆ ಭಂತೆ ಅಕಿಂಚಿಚೇತೋವಿಮುಕ್ತಿ ಎನ್ನುವರು.
ಭಂತೆ, ಯಾವುದನ್ನು ಶೂನ್ಯತಾ ಚಿತ್ತ (ಚೇತೋ) ವಿಮುಕ್ತಿ ಎನ್ನುವರು? ಇಲ್ಲಿ ಭಂತೆ, ಭಿಕ್ಖುವು ಅರಣ್ಯದಲ್ಲಿಯಾಗಲಿ, ವೃಕ್ಷಮೂಲ (ಮರದ ಬುಡದಲ್ಲಿ) ದಲ್ಲಿಯಾಗಲಿ ಅಥವಾ ಜನರಿಲ್ಲದ, ಶಬ್ದವಿಲ್ಲದ ಸ್ಥಳವಾದ ಶೂನ್ಯಗಾರದಲ್ಲಿಯಾಗಲಿ, ಪದ್ಮಾಸೀನನಾಗಿ ಹೀಗೆ ಚಿಂತನೆ ಆರಂಭಿಸುತ್ತಾನೆ. ಇದು ಆತ್ಮ (ಸ್ವಯಂ) ನಿಂದ ರಹಿತವಾಗಿದೆ (ಶೂನ್ಯವಾಗಿದೆ) ಅಥವಾ ತನ್ನದೆನ್ನುವುದರಿಂದ (ಆತ್ಮಕ್ಕೆ ಸೇರಿದ್ದು ಎಂಬುದರಿಂದ) ಶೂನ್ಯವಾಗಿದೆ. ಹೀಗೆಯೇ ಚಿಂತನೆ ನಡೆಸುತ್ತ, ಚಿತ್ತವೆಲ್ಲವನ್ನು ಬರಿದುಮಾಡಿ ಶೂನ್ಯವಿಮುಕ್ತಿ ಪಡೆಯುತ್ತಾನೆ. ಇದಕ್ಕೆ ಶೂನ್ಯತಾ ಚೇತೋವಿಮುಕ್ತಿ ಎನ್ನುವರು.
ಭಂತೆ, ಯಾವುದನ್ನು ಅನಿಮಿತ್ತ ಚೇತೋವಿಮುಕ್ತಿ ಎನ್ನುವರು? ಭಂತೆ, ಇಲ್ಲಿ ಭಿಕ್ಷುವು ಎಲ್ಲಾ ನಿಮಿತ್ತಗಳಿಂದ (ಚಿಹ್ನೆಗಳಿಂದ) ಗಮನ ನೀಡದೆ ಇರುವುದರಿಂದಾಗಿ ಅನಿಮಿತ್ತ ಚೇತೋಸಮಾಧಿಯು ಸ್ಥಾಪಿತವಾಗಿ ವಿಹರಿಸುವರು. ಇದಕ್ಕೆ ಭಂತೆ, ಅನಿಮಿತ್ತ ಚೇತೋವಿಮುಕ್ತಿ ಎನ್ನುವರು. ಹೀಗೆ ಭಂತೆ, ಕೆಲವು ವಿಷಯಗಳು ಪರ್ಯಾಯ ಅರ್ಥವುಳ್ಳದ್ದಾಗಿ ಹಾಗೆಯೇ ಪರ್ಯಾಯ ವಾಕ್ಯಗಳಾಗುತ್ತವೆ.
ಭಂತೆ, ಯಾವುದಾದರೂ ವಿಧಾನದಿಂದಾಗಿ ಒಂದೇ ಅರ್ಥವುಳ್ಳದ್ದಾಗಿ, ವಿಭಿನ್ನವಾಗಿ ವಾಕ್ಯ (ಹೇಳಿಕೆ)ಗಳು ಹೇಳಲ್ಪಟ್ಟಿವೆಯೇ? ರಾಗವು ಭಂತೆ ಪ್ರಮಾಣಕರವಾಗಿದೆ, ದ್ವೇಷವು ಪ್ರಮಾಣಕರವಾಗಿದೆ ಮತ್ತು ಮೋಹವು ಪ್ರಮಾಣಕರವಾಗಿದೆ. ಯಾವ ಭಿಕ್ಷುವು ಖೀಣಾಸವನಾಗಿರುವನೋ ಈ ಮೂರು ಅಕುಶಲ ಮೂಲಗಳು ಅವನಲ್ಲಿ ಕ್ಷೀಣಿಸಿರುತ್ತವೆ, ನಾಶವಾಗಿರುತ್ತವೆ, ತೊರೆಯಲ್ಪಟ್ಟಿರುತ್ತದೆ. ತಾಳೆಯ ಮರದಂತೆ ಕತ್ತರಿಸಲ್ಪಟ್ಟಿರುತ್ತದೆ. ಭವಿಷ್ಯದಲ್ಲಿ ಪುನಃ ಉದಯಿಸದಂತೆ ಆಗಿರುತ್ತದೆ. ಹೀಗಾಗಿ ಭಂತೆ, ಇವು ಅಳತೆಗೆ ನಿಲುಕದ ಅಪ್ರಮಾಣ ಚೇತೋವಿಮುಕ್ತಿಯಾಗುವುದು. ಇದನ್ನು ಅವಿಚಲ ಚಿತ್ತವಿಮುಕ್ತಿ ಎನ್ನುವರು. ಇದನ್ನು ಅಗ್ರವೆಂದು ಅಗ್ರರೇ ನಿರ್ಣಯಿಸಿದ್ದಾರೆ. ಅಂತಹ ಅವಿಚಲ ಚಿತ್ತವಿಮುಕ್ತನಲ್ಲಿ ರಾಗವು ಶೂನ್ಯವಾಗಿರುತ್ತದೆ, ದ್ವೇಷವೂ ಶೂನ್ಯವಾಗಿರುತ್ತದೆ ಮತ್ತು ಮೋಹವು ಶೂನ್ಯವಾಗಿರುತ್ತದೆ. ಭಂತೆ, ರಾಗವು ಕ್ಷುಲ್ಲುಕವಾದುದು, ದ್ವೇಷವು ಕ್ಷುಲ್ಲುಕವಾದುದು ಹಾಗು ಮೋಹವು ಕ್ಷುಲ್ಲುಕವಾದುದು. ಯಾರು ಖೀಣಾಸ್ರವ ಭಿಕ್ಷುಗಳಾಗಿರುವರೋ ಅವರಲ್ಲಿ ಇದು ತೊರೆಯಲ್ಪಟ್ಟಿರುತ್ತದೆ. ತಾಳೆಯ ವೃಕ್ಷದ ಬುಡದಂತೆ ಪುನಃ ಉದಯಿಸದಂತೆ ಕತ್ತರಿಲ್ಪಟ್ಟಿರುತ್ತವೆ. ಯಾವುದೆಲ್ಲಾ ಚೇತೋವಿಮುಕ್ತಿಗಳನ್ನು ಘೋಷಿಸಿರುವರೋ, ಅವೆಲ್ಲದಕ್ಕೂ ಅವಿಚಲ ಚೇತೋವಿಮುಕ್ತಿಯನ್ನು ಅಗ್ರವೆಂದು ಘೋಷಿಸಿದ್ದಾರೆ. ಅಂತಹ ಅವಿಚಲ ಚೇತೋವಿಮುಕ್ತಿ (ಅಕುಪ್ಪ)ಯು, ರಾಗದಿಂದ, ಶೂನ್ಯವಾಗಿರುತ್ತದೆ, ದ್ವೇಷದಿಂದ ಶೂನ್ಯವಾಗಿರುತ್ತದೆ ಮತ್ತು ಮೋಹದಿಂದ ಶೂನ್ಯವಾಗಿರುತ್ತದೆ.
ಭಂತೆ, ರಾಗವು ನಿಮಿತ್ತಕಾರಕವಾಗಿವೆ (ಚಿಹ್ನೆಗಳನ್ನು ಉದಯಿಸುವಂತೆ ಮಾಡುವುದಾಗಿದೆ). ದ್ವೇಷವೂ ಸಹಾ ನಿಮಿತ್ತಕಾರಕವಾಗಿದೆ ಮತ್ತು ಮೋಹವೂ ನಿಮಿತ್ತಕಾರಕವಾಗಿದೆ. ಆದರೆ ಯಾರು ಖೀಣಾಸ್ರವ ಭಿಕ್ಷುಗಳಾಗಿರುತ್ತಾರೋ ಅಂತಹವರಲ್ಲಿ ಇವು ಪೂರ್ಣವಾಗಿ ವಜ್ರ್ಯವಾಗಿರುತ್ತವೆ. ತಾಳೆಯ ವೃಕ್ಷದ ಬುಡವನ್ನು ಹೇಗೆ ಪುನಃ ಉದಯಿಸದಂತೆ ಕತ್ತರಿಸುತ್ತಾರೋ ಹಾಗೆಯೇ ಅವರಲ್ಲಿ ಅಕುಶಲಗಳು ನಾಶವಾಗಿರುತ್ತವೆ. ಯಾವುದೆಲ್ಲಾ ಚಿತ್ತವಿಮುಕ್ತಿಗಳನ್ನು ಈವರೆಗೂ ತಿಳಿಸಿದ್ದಾರೋ ಅವೆಲ್ಲಕ್ಕಿಂತ ಅಕುಪ್ಪಚೇತೋವಿಮುಕ್ತಿಯೇ (ಅವಿಚಲಚಿತ್ತವಿಮುಕ್ತಿ) ಅಗ್ರವೆಂದು ಕರೆಯುತ್ತಾರೆ. ಅಂತಹ ಅವಿಚಲರಲ್ಲಿ ರಾಗವೂ ಶೂನ್ಯವಾಗಿರುತ್ತದೆ, ದ್ವೇಷವೂ ಶೂನ್ಯವಾಗಿರುತ್ತದೆ ಮತ್ತು ಮೋಹವೂ ಶೂನ್ಯವಾಗಿರುತ್ತದೆ. ಈ ರೀತಿಯಾಗಿ ಭಂತೆ, ಈ ವಿಧಾನದಿಂದಾಗಿ ಈ ಗಂಭೀರ ವಿಷಯಗಳೆಲ್ಲವೂ ಒಂದೇ ಅರ್ಥವುಳ್ಳದ್ದಾಗಿಯೂ, ವಾಕ್ಯಗಳು (ಹೇಳಿಕೆಗಳು) ವಿಭಿನ್ನವಾಗಿತ್ತು. ಲಾಭವಾಗಿದೆ ಗೃಹಪತಿಯೇ, ನಿನಗೆ ಸುಲಾಭವಾಗಿದೆ. ಗಂಭೀರವಾದ ಬುದ್ಧವಚನಗಳನ್ನು ಅರಿಯುವಂತಹ ಪ್ರಜ್ಞಾಚಕ್ಷುವನ್ನು ಪಡೆದಿರುವೆ.


8. ನಿಗಣ್ಠನಾಟಪುತ್ತ ಸುತ್ತಂ

350. ಆ ಸಮಯದಲ್ಲಿ ನಿಗಂಠನಾಟಪುತ್ತರು (ವರ್ಧಮಾನ ಮಹಾವೀರ) ತಮ್ಮ ಬೃಹತ್ ಸಮೂಹ (ನಿಗಂಠ) ದೊಂದಿಗೆ ಮಚ್ಛಿಕಾಸಂಡೆಯಲ್ಲಿ ಆಗಮಿಸಿದ್ದರು. ಈ ವಿಷಯವನ್ನು ಆಲಿಸಿದ ಚಿತ್ತಗೃಹಪತಿಯು ತನ್ನ ಹಲವಾರು ಮಿತ್ರರೊಡನೆ ನಿಗಂಠನಾಟಪುತ್ತರ ಬಳಿಗೆ ಬಂದನು. ಅಲ್ಲಿ ಕುಶಲ ವಿಚಾರಿಸಿ ನಂತರ ಒಂಡೆದೆ ಕುಳಿತುಕೊಂಡನು. ಆಗ ನಿಗಂಠನಾಟಪುತ್ತರು ಹೀಗೆ ಪ್ರಶ್ನಿಸಿದರು: ಗೃಹಸ್ಥನೇ, ವಿತರ್ಕ ಹಾಗು ವಿಚಾರಗಳಿಲ್ಲದ ಸಮಾಧಿಯಿದೆ ಹಾಗು ವಿತರ್ಕ ಹಾಗು ವಿಚಾರಗಳ ನಿರೋಧವಿದೆ ಎಂದು ಘೋಷಿಸುವ ಸಮಣ ಗೋತಮರ ಬಗ್ಗೆ ನಿನಗೆ ಶ್ರದ್ಧೆಯಿದೆಯೇ?
ಈ ವಿಷಯದ ಬಗ್ಗೆ ಅಂದರೆ ವಿತರ್ಕ ಹಾಗು ವಿಚಾರಗಳಿಲ್ಲದ ಸಮಾಧಿಯಿದೆ ಹಾಗು ವಿತರ್ಕ ಹಾಗು ವಿಚಾರಗಳ ನಿರೋಧವಿದೆ. ಈ ಹೇಳಿಕೆಯ ಬಗ್ಗೆ ನಾನು ಶ್ರದ್ಧೆಯಿಂದ ಭಗವಾನರ ಬಳಿಗೆ ಹೋಗಲಾರೆ. ಇದನ್ನು ಆಲಿಸಿದ ನಿಗಂಠನಾಟಪುತ್ತರು ಹೆಮ್ಮೆಯಿಂದ ಮೇಲಕ್ಕೆ ತಲೆಯೆತ್ತೆ ತನ್ನ ನಿಗಂಠ ಬಳಗಕ್ಕೆ ಹೀಗೆ ಹೇಳಿದರು: ನೋಡಿದಿರಾ, ಗೃಹಸ್ಥರೇ, ಈ ಚಿತ್ತಗೃಹಸ್ಥನು ನಿಜಕ್ಕೂ ಮುಚ್ಚುಮರೆಯಿಲ್ಲದ ಋಜುವಾಗಿದ್ದಾನೆ. ಎಷ್ಟೊಂದು ನೇರ ಹಾಗು ತೆರೆದ ಮನಸ್ಕನಾಗಿದ್ದಾನೆ. ವಿತರ್ಕ ಹಾಗು ವಿಚಾರಗಳನ್ನು ನಿಲ್ಲಿಸುವುದೆಂದರೆ ಬಲೆಯಲ್ಲಿ ಗಾಳಿಯನ್ನು ಹಿಡಿದಂತೆ ಅಥವಾ ಗಂಗಾನದಿಯನ್ನು ಮುಷ್ಠಿಯಲ್ಲಿ ಬಂಧಿಸಿದಂತೆ ಆ ಬಗೆಯ ಕಲ್ಪನೆ ಅದಾಗಿದೆ.
ಪೂಜ್ಯರೇ, ತಾವು ಇದನ್ನು ಹೇಗೆ ಪರಿಹರಿಸುವಿರಿ. ಏನೆಂದರೆ ಜ್ಞಾನವು ಶ್ರೇಷ್ಠವೋ ಅಥವಾ ಶ್ರದ್ಧೆಯೋ? ಗೃಹಸ್ಥನೇ, ಜ್ಞಾನವೇ ಶ್ರದ್ಧೆಗಿಂತ ಶ್ರೇಷ್ಠವಾಗಿದೆ. ಪೂಜ್ಯರೇ, ನಾನು ನನ್ನ ಇಚ್ಛೆಯಂತೆ ಇಂದ್ರಿಯಗಳ ಸುಖಗಳ ಯೋಚನೆಗಳಿಂದ ಹಾಗು ಅಕುಶಲ ಯೋಚನೆಗಳ ಸ್ಥಿತಿಗಳಿಂದ ಪಾರಾಗಲು ಪ್ರಥಮಝಾನವನ್ನು ಪ್ರವೇಶಿಸುತ್ತೇನೆ. ಅದು ವಿತರ್ಕ ಹಾಗು ವಿಚಾರಗಳಿಂದ ಕೂಡಿದ್ದು, ಆನಂದ ಹಾಗು ಸುಖದಿಂದ ಅವೃತವಾಗಿರುವ ಏಕಾಗ್ರತೆಯ ಉನ್ನತ ಸ್ಥಿತಿಯಾಗಿದೆ. ನಂತರ ನಾನು ನನ್ನ ಇಚ್ಛೆಯಂತೆ ಈ ವಿತರ್ಕ ಹಾಗು ವಿಚಾರಗಳನ್ನು ಸ್ತಬ್ಧಗೊಳಿಸುತ್ತಾ, ನಿಲ್ಲಿಸುತ್ತಾ ದ್ವಿತೀಯ ಝಾನವನ್ನು ಪ್ರವೇಶಿಸುತ್ತೇನೆ. ನಂತರ ಹಾಗೆಯೇ ಪೀತಿಯನ್ನು ಅತಿಕ್ರಮಿಸಿ... ತೃತೀಯ ಝಾನದಲ್ಲಿ ನೆಲೆಸುತ್ತೇನೆ.... ನಂತರ ನನ್ನ ಇಚ್ಛೆಯಂತೆ ಸುಖ-ದುಃಖಗಳಿಗೆ ಅತೀತವಾದ ಸಮಚಿತ್ತತೆಯಿಂದ ಕೂಡಿದ ಚತುರ್ಥ ಝಾನದಲ್ಲಿ ಪ್ರವೇಶಿಸಿ ವಿಹರಿಸುತ್ತೇನೆ. ಹೀಗೆ ನಾನು ಅರಿತನಂತರ ಹಾಗು ಪ್ರತ್ಯಕ್ಷವಾಗಿ ಕಂಡನಂತರ ಬೇರೆಯ ಸಮಣ ಬ್ರಾಹ್ಮಣರು ಹೇಳುವ ಹೇಳಿಕೆಗಳಿಗೆ ಶ್ರದ್ಧೆಯಿಡುವ ಅವಶ್ಯಕತೆಯಿದೆಯೇ?
ಯಾವಾಗ ಹೀಗೆ ಚಿತ್ತಗೃಹಪತಿಯು ನುಡಿದನೋ ಆಗ ನಿಗಂಠನಾಟಪುತ್ತರು ಸಕಲ ಸಮೂಹವನ್ನು ಉದ್ದೇಶಿಸಿ ಹೀಗೆ ನುಡಿದರು: ನೋಡಿದಿರಾ, ಗೃಹಸ್ಥರೇ, ಈ ಚಿತ್ತಗೃಹಸ್ಥನನ್ನು? ಈತನು ಋಜುರಹಿತನೂ, ಮಯಾವಿಯು, ವಂಚಕನು ಆಗಿದ್ದಾನೆ.
ಪೂಜ್ಯರೇ, ತಾವೇ ಈ ಕೆಲಸಮಯದ ಹಿಂದೆ ಚಿತ್ತಗೃಹಸ್ಥನನ್ನು ಮುಚ್ಚುಮರೆಯಿಲ್ಲದ ನೇರ ಋಜುಸಂಪನ್ನನ್ನೆಂದು, ಪ್ರಾಮಾಣಿಕ ತೆರೆದ ಮನಸ್ಕನೆಂದು ಶ್ಲಾಘಿಸಿದಿರಿ. ಆದರೆ ಈಗ ಋಜುರಹಿತನೆಂದು, ಮಾಯಾವಿ ಹಾಗು ವಂಚಕನು ಎನ್ನುತ್ತಿರುವಿರಿ. ನಿಮ್ಮ ಹಿಂದಿನ ಹೇಳಿಕೆ ಸತ್ಯವಾಗಿದ್ದರೆ ಈಗಿನದು ಮಿಥ್ಯವಾಗಿರುತ್ತದೆ. ಈಗಿನದು ಸತ್ಯವಾಗಿದ್ದರೆ ಹಿಂದಿನದು ಮಿಥ್ಯವಾಗಿರುತ್ತದೆ. ಮತ್ತೆ ಪೂಜ್ಯರೇ, ನನ್ನಲ್ಲಿ ದಶಸಹಧಮ್ಮಿಕ ಪ್ರಶ್ನೆಗಳು ಉಂಟಾಗುತ್ತಿದೆ. ಇವುಗಳ ಅರ್ಥವು ಅರಿವಾದರೆ ನಿಮ್ಮ ಬಳಗದವರ ಬಳಿಯಲ್ಲಿ ಹೇಳಿಕೊಳ್ಳಿರಿ. ಮೊದನೆಯ ಪ್ರಶ್ನೆಯಲ್ಲಿ ಒಂದು ಉದ್ದೇಶವಿದೆ ಒಂದು ಸಾರಯುತವಾದ ವಿವರಣೆಯಿದೆ. ಎರಡನೇ ಪ್ರಶ್ನೆಯಲ್ಲಿ ಎರಡು ಉದ್ದೇಶಗಳಿವೆ, ಎರಡು ಸಾರಯುತ ವಿವರಣೆಯಿದೆ. ಮೂರನೇ ಪ್ರಶ್ನೆಯಲ್ಲಿ ಮೂರು ಉದ್ದೇಶಗಳಿವೆ, ಮೂರು ಸಾರಯುತ ವಿವರಣೆಯಿದೆ. ನಾಲ್ಕನೇ ಪ್ರಶ್ನೆಯಲ್ಲಿ ನಾಲ್ಕು ಉದ್ದೇಶಗಳಿವೆ ಹಾಗು ನಾಲ್ಕು ಸಾರಯುತವಾದ ವಿವರಣೆಗಳಿವೆ. ಐದು.... ಆರು.... ಏಳು.... ಎಂಟು.... ಒಂಬತ್ತು.... ಹತ್ತನೇ ಪ್ರಶ್ನೆಯಲ್ಲಿ ಹತ್ತು ಉದ್ದೇಶಗಳಿವೆ, ಹತ್ತು ಸಾರಯುತ ವಿವರಣೆ (ವ್ಯಾಕರಣಬದ್ಧ ವಿವರಣೆ)ಗಳಿವೆ. ಹೀಗೆ ಹೇಳಿದಂತಹ ಚಿತ್ತಗೃಹಪತಿಯು ತನ್ನ ಆಸನದಿಂದ ಎದ್ದು ನಿಗಂಠನಾಠಪುತ್ತರಿಗೆ ಹೇಳದೆಯೇ ಉತ್ತರ ಪಡೆಯದೆಯೇ ಅಲ್ಲಿಂದ ನಿರ್ಗಮಿಸಿದನು.



9. ಅಚೇಲಕಸ್ಸಪ ಸುತ್ತಂ

351. ಒಮ್ಮೆ ನಗ್ನಸನ್ಯಾಸಿ ಅಚೇಲ ಕಸ್ಸಪನು ಮಚ್ಛಿಕಾಸಂಡೆಗೆ ಆಗಮಿಸಿದನು. ಆತನು ಹಿಂದೆ ಗೃಹಸ್ಥನಾಗಿದ್ದಾಗ ಚಿತ್ತಗೃಹಪತಿಗೆ ಮಿತ್ರನಾಗಿದ್ದನು. ಚಿತ್ತಗೃಹಪತಿಗೆ ಅಚೇಲಕಸ್ಸಪನು ನಗರಕ್ಕೆ ಬಂದಿರುವನೆಂದು ತಿಳಿಯಿತು. ಇದನ್ನು ತಿಳಿದಂತಹ ಚಿತ್ತಗೃಹಪತಿಯು ಅಚೇಲಕಸ್ಸಪನ ಬಳಿಗೆ ಬಂದನು. ಕುಶಲ ಕ್ಷೇಮಗಳನ್ನು ವಿಚಾರಿಸಿದ ನಂತರ ಒಂದುಕಡೆ ಕುಳಿತುಕೊಂಡು ಹೀಗೆ ಕೇಳಿದನು: ಪಬ್ಬಜಿತನಾಗಿ ಎಷ್ಟು ಕಾಲವಾಯಿತು ಭಂತೆ ಕಸ್ಸಪ? ನಾನು ಪ್ರವಜ್ಯ ಸ್ವೀಕರಿಸಿ 30 ವರ್ಷಗಳು ಕಳೆದುಹೋಯಿತು. ಈ 30 ವರ್ಷದ ಅವಧಿಯಲ್ಲಿ ತಾವು ಆರ್ಯರ ಉತ್ತರಿಮನುಸ್ಸಧಮ್ಮಾ (ಮಾನವಾತೀತ) ಜ್ಞಾನದರ್ಶನ ವಿಶೇಷಗಳನ್ನು ಪ್ರಾಪ್ತಿ ಮಾಡಿರುವಿರಾ? ಅಥವಾ ಅಂತಹ ಧ್ಯಾನಗಳಲ್ಲಿ ವಿಹರಿಸಿದ್ದಿರಾ?
ಇಲ್ಲ ಗೃಹಪತಿಯೇ, ಈ 30 ವರ್ಷಗಳ ಅವಧಿಯಲ್ಲಿ ನಾನು ಉತ್ತರಿಮನುಸ್ಸ (ಮಾನವಾತೀತ) ಧಮ್ಮ ಆರ್ಯರ ಜ್ಞಾನದರ್ಶನವಾಗಲಿ ಅಥವಾ ಅಂತಹ ಧ್ಯಾನದ ಸುಖಗಳಲ್ಲಿ ವಿಹರಿಸುವುದಾಗಲಿ ಪ್ರಾಪ್ತಿಮಾಡಿಲ್ಲ. ಕೇವಲ ನಗ್ನತೆ, ಕೇಶಮುಂಡನವಾಗಿದೆ ಹಾಗು ಆಸನವನ್ನು ಸ್ವಚ್ಛಗೊಳಿಸುವ ಕುಂಚ ಸಂಪಾದಿಸಿದ್ದೇನೆ ಅಷ್ಟೆ. ಯಾವಾಗ ಹೀಗೆ ಹೇಳಲಾಯಿತೋ, ಚಿತ್ತಗೃಹಪತಿಯು ಆತನಿಗೆ ಹೀಗೆ ಹೇಳಿದನು: ಇದು ನಿಜಕ್ಕೂ ಅದ್ಭುತ ಹಾಗು ಆಶ್ಚರ್ಯಕರವಾಗಿದೆ, ಭಗವಾನರಿಂದ ಇಷ್ಟು ಸ್ಪಷ್ಟವಾಗಿ, ಪರಿಶುದ್ಧವಾಗಿ, ವಿವರವಾಗಿ ಧಮ್ಮವು ನುಡಿಯಲ್ಪಟ್ಟಿದ್ದರೂ ಸಹಾ ನೀನು ಮಾನವಾತೀತವಾದ ಆರ್ಯರ ಜ್ಞಾನದರ್ಶನವಾಗಲಿ ಅಥವಾ ಧ್ಯಾನ ಸುಖಗಳಲ್ಲಿ ವಿಹರಿಸುವುದಾಗಿ ಪ್ರಾಪ್ತಿಮಾಡಿಲ್ಲ. ಕೇವಲ ನಗ್ನತೆ, ಮುಂಡನ ಹಾಗು ಪೀಠೋಪಕರಣಗಳ ಶುದ್ಧಿಗೆ ಕುಂಚವಷ್ಟೇ ಎಂದಿದ್ದೀರಿ.
ಆದರೆ ಗೃಹಪತಿಯೇ, ತಾವು ಎಷ್ಟು ವರ್ಷಗಳಿಂದ ಉಪಾಸಕರಾಗಿದ್ದೀರಿ. ನಾನು ಸಹಾ ಅಷ್ಟೇ ಭಂತೆ, 30 ವರ್ಷಗಳಾಯಿತು. ಓಹ್ ಗೃಹಸ್ಥನೇ! ಈ ಕಳೆದ 30 ವರ್ಷಗಳಲ್ಲಿ ಉತ್ತರಿಮನುಸ್ಸಧಮ್ಮದ ಆರ್ಯರ ಜ್ಞಾನದರ್ಶನವಾಗಲಿ ಅಥವಾ ಧ್ಯಾನದ ಸುಖಗಳಲ್ಲಿ ವಿಹರಿಸುವುದಾಗಲಿ ಸಂಪಾದಿಸಿರುವಿರಾ? ಏಕಿಲ್ಲ ಭಂತೆ, ಯಾವಾಗಲೇ ಆಗಲಿ ನಾನು ಅಕುಶಲ ಚಿತ್ತಸ್ಥಿತಿಗಳಿಂದ ಹಾಗು ಕಾಮಭೋಗಗಳ ಯೋಚನೆಗಳಿಂದ ಮುಕ್ತವಾಗಿ ಪ್ರಥಮ ಝಾನದಲ್ಲಿ ಪ್ರವೇಶಿಸಿ ನೆಲೆಸುತ್ತೇನೆ. ಆರು ವಿತರ್ಕ ಹಾಗು ವಿಚಾರಗಳಿಂದ ಕೂಡಿದ್ದಾಗಿರುತ್ತದೆ... ನಂತರ ದ್ವಿತೀಯ ಧ್ಯಾನ ಪ್ರವೇಶಿಸಿ ನೆಲೆಸುತ್ತೇನೆ..... ರಹಿತವಾಗಿರುತ್ತದೆ..... ನಂತರ ತೃತೀಯ..... ಸುಖ, ಆನಂದರಹಿತವಾಗಿರುತ್ತದೆ.... ನಂತರ ಚತುಥ್..... ಅಷ್ಟೇ ಅಲ್ಲದೆ ಒಂದುವೇಳೆ ನಾನು ಭಗವಾನರ ಎದುರಲ್ಲೇ ಮರಣವಪ್ಪಿದರೆ, ಅವರು ಈ ರೀತಿ ಘೋಷಿಸಿದರೆ ಆಶ್ಚರ್ಯವಿಲ್ಲ. ಈ ಲೋಕಕ್ಕೆ ಮರಳಿ ಬರುವುದಕ್ಕೆ ಇರಬೇಕಾದ ಯಾವ ಬಂಧನಗಳು ಚಿತ್ತಗೃಹಸ್ಥನಿಗೆ ಇಲ್ಲ. ಹೀಗೆ ಹೇಳಿದ ನಂತರ ಅಚೇಲಕಸ್ಸಪ ಚಿತ್ತಗೃಹಸ್ಥನಿಗೆ ಹೀಗೆ ಹೇಳಿದನು: ಇದು ಆಶ್ಚರ್ಯಕರ ಹಾಗು ನಿಜಕ್ಕೂ ಅದ್ಭುತವಾದುದು. ನಿಜಕ್ಕೂ ಭಗವಾನರಿಂದ ಎಷ್ಟು ಚೆನ್ನಾಗಿ ಧಮ್ಮವು ವಿವರಿಸಲ್ಪಟ್ಟಿದೆ. ಅದರಿಂದಾಗಿ ಬಿಳಿಬಟ್ಟೆ ಧರಿಸುವ ಗೃಹಸ್ಥನು ಸಹಾ ಉತ್ತರಿಮನುಸ್ಸ ಧಮ್ಮದ ಜ್ಞಾನದರ್ಶನ ಹಾಗು ಧ್ಯಾನ ಸ್ಥಿತಿಗಳಲ್ಲಿ ಸುಖವಾಗಿ ವಿಹರಿಸುತ್ತಾನೆ. ನಾನು ಸಹಾ ಇಂತಹ ಶ್ರೇಷ್ಠರಲ್ಲಿ ಶರಣುಹೋಗಿ, ಪಬ್ಬಜ್ಜ ಪಡೆಯುವುದಾದರೆ, ಧಮ್ಮವಿನಯದ ಪಾಲನೆಗೆ ಪಬ್ಬಜ್ಜ ಸ್ವೀಕರಿಸಬಹುದೇ?
ಆಗ ಚಿತ್ತಗೃಹಪತಿಯು ಅಚೇಲಕಸ್ಸಪರನ್ನು ಕರೆದುಕೊಂಡು ಹಿರಿಯ ಥೇರರ ಬಳಿಗೆ ಕರೆತಂದನು. ಹಾಗು ಅವರೊಂದಿಗೆ ಹೀಗೆ ಹೇಳಿದನು: ಭಂತೆಗಳೇ, ಈ ಅಚೇಲಕಸ್ಸಪನು ನನ್ನ ಬಾಲ್ಯ ಸ್ನೇಹಿತನು. ಈತನಿಗೆ ಪೂಜ್ಯ ಥೇರರು ಪಬ್ಬಜ್ಜ ನೀಡುವಂತಾಗಲಿ. ನಾನು ಸಹಾ ಈತನಿಗೆ ಚೀವರ, ಪಿಂಡಪಾತ, ಔಷಧಿ ಇತ್ಯಾದಿಗಳನ್ನು ನೀಡಲು ಉತ್ಸುಕನಾಗಿದ್ದೇನೆ. ನಂತರ ಅಚೇಲಕಸ್ಸಪನು ಧಮ್ಮವಿನಯದ ಪಾಲನೆಗೆ ಪಬ್ಬಜ್ಜ ಸ್ವೀಕರಿಸಿದನು ಮತ್ತು ಅಲ್ಪಕಾಲದಲ್ಲೇ ಏಕಾಂತದಲ್ಲಿ ವಾಸಿಸಿ, ಪರಿಶ್ರಮಿಯಾಗಿ, ದೃಢತೆಯಿಂದ ಕೂಡಿದವನಾಗಿ, ಅಭಿಜ್ಞಾ ಸಾಧಿಸಿದವನಾಗಿ, ಆ ಅಭಿಜ್ಞಾದಿಂದಾಗಿ ಪರಮಶ್ರೇಷ್ಠ ಜ್ಞಾನ ಹಾಗು ಸ್ಥಿತಿಯನ್ನು ಅರಿತವನಾಗಿ, ಈ ಜೀವಿತದಲ್ಲೇ ಯಾವುದಕ್ಕಾಗಿ ಕುಲಪುತ್ರರು ಗೃಹ ತ್ಯಜಿಸಿ, ಸಾಧನೆಗೆ ತೊಡಗುವರೋ ಅಂತಹ ಅತಿಶಯವಾದ ಅನನ್ಯ ಗುರಿಯನ್ನು ಸಾಧಿಸಿದನು. ಆತನು ಜನ್ಮವು ಕ್ಷೀಣಿಸಿತು (ಮರುಹುಟ್ಟು ಇಲ್ಲವಾಯಿತು). ಪವಿತ್ರಜೀವನ (ಬ್ರಹ್ಮಚರ್ಯ) ಜೀವಿಸಿಯಾಯಿತು, ಮಾಡಬೇಕಾದುದೆಲ್ಲವನ್ನು ಮಾಡಿಯಾಯಿತು. ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ನೇರವಾಗಿ ಅರಿತನು. ಪೂಜ್ಯ ಕಸ್ಸಪರು ಸಹಾ ಅರಹಂತರೊಬ್ಬರಲ್ಲಿ ಒಂದಾದರು.



10. ಗಿಲಾನದಸ್ಸನ ಸುತ್ತಂ (ರೋಗಿಯ ದರ್ಶನ ಸುತ್ತ)

352. ಒಮ್ಮೆ ಚಿತ್ತಗೃಹಪತಿಯು ರೋಗಕ್ಕೆ ಈಡಾದನು. ನೋವು ಹಾಗು ಅತಿಯಾದ ಶಾರೀರಿಕ ಜರ್ಜರ ಸ್ಥಿತಿಗೆ ಒಳಗಾದನು. ಆಗ ಆತನ ಮುಂದೆ ಆರಾಮ (ಉದ್ಯಾನವನ) ದೇವತೆಗಳು, ವನದೇವತೆಗಳು, ವೃಕ್ಷದೇವತೆಗಳು ಮತ್ತು ಔಷಧಿಮೂಲಿಕೆಗಳಲ್ಲಿ ವಾಸಿಸುವ ದೇವತೆಗಳು ಮತ್ತು ಅಧಿವತ್ಥ ದೇವತೆಗಳು ಅಲ್ಲಿ ಏಕೀಕೃತರಾದರು ಹಾಗು ಚಿತ್ತನಿಗೆ ಹೀಗೆ ಹೇಳಿದರು: ಗೃಹಪತಿಯೇ, ಇಚ್ಛಿಸು ಭವಿಷ್ಯದಲ್ಲಿ ಸಾಮ್ರಾಟ ಚಕ್ರವತರ್ಿಯಾಗುವೆನೆಂದು. ಇದನ್ನು ಆಲಿಸಿದ ಚಿತ್ತಗೃಹಪತಿಯು ಆ ದೇವತೆಗಳಿಗೆ ಹೀಗೆ ಹೇಳಿದನು: ಅದು ಸಹಾ ಅನಿತ್ಯವಾಗಿದೆ, ಅದ್ರುವವಾಗಿದೆ (ಅಸ್ಥಿರವಾಗಿದೆ). ಅದನ್ನು ಸಾಧಕನು ತ್ಯಜಿಸಿ ಮುಂದುವರೆಯುತ್ತಾನೆ. ಹೀಗೆ ಚಿತ್ತನ ನುಡಿಗಳನ್ನು ಆಲಿಸಿದ ಆತನ ಮಿತ್ರರು ಹಾಗು ಸಂಬಂಧಿಕರು ಹೀಗೆ ಹೇಳಿದರು: ಆರ್ಯಪುತ್ರ ಸ್ಮೃತಿವಂತನಾಗು, ಹರಟೆಯಲ್ಲಿ ತೊಡಗಬೇಡ. ನಾನು ಏನು ಹೇಳಿದೆನೆಂದು ಹೀಗೆ ಹೇಳುತ್ತಿರುವಿರಿ? ನೀನು ನಮಗೆ ಹೀಗೆ ಹೇಳಿದೆಯಲ್ಲವೆ? ಇದು ಸಹಾ ಅನಿತ್ಯವಾದುದು, ಅದ್ರುವವಾದುದು, ಇದನ್ನು ಸಹಾ ಒಬ್ಬನು ತೊರೆದು ಮುಂದುವರೆಯಲಿ. ಓಹ್ ಅದು ಏತಕ್ಕೆಂದರೆ, ಆರಾಮ ದೇವತೆಗಳು, ವನದೇವತೆಗಳು, ವೃಕ್ಷದೇವತೆಗಳು, ಔಷಧಿ ಮೂಲಿಕೆಯಲ್ಲಿರುವ ದೇವತೆಗಳು, ಆದಿವತ್ಥಾ ದೇವತೆಗಳು ನನಗೆ ಹೀಗೆಂದರು. ಹೀಗೆ ಆಶಿಸುವಂತಾಗು, ನಾನು ಸಾಮ್ರಾಟ ಚಕ್ರವತರ್ಿಯಾಗಲಿ. ಆಗ ನಾನು ಪ್ರತಿಯಾಗಿ ಹೀಗೆ ಹೇಳಿದ್ದೆನು. ಅದು ಸಹಾ  ಅನಿತ್ಯವಾದುದು, ಅದ್ರುವವಾದುದು. ಒಬ್ಬನು ಅದನ್ನು ತೊರೆದು ಮುಂದುವರೆಯುತ್ತಾನೆ. ಇದರಿಂದಾಗಿ ಆ ದೇವತೆಗಳಿಗೆ ಹೀಗೆ ಅನಿಸಿದೆ: ಈ ಚಿತ್ತಗೃಹಪತಿಯು ಶೀಲವಂತನು, ಚಾರಿತ್ರ್ಯವಂತನು. ಆತನೇನಾದರೂ ನಾನು ಚಕ್ರವತರ್ಿ ಸಾಮ್ರಾಟನಾಗಲಿ ಎಂದು ಆಶಿಸಿದರೆ, ಪರಿಶುದ್ಧತೆಯ ಕಾರಣದಿಂದಾಗಿ ಹಾಗೇ ಆಗುವುದು. ಪರಿಣಾಮವಾಗಿ ಚಕ್ರವತರ್ಿಯಾಗಿ ಆ ದೇವತೆಗಳಿಗೆಯೇ ಯೋಗ್ಯವಾದ ದಾನಗಳನ್ನು ನೀಡುತ್ತಾನೆ. ಈ ಲಾಭವನ್ನು ಗಮನಿಸಿಯೇ ಇಲ್ಲಿ ನೆರೆದಿರುವ ದೇವತೆಗಳು ನನಗೆ ಹಾಗೆ ಪ್ರೋತ್ಸಾಹಿಸಿದರು ಹಾಗು ನಾನು ಹೀಗೆ ನಿರಾಕರಿಸಿದೆನು.
ಹಾಗಾದರೆ ನಮಗೆ ಬೋಧಿಸುವಂತಾಗು ಗೃಹಪತಿಯೇ? ಹಾಗಾದರೆ ಹೀಗೆ ಸುಶಿಕ್ಷಿತರಾಗಿ ನಾವು ಬುದ್ಧರಲ್ಲಿ ಹೀಗೆ ಶ್ರದ್ಧೆಯನ್ನು ಇಡುವೆವು; ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಜ್ಜಾಚರಣಸಂಪನ್ನರು, ಸುಗತರು, ಲೋಕವಿದರು, ಉತ್ತರಪುರುಷಧಮ್ಮಸಾರಥಿಯು ಬುದ್ಧರು ಹಾಗು ಭಗವಾನರಾಗಿದ್ದಾರೆ. ಹಾಗೆಯೇ ನಾನು ಧಮ್ಮದ ಮೇಲೆ ಹೀಗೆ ಶ್ರದ್ಧೆಯಿಡುವೆವು, ಧಮ್ಮವು ಭಗವಾನರಿಂದ ಬಹುಚೆನ್ನಾಗಿ ವಿವರಿಸಲ್ಪಟ್ಟಿರುವುದು, ನೇರವಾಗಿ ಕಾಣಿಸುವಂತಹುದು, ತಕ್ಷಣ ಫಲ ನೀಡುವಂತಹುದು. ಬನ್ನಿ ಎಂದು ಪರೀಕ್ಷಿಸಿ ಎಂದು ಆಹ್ವಾನಿಸುವಂತಹುದು. ಹಾಗು ಜ್ಞಾನಿಗಳಿಂದ ಮಾತ್ರ ಅರಿಯಲ್ಪಡುವಂತಹುದು ಆಗಿದೆ. ಹಾಗೆಯೇ ನಾವು ಸಂಘದಲ್ಲಿ ಹೀಗೆ ಶ್ರದ್ಧೆಯನ್ನು ಇಡೋಣ; ಭಗವಾನರ ಶ್ರಾವಕ ಸಂಘವು ಸುಮಾರ್ಗದಲ್ಲಿ ಚಲಿಸುತ್ತಿದೆ, ಋಜುಮಾರ್ಗದಲ್ಲಿ ನಡೆಯುತ್ತಿದೆ, ನಿಜ (ಸತ್ಯ) ಪಥದಲ್ಲಿ ಸಾಗುತಿಹುದು, ಯೋಗ್ಯವಾದ ಹಾದಿಯಲ್ಲಿ ಮುಂದುವರೆಯುತ್ತಿದೆ, ಇದರಲ್ಲಿ ನಾಲ್ಕು ಬೋಧಿಗಳ ವ್ಯಕ್ತಿಗಳಿರುವರು, ಎಂಟು ಬಗೆಯ ಆರ್ಯರಿರುವರು. ಈ ಭಗವಾನರ ಶ್ರಾವಕ ಸಂಘವು ದಾನಕ್ಕೆ, ಆತಿಥ್ಯಕ್ಕೆ ಅಂಜಲಿಬದ್ಧರಾಗಿ ಪೂಜೆ ಪಡೆಯುವುದಕ್ಕಾಗಿ, ಹಾಗು ಲೋಕದಲ್ಲಿರುವ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ. ನಮ್ಮ ಕುಟುಂಬದಲ್ಲಿ ಕೊಡತಕ್ಕದ್ದು ಏನೆಲ್ಲಾ ಇವೆಯೋ ಅದೆಲ್ಲವನ್ನು ಈ ಸುಶೀಲರೊಂದಿಗೆ ಏನನ್ನೂ ಉಳಿಸಿಕೊಳ್ಳದೆ ಹಂಚಿಕೊಳ್ಳೋಣ ಈ ರೀತಿಯಾಗಿ ನೀವು ಸುಶಿಕ್ಷಣ ಪಡೆಯಬೇಕು. ಹೀಗೆ ಚಿತ್ತಗೃಹಪತಿಯು ತನ್ನ ಮಿತ್ರರಲ್ಲಿ, ಬಂಧುಬಾಂಧವರಲ್ಲಿ ಬುದ್ಧ, ಧಮ್ಮ, ಸಂಘದಲ್ಲಿ ಅಪಾರ, ಅವಿಚಲ ಶ್ರದ್ಧೆಯನ್ನು ಸ್ಥಾಪಿಸಿ, ಅವರು ಶೀಲ ಹಾಗು ದಾನದಲ್ಲಿ ನಿರತರಾಗುವಂತೆ ಮಾಡಿ ಚಿತ್ತಗೃಹಪತಿಯು ಕಾಲವಾದನು.

ಚಿತ್ತಸಂಯುಕ್ತ ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...