Thursday, 17 May 2018

Samyutta nikaya 35.11 ಯೋಗಕ್ಖೇಮಿ ವಗ್ಗೋ

ಯೋಗಕ್ಖೇಮಿ ವಗ್ಗೋ

35.11.1 ಯೋಗಕ್ಖೇಮಿ ಸುತ್ತಂ (ಬಂಧನಗಳಿಂದ ಕ್ಷೇಮ ಸುತ್ತ)

104. ಶ್ರಾವಸ್ತಿಯಲ್ಲಿದ್ದಾಗ ಭಗವಾನರು ಈ ಸುತ್ತವನ್ನು ಪ್ರವಚಿಸಿದ್ದರು: ಭಿಕ್ಷುಗಳೇ, ನಾನು ನಿಮಗೆ ಬಂಧನಗಳಿಂದ ಮುಕ್ತವಾಗಿ ಕ್ಷೇಮವಾಗಿರುವಂತಹ ಧಮ್ಮವನ್ನು ಉಪದೇಶಿಸುತ್ತೇನೆ, ತಾವು ಗಮನವಿಟ್ಟು ಆಲಿಸಿ. ಯಾವುದು ಭಿಕ್ಷುಗಳೇ, ಈ ಯೋಗಕ್ಷೇಮ ಪರಿಯಾಯ ಹಾಗು ಧಮ್ಮಪರಿಯಾಯ? ಇಲ್ಲಿ ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹ, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿ, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಆದರೆ ಇವೆಲ್ಲವೂ ತಥಾಗತರಿಂದ ವಜಿಸಲ್ಪಟ್ಟಿದೆ. ತಾಳೆಮರದ ಬುಡದಂತೆ ಕತ್ತರಿಸಿ ಹಾಕಲ್ಪಟ್ಟಿದೆ. ಮುಂದಿನ ಉದಯವಾಗದಂತೆ ಅಳಿಸಿಹಾಕಲ್ಪಟ್ಟಿದೆ. ಇವುಗಳ ವರ್ಜನೆಗಾಗಿ ಪರಿಶ್ರಮಿಸಬೇಕೆಂದು ಘೋಷಿಸಿದ್ದಾರೆ. ಆದ್ದರಿಂದ ತಥಾಗತರನ್ನು ಬಂಧನಗಳಿಂದ ಮುಕ್ತರಾಗಿ ಕ್ಷೇಮ ಸಾರುವಂತಹವರು (ಯೋಗಕ್ಷೇಮಿ) ಎಂದು ಕರೆಯುತ್ತಾರೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ.... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ (ಧಮ್ಮ). ಅವುಗಳು ಆಸೆ ಹುಟ್ಟಸುವಂತಹವು, ಪ್ರಿಯವಾದವು, ಒಪ್ಪುವಂತಹದು, ಇಂದ್ರೀಯ ಉದ್ರೇಕಕಾರಿ, ಪ್ರಲೋಭವನಕಾರಿಯು ಆಗಿವೆ. ಅವೆಲ್ಲವೂ ತಥಾಗತರಿಂದ ವಜರ್ಿಸಲ್ಪಟ್ಟಿವೆ. ತಾಳೆ ಮರದ ಬುಡದಂತೆ ಮತ್ತೆ ಬೆಳೆಯದಂತೆ ಕತ್ತರಿಸಿಹಾಕಲ್ಪಟ್ಟಿವೆ. ಭವಿಷ್ಯದಲ್ಲಿ ಉದಯಿಸದಂತೆ ಅಳಿಸಹಾಕಲ್ಪಟ್ಟಿದೆ. ಇವುಗಳ ವರ್ಜನೆಗಾಗಿ ಪರಿಶ್ರಮಿಸಬೇಕೆಂದು ಘೋಷಿಸಿದ್ದಾರೆ. ಆದ್ದರಿಂದಾಗಿ ತಥಾಗತರಿಂದ ಯೋಗಕ್ಷೇಮಿ ಎನ್ನುವುದು. ಇದೇ ಭಿಕ್ಷುಗಳೇ, ಯೋಗಕ್ಷೇಮ ಪರಿಯಾಯ ಹಾಗು ಧಮ್ಮ ಪರಿಯಾಯವಾಗಿದೆ.

35.11.2 ಉಪಾದಾಯ ಸುತ್ತಂ (ಅಂಟುವಿಕೆಯ ಸುತ್ತ)


105. ಭಿಕ್ಷುಗಳೇ, ಯಾವಾಗ ಏನು ಇದ್ದಾಗ, ಯಾವುದಕ್ಕೆ ಅಂಟಿಕೊಂಡಾಗ ಸುಖವು ಹಾಗು ದುಃಖವು ಉದಯಿಸುವುದು?
ಭಂತೆ, ಭಗವಾನರ ಮೂಲದಿಂದಲೇ (ತಮ್ಮಿಂದಲೇ) ಧಮ್ಮವು ತಿಳಿಸಲ್ಪಟ್ಟಿದೆ...
ಚಕ್ಷುವಿನಿಂದಲೇ ಭಿಕ್ಷುಗಳೇ, ಯಾವಾಗ ಚಕ್ಷುವಿರುವುದೋ, ಕಣ್ಣಿಗೆ ಅಂಟಿಕೊಳ್ಳುವುದರಿಂದಾಗಿ ಸುಖವು ಹಾಗು ದುಃಖವು ಆಂತರ್ಯದಲ್ಲಿ ಉದಯಿಸುವುದು. ಯಾವಾಗ ಕಿವಿಯು ಇರುವುದೋ... ಯಾವಾಗ ಮನಸ್ಸಿರುವುದೋ, ಮನಸ್ಸಿಗೆ ಅಂಟುವದರಿಂದಾಗಿ ಸುಖವು ಹಾಗು ದುಃಖವು ಆಂತರ್ಯದಲ್ಲಿ ಉದಯಿಸುವುದು. ಯಾವರೀತಿ ಭಾವಿಸುವಿರಿ ಭಿಕ್ಷುಗಳೇ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ, ದುಃಖಕಾರಿಯೋ ಅವಕ್ಕೆ ಅಂಟಿಕೊಳ್ಳದಿದ್ದರೆ ಸುಖವಾಗಲಿ ಅಥವಾ ದುಃಖವಾಗಲಿ ಆಂತರ್ಯದಲ್ಲಿ ಉದಯಿಸುವುದೋ?
ಇಲ್ಲ ಭಂತೆ.
ಜಿಹ್ವೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯು ಪರಿವರ್ತನಕಾರಿಯೋ ಅವಕ್ಕೆ ಅಂಟದಿದ್ದರೆ (ಅನುಪಾದಾಯ) ಆಂತರ್ಯದಲ್ಲಿ ಸುಖ-ದುಃಖಗಳು ಉದಯಿಸುವುದೇ?
ಇಲ್ಲ ಭಂತೆ.
ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ, ಪರಿವರ್ತನಶೀಲವೋ ಅವಕ್ಕೆ ಅಂಟದಿದ್ದಾಗ ಆಂತರ್ಯದಲ್ಲಿ ಸುಖ-ದುಃಖಗಳು ಉಂಟಾಗುವುದೋ?
ಇಲ್ಲ ಭಂತೆ.
ಭಿಕ್ಷುಗಳೇ, ಹೀಗೆ ಆರ್ಯಶ್ರಾವಕನು ದಶರ್ಿಸಿದಾಗ ಚಕ್ಷುವಿನಿಂದ ವಿಕಷರ್ಿಸುತ್ತಾನೆ... ಮನಸ್ಸಿನಿಂದ ವಿಕಷರ್ಿಸುತ್ತಾನೆ. ವಿಕಷರ್ಿಸಿದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ, ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.11.3 ದುಃಖ ಸಮುದಯ ಸುತ್ತಂ (ದುಃಖಗಳ ಉದಯದ ಸುತ್ತ)


106. ಭಿಕ್ಷುಗಳೇ, ದುಃಖಗಳ ಉದಯ ಹಾಗು ಅಂತ್ಯದ ಬಗ್ಗೆ ಉಪದೇಶಿಸುತ್ತಿದ್ದೆನೆ, ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ದುಃಖ ಸಮುದಯ ಎಂದರೇನು? ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶದ ಅವಲಂಬನೆಯಿಂದಾಗಿ ವೇದನೆಗಳು ಉದಯಿಸುವುವು. ವೇದನೆಗಳಿಂದಾಗಿ ತೃಷ್ಣೆಯು ಉದಯಿಸುವುದು. ಹೀಗೆ ದುಃಖಗಳ ಸಮುದಯವು ಆಗುವುದು. ಇಲ್ಲಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುವುದು... ಮೂಗು ಹಾಗು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಹಾಗು ರಸಗಳನ್ನು... ದೇಹ ಮತ್ತು ಸ್ಪರ್ಶಗಳನ್ನು ಅವಲಂಬಿಸಿ ಕಾಯವಿಞ್ಞಾನ ಉದಯಿಸುವುದು... ಮನಸ್ಸು ಹಾಗು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸಂಸ್ಪರ್ಶದಲ್ಲಿ ಆಗುವುದು. ಸಂಸ್ಪರ್ಶದ ಅವಲಂಬನೆಯಿಂದಾಗಿ ತೃಷ್ಣೆಯು ಉಂಟಾಗುವುದು. ಇದೇ ದುಃಖಗಳ ಸಮುದಾಯವಾಗಿದೆ.
ಯಾವುದು ಭಿಕ್ಷುಗಳೇ, ದುಃಖದ ಅಂತ್ಯವು? ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಯು ಉಂಟಾಗುತ್ತದೆ. ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ಕ್ಷಯಿಸಿ ಉಪಾದಾನದ (ಅಂಟುವಿಕೆಯ) ನಿರೋಧವಾಗುತ್ತದೆ. ಉಪಾದಾನದ ನಿರೋಧದಿಂದಾಗಿ ಭವ (ಅಸ್ತಿತ್ವ) ನಿರೋಧವಾಗುತ್ತದೆ. ಭವನಿರೋಧದಿಂದ ಜನ್ಮನಿರೋಧವಾಗುತ್ತದೆ. ಜನ್ಮ ನಿರೋಧದಿಂದಾಗಿ ಶೋಕವು, ಜರಾವು, ಮರಣವು, ಪ್ರಲಾಪವು, ದುರ್ಮನಸ್ಸು ಇತ್ಯಾದಿಗಳೆಲ್ಲವೂ ನಿರೋಧವಾಗುತ್ತದೆ. ಈ ರೀತಿಯಾಗಿಯೇ ದುಃಖಖಂದವು ನಿರೋಧವಾಗುತ್ತದೆ. ಇದೇ ಭಿಕ್ಷುಗಳೇ, ದುಃಖಗಳ ಅಂತ್ಯವಾಗಿದೆ.

35.11.4 ಲೋಕ ಸಮುದಯ ಸುತ್ತ


107. ಭಿಕ್ಷುಗಳೇ, ಲೋಕದ ಉದಯ ಹಾಗು ಅಂತ್ಯವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಲೋಕದ ಉದಯವು? ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸ್ಪರ್ಶಗಳಲ್ಲಿ ಆಗುವುದು, ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುತ್ತವೆ. ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ತೃಷ್ಣೆಯಿಂದಾಗಿ ಅಂಟುವಿಕೆ (ಉಪಾದಾನ) ಉದಯಿಸುತ್ತದೆ. ಅಂಟುವಿಕೆಯಿಂದಾಗಿ ಭವವೂ, ಭವದಿಂದ ಜನ್ಮವೂ, ಜನ್ಮವನ್ನು ಅವಲಂಬಿಸಿ ಜರಾಮರಣಗಳು ಶೋಕ ಪ್ರಲಾಪಗಳು ದುರ್ಮನಸ್ಸು ಇತ್ಯಾದಿಗಳು ಉದಯಿಸುತ್ತವೆ. ಹೀಗೆ ಲೋಕದ ಉದಯವಾಗುತ್ತದೆ, ಅದೇರೀತಿಯಲ್ಲಿ ಇಲ್ಲಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುವುದು.... ಮೂಗು ಹಾಗು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಹಾಗು ರಸಗಳನ್ನು... ದೇಹ ಮತ್ತು ಸ್ಪರ್ಶಗಳನ್ನು... ಮನಸ್ಸು ಹಾಗು ಧಮ್ಮಗಳನ್ನು (ಮಾನಸಿಕ ವಿಷಯ) ಅವಲಂಬಿಸಿ ಮನೋವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುತ್ತವೆ... ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ತೃಷ್ಣೆಯಿಂದಾಗಿ ಅಂಟುವಿಕೆ (ಉಪಾದಾನ) ಉಂಟಾಗುತ್ತದೆ. ಅಂಟುವಿಕೆಯಿಂದ ಭವವೂ (ಅಸ್ತಿತ್ವ) ಭವದಿಂದ ಜನ್ಮವೂ ಜನ್ಮವನ್ನು ಅವಲಂಬಿಸಿ ಜರಾಮರಣಗಳು ಶೋಕ ಪ್ರಲಾಪಗಳು ದುರ್ಮನಸ್ಸು ಇತ್ಯಾದಿಗಳು ಉದಯಿಸುತ್ತವೆ. ಇದೇ ಭಿಕ್ಷುಗಳೇ ಲೋಕದ ಸಮುದಯವಾಗಿದೆ.
ಯಾವುದು ಭಿಕ್ಷುಗಳೇ ಲೋಕದ ಅಂತ್ಯವು? ಭಿಕ್ಷುಗಳೇ, ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನ ಉಂಟಾಗುತ್ತದೆ. ಈ ಮೂರು ಸಹಾ ಸ್ಪರ್ಶದಲ್ಲಿ ಸಂಗಮವಾಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುತ್ತವೆ. ವೇದನೆಗಳಿಂದಾಗಿ ತೃಷ್ಣೆ ಉಂಟಾಗುತ್ತದೆ. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ಕ್ಷಯಿಸಿ ಉಪದಾನದ (ಅಂಟುವಿಕೆಯ) ನಿರೋಧವಾಗುತ್ತದೆ. ಉಪಾದಾನದ ನಿರೋಧದಿಂದಾಗಿ ಭವದ (ಅಸ್ತಿತ್ವದ) ನಿರೋಧವಾಗುತ್ತದೆ. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುತ್ತದೆ. ಈ ರೀತಿಯಾಗಿ ದುಃಖರಾಶಿಯು ನಿರೋಧವಾಗುತ್ತದೆ. ಇವೇ ಭಿಕ್ಷುಗಳೇ, ಲೋಕದ ಅಂತ್ಯವಾಗಿದೆ.


35.11.5 ಸೆಯ್ಯೋಹಮಸ್ಮಿ ಸುತ್ತಂ (ಶ್ರೇಷ್ಠನು ನಾನೇ ಎಂಬ ಸುತ್ತ)


108. ಭಿಕ್ಷುಗಳೇ, ಯಾವುದು ಅಸ್ತಿತ್ವದಲ್ಲಿರುವುದರಿಂದಾಗಿ, ಯಾವುದರ ಅಂಟುವಿಕೆಯಿಂದಾಗಿ, ಯಾವುದರ ಬದ್ಧತೆಯಿಂದಾಗಿ ನಾನು ಶ್ರೇಷ್ಠ ಅಥವಾ ನಾನು ಸರಿಸಮ ಅಥವಾ ನಾನು ನೀಚ ಎಂಬ ಯೋಚನೆಗಳು ಉಂಟಾಗುತ್ತವೆ.
ಭಗವಾನರ ಮೂಲವಾಗಿಯೇ ನಮಗೆ ಧಮ್ಮವು ಸಿಕ್ಕಿದೆ...
ಭಿಕ್ಷುಗಳೇ, ಯಾವಾಗ ಚಕ್ಷುವಿರುವುದೋ, ಚಕ್ಷುವಿಗೆ ಅಂಟುವಿಕೆಯಿರುವುದೋ, ಚಕ್ಷುವಿಗೆ ಬದ್ಧನಾಗಿರುವಿಕೆಯಿರುವುದೋ ಆಗ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬ ಯೋಚನೆಗಳು ಉಂಟಾಗುತ್ತವೆ. ನೀವು ಹೇಗೆ ಭಾವಿಸುವಿರಿ ಭಿಕ್ಷುಗಳೇ, ಚಕ್ಷುವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ ಅಥವಾ ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕರವೋ ಪರಿವರ್ತನೆಕಾರಿಯೋ ಅಂತಹವುಗಳಿಗೆ ಅಂಟದಿದ್ದರೆ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬ ಯೋಚನೆಗಳು ಬರುವವೇ?
ಇಲ್ಲ ಭಂತೆ.
ನೀವು ಹೇಗೆ ಭಾವಿಸುವಿರಿ ಭಿಕ್ಷುಗಳೇ, ಕಿವಿಯು... ಮೂಗು... ನಾಲಿಗೆಯು... ಕಾಯವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನಸ್ಸು ನಿತ್ಯವೊ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವುದೋ ಅಂತಹವುಗಳಿಗೆ ಅಂಟದಿದ್ದರೆ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬಂತಹ ಯೋಚನೆಗಳು ಉಂಟಾಗುವವೇ?
ಇಲ್ಲ ಭಂತೆ.
ಭಿಕ್ಷುಗಳೇ, ಹೀಗೆ ದಶರ್ಿಸಿದ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿಸುತ್ತಾನೆ... ಮನಸ್ಸಿನಿಂದಲೂ ವಿಕಷರ್ಿಸುತ್ತಾನೆ. ವಿಕಷರ್ಿಸಿದ್ದರಿಂದಾಗಿ ವಿರಾಗ ಉಂಟಾಗುತ್ತದೆ. ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತನೆ. ವಿಮುಕ್ತ ಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು. ಇನ್ಯಾವ ಇಚ್ಛೆಯೂ ಇಲ್ಲ ಎಂದು ಅರಿಯುತ್ತಾನೆ.

35.11.6 ಸಂಯೋಜನಿಯ ಸುತ್ತಂ (ಸಂಕೋಲೆಗಳ ಸುತ್ತ)


109. ಭಿಕ್ಷುಗಳೇ, ನಾನು ಸಂಕೋಲೆಗಳನ್ನುಂಟುಮಾಡುವ ಹಾಗು ಸಂಕೋಲೆಗಳ ಬಗ್ಗೆ ಉಪದೇಶಿಸುತ್ತಿದ್ದೆನೆ. ಗಮನವಿಟ್ಟು ತಾವೆಲ್ಲರೂ ಆಲಿಸಿರಿ. ಯಾವುದು ಭಿಕ್ಷುಗಳೇ, ಸಂಕೋಲೆಯುಂಟುಮಾಡುವುದು ಹಾಗು ಸಂಕೋಲೆಗಳು? ಭಿಕ್ಷುಗಳೇ, ಚಕ್ಷು ಸಂಕೋಲೆಗಳನ್ನು ಉಂಟುಮಾಡುವಂತದ್ದಾಗಿದೆ. ಅದರಿಂದ ಉಂಟಾಗುವ ಆಸೆಗಳು ಹಾಗು ರಾಗಗಳೇ ಸಂಕೋಲೆಗಳಾಗಿವೆ. ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು ಸಂಕೋಲೆಕಾರಿಗಳಾಗಿವೆ ಹಾಗು ಅದರಿಂದ ಉಂಟಾಗುವ ಆಸೆಗಳು ಹಾಗು ರಾಗಗಳೇ ಸಂಕೋಲೆಗಳಾಗಿವೆ. ಇದೇ ಭಿಕ್ಷುಗಳೇ, ಸಂಕೋಲೆಕಾರಿ ಹಾಗು ಸಂಕೋಲೆಗಳಾಗಿವೆ.


35.11.7 ಉಪಾದಾನಿಯ ಸುತ್ತಂ (ಅಂಟುಕಾರಿ ಸುತ್ತ)

110. ಭಿಕ್ಷುಗಳೇ, ನಾನು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ ಬಗ್ಗೆ ಧಮ್ಮವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಮತ್ತೆ ಭಿಕ್ಷುಗಳೇ, ಯಾವುವು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ? ಚಕ್ಷು ಭಿಕ್ಷುಗಳೇ ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಕಿವಿಯು ಭಿಕ್ಷುಗಳೇ, ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಕಿವಿಯು ಭಿಕ್ಷುಗಳೇ, ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಮೂಗು... ನಾಲಿಗೆ... ದೇಹ... ಮನಸ್ಸು ಅಂಟುವಂತಹ ವಿಷಯವಾಗಿದೆ. ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿದೆ. ಹೀಗೆ ಇವನ್ನು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ ಎನ್ನುವರು.

35.11.8 ಅಜ್ಝತ್ತಿಕಾಯತನ ಪರಿಜಾನನ ಸುತ್ತಂ


111. ಭಿಕ್ಷುಗಳೇ, ಚಕ್ಷುವನ್ನು ನೇರವಾರಿ ಅರಿಯದೆ, ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವು ಇಲ್ಲದೆ, ಚಕ್ಷುವಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ, ಅದನ್ನು ವಜರ್ಿಸಲು ತಿಳಿಯದೆ ದುಃಖಕ್ಷಯ ಸಾಧ್ಯವಿಲ್ಲ. ಹಾಗೆಯೇ ಕಿವಿಯನ್ನು ನೇರವಾಗಿ ಅರಿಯದೆ ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವು ಇಲ್ಲದೆ, ಚಕ್ಷುವಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ ಅದನ್ನು ವಜರ್ಿಸಲು ತಿಳಿಯದೆ, ದುಃಖಕ್ಷಯ ಸಾಧ್ಯವಿಲ್ಲ. ಹಾಗೆಯೇ ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ನೇರವಾಗಿ ಅರಿಯದೆ ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ, ಮನಸ್ಸಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯ ಸಾಧ್ಯವಿಲ್ಲ.

35.11.9 ಬಾಹಿರಾಯತನ ಪರಿಜಾನನ ಸುತ್ತಂ 

(ಇಂದ್ರೀಯಗಳಿಗೆ ಸಂಪಕರ್ಿಸುವ ಬಾಹ್ಯ ವಸ್ತುಗಳ ಜ್ಞಾನದ ಸುತ್ತ)
112. ಭಿಕ್ಷುಗಳೇ, ರೂಪಗಳನ್ನು ನೇರವಾಗಿ ಅರಿಯದೆ ಅವುಗಳ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ ಅವುಗಳ ಬಗ್ಗೆ ವಿರಾಗವಿಲ್ಲದೆ, ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯವು ಸಾಧ್ಯವಿಲ್ಲ. ಅದೇರೀತಿ ಭಿಕ್ಷುಗಳೇ, ಶಬ್ದಗಳನ್ನು... ವಾಸನೆಗಳನ್ನು... ರುಚಿಯನ್ನು... ಸ್ಪರ್ಶವನ್ನು... ಮಾನಸಿಕ ವಿಷಯಗಳನ್ನು (ಧಮ್ಮವನ್ನು) ನೇರವಾಗಿ ಅರಿಯದೆ, ಅವುಗಳ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ ಅವುಗಳ ಬಗ್ಗೆ ವಿರಾಗವಿಲ್ಲದೆ, ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯವು ಸಾಧ್ಯವಿಲ್ಲ.

35.11.10 ಉಪಸ್ಸುತಿ ಸುತ್ತಂ (ಉಪಶ್ರುತಿ ಸುತ್ತ)


113. ಒಮ್ಮೆ ಭಗವಾನರು ತಮ್ಮ ಬಂಧುಗಳೊಡನೆ ಇಟ್ಟಿಕೆಗಳ ಗೃಹದಲ್ಲಿ ತಂಗಿದ್ದರು. ಆಗ ಭಗವಾನರು ಈ ಧಮ್ಮವನ್ನು ಪುನರುಚ್ಛರಿಸಿದರು. ಚಕ್ಷು ಮತ್ತು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುವುವು. ವೇದನೆಗಳಿಂದಾಗಿ ತೃಷ್ಣೆಯು ಉಂಟಾಗುವುದು. ತೃಷ್ಣೆಯಿಂದಾಗಿ ಭವವು, ಭವದಿಂದ ಜನ್ಮವು, ಜನ್ಮದಿಂದ ಜರಾಮರಣ, ಶೋಕಪ್ರಲಾಪ, ಪಶ್ಚಾತ್ತಾಪ ಇತರೆ ದುಃಖಕ್ಖಂದವು ಉದಯಿಸುವುದು. ಅದೇರೀತಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುತ್ತದೆ... ಮೂಗು ಮತ್ತು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಮತ್ತು ರುಚಿಗಳನ್ನು... ದೇಹ ಮತ್ತು ಸ್ಪರ್ಶಗಳನ್ನು... ಮನಸ್ಸು ಮತ್ತು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುವುದು, ವೇದನೆಗಳಿಂದ ತೃಷ್ಣೆಯು ಉಂಟಾಗುವುದು, ತೃಷ್ಣೆಯಿಂದಾಗಿ ಭವವೂ, ಭವದಿಂದ ಜನ್ಮವೂ, ಜನ್ಮದಿಂದ ಜರಾ-ಮರಣ, ಶೋಕ ಪ್ರಲಾಪ, ಪಶ್ಚಾತ್ತಾಪ ಇತರೆ ದುಃಖರಾಶಿಯು ಉಂಟಾಗುವುದು. ಈ ರೀತಿಯಾಗಿ ದುಃಖಖಂದವು ಉದಯಿಸುವುದು.
ಚಕ್ಷು ಮತ್ತು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶದಿಂದ ವೇದನೆಗಳು ಉಂಟಾಗುವುವು. ವೇದನೆಗಳಿಂದ ತೃಷ್ಣೆಯು ಉದಯಿಸುವುದು. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ನಿರೋಧವಾಗುವುದು. ಹೀಗೆ ತೃಷ್ಣೆಯ ನಿರೋಧದಿಂದಾಗಿ ಅಂಟುವಿಕೆಯ ನಿರೋಧವಾಗುವುದು. ಅಂಟುವಿಕೆಯ ನಿರೋಧದಿಂದಾಗಿ ಭವದ (ಅಸ್ತಿತ್ವ/ಸಂಭವಿಸುವಿಕೆ) ನಿರೋಧವಾಗುವುದು. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುವುದು. ಜನ್ಮದ ನಿರೋಧದಿಂದ ಜರಾಮರಣ, ಶೋಕ, ಪ್ರಲಾಪ, ಪಶ್ಚಾತ್ತಾಪ, ಇತರೆ ದುಃಖಕ್ಖಂದವು ನಿರೋಧವಾಗುವುದು. ಅದೇರೀತಿಯಲ್ಲಿ ಕಿವಿ ಮತ್ತು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯವಾಗುವುದು. ಮೂಗು ಮತ್ತು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಮತ್ತ ರಸಗಳನ್ನು ಅವಲಂಬಿಸಿ... ದೇಹ ಮತ್ತು ಸ್ಪರ್ಶಗಳನ್ನು ಅವಲಂಬಿಸಿ... ಮನಸ್ಸು ಮತ್ತು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯವಾಗುವುದು. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುವುವು ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುವುದು, ವಿರಾಗವನ್ನು ಅವಲಂಬಿಸಿ ತೃಷ್ಣೆಯು ನಿಶ್ಶೇಷವಾಗಿ ನಿರೋಧವಾಗಿ ಉಪಾದಾನದ (ಅಂಟುವಿಕೆಯ) ನಿರೋಧವಾಗುವುದು. ಉಪಾದಾನದ ನಿರೋಧದಿಂದಾಗಿ ಭವದ ನಿರೋಧವಾಗುವುದು. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುವುದು. ಜನ್ಮದ ನಿರೋಧದಿಂದಗಿ ಜರಾಮರಣ ಶೋಕ ಪ್ರಲಾಪ, ಪಶ್ಚಾತ್ತಾಪ ಇತರೆಗಳು ನಿರೋಧವಾಗುವುದು. ಈ ವಿಧವಾಗಿ ದುಃಖಖಂದವು ನಿರೋಧವಾಗುವುದು.
ಆ ಸಮಯದಲ್ಲಿ ಭಿಕ್ಷುವೊಬ್ಬನು ಭಗವಾನರ ಈ ಬೋಧನೆಯನ್ನು ಆಲಿಸಿದನು. ಭಗವಾನರು ಆ ಭಿಕ್ಷುವನ್ನು ಗಮನಿಸಿ, ಭಿಕ್ಷುವೇ, ಈ ಸುತ್ತವನ್ನು ಆಲಿಸಿದೆಯಾ? - ಹೌದು ಭಂತೆ. - ಭಿಕ್ಷು, ಈ ಸುತ್ತವನ್ನು ಕಲಿಯುವಂತಾಗು. ಈ ಸುತ್ತ ಪ್ರಾವೀಣ್ಯತೆಯನ್ನು ಪಡೆ ಹಾಗು ನೆನಪಿನಲ್ಲಿ ಇಡುವಂತಾಗು. ಈ ಸುತ್ತದಲ್ಲಿ ಅಪಾರ ಅರ್ಥವಿದೆ ಹಾಗು ಬ್ರಹ್ಮಚರ್ಯದ ಮೂಲತತ್ವಗಳನ್ನು ಒಳಗೊಂಡಿದೆ.
ಇಲ್ಲಿಗೆ ಹನ್ನೊಂದನೆಯ ಯೋಗಕ್ಷೇಮ ವಗ್ಗ ಮುಗಿಯಿತು.

Samyutta nikaya 35.10 ಸಳವಗ್ಗೋ (ಆರರ ವರ್ಗ)

ಸಳವಗ್ಗೋ (ಆರರ ವರ್ಗ)

35.10.1. ಅದಂತ ಅಂಗುತ್ತ ಸುತ್ತಂ (ಅದಂತ ಅರಕ್ಷಿತ)

94. ಸಾವತ್ಥಿಯಲ್ಲಿ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ಇವು ಸ್ಪರ್ಶದ ಆರು ಆಧಾರಗಳು. ಆದರೆ ಇವು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಇವು ಅಪಾರ ದುಃಖ ತರುವುದು. ಯಾವುದವು ಆರು? ಚಕ್ಷು (ಕಣ್ಣು) ಭಿಕ್ಷುಗಳೆ, ಸ್ಪರ್ಶದ ಆಧಾರವಾಗಿದೆ. ಇದನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖ ತುರುವುದ. ಕಿವಿ ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಭಿಕ್ಷುಗಳೇ ಸ್ಪರ್ಶದ ಆಧಾರವಾಗಿದೆ. ಇದನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖ ತರುವುದು. ಇವೇ ಭಿಕ್ಷುಗಳೇ, ಸ್ಪರ್ಶದ ಆರು ಆಧಾರಗಳು. ಇವು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಇವು ದುಃಖವನ್ನು ತರುವುವು.
ಭಿಕ್ಷುಗಳೇ, ಸ್ಪರ್ಶದ ಆರು ಆಧರಗಳಿವೆ. ಇವನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖವನ್ನು ನೀಡುವುವು. ಯಾವುವು ಭಿಕ್ಷುಗಳೇ ಆ ಆರು? ಚಕ್ಷು ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ, ಇದನ್ನು ಚೆನ್ನಾಗಿ ಪಳಗಿಸಿದರೆ, ಚೆನ್ನಾಗಿ ಪಹರೆ ಮಾಡಿದರೆ, ಚೆನ್ನಾಗಿ ರಕ್ಷಿಸಿದರೆ, ಚೆನ್ನಾಗಿ ನಿಯಂತ್ರಿಸಿದರೆ ಅಪಾರ ಸುಖವನ್ನು ನೀಡುವುದು. ಕಿವಿ ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಇವನ್ನು ಚೆನ್ನಾಗಿ ಪಳಗಿಸಿದರೆ, ಪಹರೆ ಮಾಡಿದರೆ, ಚೆನ್ನಾಗಿ ರಕ್ಷಿಸಿದರೆ, ಚೆನ್ನಾಗಿ ನಿಯಂತ್ರಿಸಿದರೆ ಅಪಾರ ಸುಖವನ್ನು ನೀಡುವುದು. ಇದೇ ಭಿಕ್ಷುಗಳೇ ಆ ಆರು ಸ್ಪರ್ಶದ ಆಧಾರಗಳು. ಇವನ್ನು ಚೆನ್ನಾಗಿ ಪಳಗಿಸಿದರೆ... ಅಪಾರ ಸುಖವು ಸಿಗುವುದು. ಹೀಗೆ ನುಡಿದ ನಂತರ ಭಗವಾನರು ಹೀಗೆ ಮತ್ತೆ ಮುಂದುವರೆಸಿದರು:
ಕೇವಲ ಆರು ಸ್ಪರ್ಶದ ಆಧಾರಗಳಷ್ಟೇ ಭಿಕ್ಷುಗಳೇ,
ಅಸಂಯಮಿತನಾದರೆ ದುಃಖಕ್ಕೆ ಗುರಿಯಾಗುತ್ತಾನೆ.
ಯಾರಿಗೆ ನಿಯಂತ್ರಿಸುವುದು ಬರುವುದೋ
ವಿಹರಿಸುವರು ಅವರು ಶ್ರದ್ಧೆಯುಳ್ಳವರಾಗಿ ಅನಸ್ರವರಾಗಿ.
ರೂಪಗಳ ದರ್ಶನವು ಮನೋರಮವು,
ರೂಪಗಳ ದರ್ಶನವು ಅಮನೋರಮವೂ ಸಹಾ
ಮನೋರಮವಾದ ರಾಗಪಥವನ್ನು ದೂರಿಕರಿಸು
ನನ್ನ ಮನವನ್ನು ಪ್ರದೋಷ ಮಾಡುತ್ತಿರುವೆನೆಂದು ಯೋಚಿಸಬೇಡ.
ಶಬ್ದಗಳಲ್ಲಿ ಪ್ರಿಯಾ ಅಪ್ರಿಯಗಳನ್ನು ಆಲಿಸಿ,
ಪ್ರಿಯವಾದ ಶಬ್ದಗಳಲ್ಲಿ ಪುಳಕಿತನಾಗದಿರು
ಗಡುಸಾದ ಅಪ್ರಿಯ ಶಬ್ದಗಳಲ್ಲಿ ದ್ವೇಷವನ್ನು ದೂರೀಕರಿಸು
ಇದು ಮನಸ್ಸನ್ನು ಪ್ರದೋಷಗೊಳಿಸುತ್ತದೆ ಎಂದು ಯೋಚಿಸಬೇಡ.
ಸುರಭಿಯುತವಾದ, ಮನೋರಮವಾದ ಗಂಧವನ್ನು ಅಘ್ರಾಣಿಸಿ,
ಹಾಗೆಯೇ ಅಶುಚಿಯಾದ ಕೊಳಕನ್ನು ಮೂಸಿ,
ದುನರ್ಾತದಲ್ಲಿ ದ್ವೇಷವನ್ನು ದೂರೀಕರಿಸಿ
ಸುಗಂಧಗಳಲ್ಲಿ ಆಸೆಯಿಡದಿರು.
ಸಿಹಿಯಾದ ಸ್ವಾದಿಷ್ಟಕರ ಭೋಜನಗಳ ರುಚಿ ಆಸ್ವಾದಿಸುತ್ತ
ಕೆಲವೊಮ್ಮೆ ಒಳ್ಳೆಯದಲ್ಲದ ಕಹಿಯನ್ನು ಸೇವಿಸಬೇಕಾಗುತ್ತದೆ
ಸ್ವಾದಿಷ್ಟಗಳಲ್ಲಿ ಸುಖಿಸಬೇಡ
ಕಹಿ ತಿಂಡಿಗಳಲ್ಲಿ ದ್ವೇಷವು ತಾಳಬೇಡ.
ಪ್ರಿಯವಾದ ಸ್ಪರ್ಶಗಳಲ್ಲಿ ಪುಳಕಿತನಾಗದಿರು,
ನೋವಿನ ಸ್ಪರ್ಶಗಳಲ್ಲಿ ಕಂಪಿತನಾಗದಿರು,
ಪ್ರಿಯಾ, ಅಪ್ರಿಯ ಸ್ಪರ್ಶಗಳಲ್ಲಿ ಉಪೇಕ್ಷೆಯನ್ನು ತಾಳು
ಯಾವುದರಿಂದಲೂ ಆಕಷರ್ಿತನಾಗದಿರು ಹಾಗೆಯೇ ಅಸಹ್ಯವೂ ತಾಳದಿರು.
ಪ್ರಾಪಂಚಿಕ ಗ್ರಹಿಕೆಗಳ ನರರು
ಪ್ರಾಪಂಚಿಕ ಉತ್ಕಟಗಳಲ್ಲಿಯೇ ಮಗ್ನರಾಗಿರುವರು
ಗೃಹಸ್ಥನನ್ನಾಗಿಸುವ ಸರ್ವ ಮನಸ್ಥಿತಿಗಳನ್ನು ದೂರೀಕರಿಸಿ
ತ್ಯಾಗದ ಮಾರ್ಗದಲ್ಲಿರುವಂತಾಗಲಿ.
ಯಾವಾಗ ಹೀಗೆ ಮನಸ್ಸು ಆರರಲ್ಲಿ ಅಭಿವೃದ್ಧಿ
ಹೊಂದುವುದೋ ಆಗ ಸ್ಪಶರ್ಿಸಿದರೂ ಸಹಾ
ಚಿತ್ತವು ಸ್ವಲ್ಪವೂ ಅಲುಗಾಡದು,
ರಾಗದ್ವೇಷಗಳನ್ನು ಜಯಿಸಿ ಭಿಕ್ಷುಗಳೇ ಜನ್ಮ ಮರಣದಿಂದ ಆಚೆಹೋಗಿರಿ.

35.10.2. ಮಾಲುಕ್ಯ ಪುತ್ತ ಸುತ್ತಂ (ಮಾಲುಕ್ಯ ಪುತ್ರ ಸುತ್ತ)

95. ಭಗವಾನರು ರಾಜಗೃಹದಲ್ಲಿನ ವೇಳುವನದಲ್ಲಿನ ಅಳಿಲುಧಾಮದಲ್ಲಿದ್ದಾಗ ಪರಮಪೂಜ್ಯ ಮಾಲುಕ್ಯಪುತ್ತ ಭಗವಾನರ ಬಳಿಗೆ ಬಂದನು. ನಂತರ ಭಗವಾನರಿಗೆ ವಂದಿಸಿ, ಪೂಜಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಭಗವಾನರು ಸಂಕ್ಷಿಪ್ತವಾಗಿ ಧಮ್ಮೋಪದೇಶ ನೀಡುವಂತಾಗಲಿ, ಅದರಿಂದಾಗಿ ನಾನು ಏಕಾಂಗಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಮತ್ತು ದೃಢತಾಪೂರ್ವಕವಾಗಿ ಶ್ರಮಿಸುವಂತಾಗಲಿ.
ಮಾಲುಕ್ಯಪುತ್ತ, ಈಗ ಇಲ್ಲಿ ಯಾವಾಗ ನಿನ್ನಂಥ ಭಿಕ್ಷುಗಳು ವೃದ್ಧರಾಗಿಯು, ವರ್ಷಗಳಿಂದ ಭಾರವಾಗಿರುವವರಾಗಿಯು, ಜೀವನದ ಸಂಜೆಯನ್ನು ಕಾಣುತ್ತಿದ್ದು ಸಹಾ ಸಂಕ್ಷಿಪ್ತವಾಗಿ ಧಮ್ಮವನ್ನು ಯಾಚಿಸುವಾಗ ಯುವಕರಿಗೆ ಏನೆಂದು ಹೇಳಲಿ?
ಭಗವಾನ್, ನಾವು ವೃದ್ಧನಾಗಿದ್ದೇನೆ, ವರ್ಷಗಳಿಂದ ಭಾರವಾಗಿದ್ದೇನೆ, ಜೀವನದ ಸಂಜೆಯಲ್ಲಿದ್ದೇನೆ, ಅಂತಿಮ ಕಾಲದಲ್ಲಿದ್ದೇನೆ. ಆದರೂ ಸಹಾ ಭಗವಾನರು ನನಗೆ ಸಂಕ್ಷಿಪ್ತವಾಗಿ ಬೋಧಿಸಲು, ಬಹುಶಃ ನನಗೆ ಭಗವಾನರ ಆ ನುಡಿಗಳು ಅರ್ಥವಾಗಬಹುದು. ಆ ಭಗವಾನರ ನುಡಿಗಳಿಗೆ ನಾನು ಉತ್ತರಾದಿಕಾರಿಯಾಗಬಹುದು.
ಆಯಿತು ಮಾಲುಕ್ಯಪುತ್ತ, ನಿನ್ನಲ್ಲಿ ಕಣ್ಣಿನಿಂದ ವೀಕ್ಷಿಸುವಂತಹ ಯಾವುದಾದರೂ ಆಸೆಯಿದೆಯೇ, ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಕಿವಿಯಿಂದ ಕೇಳುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಮೂಗಿನಿಂದ ಆಘ್ರಾಣಿಸುವಂತ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ನಾಲಿಗೆಯಿಂದ ಆಸ್ವಾದಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಕಾಯದಿಂದ ಸ್ಪಶರ್ಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಮನಸ್ಸಿನಿಂದ ಗ್ರಹಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನೋಡುವ, ಕೇಳುವ, ಗ್ರಹಿಸುವ ಹಾಗು ಅನುಭವಿಸುವಂತಹವುಗಳಲ್ಲಿ ಕೇವಲ ನೋಡಬೇಕು, ಕೇವಲ ಕೇಳಬೇಕು, ಕೇವಲ ಗ್ರಹಿಸಬೇಕು ಹಾಗು ಕೇವಲ ಅನುಭವಿಸಬೇಕು. ನಂತರ ಮಾಲುಕ್ಯಪುತ್ತ, ಯಾವಾಗ ನೋಡುವಾಗ, ಕೇಳುವಾಗ, ಅನುಭವಿಸುವಾಗ ಮತ್ತು ಗ್ರಹಿಸುವಾಗ ಕೇವಲ ನೋಡುವಿಕೆ, ಕೇವಲ ಕೇಳುವಿಕೆ, ಕೇವಲ ಅನುಭವಿಸುವಿಕೆ ಹಾಗು ಕೇವಲ ಗ್ರಹಿಸುವಿಕೆ ಇದ್ದಗ, ಆಗ ನೀನು ಅದರಲ್ಲಿರುವುದಿಲ್ಲ. ಯಾವಾಗ ನೀನು ಅದರಲ್ಲಿರುವುದಿಲ್ಲವೋ, ಆಗ ನೀನು ಅಲ್ಲಿರುವುದಿಲ್ಲ. ಆಗ ಮಾಲುಕ್ಯಪುತ್ತ ನೀನು ಇಲ್ಲಿಯೂ ಅಥವಾ ಅಲ್ಲಿಯೂ ಇರುವುದಿಲ್ಲ. ಅಥವಾ ಇವೆರಡರ ನಡುವೆಯೂ ಇರುವುದಿಲ್ಲ. ಇದೇ ದುಃಖದ ಅಂತ್ಯವಾಗಿದೆ.
ಭಂತೆ, ಭಗವಾನರ ಈ ಸಂಕ್ಷಿಪ್ತ ಧಮ್ಮವನ್ನು ವಿವರವಾಗಿ ಅರ್ಥ ಮಾಡಿಕೊಂಡಿರುವೆನು.
ರೂಪಗಳನ್ನು ಎಚ್ಚರಿಕೆ ಹೀನತೆಯಿಂದ ದಶರ್ಿಸಿದಾಗ, ಪ್ರಿಯವಾದ ನಿಮಿತ್ತವು (ಚಿಹ್ನೆ) ಮನಸ್ಸನ್ನು ಆಕ್ರಮಿಸುವುದು, ಚಿತ್ತದಲ್ಲಿ ಉದ್ರೇಕಗಳ ವೇದನೆಗಳು ಉಂಟಾಗುತ್ತವೆ. ಇದರಿಂದಾಗಿ ಅವುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವನು.
ಹೀಗೆ ಅನೇಕ ರೂಪಗಳ ಬಗ್ಗೆ ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿಸವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಶಬ್ದಗಳನ್ನು ಎಚ್ಚರಿಕೆ ಹೀನತೆಯಿಂದ ಆಲಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವದರ್ಿಸಿ, ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿತವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಗಂಧಗಳನ್ನು ಎಚ್ಚರಿಕೆ ಹೀನತೆಯಿಂದ ಆಘ್ರಾಣಿಸಿದಾಗ, ಪ್ರಿಯನಿಮಿತ್ತಗಳು ಮನಸ್ಸನ್ನು ಆಕ್ರಮಿಸುವುದು, ಅಸಂಖ್ಯಾತ ನಿಮಿತ್ತಗಳು ಹಾಗು ವೇದನೆಗಳು ಉತ್ಪನ್ನವಾಗಿ, ಲೋಭಗಳು ಸಂಗ್ರಹವಾಗಿ, ಪರಿಣಾಮವಾಗಿ ದುಃಖಗಳು ಸಂಗ್ರಹಿತವಾಗುವುದು. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ರಸಗಳನ್ನು (ಆಹಾರಗಳನ್ನ) ಎಚ್ಚರಿಕೆ ಹೀನತೆಯಿಂದ ಆಸ್ವಾದಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ ವೇದನೆಗಳು ವಧರ್ಿಸಿ ಲೋಭಗಳು ಸಂಗ್ರಹವಾಗಿ ದುಃಖಗಳೂ ಸಹಾ ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಸಂಸ್ಪರ್ಶಗಳನ್ನು ಎಚ್ಚರಿಕೆ ಹೀನತೆಯಿಂದ ಅನುಭವಿಸಿದಾಗ, ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸಿ, ಲೋಭಗಳು ಸಂಗ್ರಹವಾಗುತ್ತವೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಮಾನಸಿಕ ವಿಷಯಗಳನ್ನು (ಧಮ್ಮಗಳನ್ನು) ಎಚ್ಚರಿಕೆ ಹೀನತೆಯಿಂದ ಗ್ರಹಿಸಿದಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸುವುವು. ಲೋಭಗಳು ಸಂಗ್ರಹವಾಗುತ್ತದೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುತ್ತದೆ. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ರೂಪಗಳನ್ನು ದಶರ್ಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಶಬ್ದಗಳನ್ನು ಆಲಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಗಂಧಗಳನ್ನು ಆಘ್ರಾಣಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಆಹಾರಗಳನ್ನು ಆಸ್ವಾದಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಸ್ಪರ್ಶಗಳನ್ನು ಅನುಭವಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಭಂತೆ, ಭಗವಾನರ ಸಂಕ್ಷಿಪ್ತ ಬೋಧನೆಯ ವಿಸ್ತಾರತೆಯನ್ನು ನಾನು ಹೀಗೆ ಅರ್ಥಮಾಡಿಕೊಂಡಿರುವೆ.
ಸಾಧು, ಸಾಧು ಮಾಲುಕ್ಯಪುತ್ತ, ನನ್ನ ಸಂಕ್ಷಿಪ್ತ ಬೋಧನೆಯ ವಿಸ್ತಾರತೆ ಇದೇ ಆಗಿದೆ.
ರೂಪಗಳನ್ನು ಎಚ್ಚರಿಕೆ ಹೀನತೆಯಿಂದ ದಶರ್ಿಸಿದಾಗ, ಪ್ರಿಯವಾದ ನಿಮಿತ್ತವು (ಚಿಹ್ನೆ) ಮನಸ್ಸನ್ನು ಆಕ್ರಮಿಸುವುದು, ಚಿತ್ತದಲ್ಲಿ ಉದ್ರೇಕಗಳ ವೇದನೆಗಳು ಉಂಟಾಗುತ್ತವೆ. ಇದರಿಂದಾಗಿ ಅವುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವನು.
ಹೀಗೆ ಅನೇಕ ರೂಪಗಳ ಬಗ್ಗೆ ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿಸವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಶಬ್ದಗಳನ್ನು ಎಚ್ಚರಿಕೆ ಹೀನತೆಯಿಂದ ಆಲಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವದರ್ಿಸಿ, ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿತವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಗಂಧಗಳನ್ನು ಎಚ್ಚರಿಕೆ ಹೀನತೆಯಿಂದ ಆಘ್ರಾಣಿಸಿದಾಗ, ಪ್ರಿಯನಿಮಿತ್ತಗಳು ಮನಸ್ಸನ್ನು ಆಕ್ರಮಿಸುವುದು, ಅಸಂಖ್ಯಾತ ನಿಮ್ಮಿತ್ತಗಳು ಹಾಗು ವೇದನೆಗಳು ಉತ್ಪನ್ನವಗಿ, ಲೋಭಗಳು ಸಂಗ್ರಹವಾಗಿ, ಪರಿಣಾಮವಾಗಿ ದುಃಖಗಳು ಸಂಗ್ರಹಿತವಾಗುವುದು. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ರಸಗಳನ್ನು (ಆಹಾರಗಳನ್ನ) ಎಚ್ಚರಿಕೆ ಹೀನತೆಯಿಂದ ಆಸ್ವಾದಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ ವೇದನೆಗಳು ವಧರ್ಿಸಿ ಲೋಭಗಳು ಸಂಗ್ರಹವಾಗಿ ದುಃಖಗಳೂ ಸಹಾ ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಸಂಸ್ಪರ್ಶಗಳನ್ನು ಎಚ್ಚರಿಕೆ ಹೀನತೆಯಿಂದ ಅನುಭವಿಸಿದಾಗ, ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸಿ, ಲೋಭಗಳು ಸಂಗ್ರಹವಾಗುತ್ತವೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಮಾನಸಿಕ ವಿಷಯಗಳನ್ನು (ಧಮ್ಮಗಳನ್ನು) ಎಚ್ಚರಿಕೆ ಹೀನತೆಯಿಂದ ಗ್ರಹಿಸಿದಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸುವುವು. ಲೋಭಗಳು ಸಂಗ್ರಹವಾಗುತ್ತದೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುತ್ತದೆ. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ರೂಪಗಳನ್ನು ದಶರ್ಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಶಬ್ದಗಳನ್ನು ಆಲಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಗಂಧಗಳನ್ನು ಆಘ್ರಾಣಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಆಹಾರಗಳನ್ನು ಆಸ್ವಾದಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಸ್ಪರ್ಶಗಳನ್ನು ಅನುಭವಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಮಾಲುಕ್ಯಪುತ್ತ, ನನ್ನಿಂದ ಉಪದೇಶಿಸಲಾದ ಸಂಕ್ಷಿಪ್ತ ಉಪದೇಶಕ್ಕೆ ವಿಸ್ತಾರವಾದ ವಿವರಣೆಯನ್ನು ನೀನು ಅರಿತಿರುವೆ.
ಅದನ್ನು ಆಲಿಸಿದ ಆಯುಷ್ಮಂತ ಮಾಲುಕ್ಯಪುತ್ತನು ಆನಂದಿತನಾಗಿ ಎದ್ದು ಪುನಃ ವಂದಿಸಿ, ಪೂಜಿಸಿ, ಭಗವಾನರಿಗೆ ಪ್ರದಕ್ಷಿಣೆ ಅಪರ್ಿಸಿ ಅಲ್ಲಿಂದ ಹೊರಟನು.
ನಂತರ ಪೂಜ್ಯ ಮಾಲುಕ್ಯಪುತ್ತನು ಜನನಿಭಿಡತೆಯಿಂದ ದೂರಾಗಿ, ಏಕಾಂತತೆಯಲ್ಲಿ ವಾಸಿಸಿ, ಅಪ್ರಮತ್ತನಾಗಿ ಯಾವ ಉದ್ದೇಶಕ್ಕಾಗಿ ಕುಲಪುತ್ರರು ಗೃಹವನ್ನು ತೊರೆದು, ಶ್ರೇಷ್ಠ ಬ್ರಹ್ಮಚರ್ಯೆಯನ್ನು ಪಾಲಿಸುವರೋ, ಅಂತಹದನ್ನು ಪ್ರಾಪ್ತಿಮಾಡಿದನು. ನಂತರ ಜನ್ಮವು ನಾಶವಾಯಿತು, ಪವಿತ್ರವಾದ ಬ್ರಹ್ಮಚರ್ಯೆ ಪೂರ್ಣವಾಯಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನಾವುದೇ ಇಚ್ಛೆ ಉಳಿದಿಲ್ಲ ಎಂದು ಅರಿತನು. ಮಾಲುಕ್ಯಪುತ್ತನು ಸಹಾ ಅರಹಂತರಲ್ಲಿ ಒಬ್ಬನಾದನು.

35.10.3. ಪರಿಹಾನ ಧಮ್ಮ ಸುತ್ತಂ (ಕ್ಷೀಣಿಸುವಿಕೆಯ ಧಮ್ಮ ಸುತ್ತ)

96. ಭಿಕ್ಷುಗಳೇ, ಪರಿಹಾನ ಧಮ್ಮವನ್ನು (ಕ್ಷೀಣಿಸುವಿಕೆ) ಉಪದೇಶಿಸುತ್ತಿದ್ದೇನೆ ಹಾಗು ಅಪರಿಹಾನ ಧಮ್ಮವನ್ನು (ವೃದ್ಧಿಸುವಿಕೆ) ಉಪದೇಶಿಸುತ್ತಿದ್ದೇನೆ ಹಾಗು ಆರು ಇಂದ್ರೀಯಗಳಲ್ಲಿ ಪ್ರಾವಿಣ್ಯತೆಯ ಬಗ್ಗೆಯು ಉಪದೇಶಿಸುತ್ತಿದ್ದೇನೆ ತಾವು ಆಲಿಸಿ. ಭಿಕ್ಷುಗಳೇ, ಯಾವುದು ಕ್ಷೀಣಿಸುವಿಕೆಯ ಧಮ್ಮ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಕಣ್ಣಿನಿಂದ ರೂಪವನ್ನು ನೋಡುತ್ತಾನೆ, ಆಗ ಆತನಲ್ಲಿ ಅಕುಶಲ ಪಾಪಯುತ ಮನಸ್ಥಿತಿಗಳು ಉಂಟಾಗುತ್ತವೆ. ಅಂತಹುದೆ ನೆನಪುಗಳು ಮರುಕಳಿಸುತ್ತದೆ ಮತ್ತು ಸಂಯೋಜನೆಗಳಿಗೆ ಸಂಪರ್ಕಗೊಳಿಸುವ ಇಚ್ಛೆಗಳು ಉಂಟಾಗುತ್ತವೆ. ಭಿಕ್ಷು ಏನಾದರೂ ಅವನ್ನು ಸಹಿಸಿಕೊಂಡರೆ, ಅವನ್ನು ವಜರ್ಿಸದಿದ್ದರೆ, ದೂರೀಕರಿಸದಿದ್ದರೆ, ಅವುಗಳ ಅಂತ್ಯಮಾಡದೆ ಹೋದರೆ, ಅವುಗಳನ್ನು ಅಳಿಸಿಹಾಕದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿದ್ದೇನೆ. ಇದನ್ನೇ ಭಗವಾನರು ಕ್ಷಯಿಸುವಿಕೆ ಎನ್ನುವರು ಎಂದು. ಮತ್ತೆ ಭಿಕ್ಷುಗಳೇ, ಯಾವಾಗ ಭಿಕ್ಷುವು ಕಿವಿಯಿಂದ ಶಬ್ದವನ್ನು ಆಲಿಸಿದಾಗ... ಮೂಗಿನಿಂದ.... ಇದನ್ನೇ ಕ್ಷಯಿಸುವಿಕೆ ಎನ್ನುವರು.
ಭಿಕ್ಷುಗಳೇ, ಮತ್ತೆ ಭಿಕ್ಷುವು ಜಿಹ್ವೆಯಿಂದ ರಸಗಳನ್ನು ಆಸ್ವಾದಿಸುವಾಗ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಸಂಪಕರ್ಿಸುವಾಗ ಆತನಲ್ಲಿ ಅಕುಶಲವಾದ ಪಾಪಯುತ ಮನಸ್ಥಿತಿಗಳು ಉಂಟಾಗುತ್ತವೆ. ಅಂತಹುದೆ ನೆನಪುಗಳು ಮರುಕಳಿಸುತ್ತವೆ ಮತ್ತು ಸಂಯೋಜನೆಗಳಿಗೆ ಸಂಪರ್ಕಗೊಳಿಸುವ ಇಚ್ಛೆಗಳು ಉಂಟಾಗುತ್ತವೆ. ಭಿಕ್ಷು ಏನಾದರೂ ಅವನ್ನು ಸಹಿಸಿಕೊಂಡರೆ, ಅವನ್ನು ವಜರ್ಿಸದಿದ್ದರೆ, ದೂರೀಕರಿಸದಿದ್ದರೆ, ಅವುಗಳ ಅಂತ್ಯಮಾಡದೆ ಹೋದರೆ, ಅವುಗಳನ್ನು ಅಳಿಸಿಹಾಕದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿದ್ದೇನೆ. ಇದನ್ನೇ ಭಗವಾನರು ಕ್ಷಯಿಸುವಿಕೆ (ಪರಿಹಾನ) ಎನ್ನುವರು ಎಂದು. ಭಿಕ್ಷುಗಳೇ, ಈ ರೀತಿಯಾಗಿ ಒಬ್ಬನು ಕ್ಷಯಿಸುವಿಕೆಗೆ ಗುರಿಯಾಗುತ್ತಾನೆ.
ಭಿಕ್ಷುಗಳೇ, ಯಾವುದು ಅಪರಿಹಾನ ಧಮ್ಮ (ಅಕ್ಷಯಿಸುವಿಕೆ) ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಣ್ಣಿನಿಂದ ರೂಪಗಳನ್ನು ನೋಡುತ್ತಾನೆ. ಆಗ ಆತನಲ್ಲಿ ಅಕುಶಲವಾದ ಪಾಪಯುತ ಮನಸ್ಥಿತಿಗಳು, ನೆನಪುಗಳು, ಪಾಪ ಇಚ್ಚೆಗಳು, ಸಂಯೋಜಕಾರಿ ಯೋಚನೆಗಳು ಉಂಟಾಗಬಹುದು. ಆದರೆ ಭಿಕ್ಷುವು ಅವನ್ನು ಸಹಿಸುವುದಿಲ್ಲ. ವಜರ್ಿಸುತ್ತಾನೆ, ದೂರೀಕರಿಸುತ್ತಾನೆ, ಅವುಗಳ ಅಂತ್ಯಮಾಡುತ್ತಾನೆ, ಅಳಿಸಿಹಾಕುತ್ತಾನೆ. ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ನಾನು ಕುಶಲ ಚಿತ್ತಗಳಿಂದ ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿಲ್ಲ. ಇದನ್ನೇ ಭಗವಾನರು ಅಪರಿಹಾನ (ಅಕ್ಷಯಿಸುವಿಕೆ) ಎನ್ನುವರು. ಮತ್ತೆ ಭಿಕ್ಷುಗಳೇ, ಭಿಕ್ಷುವು ಕಿವಿಯಿಂದ ಶಬ್ದಗಳನ್ನು... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು (ಧಮ್ಮ) ಆತನಲ್ಲಿ ಅಕುಶಲವಾದ... ವಜರ್ಿಸುತ್ತಾನೆ... ದೂರೀಕರಿಸುತ್ತಾನೆ... ನಾನು ಕುಶಲ ಚಿತ್ತಗಳಿಂದ (ಸ್ಥಿತಿಗಳಿಂದ) ಕ್ಷಯಿಸಿಹೋಗುತ್ತಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಾನೆ... ಇದನ್ನೇ ಭಗವಾನರು ಅಪರಿಹಾನ ಧಮ್ಮ ಎನ್ನುತ್ತಾರೆ.
ಭಿಕ್ಷುಗಳೇ, ಮತ್ತೆ ಆರು ಇಂದ್ರಿಯಗಳಲ್ಲಿ ಕ್ಷೇತ್ರ ಪ್ರಾವಿಣ್ಯತೆ ಹೇಗೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಕ್ಷುವಿನಿಂದ ರೂಪಗಳನ್ನು ನೋಡಿದಾಗಲೂ ಆತನಲ್ಲಿ ಅಕುಶಲ ಚಿತ್ತಗಳು ಉದಯಿಸಲಾರವು. ಅದಕ್ಕೆ ಸಂಬಂಧಪಟ್ಟಂತಹ ಯಾವುದೇ ನೆನಪುಗಳು, ಸಂಯೋಜನಕಾರಿ ಇಚ್ಛೆಗಳು ಉಂಟಾಗಲಾರವು. ಆಗ ಭಿಕ್ಷುವು ಹೀಗೆ ಅರ್ಥಮಾಡಿಕೊಳ್ಳುತ್ತಾನೆ, ಇಂದ್ರೀಯ ಆಧಾರಗಳು ಪ್ರಾವಿಣ್ಯತೆಯನ್ನು ಪಡೆದಿವೆ, ಇವನ್ನೇ ಚಕ್ಷು ಇಂದ್ರೀಯ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಎಂದು ಭಗವಾನರು ಹೇಳುವರು. ಇದೇರೀತಿಯಾಗಿ ಭಿಕ್ಷುವು ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳು ಸಂಪರ್ಕವಾದಾಗಲೂ ಆತನಲ್ಲಿ ಅಕುಶಲ ಚಿತ್ತಗಳು ಉದಯಿಸಲಾರವು. ಅದಕ್ಕೆ ಸಂಬಂಧಪಟ್ಟಂತಹ ಯಾವುದೇ ನೆನಪುಗಳು, ಸಂಯೋಜನಕಾರಿ ಇಚ್ಛೆಗಳು ಉಂಟಾಗಲಾರವು. ಆಗ ಭಿಕ್ಷುವು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ಈ ಇಂದ್ರೀಯ ಕ್ಷೇತ್ರವು ಪ್ರಾವಿಣ್ಯತೆ ಗಳಿಸಿದೆ. ಹೀಗೆಂದು ಭಗವಾನರು ನುಡಿದಿದ್ದರೆ. ಇದೇ ಭಿಕ್ಷುಗಳೇ, ಆರು ಇಂದ್ರೀಯಗಳ ಪ್ರಾವಿಣ್ಯತೆಯಾಗಿದೆ.

35.10.4. ಪಮಾದ ವಿಹಾರಿ ಸುತ್ತಂ (ಪ್ರಮಾದ ವಿಹಾರಿ ಸುತ್ತ)

97. ಭಿಕ್ಷುಗಳೇ, ಪ್ರಮಾದ ವಿಹಾರಿಯ ಬಗ್ಗೆ (ನಿರ್ಲಕ್ಷದಿಂದ ವಾಸಿಸುವವನ ಬಗ್ಗೆ) ಹಾಗು ಅಪ್ರಮಾದ ವಿಹಾರಿಯ ಬಗ್ಗೆ ಬೋಧಿಸುತ್ತೇನೆ. ತಾವೆಲ್ಲರೂ ಆಲಿಸಿರಿ, ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಪ್ರಮಾದವಾಗಿ (ನಿರ್ಲಕ್ಷವಾಗಿ) ಹೇಗೆ ಜೀವಿಸುತ್ತಿರುವನು? ಇಲ್ಲಿ ಆತನು ಕಣ್ಣನ್ನು ನಿಯಂತ್ರದಲ್ಲಿರಿಸುವುದಿಲ್ಲ. ಆಗ ಚಕ್ಷುವಿಞ್ಞಾನದ ಮೂಲಕವಾಗಿ ಆತನ ಚಿತ್ತವು ರೂಪಗಳಿಂದ ಕಲುಷಿತವಾಗುತ್ತದೆ. ಹೀಗೆ ಕಲುಶಿತಗೊಂಡ ಚಿತ್ತವು ಪ್ರಮೋದ (ಸಂತೋಷ) ಪಡುವುದಿಲ್ಲ. ಪ್ರಮೋದವಿಲ್ಲದ್ದರಿಂದಾಗಿ ಪ್ರೀತಿ (ಆನಂದ)ವು ಉಂಟಾಗುವುದಿಲ್ಲ. ಆನಂದಿವಿಲ್ಲದೆ ಪಸ್ಸದ್ಧಿ (ಪ್ರಶಾಂತತೆ) ಉದಯಿಸುವುದಿಲ್ಲ. ಪ್ರಶಾಂತತೆಯ ಅಭಾವದಿಂದ ದುಃಖವು ಉಂಟಾಗುತ್ತದೆ. ದುಃಖದಲ್ಲಿರುವ ಚಿತ್ತವು ಸಮಾಧಿಯಲ್ಲಿರುವುದಿಲ್ಲ. ಈ ರೀತಿಯಾಗಿ ಸಮಾಹಿತವಲ್ಲದ ಚಿತ್ತದಲ್ಲಿ ಧಮ್ಮ (ಸತ್ಯ) ಗೋಚರವಾಗುವುದಿಲ್ಲ. ಹೀಗೆ ಆತನು ನಿರ್ಲಕ್ಷನಾಗಿ (ಪ್ರಮಾದದಿಂದ) ಜೀವಿಸುತ್ತಾನೆ. ಅದೇರೀತಿ ಇಲ್ಲಿ ಒಬ್ಬನು ಕಿವಿಯಲ್ಲಿ ಅಸಂಯಮಿಯಾಗಿರುತ್ತಾನೆ... ಮೂಗಿನಲ್ಲಿ ಅಸಂಯಮಿಯಾಗಿರುತ್ತಾನೆ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಅಸಂಯಮಿಯಾಗಿರುತ್ತಾನೆ. ಆತನ ಚಿತ್ತವು ಧಮ್ಮದಿಂದ (ಮಾನಸಿಕ ವಿಷಯಗಳಿಂದ) ಕಲುಶಿತವಾಗುತ್ತದೆ. ಹೀಗೆ ಕಲುಶಿತಗೊಂಡ ಚಿತ್ತವು ಪ್ರಮೋದ ತಾಳುವುದಿಲ್ಲ. ಪ್ರಮೋದವಿಲ್ಲದಿದ್ದರಿಂದಾಗಿ ಆನಂದಪಡುವುದಿಲ್ಲ. ಆನಂದವಿಲ್ಲದೆ ಪ್ರಶಾಂತತೆ ಉಂಟಾಗುವುದಿಲ್ಲ. ಪ್ರಶಾಂತತೆಯ ಅಭಾವದಿಂದಾಗಿ ದುಃಖವಿರುತ್ತದೆ. ದುಃಖದಲ್ಲಿರುವ ಚಿತ್ತವು ಸಮಾಧಿಯಲ್ಲಿರುವುದಿಲ್ಲ. ಹೀಗೆ ಸಮಾಹಿತವಲ್ಲದ ಚಿತ್ತಕ್ಕೆ ಸತ್ಯ ಗೋಚರವಾಗದು. ಹೀಗೆ ಆತನು ನಿರ್ಲಕ್ಷನಾಗಿ ಜೀವಿಸುವವನಾಗುತ್ತಾನೆ.
ಭಿಕ್ಷುಗಳೇ, ಮತ್ತೆ ಹೇಗೆ ಒಬ್ಬನು ಅಪ್ರಮತ್ತನಾಗಿ (ಜಾಗರೂಕನಾಗಿ) ಜೀವಿಸುತ್ತಾನೆ (ವಿಹರಿಸುತ್ತಾನೆ). ಇಲ್ಲಿ ಒಬ್ಬನು ಚಕ್ಷುವಿನಲ್ಲಿ ಸಂಯಮಿತನಾಗಿರುತ್ತಾನೆ. ಹೀಗಾಗಿ ಚಕ್ಷುವಿಞ್ಞಾನದ ಮೂಲಕವಾಗಿ ರೂಪಗಳನ್ನು ಕಂಡು ಕಲುಶಿತನಾಗುವುದಿಲ್ಲ. ಹೀಗೆ ಕಲುಷಿತವಲ್ಲದ ಚಿತ್ತವು ಪ್ರಮೋದವನ್ನು ತಾಳುತ್ತದೆ. ಪ್ರಮೋದದಿಂದಾಗಿ ಆನಂದವು ಉದಯಿಸುವುದು. ಆನಂದಯುತ ಚಿತ್ತದಿಂದ ಪ್ರಶಾಂತತೆಯು ಆತನ ಕಾಯದಲ್ಲಿ ನೆಲೆಸುತ್ತದೆ. ಈ ಬಗೆಯ ಕಾಯ ಪ್ರಶಾಂತತೆಯಿಂದ ಸುಖವು ಉದಯಿಸುತ್ತದೆ. ಸುಖದಿಂದ ಆವೃತವಾದ ಚಿತ್ತ ಸಮಾಧಿಯನ್ನು ಪಡೆಯುತ್ತದೆ. ಹೀಗೆ ಸಮಾಹಿತವಾದ ಚಿತ್ತವು ಧಮ್ಮವನ್ನು ದಶರ್ಿಸುತ್ತದೆ. ಹೀಗೆ ಧಮ್ಮವನ್ನು ದಶರ್ಿಸಿಕೊಂಡವ ಅಪ್ರಮತ್ತ ವಿಹಾರಿ (ಜಾಗರೂಕತೆಯಲ್ಲಿ ವಾಸಿಸುವ) ಎಂದು ಕರೆಯಲ್ಪಡುತ್ತಾನೆ. ಮತ್ತೆ ಭಿಕ್ಷುಗಳೇ, ಇಲ್ಲಿ ಒಬ್ಬನು ಕಿವಿಯಲ್ಲಿ ಸಂಯಮಿತನಾಗುತ್ತಾನೆ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಸಂಯಮಿತನಾಗುತ್ತಾನೆ. ಹೀಗಾಗಿ ಮನೋವಿಞ್ಞಾನದ ಮೂಲಕವಾಗಿ ಮಾನಸಿಕ ವಿಷಯಗಳನ್ನು ಸಂಪಕರ್ಿಸಿದಾಗ ಆತನ ಚಿತ್ತವು ಕಲುಶಿತವಾಗುವುದಿಲ್ಲ. ಹೀಗೆ ಕಲುಶಿತವಲ್ಲದ ಚಿತ್ತವು ಪ್ರಮೋದನವನ್ನು ತಾಳುತ್ತದೆ. ಪ್ರಮೋದದಿಂದ ಆನಂದವು, ಆನಂದದಿಂದ ಕಾಯ ಪ್ರಶಾಂತತೆಯು, ಕಾಯ ಪ್ರಶಾಂತತೆಯಿಂದ ಸುಖವು ಆವೃತವಾಗುತ್ತದೆ. ಸುಖದಿಂದ ಆವೃತವಾದ ಚಿತ್ತವು ಸಮಾಧಿಯನ್ನು ಹೊಂದುತ್ತದೆ. ಹೀಗೆ ಸಮಾಹಿತವಾದ ಚಿತ್ತ ಧಮ್ಮವನ್ನು ದಶರ್ಿಸುತ್ತದೆ. ಹೀಗೆ ಧಮ್ಮವನ್ನು ದಶರ್ಿಸಿಕೊಂಡವ ಅಪ್ರಮತ್ತ ವಿಹಾರಿ ಎಂದು ಕರೆಯಲ್ಪಡುತ್ತಾನೆ.


35.10.5. ಸಂವರ ಸುತ್ತಂ (ಸಂಯಮ ಸುತ್ತ)

98. ಭಿಕ್ಷುಗಳೇ, ಸಂಯಮದ ಬಗ್ಗೆ ಹಾಗೂ ಅಸಂಯಮದ ಬಗ್ಗೆ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಯಾವರೀತಿ ಅಸಂಯಮಿ ಆಗುತ್ತಾನೆ? ಭಿಕ್ಷುಗಳೇ, ಚಕ್ಷುವಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷ ನೀಡುವಂತಹವು. ಇದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅವಕ್ಕೆ ಅಂಟಿಕೊಂಡರೆ, ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿದ್ದೇನೆ, ಇದನ್ನು ಹೀಗೆ ಭಗವಾನರು ಸಹಾ ಹೇಳಿರುವರು.
ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಲ್ಲಂತಹ ಶಬ್ದಗಳಿರುತ್ತವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಲ್ಲಂತಹ ಧಮ್ಮವಾಗಿರುತ್ತದೆ (ಮಾನಸಿಕ ವಿಷಯಗಳು). ಅವು ಆಸೆ ಹುಟ್ಟುಸುವಂತಹುದು, ಪ್ರಿಯವಾದವು, ಒಪ್ಪುವಂತಹವು, ಸಂತೋಷ ನೀಡುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅವಕ್ಕೆ ಅಂಟಿಕೊಂಡರೆ ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿದ್ದೇನೆ, ಭಗವಾನರು ಹೀಗೆಯೇ ನುಡಿದಿದ್ದಾರೆ. ಹೀಗೆ ಭಿಕ್ಷುಗಳೇ, ಅಸಂಯಮಿಯಾಗುತ್ತಾನೆ.
ಮತ್ತೆ ಭಿಕ್ಷುಗಳೇ, ಹೇಗೆ ಸಂಯಮಿ ಆಗಿರುತ್ತಾನೆ? ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿರುತ್ತವೆ, ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವು ಅವುಗಳಲ್ಲಿ ಆನಂದವನ್ನು ಹುಡುಕದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಳ್ಳದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿಲ್ಲ, ಹೀಗೆ ಇದು ಭಗವಾನರಿಂದಲೂ ಹೇಳಲ್ಪಟ್ಟಿದೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿರುತ್ತದೆ. ಅವು ಆಸೆಯನ್ನು ಹುಟ್ಟಿಸುವಂತಹುದು. ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭವನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದ ಹುಡುಕದಿದ್ದರೆ ಅವನ್ನು ಸ್ವಾಗತಿಸದಿದ್ದರೆ, ಅವಕ್ಕೆ ಅಂಟದಿದ್ದರೆ, ಆತನು ಹೀಗೆ ಅವನ್ನು ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿಲ್ಲ. ಹೀಗೆಂದು ಭಗವಾನರಿಂದ ಘೋಷಿಸಲ್ಪಟ್ಟಿದೆ. ಭಿಕ್ಷುಗಳೇ, ಹೀಗೆ ಸಂಯಮವು ಇರುತ್ತದೆ.

35.10.6. ಸಮಾಧಿ ಸುತ್ತಂ (ಸಮಾಧಿ ಸುತ್ತ)

99. ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿರಿ. ಯಾವ ಭಿಕ್ಷುವು ಸಮಾಹಿತನಾಗಿರುತ್ತಾನೋ ಅಂತಹವನು ಯಥಾಭೂತವಾಗಿ ಅರಿಯುವಂತಹವನು ಆಗಿರುತ್ತಾನೆ. ಭಿಕ್ಷುಗಳೇ, ಯಾವುದನ್ನು ಆತನು ಯಥಾಭೂತವಾಗಿ ಅರಿಯುತ್ತಾನೆ? ಆತನು ಚಕ್ಷುವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ, ಆತನು ರೂಪಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುವಿಞ್ಞಾನವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷು ಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ.... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ. ಆದ್ದರಿಂದ ಸಮಾಧಿಯನ್ನು ಅಭಿವೃದ್ಧಿಗೊಳಿಸಿ ಭಿಕ್ಷುಗಳೇ, ಸಮಾಹಿತವಾದ ಚಿತ್ತವನ್ನು ಯಥಾಭೂತವಾಗಿ ಅರಿಯುತ್ತದೆ.


35.10.7. ಪಟಿಸಲ್ಲಾನ ಸುತ್ತಂ (ಏಕಾಂತತೆಯ ಸೂತ್ರ)

100. ಏಕಾಂತತೆಯಲ್ಲಿ ತೊಡಗಿ ಶ್ರಮಿಸಿರಿ ಭಿಕ್ಷುಗಳೇ, ಏಕೆಂದರೆ ಏಕಾಂತತೆಯಲ್ಲಿ ತೊಡಗಿದ ಭಿಕ್ಷುವು ವಿಷಯಗಳನ್ನು ಯಥಾಭೂತವಾಗಿ ಅರಿಯುತ್ತಾನೆ... ಭಿಕ್ಷುಗಳೇ, ಯಾವುದನ್ನು ಆತನು ಯಥಾಭೂತವಾಗಿ ಅರಿಯುತ್ತಾನೆ? ಆತನು ಚಕ್ಷುವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ, ಆತನು ರೂಪಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುವಿಞ್ಞಾನವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷು ಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ.... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ. ಆದ್ದರಿಂದ ಏಕಾಂತತೆಯನ್ನು ಅಭ್ಯಸಿಸಿ ಭಿಕ್ಷುಗಳೇ, ಏಕಾಂತತೆಯ ಚಿತ್ತವು ಯಥಾಭೂತವಾಗಿ ಅರಿಯುತ್ತದೆ.

35.10.8. ಪಠಮ ನ ತುಮ್ಹಾಕಂ ಸುತ್ತಂ (ಪ್ರಥಮ ನಿಮ್ಮದಲ್ಲದ ಸುತ್ತ)

101. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೋ ಅವನ್ನು ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ, ಆಗ ನಿಮಗೆ ಭವಿಷ್ಯದಲ್ಲಿ ಹಿತವು ಸುಖವು ಲಭಿಸುತ್ತದೆ. ಮತ್ತೆ ಭಿಕ್ಷುಗಳೇ, ಯಾವುವು ನಿಮ್ಮದಲ್ಲ? ಈ ಚಕ್ಷುಗಳು ನಿಮ್ಮವಲ್ಲ ವಜರ್ಿಸಿರಿ. ಈ ರೂಪಗಳೂ ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ನಿಮಗೆ ಹಿತವೂ ಸುಖವೂ ಲಭಿಸುತ್ತದೆ. ಹಾಗೆಯೇ ಚಕ್ಷುವಿಞ್ಞಾಣ ನಿಮ್ಮದಲ್ಲ ವಜರ್ಿಸಿರಿ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಅಗ ಹಿತವೂ ಸುಖವೂ ಉಂಟಾಗುತ್ತದೆ. ಕಿವಿಯು ನಿಮ್ಮದಲ್ಲ ವಜರ್ಿಸಿರಿ... ಮೂಗು ನಿಮ್ಮದಲ್ಲ ವಜರ್ಿಸಿರಿ... ಮೂಗಿನ ಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ನಿಮ್ಮದಲ್ಲ ವಜಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ದೀರ್ಘಕಾಲ ಹಿತವೂ ಸುಖವೂ ಲಭಿಸುತ್ತದೆ.
ಜಿಹ್ವೆ ನಿಮ್ಮದಲ್ಲ, ಅದನ್ನು ತೊರೆಯಿರಿ, ಅದನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ. ರಸಗಳು ನಿಮ್ಮದಲ್ಲ ಅವನ್ನು ತೊರೆಯಿರಿ. ಅವನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ... ಜಿಹ್ವಾವಿಞ್ಞಾವು ನಿಮ್ಮದಲ್ಲ ತೊರೆಯಿರಿ... ಜಿಹ್ವಾಸಂಸ್ಪರ್ಶವು ನಿಮ್ಮದಲ್ಲ... ಜಿಹ್ವಾಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಸುಖ, ದುಃಖ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ತೊರೆಯಿರಿ. ಯಾವಾಗ ನೀವು ತೊರೆಯುವಿರೋ ಆಗ ಹಿತವೂ ಸುಖವೂ ಲಭಿಸುವುದು. ದೇಹವೂ ನಿಮ್ಮದಲ್ಲ... ವೇದನೆಗಳು ನಿಮ್ಮದಲ್ಲ... ಯಾವಾಗ ನೀವು ತೊರೆಯುವಿರೊ ಆಗ ಹಿತವೂ ಸುಖವೂ ಲಭಿಸುವುದು. ಈ ಮನಸ್ಸು ನಿಮ್ಮದಲ್ಲ, ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ಈ ಧಮ್ಮಗಳು (ಮನೋ ವಿಷಯಗಳು) ನಿಮ್ಮದಲ್ಲ... ಮನೋವಿಞ್ಞಾಣ... ಮನೋಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಸುಖವೂ ಹಿತವೂ ಲಭಿಸುತ್ತದೆ.
ಭಿಕ್ಷುಗಳೇ, ಜನರು ಹುಲ್ಲನ್ನು, ಕಟ್ಟಿಗೆಗಳನ್ನು, ಕೊಂಬೆಗಳನ್ನು ಹಾಗು ಎಲೆ ಗೊಂಚಲುಗಳನ್ನು ಜೇತವನದ ಮೂಲೆಯಲ್ಲಿಟ್ಟು ಸುಟ್ಟುಹಾಕಿದರೆ ಅಥವಾ ಅವರ ಇಷ್ಟಬಂದಹಾಗೆ ಮಾಡತೊಡಗಿದರೆ ನೀವು ಈ ರೀತಿ ಯೋಚಿಸುವಿರಾ? ಜನರು ನಮ್ಮನ್ನು ಎತ್ತಿಕೊಂಡು ಹೋಗುತ್ತಿದ್ದಾರೆ, ನಮ್ಮನ್ನು ದಹಿಸುತ್ತಿದ್ದಾರೆ, ನಮ್ಮನ್ನು ಇಷ್ಟಬಂದಹಾಗೆ ಮಾಡುತ್ತಿದ್ದಾರೆ.
ಇಲ್ಲ ಭಂತೆ.
ಯಾವ ಕಾರಣಕ್ಕಾಗಿ?
ಏಕೆಂದರೆ ಅಲ್ಲಿ ಆತ್ಮವಾಗಲಿ (ತಾನಾಗಲಿ) ಅಥವಾ ಆತ್ಮಕ್ಕೆ ಸೇರಿದ್ದಾಗಲಿ (ತನ್ನದಾಗಲಿ) ಇಲ್ಲ.
ಅದೇರೀತಿಯಾಗಿ ಭಿಕ್ಷುಗಳೇ, ಚಕ್ಷುವು ನಿಮ್ಮದಲ್ಲ ವಜರ್ಿಸಿರಿ. ಹಾಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ರೂಪವು ನಿಮ್ಮದಲ್ಲ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳು ನಿಮ್ಮದಲ್ಲ, ಅವನ್ನೆಲ್ಲಾ ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು.


35.10.9. ದುತಿಯಾ ನ ತುಮ್ಹಾಕಂ ಸುತ್ತಂ (ದ್ವಿತೀಯ ನಿಮ್ಮದಲ್ಲದ ಸುತ್ತ)

102. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೋ ಅವನ್ನು ದಶರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ, ಆಗ ನಿಮಗೆ ಭವಿಷ್ಯದಲ್ಲಿ ಹಿತವು ಸುಖವು ಲಭಿಸುತ್ತದೆ. ಮತ್ತೆ ಭಿಕ್ಷುಗಳೇ, ಯಾವುವು ನಿಮ್ಮದಲ್ಲ? ಈ ಚಕ್ಷುಗಳು ನಿಮ್ಮವಲ್ಲ ವಜರ್ಿಸಿರಿ. ಈ ರೂಪಗಳೂ ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ನಿಮಗೆ ಹಿತವೂ ಸುಖವೂ ಲಭಿಸುತ್ತದೆ. ಹಾಗೆಯೇ ಚಕ್ಷುವಿಞ್ಞಾಣ ನಿಮ್ಮದಲ್ಲ ವಜರ್ಿಸಿರಿ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಅಗ ಹಿತವೂ ಸುಖವೂ ಉಂಟಾಗುತ್ತದೆ. ಕಿವಿಯು ನಿಮ್ಮದಲ್ಲ ವಜರ್ಿಸಿರಿ... ಮೂಗು ನಿಮ್ಮದಲ್ಲ ವಜರ್ಿಸಿರಿ... ಮೂಗಿನ ಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ನಿಮ್ಮದಲ್ಲ ವಜಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ದೀರ್ಘಕಾಲ ಹಿತವೂ ಸುಖವೂ ಲಭಿಸುತ್ತದೆ. ಜಿಹ್ವೆ ನಿಮ್ಮದಲ್ಲ, ಅದನ್ನು ತೊರೆಯಿರಿ, ಅದನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ. ರಸಗಳು ನಿಮ್ಮದಲ್ಲ ಅವನ್ನು ತೊರೆಯಿರಿ. ಅವನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ... ಜಿಹ್ವಾವಿಞ್ಞಾವು ನಿಮ್ಮದಲ್ಲ ತೊರೆಯಿರಿ... ಜಿಹ್ವಾಸಂಸ್ಪರ್ಶವು ನಿಮ್ಮದಲ್ಲ... ಜಿಹ್ವಾಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಸುಖ, ದುಃಖ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ತೊರೆಯಿರಿ. ಯಾವಾಗ ನೀವು ತೊರೆಯುವಿರೋ ಆಗ ಹಿತವೂ ಸುಖವೂ ಲಭಿಸುವುದು. ದೇಹವೂ ನಿಮ್ಮದಲ್ಲ... ವೇದನೆಗಳು ನಿಮ್ಮದಲ್ಲ... ಯಾವಾಗ ನೀವು ತೊರೆಯುವಿರೊ ಆಗ ಹಿತವೂ ಸುಖವೂ ಲಭಿಸುವುದು. ಈ ಮನಸ್ಸು ನಿಮ್ಮದಲ್ಲ, ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ಈ ಧಮ್ಮಗಳು (ಮನೋ ವಿಷಯಗಳು) ನಿಮ್ಮದಲ್ಲ... ಮನೋವಿಞ್ಞಾಣ... ಮನೋಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಸುಖವೂ ಹಿತವೂ ಲಭಿಸುತ್ತದೆ. ಅದೇರೀತಿಯಾಗಿ ಭಿಕ್ಷುಗಳೇ, ಚಕ್ಷುವು ನಿಮ್ಮದಲ್ಲ ವಜರ್ಿಸಿರಿ. ಹಾಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ರೂಪವು ನಿಮ್ಮದಲ್ಲ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳು ನಿಮ್ಮದಲ್ಲ, ಅವನ್ನೆಲ್ಲಾ ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು.

35.10.10. ಉದ್ದಕ ಸುತ್ತಂ (ಉದ್ದಕರಾಮಪುತ್ತರ ಬಗ್ಗೆ ಸುತ್ತ) (ಉದಕ ಸುತ್ತ)

103. ಭಿಕ್ಷುಗಳೇ, ಹೀಗೆ ಉದ್ದಕರಾಮಪುತ್ತರು ಘೋಷಿಸುತ್ತಿದ್ದರು: ಇದೇ ಖಂಡಿತವಾಗಿ ಜ್ಞಾನ ಪ್ರಾವಿಣ್ಯತೆ (ವೇದಗೂ) ಇದೇ ಖಂಡಿತವಾಗಿಯು ಸರ್ವಜಿನತೆ (ಸಾರ್ವತ್ರಿಕ ವಿಜಯಶಾಲಿ). ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ. ಭಿಕ್ಷುಗಳೇ, ಉದ್ದಕರಾಮಪುತ್ತರು ಜ್ಞಾನ ಪ್ರಾವಿಣ್ಯತೆಯನ್ನು ಪಡೆಯದಿದ್ದರೂ ತಾನು ಜ್ಞಾನ ಪ್ರಾವೀಣ್ಯನೆಂದು ಘೋಷಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರು ಸರ್ವವನ್ನು ಜಯಿಸದಿದ್ದರೂ ತಾನು ಸರ್ವವನ್ನು ಜಯಿಸಿದ್ದೇನೆ (ಜಿನತೆ) ಅವರು ಗಡ್ಡೆಗಳ ಮೂಲದ ಬಗ್ಗೆ ಶ್ರಮಿಸದಿದ್ದರೂ ತಾನು ಮಾಡಿರುವೆ ಎಂದು ಘೋಷಿಸುತ್ತಿದ್ದರು. ಆದರೆ ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸರಿಯಾಗಿ ಹೀಗೆ ಘೋಷಿಸಬಹುದು: ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ.
ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಜ್ಞಾನ ಪ್ರಾವೀಣ್ಯತೆಯನ್ನು ಹೊಂದುತ್ತಾನೆ? ಯಾವಾಗ ಭಿಕ್ಷುವು ಆರು ಇಂದ್ರೀಯ ಆಧಾರಗಳ ಬಗ್ಗೆ ಅವುಗಳ ಉದಯವನ್ನು, ಅವುಗಲ ಅಳಿಯುವಿಕೆಯನ್ನು, ಅವುಗಳ ಆಸ್ವಾದನೆಯನ್ನು, ಅವುಗಳ ಅಪಾಯವನ್ನು ಹಾಗು ಅವುಗಳ ಬಿಡುಗಡೆಯನ್ನು ಯಥಾಭೂತವಾಗಿಯೇ ಅರಿಯುತ್ತಾನೆ. ಈ ವಿಧದಲ್ಲಿ ಒಬ್ಬನು ಜ್ಞಾನದಲ್ಲಿ ಪ್ರಾವೀಣ್ಯತೆಯನ್ನು ಹೊಂದುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಸರ್ವಜಿನತೆ ಹೊಂದುತ್ತಾನೆ? ಯಾವಾಗ ಭಿಕ್ಷುವು ಆರು ಇಂದ್ರೀಯ ಆಧಾರಗಳ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು, ಅಪಾಯವನ್ನು ಹಾಗು ಅದರಿಂದಾಗಿ ಬಿಡುಗಡೆಯನ್ನು ಅರಿತು ಅಂಟದೆ ಇರುವುದರಿಂದಾಗಿ ಅಂತಹ ಭಿಕ್ಷುವು ಸರ್ವಜಿನನೆಂದು ಕರೆಯಲ್ಪಡುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಭಿಕ್ಷುವೊಬ್ಬನು ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುತ್ತಾನೆ? ಭಿಕ್ಷುಗಳೇ, ಇಲ್ಲಿ ಗಡ್ಡೆಯೆಂದರೆ ನಾಲ್ಕು ಧಾತುಗಳ ಶರೀರವಾಗಿದೆ. ಮಾತಪಿತರಿಂದಾಗಿ ಉದಯಿಸಿ, ಆಹಾರದಿಂದ ದ್ರಾಡ್ಯತೆಯು ಪಡೆದು ಅನಿತ್ಯತೆಗೆ, ಉಜ್ಜುವಿಕೆಗೆ, ಮುಗಿಯುವಿಕೆಗೆ ನಾಶಕ್ಕೆ ಗುರಿಯಾಗುತ್ತದೆ. ಗಡ್ಡೆಯ ಮೂಲವೆಂದರೆ ತೃಷ್ಣೆಯಾಗಿದೆ. ಯಾವಾಗ ಭಿಕ್ಷುವಿನಿಂದ ತೃಷ್ಣೆಯು ಪರಿತ್ಯಾಗವಾಗುತ್ತದೋ, ಬೇರುಗಳನ್ನು ಕತ್ತರಿಸಿ ಹಾಕಲ್ಪಟ್ಟಿದೆಯೋ, ತಾಳೆಯ ಮರದ ಬುಡದಂತೆ ಮುಂದೆ ಉದಯಿಸದಂತೆ ಕತ್ತರಿಲ್ಪಡುತ್ತದೋ, ಅಂತಹ ಭಿಕ್ಷುವು ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುತ್ತಾನೆ.
ಭಿಕ್ಷುಗಳೇ, ಉದ್ದಕ ರಾಮಪುತ್ರರು ತಾವು ಜ್ಞಾನದ ಪ್ರಾವೀಣ್ಯತೆಯನ್ನು ಹೊಂದದಿದ್ದರೂ ಹೀಗೆ ಘೋಷಿಸಿದ್ದರು, ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ.... ಆದರೆ ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸರಿಯಾಗಿ ಹೀಗೆ ಘೋಷಿಸಬಹುದು. ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ....
ಹತ್ತನೆಯ ಸಳವರ್ಗ ಮುಗಿಯಿತು.

Samyutta nikaya 35.9 ಛನ್ನ ವಗ್ಗೋ

ಛನ್ನ ವಗ್ಗೋ

35.9.1. ಪರಲೋಕ ಧಮ್ಮ ಸುತ್ತಂ

84. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಆಯುಷ್ಮಂತ ಆನಂದರವರು ಅವರ ಬಳಿಗೆ ಸಮೀಪಿಸಿದರು ಹಾಗು ಹೀಗೆ ನುಡಿದರು: ಭಂತೆ, ಲೋಕ ಲೋಕ ಎನ್ನುತ್ತಾರಲ್ಲ, ಯಾವ ವಿಧದಲ್ಲಿ ಯಾವ ಅರ್ಥದಲ್ಲಿ ಲೋಕ ಎನ್ನುತ್ತಾರೆ?
ಆನಂದ, ಯಾವುದೆಲ್ಲವೂ ವಿಘಟಿತವಾಗುತ್ತದೆಯೋ (ಕೊಳೆಯುತ್ತದೋ) ಅವನ್ನೆಲ್ಲಾ ಆರ್ಯರ ವಿನಯದಲ್ಲಿ ಲೋಕವೆನ್ನುತ್ತಾರೆ. ಮತ್ತೆ ಆನಂದ ಯಾವುದೆಲ್ಲವೂ ವಿಘಟಿತಕ್ಕೆ (ಕೊಳೆಯುವುದಕ್ಕೆ) ಗುರಿಯಾಗಿವೆ. ಆನಂದ, ಚಕ್ಷು ಕೊಳೆಯುತ್ತದೆ... ರೂಪಗಳು ಕೊಳೆಯುತ್ತವೆ... ಚಕ್ಷುವಿಞ್ಞಾನವು ವಿಘಟಿತವಗುವುದು... ಚಕ್ಷುಸಂಸ್ಪರ್ಶ... ಚಕ್ಷುವೇದನಾ... ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು ವಿಘಟಿತವಾಗುವುದು... ಮನೋವಿಷಯಗಳು ವಿಘಟಿತವಾಗುವುದು. ಮನೋವಿಞ್ಞಾನವು ವಿಘಟಿತವಾಗುವುದು... ಮನೋಸಂಸ್ಪರ್ಶ... ಮನೋವೇದನೆಗಳು... ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ವಿಘಟಿತವಗುವುದು. ಹೀಗೆ ಯಾವುದೆಲ್ಲವೂ ವಿಘಟಿತವಾಗುವುವೋ ಅವೆಲ್ಲವನ್ನು ಆರ್ಯರ ವಿನಯದಲ್ಲಿ ಲೋಕ ಎನ್ನುತ್ತಾರೆ.

35.9.2. ಸುಞ್ಞತ ಲೋಕ ಸುತ್ತಂ

85. ಒಮ್ಮೆ ಆಯುಷ್ಮಂತರಾದ ಆನಂದರವರು ಭಗವಾನರ ಬಳಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಪ್ರಶ್ನಿಸಿದರು: ಭಂತೆ, ಸುಞ್ಞ (ಶೂನ್ಯ) ಲೋಕ ಎನ್ನುತ್ತಾರಲ್ಲ, ಯಾವ ವಿಧದಲ್ಲಿ ಭಂತೆ ಲೋಕವು ಶೂನ್ಯವಾಗಿದೆ? ಆನಂದ, ಇಲ್ಲಿ ಇದು ಸ್ವ (ಆತ್ಮ/ತಾನು)ನಿಂದ ಬರಿದಾಗಿದೆ. ಹಾಗೆಯೇ ತನ್ನಿಂದ/ತನ್ನತನದಿಂದ/ನನ್ನದು ಎಂಬುದರಿಂದ/ಆತ್ಮಕ್ಕೆ ಸೇರಿದ್ದು ಎಂಬುದರಿಂದಾಗಿ ಬರಿದಾಗಿದೆ. ಆದ್ದರಿಂದ ಲೋಕವು ಶೂನ್ಯ ಎನ್ನುತ್ತಾರೆ ಮತ್ತು ಯಾವುದು ಸ್ವಯಂ (ಆತ್ಮ)ನಿಂದ ಶೂನ್ಯವಾಗಿದೆ ಮತ್ತು ತನ್ನದು ಎಂಬುದರಿಂದ ಸೂನ್ಯವಾಗಿದೆ? ಕಣ್ಣು ಸ್ವಯಂ (ಆತ್ಮ) ನಿಂದ ಹಾಗು ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಹಾಗೆಯೇ ರೂಪಗಳು ಆತ್ಮದಿಂದ ಶೂನ್ಯವಾಗಿದೆ. ಚಕ್ಷುವಿಞ್ಞಾನವು ಆತ್ಮದಿಂದ ಶೂನ್ಯವಾಗಿದೆ ಮತ್ತು ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಚಕ್ಷು ಸಂಸ್ಪರ್ಶವು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನದು ಎಂಬುದರಿಂದ ಶೂನ್ಯವಾಗಿದೆ. ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ಆತ್ಮದಿಂದ ಶೂನ್ಯವಾಗಿದೆ, ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಅದೇರೀತಿಯಾಗಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮವು... ಮನೋವಿಞ್ಞಾನವು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನತನದಿಂದ ಶೂನ್ಯವಾಗಿದೆ. ಮನೋಸಂಸ್ಪರ್ಶವು... ಮನೋವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನತನದಿಂದ ಶೂನ್ಯವಾಗಿದೆ. ಆನಂದ, ಹೀಗೆ ಈ ಎಲ್ಲವೂ ಸ್ವಯಂನಿಂದ ಹಾಗು ತನ್ನದು ಎಂಬುದರಿಂದ ಬರಿದಾಗಿರುವುದರಿಂದ ಶೂನ್ಯ ಲೋಕ ಎನ್ನುತ್ತಾರೆ.

35.9.3. ಸಂಖಿತ್ತ ಧಮ್ಮ ಸುತ್ತಂ

86. ಒಂದು ಸಮಯದಲ್ಲಿ ಆಯುಷ್ಮಂತ ಆನಂದರವರು ಭಗವಾನರನ್ನು ಭೇಟಿ ಮಾಡಲು ಆಗಮಿಸಿದರು. ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಪ್ರಶ್ನಿಸಿದರು: ಭಗವಾನರು ನನಗೆ ಸಂಕ್ಷಿಪ್ತವಾಗಿ ಧಮ್ಮವನ್ನು ಉಪದೇಶಿಸುವಂತಾಗಲಿ, ಬಹಳ ಒಳಿತಾಗುವುದು. ಅದರಿಂದಾಗಿ ನಾನು ಏಕಾಂಗಿಯಾಗಿ, ನಿಲರ್ಿಪ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಹಾಗು ದೃಢಪೂರ್ವಕವಾಗಿ ಶ್ರಮಿಸುವಂತಾಗಲಿ.
ಇದನ್ನು ಹೇಗೆ ಭಾವಿಸುವೆ ಆನಂದ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖದಂತಹ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ.... ಚಕ್ಷುಸಂಸ್ಪರ್ಶದಿಂದ ಉದಯಿಸುವ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ನಾಲಿಗೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾವಿಞ್ಞಾನ, ಜಿಹ್ವಾಸಂಸ್ಪರ್ಶ... ಮನೋಸಂಸ್ಪರ್ಶದಿಂದ ಉಂಟಾದ ಸುಖವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅವು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅವನ್ನು ಇದು ನನ್ನದು, ಇದು ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಆನಂದ, ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ... ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ... ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ... ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗಿಯಾದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನ ಹೊಂದುತ್ತಾನೆ: ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಇನ್ನೇನು ಉಳಿದಿಲ್ಲ, ಪುನರ್ಜನ್ಮವಿಲ್ಲ ಎಂದು ಅರಿಯುತ್ತಾನೆ.

35.9.4. ಚನ್ನ ಸುತ್ತಂ

87. ಒಮ್ಮೆ ಭಗವಾನರು ರಾಜಗೃಹದ ವೇಳುವನದ ಅಳಿಲುಧಾಮದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಆಯುಷ್ಮಂತ ಸಾರಿಪುತ್ತರು ಅಯುಷ್ಮಂತ ಮಹಾಚುಂದರು ಹಾಗು ಆಯುಷ್ಮಂತ ಛನ್ನರು ಗೃದ್ಧಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಆಯುಷ್ಮಂತ ಚನ್ನರಿಗೆ ರೋಗಭಾದೆಯಾಯಿತು. ಅಪಾರ ನೋವುಳ್ಳ ಭೀಕರ ಕಾಯಿಲೆಗೆ ತುತ್ತಾದರು. ಆಗ ಸಂಜೆ ಸಮಯದಲ್ಲಿ ಆಯುಷ್ಮಂತ ಸಾರಿಪುತ್ತರು ಏಕಾಂತ ಧ್ಯಾನದಿಂದೆದ್ದು, ಆಯುಷ್ಮಂತರಾದ ಮಹಾಚುಂದರವರ ಬಳಿಗೆ ಬಂದರು ಹಾಗು ಹೀಗೆ ನುಡಿದರು. ಬಾ ಅಯುಷ್ಮಂತ ಚುಂದನೇ, ನಾವು ಆಯುಷ್ಮಂತ ಛನ್ನರ ಬಳಿಗೆ ಹೋಗಿ ಆತನ ಕುಶಲವನ್ನು ಕೇಳೋಣ.
ಆಯಿತು ಮಿತ್ರನೇ ಎಂದು ಆಯುಷ್ಮಂತ ಮಹಾಚುಂದರು ಉತ್ತರಿಸಿದರು. ಆಗ ಆಯುಷ್ಮಂತ ಛನ್ನರವರ ಬಳಿಗೆ ಬಂದರು. ಕುಶಲ ಕ್ಷೇಮವನ್ನು ವಿಚಾರಿಸಿ ತಮ್ಮ ಆಸನಗಳಲ್ಲಿ ಕುಳಿತರು. ನಂತರ ಆಯುಷ್ಮಂತ ಸಾರಿಪುತ್ತರವರು ಹೀಗೆ ಕೇಳಿದರು: ಆಯುಷ್ಮಂತ ಛನ್ನ ಕುಶಲವಷ್ಟೇ, ನಿನ್ನ ಕಾಯಿಲೆಯು ಕ್ಷೀಣವಾಗುತ್ತಿದೆ ಅಲ್ಲವೇ? ನೀನು ಗುಣಮುಖನಾಗುತ್ತಿರುವೆ, ಸರ್ವವನ್ನು ಸಹಿಸುತ್ತಿರುವೆ ಎಂದು ನಾವು ಭಾವಿಸುವೆವು. ನಿನ್ನಲ್ಲಿ ಅಹಿತಕರ ವೇದನೆಗಳು ಕ್ಷೀಣವಾಗಿ ಇನ್ನಿಲ್ಲವಾಗುತ್ತವೆ ಎಂದು ಭಾವಿಸುವೆವು. ಹಾಗೆಯೇ ಆರೋಗ್ಯ ವೃದ್ಧಿಯಾಗುತ್ತಿದೆ ಎಂದು ಭಾವಿಸುವೆವು.
ಆಯುಷ್ಮಂತ ಸಾರಿಪುತ್ತರೇ, ನನ್ನಿಂದ ಸಹಿಸಲಾಗುತ್ತಿಲ್ಲ, ಬಹುಶಃ ನಾನು ಗುಣಮುಖನಾಗುವುದಿಲ್ಲ. ಪ್ರಬಲವಾದ ನೋವಿನ ವೇದನೆಗಳು ನನ್ನಲ್ಲಿ ವೃದ್ಧಿಯಾಗುತ್ತಿವೆ, ಕಡಿಮೆಯಾಗುತ್ತಿಲ್ಲ. ಹಾಗೆಯೇ ಇವು ಸ್ಪಷ್ಟವಾಗಿ ತೋರುತ್ತಿವೆ. ಹೇಗೆಂದರೆ ಬಲಿಷ್ಠ ವ್ಯಕ್ತಿಯೊಬ್ಬನು ಹರಿತವಾದ ಖಡ್ಗದಿಂದ ತಲೆಯನ್ನು ಹೋಳು ಮಾಡುವಂತೆ, ಪ್ರಬಲವಾದ ವಾಯುವು ನನ್ನ ತಲೆಯೊಳಗೆ ಆಕ್ರಮಣ ಮಾಡಿದೆ. ನನ್ನಿಂದ ಸಹಿಸಲಾಗುತ್ತಿಲ್ಲ. ಹೇಗೆಂದರೆ ಬಲಿಷ್ಠ ವ್ಯಕ್ತಿಯೊಬ್ಬನು ತಲೆಗೆ ಚರ್ಮದ ಪಟ್ಟಿಯನ್ನು ಕಟ್ಟಿ ಅತಿ ಬಿಗಿಗೊಳಿಸುವಂತೆ ಪ್ರಬಲವಾದ ನೋವು ತಲೆಸುತ್ತಲು ಆವರಿಸಿದೆ, ನನ್ನಿಂದ ಸಹಿಸಲಾಗುತ್ತಿಲ್ಲ. ಹೇಗೆಂದರೆ ಕುಶಲಿ ಕಟುಕನೊಬ್ಬನೊ ಅಥವಾ ಆತನ ಸಹಾಯಕನೋ ಎತ್ತಿನ ಹೊಟ್ಟೆಯನ್ನು ಹರಿತವಾದ ಕಠಾರಿಯಿಂದ ಸಿಗಿದು ಹಾಕುವಂತೆ ಪ್ರಬಲವಾದ ವಾಯುವು ನನ್ನ ಹೊಟ್ಟೆಯ ಸುತ್ತಲೂ ಆವರಿಸಿದೆ. ನನ್ನಿಂದ ಸಹಿಸಲು ಆಗುತ್ತಿಲ್ಲ. ಹೇಗೆಂದರೆ ಇಬ್ಬರು ಬಲಿಷ್ಠ ವ್ಯಕ್ತಿಗಳು ಒಬ್ಬ ದುರ್ಬಲನನ್ನು ಎತ್ತಿಕೊಂಡು ಹೋಗಿ ಕೆಂಡಗಳ ಹಳ್ಳದ ಮೇಲಿಟ್ಟು ಸುಡುವಂತೆ ಇಡೀ ದೇಹವೆಲ್ಲಾ ಉರಿಯು ಆವರಿಸಿದೆ. ನನ್ನಿಂದ ಸಹಿಸಲು ಆಗುತ್ತಿಲ್ಲ. ನಾನು ಗುಣಮುಖನಾಗಲಾರೆ. ಪ್ರಬಲವಾದ ನೋವಿನ ಸಂವೇದನೆಗಳು ವೃದ್ಧಿಯಾಗುತ್ತಿವೆ ಹೊರತು ಕ್ಷೀಣಿಸುತ್ತಿಲ್ಲ. ಇದು ಸ್ಪಷ್ಟವಾಗಿ ತೋರುತ್ತಿದೆ. ಇದನ್ನೆಲ್ಲಾ ತಡೆಯಲು ಆಗದೆ ಚೂರಿಯನ್ನು ಇಟ್ಟುಕೊಂಡಿರುವೆ, ನನಗೆ ಜೀವನದ ಬಯಕೆಯಿಲ್ಲ.
ಸಾರಿಪುತ್ತರು ಓ ಛನ್ನ, ದಯವಿಟ್ಟು ಚೂರಿಯನ್ನು ಬಳಸಿ ಆತ್ಮಹತ್ಯೆಗೆ ಯತ್ನಿಸಬೇಡ, ಆಯುಷ್ಮಂತ ಛನ್ನ ದೀಘರ್ಾಯುವಾಗಿ ಸುಖಿಯಾಗಿ ಜೀವಿಸಲಿ. ಛನ್ನರಿಗೆ ಅಹಾರದ ಸಮಸ್ಯೆಯಾದರೆ, ನಾನು ಹುಡುಕಿ ತರುವೆ. ಔಷಧಿಯನ್ನು ಸಹಾ ತರುವೆ. ಛನ್ನರಿಗೆ ಯೋಗ್ಯ ಸಹಾಯಕನ ಅಗತ್ಯಬಿದ್ದರೆ ನಾನೇ ಸೇವಕನಾಗಿ ಸೇವೆ ಮಾಡುವೆ. ಹಾಗಾಗಿ ಛನ್ನ ಚೂರಿ ಬಳಸುವುದು ಬೇಡ. ಆಯುಷ್ಮಂತ ಛನ್ನ ಜೀವಿಸಲಿ, ನಾವೆಲ್ಲಾ ಛನ್ನರ ಜೀವಿತವನ್ನು ಬಯಸುವೆವು.
ಆಯುಷ್ಮಂತ ಸಾರಿಪುತ್ತರೇ, ನನಗೆ ಆಹಾರದ ಕೊರತೆಯೇನಿಲ್ಲ, ನನಗೆ ಯೋಗ್ಯವಾದ ಆಹಾರವೂ ಸಿಗುತ್ತಿದೆ, ನನಗೆ ಔಷಧಿಯು ಸಿಗುತ್ತಿಲ್ಲ ಎಂದಲ್ಲ, ಯೋಗ್ಯವಾದ ಔಷಧಿಗಳು ಇವೆ. ನನಗೆ ಸಹಾಯ ಮಾಡುವ ಸಹಾಯಕರು ಇಲ್ಲವೆಂದಲ್ಲ, ಅವರು ಸಹಾ ಇದ್ದಾರೆ. ಅಷ್ಟೇ ಅಲ್ಲದೆ ಬಹುಕಾಲದಿಂದ ಗುರುಗಳಿಗೆ ಒಪ್ಪುವ ರೀತಿಯಲ್ಲೇ ಸೇವೆಯು ನನ್ನಿಂದ ಆಗಿದೆ. ಹೀಗಾಗಿ ಸಾರಿಪುತ್ತರೇ ನೆನಪಿಡಿ, ಭಿಕ್ಷು ಚನ್ನ ಈ ಚೂರಿಯನ್ನು ನಿಂದಾತೀತವಾಗಿ ಬಳಸುತ್ತಾನೆ.
ನಾವು ಆಯುಷ್ಮಂತ ಚನ್ನನ ಬಳಿಯಲ್ಲಿ ಕೆಲವು ವಿಷಯಗಳ ಬಗ್ಗೆ ಮಾತನಾಡಬೇಕೆಂದಿದ್ದೇವೆ, ಚನ್ನ ಉತ್ತರಿಸುವ ಕೃಪೆ ತೋರಲಿ.
ಆಯುಷ್ಮಂತ ಸಾರಿಪುತ್ತರೇ, ಕೇಳಿರಿ, ಕೇಳಿದಾಗಲೇ ನನಗೂ ಅರಿವಾಗುವುದು.
ಆಯುಷ್ಮಂತ ಛನ್ನ, ನೀನು ಚಕ್ಷುವಿಞ್ಞಾನಕ್ಕೆ ಹಾಗು ಚಕ್ಷುವಿಞ್ಞಾನಕ್ಕೆ ಗೋಚರವಾಗಬಲ್ಲ ವಿಷಯಗಳ ಬಗ್ಗೆ ಹೀಗೆ ಪರಿಗಣಿಸುವೆಯಾ? ಇದು ನನ್ನದು, ಇದು ನಾನು, ಇದೇ ನನ್ನ ಆತ್ಮವೆಂದು? ಹಾಗೆಯೇ ಕಿವಿ ಹಾಗು ಶ್ರೋತಪಞ್ಞಾನಕ್ಕೆ... ಮೂಗು ಮತ್ತು ಘ್ರಾಣವಿಞ್ಞಾನಕ್ಕೆ... ನಾಲಿಗೆ ಮತ್ತು ಜಿಹ್ವಾವಿಞ್ಞಾಣಕ್ಕೆ... ಕಾಯ ಹಾಗು ಕಾಯವಿಞ್ಞಾನಕ್ಕೆ... ಮನಸ್ಸು ಮತ್ತು ಮನೋವಿಞ್ಞಾಕ್ಕೆ ಹಾಗು ಮಾನಸಿಕ ವಿಷಯಗಳ ಬಗ್ಗೆ ಹೀಗೆ ಪರಿಗಣಿಸುವೆಯಾ, ಇದು ನನ್ನದು, ಇದು ನಾನು, ಇದೇ ನನ್ನ ಆತ್ಮವೆಂದು.
ಮಿತ್ರ ಸಾರಿಪುತ್ತ, ನಾನು ಚಕ್ಷುವಿಗೆ, ಚಕ್ಷುವಿಞ್ಞಾನಕ್ಕೆ ಮತ್ತು ಚಕ್ಷುವಿಞ್ಞಾನದಿಂದ ಗ್ರಹಿಸಬಲ್ಲ ವಿಷಯಗಳನ್ನು ಹೀಗೆ ಪರಿಗಣಿಸುವೆನು. ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ. ಅದೇರೀತಿಯಾಗಿ ಕಿವಿಗೆ... ಮೂಗಿಗೆ... ನಾಲಿಗೆಗೆ... ದೇಹಕ್ಕೆ... ಮನಸ್ಸಿಗೆ... ಮನೋವಿಞ್ಞಾನಕ್ಕೆ ಹಾಗು ಮನೋವಿಞ್ಞಾನದ ವಿಷಯಗಳ ಕುರಿತು ಹೀಗೆ ಪರಿಗಣಿಸುತ್ತೇನೆ, ಇದು ನನ್ನದಲ್ಲ, ಇದು ನಾನಲ್ಲ ಹಾಗು ಇದು ನನ್ನ ಆತ್ಮವಲ್ಲ.
ಮಿತ್ರ ಛನ್ನನೇ, ಏನನ್ನು ನೀನು ನೋಡಿರುವೆಯೋ ಮತ್ತು ನೇರವಾಗಿ ಚಕ್ಷುವಿನಿಂದ ಏನನ್ನು ನೋಡಿರುವೆಯೋ ಮತ್ತು ಯಾವ ವಿಷಯಗಳನ್ನು ನೀನು ಚಕ್ಷುವಿಞ್ಞಾನದಿಂದ ಮತ್ತು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ. ಏನನ್ನು ನೀನು ಕಿವಿಯಿಂದ ಕೇಳಿರುವೆಯೋ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮನೋ ವಿಞ್ಞಾನದಿಂದ ಗ್ರಹಿಸಬಹುದಾದ ವಿಷಯಗಳನ್ನು ನೀನು ಹೀಗೆ ಪರಿಗಣಿಸುವೆ, ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ.
ಆಯುಷ್ಮಂತ, ಸಾರಿಪುತ್ತರೇ, ನಾನು ನೇರವಾಗಿ ಚಕ್ಷು ನಿರೋಧವನ್ನು ಅರಿತಿರುವುದರಿಂದಾಗಿ, ನಾನು ನೋಡಿರುವುದರಿಂದಾಗಿ ನಾನು ಚಕ್ಷು, ರೂಪಗಳನ್ನು, ಚಕ್ಷು ವಿಞ್ಞಾನವನ್ನು ಹೀಗೆ ಪರಿಗಣಿಸುವೆನು ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ. ಅದೇರೀತಿಯಾಗಿ ನಾನು ಶ್ರೋತ ನಿರೋಧವನ್ನು... ಘ್ರಾಣ ನಿರೋಧವನ್ನು... ಜಿಹ್ವಾ ನಿರೋಧವನ್ನು... ಕಾಯ ನಿರೋಧವನ್ನು... ಮನೋ ನಿರೋಧವನ್ನು ಅರಿತಿರುವುದರಿಂದಾಗಿ, ನೇರವಾಗಿ ನೋಡಿರುವುದರಿಂದಾಗಿ ನಾನು ಮನೋವಿಞ್ಞಾನವನ್ನು ಹಾಗು ಮಾನಸಿಕ ವಿಷಯಗಳನ್ನು ಹೀಗೆ ಪರಿಗಣಿಸುವೆನು, ಇವು ನನ್ನದಲ್ಲ, ಇವು ನಾನಲ್ಲ ಮತ್ತು ಇವು ನನ್ನ ಆತ್ಮವಲ್ಲ.
ಹೀಗೆ ನುಡಿದಾಗ ಆಯುಷ್ಮಂತ ಮಹಾಚುಂದರು ಛನ್ನರಿಗೆ ಹೀಗೆ ಹೇಳಿದರು: ಮಿತ್ರ ಛನ್ನನೇ, ಆದ್ದರಿಂದ ಭಗವಾನರ ಬೋಧನೆಯನ್ನು ನಿರಂತರ ಗಮನ ನೀಡುವಂತಾಗು. ಯಾರು ಅವಲಂಬಿತನಾಗಿರುತ್ತಾನೆ, ಆತನು ಅಸ್ಥಿರನಾಗುತ್ತಾನೆ ಹಾಗು ಯಾರು ನಿರವಲಂಬಿಯಾಗಿರುತ್ತಾನೋ ಆತನು ನಿಶ್ಚಲನಾಗುತ್ತಾನೆ. ಯಾವಾಗ ನಿಶ್ಚಲತೆಯಿರುವುದು, ಆಗ ಪ್ರಶಾಂತತೆಯಿರುತ್ತದೆ. ಯಾವಾಗ ಪ್ರಶಾಂತತೆಯಿರುವುದು, ಆಗ ಬಾಗುವಿಕೆಯಿರುವುದಿಲ್ಲ. ಯಾವಾಗ ಬಾಗುವಿಕೆಯಿರುವುದಿಲ್ಲವೋ ಆಗ ಯಾವುದೇ ಬರುವಿಕೆ ಹಾಗು ಹೋಗುವಿಕೆಗಳು ಇರುವುದಿಲ್ಲ. ಯಾವಾಗ ಬರುವಿಕೆ ಹಾಗು ಹೋಗುವಿಕೆ ಇರುವುದಿಲ್ಲವೋ ಆಗ ಯಾವುದೇ ಮರೆಯಾಗುವಿಕೆ ಹಾಗು ಆಗಮಿಸುವಿಕೆ ಇರುವುದಿಲ್ಲ. ಯಾವಾಗ ಯಾವುದೇ ಮರೆಯಾಗುವಿಕೆ ಹಾಗು ಆಗಮಿಸುವಿಕೆ ಇರುವುದಿಲ್ಲವೋ ಆಗ ಯಾವುದೇ ಸಾವಾಗಲಿ ಹಾಗು ಪುನರ್ಜನ್ಮವಿರುವುದಿಲ್ಲ. ಆಗ ಇಲ್ಲಿಯು ಇರುವುದಿಲ್ಲ, ಆಚೆಯು ಇರುವುದಿಲ್ಲ, ಮಧ್ಯದಲ್ಲಿಯು ಇರುವುದಿಲ್ಲ. ಇದೇ ದುಃಖದ ಅಂತ್ಯವಾಗಿದೆ.
ಹೀಗೆ ಆಯುಷ್ಮಂತ ಸಾರಿಪುತ್ತ ಹಾಗು ಆಯುಷ್ಮಂತ ಮಹಾಚುಂದರವರು ಆಯುಷ್ಮಂತ ಛನ್ನರವರಿಗೆ ಬೋಧಿಸಿ, ತಮ್ಮ ಪೀಠದಿಂದ ಎದ್ದುಹೊರಟರು. ಅವರು ಹೋದನಂತರ ಆಯುಷ್ಮಂತ ಛನ್ನರವರಿಗೆ ನೋವುಗಳು ಅತಿಯಾಗಿ ಸಹಿಸಲು ಅಸಾಧ್ಯವಾಯಿತು. ಹೀಗಾಗಿ ಛನ್ನರವರು ಚೂರಿಯನ್ನು ಬಳಸಿಬಿಟ್ಟರು. ಅಂದರೆ ಸ್ವಹತ್ಯೆಗೆ ಪ್ರಯತ್ನಿಸಿದರು. ಆದರೆ ಅಂತಿಮ ಕ್ಷಣಗಳಲ್ಲಿ ಪರಿನಿಬ್ಬಾಣ ಸಾಧಿಸಿದರು. ಹೀಗೆ ಅವರು ನಿಂದಾತೀತವಾಗಿ ಸ್ವಹತ್ಯೆ ಮಾಡಿಕೊಂಡರು. ಪರಿನಿಬ್ಬಾಣ ಸಾಧಿಸಿದರು.
ನಂತರ ಸಾರಿಪುತ್ತರು ಭಗವಾನರ ಬಳಿಗೆ ಬಂದರು. ಅವರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೇಳಿದರು: ಭಗವಾನ್, ಆಯುಷ್ಮಂತ ಚುಂದರವರು ಚೂರಿಯ ಬಳಕೆ ಮಾಡಿಬಿಟ್ಟರು. ಅಂದರೆ ಸ್ವಹತ್ಯೆಗೆ ಪ್ರಯತ್ನಿಸಿದರು. ಆದರೆ ಅಂತಿಮ ಕ್ಷಣಗಳಲ್ಲಿ ಪರಿನಿಬ್ಬಾಣ ಸಾಧಿಸಿದರು. ಹೀಗೆ ಅವರು ನಿಂದಾತೀತವಾಗಿ ಸ್ವಹತ್ಯೆ ಮಾಡಿಕೊಂಡರು, ಪರಿನಿಬ್ಬಾಣ ಸಾಧಿಸಿದರು.
ನಂತರ ಸಾರಿಪುತ್ತರು ಭಗವಾನರ ಬಳಿಗೆ ಬಂದರು. ಅವರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು, ನಂತರ ಹೀಗೆ ಕೇಳಿದರು: ಭಗವಾನ್, ಆಯುಷ್ಮಂತ ಚುಂದರವರು ಚೂರಿಯ ಬಳಕೆ ಮಾಡಿಬಿಟ್ಟರು. ಅವರ ಮುಂದಿನ ಗತಿ ಏನಾಗಿದೆ, ಎಲ್ಲಿ ಅವರು ಹುಟ್ಟಿದ್ದಾರೆ?
ಸಾರಿಪುತ್ತ, ಛನ್ನನು ನಿನ್ನ ಹಾಗು ಭಿಕ್ಖು ಸಮೂಹದ ಮುಂದೆಯೇ ನಿಂದಾತೀತತೆಯನ್ನು ಸ್ಪಷ್ಟಪಡಿಸಲಿಲ್ಲವೇ?
ಭಗವಾನ್, ಇಲ್ಲಿ ವಜ್ಜಿಗಳ ಹಳ್ಳಿಯಿದೆ, ಅದರ ಹೆಸರು ಪುಬ್ಬವಿಜ್ಝಾನ. ಅಲ್ಲಿ ಆಯುಷ್ಮಂತ ಛನ್ನನ ಮಿತ್ರರು, ಕುಟುಂಬದವರು ಎಲ್ಲರೂ ಇದ್ದಾರೆ. ಸಾರಿಪುತ್ತ, ಆಯುಷ್ಮಂತ ಛನ್ನನು ನಿಜಕ್ಕೂ ಆ ಕುಟುಂಬಗಳೊಡನೆ ಮೈತ್ರಿಯಿಂದ ಇದ್ದನು. ಆತ್ಮೀಯತೆಯಿಂದ ಇದ್ದನು, ಸತ್ಯಕ್ಕೆ ಪೂರ್ವಕವಾಗಿ ಇದ್ದನು. ಆದರೆ ಈ ಮಟ್ಟಿಗೆ ನಿಂದಾರ್ಹವೆಂದು ನಾನು ಹೇಳುವುದಿಲ್ಲ. ಸಾರಿಪುತ್ತ, ಯಾವಾಗ ಒಬ್ಬನು ಈ ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಪಡೆದು ಪುನರ್ಜನ್ಮ ತಾಳುತ್ತಾನೊ, ಆತನಿಗೆ (ಆರ್ಯರ ಭಾಷೆಯಲ್ಲಿ) ನಿಂದಾರ್ಹನೆನ್ನುತ್ತಾರೆ. ಆದರೆ ಛನ್ನನ ವಿಷಯದಲ್ಲಿ ಈ ರೀತಿ ಆಗಲಿಲ್ಲ. (ಅಂದರೆ ಆತ್ಮಹತ್ಯೆಯು ನಿಂದಾರ್ಹವಾಗುತ್ತದೆ. ಆದರೆ ಛನ್ನನು ಆತ್ಮಹತ್ಯೆಗೆ ಯತ್ನಿಸಿ ಅಂತಿಮ ಕ್ಷಣದಲ್ಲಿ ಕಶ್ಮಲರಹಿತನು, ಆಸ್ರವರಹಿತನೂ ಆಗಿ ಪರಿನಿಬ್ಬಾಣ ಪಡೆದದ್ದರಿಂದಾಗಿ ಮುಂದೆ ಪುನರ್ಜನ್ಮ ಪಡೆಯಲಿಲ್ಲವಾದುದ್ದರಿಂದಾಗಿ ಆತನು ನಿಂದಾತೀತ) ಹೀಗಾಗಿ ಛನ್ನ ಚೂರಿಯನ್ನು ನಿಂದತೀತವಾಗಿ ಬಳಸಿದ್ದಾನೆ, ಹೀಗೆ ಸಾರಿಪುತ್ತ ನೀನು ನೆನಪಿಡಬೇಕು.

35.9.5. ಪುಣ್ಣ ಸುತ್ತಂ

88. ಆಗ ಆಯುಷ್ಮಂತ ಪುಣ್ಣರವರು ಭಗವಾನರ ಬಳಿಗೆ ಸಮೀಪಿಸಿದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು, ನಂತರ ಹೀಗೆ ಕೋರಿಕೊಂಡರು: ಭಂತೆ, ನನಗೆ ಒಳಿತಾಗುವುದು ಭಗವಾನರು ಸಂಕ್ಷಿಪ್ತವಾಗಿ ಧಮ್ಮವನ್ನು ಉಪದೇಶಿಸುವಂತಾಗಲಿ, ಅದರಿಂದಾಗಿ ಧಮ್ಮವನ್ನು ಆಲಿಸಿ ನಾನು ಏಕಾಂತವಾಸಿಯಾಗಿ ಎಲ್ಲದರಿಂದ ವಿಮುಖನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತಾಪೂರ್ವಕವಾಗಿ ಪರಿಶ್ರಮದಿಂದ ವಿಹರಿಸುವೆನು.
ಪುಣ್ಣ, ಇಲ್ಲಿ ಚಕ್ಷುವಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ, ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಆನಂದಮಯವಾಗಿರುವಂತಹವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅದರಲ್ಲಿ ಅಂಟಿಕೊಂಡರೆ ಆತನಲ್ಲಿ ಆನಂದವು ಉಂಟಾಗುತ್ತದೆ. ಹೀಗೆ ಈ ಬಗೆಯ ಆನಂದದ ಉದಯದ ಹಿಂದೆ ದುಃಖದ ಉದಯವೂ ಆಗುತ್ತದೆ. ಹೀಗೆ ನಾನು ಹೇಳುತ್ತೇನೆ, ಪುಣ್ಣ ಇಲ್ಲಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಸಿಬಹುದಾದ ಮಾನಸಿಕ ವಿಷಯಗಳು (ಧಮ್ಮ) ಇವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಆನಂದಮಯವಾಗಿರುವಂತಹವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅದರಲ್ಲಿ ಅಂಟಿಕೊಂಡರೆ ಆತನಲ್ಲಿ ಆನಂದವು ಉಂಟಾಗುತ್ತದೆ. ಹೀಗೆ ಈ ಬಗೆಯ ಆನಂದದ ಉದಯದಿಂದಾಗಿ ದುಃಖದ ಉದಯವು ಆಗುತ್ತದೆ, ಹೀಗೆ ನಾನು ಹೇಳುತ್ತೇನೆ.
ಪುಣ್ಣ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಆನಂದಮಯವಾಗಿರುವಂತಹುದು. ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕದಿದ್ದರೆ, ಅವನ್ನು ಸ್ವಾಗತಿಸದಿದ್ದರೆ, ಅವಕ್ಕೆ ಅಂಟಿಕೊಳ್ಳದಿದ್ದರೆ, ಆತನಲ್ಲಿ ಇಂದ್ರೀಯಾನಂದವು ನಾಶವಾಗುತ್ತದೆ. ಹೀಗೆ ಆನಂದದ ನಿರೋಧದಿಂದ ಪುಣ್ಣ ದುಃಖದ ನಿರೋಧವೆಂದು ನಾನು ಹೇಳುತ್ತಿದ್ದೇನೆ.
ಓ ಪುಣ್ಣ, ನೀನು ಈಗ ನನ್ನಿಂದ ಸಂಕ್ಷಿಪ್ತವಾಗಿ ಧಮ್ಮವನ್ನು ಸ್ವೀಕರಿಸಿರುವೆ, ಪುಣ್ಣ, ನೀನು ಯಾವ ಜನಪದದಲ್ಲಿ (ರಾಜ್ಯ) ವಾಸಿಸುತ್ತಿರುವೆ? - ಭಂತೆ ನಾನು ಸುನಾಪರಂತ ಎಂಬ ಜನಪದದಲ್ಲಿ ವಾಸಿಸುತ್ತಿರುವೆನು.
ಪುಣ್ಣ, ಸುನಾಪರಂತದ ಜನವಾಸಿಗಳು ವ್ಯಗ್ರರು ಹಾಗು ಒರಟರಾಗಿದ್ದಾರೆ, ಅವು ನಿನಗೆ ಬೈದರೆ ಹಾಗು ಕೆಟ್ಟ ಪದಗಳಿಂದ ಹೆಸರಿಡಿದು ಕರೆಯಬಹುದು. ಅದರ ಬಗ್ಗೆ ಏನು ಯೋಚಿಸುವೆ?
ಸುನಾಪರಂತರದ ಜನವಾಸಿಗಳು ವ್ಯಗ್ರರು ಹಾಗು ಒರಟಾಗಿರಬಹುದು. ನನಗೆ ಬೈದು ಕೆಟ್ಟ ಪದಗಳನ್ನಾಡಬಹುದು. ಆಗ ನಾನು ಹೀಗೆ ಯೋಚಿಸುವೆ: ಸುನಾಪರಂತದ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಹೊಡೆತಗಳಾಗಲಿ ಮತ್ತು ಮುಷ್ಠಿಯಿಂದ ಗುದ್ದಿಲ್ಲ. ಆಗ ಹೀಗೆ ನಾನು ಯೋಚಿಸುವೆ, ಭಗವಾನರೇ, ನಾನು ಆಗ ಹೀಗೆಯೇ ಯೋಚಿಸುವೆ ಸುಗತರೇ.
ಪುಣ್ಣ, ಆದರೆ ಸುನಾಪರಂತದ ಜನವಾಸಿಗಳು ನಿನಗೆ ಹೊಡೆತಗಳನ್ನು ಹಾಗು ಮುಷ್ಠಿಯ ಪಹಾರಗಳು ನೀಡಿದರು ಎಂದಿಟ್ಟಿಕೊ, ಆಗ ಅದರ ಬಗ್ಗೆ ಏನು ಯೋಚಿಸುವೆ?
ಭಂತೆ, ಸುನಪರಂತದ ಜನವಾಸಿಗಳು ನನಗೆ ಹೊಡೆತಗಳನ್ನು ಹಾಗು ಮುಷ್ಠಿ ಪ್ರಹಾರಗಳನ್ನು ನೀಡಿದಾಗಲು ನಾನು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಹೆಂಟೆಗಳಿಂದ ಹೊಡೆದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ, ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ಸುನಾಪರಂತದ ಜನವಾಸಿಗಳು ನಿನಗೆ ಹೆಂಟೆಗಳಿಂದ ಹೊಡೆದರು ಎಂದಿಟ್ಟಿಕೋ, ಆಗ ಏನು ಯೋಚಿಸುವೆ.
ಭಂತೆ, ಸುನಾಪರಂತ ಜನವಾಸಿಗಳು ನನಗೆ ಹೆಂಟೆಗಳಿಮದ ಹೊಡೆದಾಗಲು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ದಂಡಗಳಿಂದ/ಸಲಾಕೆಗಳಿಂದ ಹೊಡೆದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ. ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ಸುನಾಪರಂತ ಜನವಾಸಿಗಳು ನಿನಗೆ ದಂಡಗಳಿಂದ ಹೊಡೆದರೂ ಎಂದಿಟ್ಟಿಕೋ, ಆಗ ಏನು ಯೋಚಿಸುವೆ?
ಭಂತೆ, ಸುನಾಪರಂತ ಜನವಾಸಿಗಳು ನನಗೆ ದಂಡಗಳಿಂದ ಹೊಡೆದಾಗಲೂ ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಚೂರಿಯಿಂದ ಇರಿದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ, ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ನಿನಗೇನಾದರೂ ಸುನಾಪರಂತ ಜನವಾಸಿಗಳು ಚೂರಿಯಿಂದಲೇ ಇರಿದರು ಎಂದಿಟ್ಟಿಕೋ, ಆಗ ಯಾವರೀತಿ ಯೋಚಿಸುವೆ?
ಭಂತೆ, ನನಗೇನಾದರೂ ಸುನಾಪರಂತ ಜನವಾಸಿಗಳು ಚೂರಿಯಿಂದಲೇ ಇರಿದರು ಸಹಾ ನಾನು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ. ಏಕೆಂದರೆ ಅವರು ಹರಿತವಾದ ಶಸ್ತ್ರಗಳಿಂದ ಕೊಲ್ಲಲಿಲ್ಲ ಹೀಗೆ ನಾನು ಯೋಚಿಸುವೆ ಭಗವಾನರೇ, ಆಗ ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ  ಸುನಾಪರಂತ ಜನವಾಸಿಗಳು ಹರಿತವಾದ ಶಸ್ತ್ರಗಳಿಂದ ನಿನ್ನ ಪ್ರಾಣವನ್ನೇ ತೆಗೆದರು ಎಂದಿಟ್ಟಿಕೊ, ಆಗ ಯಾವರೀತಿ ಯೋಚಿಸುವೆ?
ಭಂತೆ, ಸುನಾಪರಂತ ಜನವಾಸಿಗಳು ಹರಿತವಾದ ಶಸ್ತ್ರಗಳಿಂದ ನನ್ನ ಪ್ರಾಣವನ್ನು ತೆಗೆದರೂ, ನಾನು ಹೀಗೆ ಯೋಚಿಸುವೆ: ಭಗವಾನ್ ಬುದ್ಧರ ಶ್ರಾವಕ ಸಂಘವು ಕಾಯದ ಬಗ್ಗೆ ಹಾಗು ಜೀವನದ ಬಗ್ಗೆ ಸಾಮಾನ್ಯವಾಗಿ ವಿಕಷರ್ಿತರಾಗುತ್ತಾರೆ, ಅಶುಭವೆಂದೆಣಿಸುತ್ತಾರೆ (ಸುಂದರವಲ್ಲ), ಕ್ಷಣಿಕತೆಯ ಬಗ್ಗೆ ಅರಿತು ವಿರಾಗ ಹೊಂದಿ ಶಸ್ತ್ರಕ್ಕಾಗಿ (ಮರಣಕ್ಕಾಗಿ) ಕಾಯುತ್ತಿರುತ್ತಾರೆ. ಆದರೆ ನನಗಂತು ಹುಡುಕಾಟವಿಲ್ಲದೆ ಈ ಅವಕಾಶ ಸಿಕ್ಕಿತು ಹೀಗೆ ನಾನು ಯೋಚಿಸುವೆ ಭಗವಾನರೇ, ಆಗ ಹೀಗೆಯೇ ಯೋಚಿಸುವೆ ಸುಗತರೇ.
ಸಾಧು ಸಾಧು ಪುಣ್ಯ! ಸ್ವಸಂಯಮದಿಂದ ಹಾಗು ಶಾಂತತೆಯುತನಾಗಿ, ನೀನು ಸುನಾಪರಂತ ಜನಪದದಲ್ಲಿ ವಿಹರಿಸಲು ಅರ್ಹನಾಗಿದ್ದೀಯೆ. ಈಗ ಪುಣ್ಣ ನಿನಗೆ ಯೋಗ್ಯವೆನಿಸಿದಂತೆ ಮಾಡಬಹುದು.
ಭಗವಾನರ ಈ ನುಡಿಗಳಿಂದ ಆನಂದಿತನಾದ ಪುಣ್ಣನು ಭಗವಾನರಿಗೆ ಭಕ್ತಿಪೂರ್ವಕವಾಗಿ ವಂದಿಸಿ, ಭಗವಾನರ ಬಲಗಡೆಯಿಂದ ಪ್ರದಕ್ಷಿಣೆಯನ್ನು ಮಾಡಿ ಅಲ್ಲಿಂದ ಹೊರಟನು. ನಂತರ ವಾಸಸ್ಥಳವನ್ನು ನಿರ್ಧರಿಸಿ, ಪಿಂಡಪಾತ್ರೆ ಚೀವರಗಳನ್ನು ಧರಿಸಿ ಸುನಾಪರಂತ ಜನಪದಕ್ಕೆ (ರಾಜ್ಯ) ಬಂದನು ಹಾಗು ಅಲ್ಲಿಯೇ ವಾಸಿಸಿದನು. ನಂತರ ವರ್ಷವಾಸದ ಹೊತ್ತಿಗೆ 500 ಉಪಾಸಕರನ್ನು 500 ಉಪಾಸಿಕೆಯರನ್ನು ಸಿದ್ದಪಡಿಸಿದನು. ತಾನು ಸಹಾ ಅದೇ ವರ್ಷದಲ್ಲಿ ತ್ರಿವಿದ್ಯೆಗಳನ್ನು ಸಾಕ್ಷಾತ್ಕರಿಸಿದನು. ನಂತರ ಅದೇ ವರ್ಷದ ಅಂತ್ಯದಲ್ಲಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿದನು.
ನಂತರ ಅಸಂಖ್ಯಾತ ಭಿಕ್ಷುಗಳು ಭಗವಾನರ ಬಳಿಗೆ ಬಂದರು ಹಾಗು ಹೀಗೆ ಹೇಳಿದರು: ಭಂತೆ, ಪುಣ್ಣ ಎಂಬ ನಾಮಧೇಯ ಹೊಂದಿದಂತಹ ಕುಲಪುತ್ತನು, ತಮ್ಮಿಂದ ಸಂಕ್ಷಿಪ್ತ ಬೋಧನೆಯನ್ನು ಆಲಿಸಿದ್ದನು. ಆತನಿಂದ ಸುನಾಪರಂತದ ಜನಪದದಲ್ಲಿ ಧಮ್ಮ ಹರಡಿದೆ. ಆತನು ಮೃತ್ಯುವಶನಾಗಿರುವನು, ಆತನ ಭವಿಷ್ಯವೇನು? ಆತನು ಎಲ್ಲಿ ಪುನರ್ಜನ್ಮ ಪಡೆದಿರುವನು.
ಭಿಕ್ಷುಗಳೇ, ಪುಣ್ಣ ಪಂಡಿತನಾಗಿದ್ದನು (ಜ್ಞಾನಿ), ಆತನು ಧಮ್ಮಾನುಸಾರವಾಗಿ ಜೀವನ ನಡೆಸಿದ್ದಾನೆ. ಧಮ್ಮದ ವಿಚಾರದಲ್ಲಿ ಆತನು ಯಾವುದೇ ರೀತಿಯ ತೊಂದರೆ ನೀಡಿಲ್ಲ. ಕುಲಪುತ್ರ ಪಂಡಿತ ಪುಣ್ಣ ಪರಿನಿಬ್ಬಾಣ ಸಾಧಿಸಿದ್ದಾನೆ ಎಂದರು.

35.9.6. ಬಾಹಿಯ ಸುತ್ತಂ

89. ಆಗ ಆಯುಷ್ಮಂತ ಬಾಹಿಯಾ ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೋರಿಕೊಂಡನು: ಭಂತೆ, ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ವಿವರಿಸಲಿ, ಅದರಿಂದಾಗಿ ನಾನು ಏಕಾಂತವಾಸಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತೆಯಿಮದ ಕೂಡಿ ವಾಸಿಸುವಂತಾಗಲಿ.
ಇದನ್ನು ಹೇಗೆ ಭಾವಿಸುವೆ, ಬಾಹಿಯಾ ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕರವೋ ಅಥವಾ ಸುಖಕರವೋ.
ದುಃಖಕಾರಕ ಭಂತೆ.
ಮತ್ತೆ ಯಾವುದು ಅನಿತ್ಯವೋ, ದುಃಖಕಾರಕವೋ ವಿಪರಿಣಾಮಧಮ್ಮ ಹೊಂದಿದೆಯೋ ಅದನ್ನು ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ.
ಅನಿತ್ಯ ಭಂತೆ.
ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಮತ್ತೆ ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅದನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಚಕ್ಷುಸಂಸ್ಪರ್ಶದಿಂದ ವಿಕಷರ್ಿತನಾಗುತ್ತಾನೆ... ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ. ಅದರಿಂದಾಗಿ ಉಂಟಾದ ಪ್ರಿಯ/ಅಪ್ರಿಯ/ತಟಸ್ಥ ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ, ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಇನ್ನೇನು ಉಳಿದಿಲ್ಲ, ಭವವಿಲ್ಲ ಎಂದು ಅರಿಯುತ್ತಾನೆ.
ಇದನ್ನು ಆಲಿಸಿದಂತಹ ಬಾಹಿಯನು ಆನಂದಿತನಾದನು, ಅಭಿವಂದಿಸಿದನು. ನಂತರ ಭಗವಾನರಿಗೆ ವಂದಿಸಿ, ಬಲಗಡೆಯಿಂದ ಪ್ರದಕ್ಷಿಣೆ ಮಾಡಿದನು. ನಂತರ ಅಲ್ಲಿಂದ ಹೊರಟಂತಹ ಬಾಹಿಯನು ಏಕಾಂತವಾಸಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತಾಪೂರ್ವಕ ಸಾಧನೆ ಮಾಡಿ ವಿಹರಿಸಿದನು. ನಂತರ ತನ್ನಿಂದ ತಾನೇ ಅಭಿಜ್ಞಾಸಹಿತ ಜ್ಞಾನೋದಯ ಪಡೆದನು. ಯಾವುದಕ್ಕಾಗಿ ಕುಲಪುತ್ತರು ಗೃಹಜೀವನದಿಂದ ಅನಿಕೇತನನಾಗಿ ವಿಮುಕ್ತನಾದನು. ನಂತರ ವಿಮುಕ್ತಿ ಜ್ಞಾನವನ್ನು ಪಡೆದನು. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಇನ್ನು ಸ್ಥಿತಿಯ ಜೀವಿಯಲ್ಲ ಎಂದು ಅರಿತನು. ಆಯುಷ್ಮಂತ ಬಾಹಿಯನು ಅರಹಂತರಲ್ಲಿ ಒಬ್ಬನಾದನು.

35.9.7. ಪಠಮ ಏಜಾ ಸುತ್ತಂ

(ಏಜಾ ಎಂದರೆ ಕಲಕಿರುವಿಕೆ/ಚಲನೆ/ತೀವ್ರ ಬಯಕೆ)
90. ಭಿಕ್ಷುಗಳೇ, ಕಲಕಿರುವಿಕೆ (ತೀವ್ರ ಬಯಕೆಯಲ್ಲಿರುವಿಕೆ) ರೋಗದಂತೆ, ಗಡ್ಡೆಯಂತೆ, ಶಲ್ಯದಂತೆ (ಮುಳ್ಳಿನಂತಿರುವ ಎಸೆಯುವ ಅಸ್ತ್ರ). ಆದ್ದರಿಂದ ಭಿಕ್ಷುಗಳೇ, ತಥಾಗತರು ಕದಲಿಕೆಯಿಲ್ಲದೆ ಸ್ಥಿರವಾಗಿರುತ್ತಾರೆ, ಶಲ್ಯತೆಗೆದವರಂತೆ ಶಾಂತವಾಗಿರುತ್ತಾರೆ. ಆದ್ದರಿಂದ ಭಿಕ್ಷುಗಳೇ, ಭಿಕ್ಷುವು ಯಾವರೀತಿ ಹಾರೈಸಿಕೊಳ್ಳಬೇಕು ಎಂದರೆ ನಾನು ನಿಶ್ಚಲನಾಗಿ ವಿಹರಿಸುವಂತಾಗಲಿ, ಶಲ್ಯ ತೆಗೆದವರಂತೆ ಪ್ರಶಾಂತವಾಗಿರಲಿ. ಆತನು ಕಣ್ಣನ್ನು ಗ್ರಹಿಸುವುದಿಲ್ಲ, ಕಣ್ಣಿನಲ್ಲಿ ಗ್ರಹಿಸುವುದಿಲ್ಲ, ಕಣ್ಣಿನ ಮೂಲಕ ಗ್ರಹಿಸುವುದಿಲ್ಲ. ಕಣ್ಣು ನನ್ನದೆಂದು ಗ್ರಹಿಸುವುದಿಲ್ಲ. ಆತನು ರೂಪಗಳನ್ನು ಗ್ರಹಿಸುವುದಿಲ್ಲ, ರೂಪಗಳಲ್ಲಿ ಗ್ರಹಿಸುವುದಿಲ್ಲ, ರೂಪಗಳ ಮೂಲಕ ರೂಪಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಆತನು ಚಕ್ಷು ವಿಞ್ಞಾಣವನ್ನು ಗ್ರಹಿಸುವುದಿಲ್ಲ, ಚಕ್ಷುವಿಞ್ಞಾನದಲ್ಲಿ ಗ್ರಹಿಸುವುದಿಲ್ಲ. ಚಕುವಿಞ್ಞಾನದ ಮೂಲಕ ಗ್ರಹಿಸುವುದಿಲ್ಲ. ಚಕ್ಷುವಿಞ್ಞಾನವನ್ನು ನನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಚಕ್ಷುಸಂಸ್ಪರ್ಶವನ್ನು ಗ್ರಹಿಸುವುದಿಲ್ಲ, ಚಕ್ಷುಸಂಸ್ಪರ್ಶಗಳಲ್ಲಿ ಗ್ರಹಿಸುವುದಿಲ್ಲ, ಚಕ್ಷು ಸಂಸ್ಪರ್ಶದ ಮೂಲಕ ಗ್ರಹಿಸುವುದಿಲ್ಲ. ಆತನು ಚಕ್ಷುಸಂಸ್ಪರ್ಶದಿಂದ ಉಂಟಾದ ಪ್ರಿಯವೇದನೆ, ಅಪ್ರಿಯ ವೇದನೆ, ತಟಸ್ಥ ವೇದನೆಗಳನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳಿಂದ ಗ್ರಹಿಸುವುದಿಲ್ಲ, ವೇದನೆಗಳ ಮೂಲಕ ಗ್ರಹಿಸುವುದಿಲ್ಲ. ವೇದನೆಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಆತನು ಕಿವಿಯನ್ನು ಗ್ರಹಿಸುವುದಿಲ್ಲ... ಘ್ರಾಣವನ್ನು ಗ್ರಹಿಸುವುದಿಲ್ಲ... ಜಿಹ್ವೆಯಿಂದ ಗ್ರಹಿಸುವುದಿಲ್ಲ, ಜಿಹ್ವೆಯನ್ನು ತನ್ನದೆಂದು ಗ್ರಹಿಸುವುದಿಲ್ಲ.... ರಸಗಳನ್ನು ಗ್ರಹಿಸುವುದಿಲ್ಲ... ಜಿಹ್ವಾವಿಞ್ಞಾವನ್ನು ಗ್ರಹಿಸುವುದಿಲ್ಲ, ಜಿಹ್ವಾಸಂಸ್ಪರ್ಶಗಳನ್ನು ಗ್ರಹಿಸುವುದಿಲ್ಲ... ಜಿಹ್ವಾ ಸಂಸ್ಪರ್ಶದಿಂದ ಉಂಟಾಗುವ ವೇದನೆಗಳನ್ನು ಗ್ರಹಿಸುವುದಿಲ್ಲ, ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳ ಮೂಲಕ ಗ್ರಹಿಸುವುದಿಲ್ಲ. ವೇದನೆಗಳನ್ನು ತನ್ನದೆಂದು ಗ್ರಹಿಸುವುದಿಲ್ಲ.
ಕಾಯವನ್ನು ಗ್ರಹಿಸುವುದಿಲ್ಲ... ಮನಸ್ಸನ್ನು ಗ್ರಹಿಸುವುದಿಲ್ಲ, ಮನಸ್ಸಿನಲ್ಲಿ ಗ್ರಹಿಸುವುದಿಲ್ಲ, ಮನಸ್ಸಿನಿಂದ ಗ್ರಹಿಸುವುದಿಲ್ಲ, ಮನಸ್ಸು ತನ್ನದೆಂದು ಗ್ರಹಿಸುವುದಿಲ್ಲ, ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸುವುದಿಲ್ಲ. ಮನೋವಿಞ್ಞಾನವನ್ನು ಗ್ರಹಿಸುವುದಿಲ್ಲ... ಮನೋಸಂಸ್ಪರ್ಶವನ್ನು ಗ್ರಹಿಸುವುದಿಲ್ಲ... ಮನೋಸಂಸ್ಪರ್ಸಗಳಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯವಲ್ಲದ ವೇದನೆಗಳನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳಿಂದ ಗ್ರಹಿಸುವುದಿಲ್ಲ, ವೇದನೆಗಳನ್ನು ತನ್ನದೆಂದು ಗ್ರಹಿಸುವುದಿಲ್ಲ.
ಹೀಗೆ ಯಾವುದನ್ನು ಗ್ರಹಿಸದೆ ಇರುವುದರಿಂದಾಗಿ, ಆತನು ಲೋಕದ ಯಾವುದಕ್ಕೂ ಅಂಟಿಕೊಳ್ಳಲಾರನು. ಯಾವುದಕ್ಕೂ ಅಂಟಿಕೊಳ್ಳದೆ ಇರುವುದಿರಿಂದಾಗಿ ಕ್ಷೊಭೆಗೆ ಒಳಗಾಗುವುದಿಲ್ಲ. ಹೀಗೆ ಅಕ್ಷೊಭೆಯಿಂದ ಇದ್ದದ್ದರಿಂದ ಪರಿನಿಬ್ಬಾಣವನ್ನು ಪಡೆಯುತ್ತಾನೆ. ನಂತರ ವಿಮುಕ್ತಿಜ್ಞಾನವನ್ನು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ (ಪುನರ್ಜನ್ಮವಿಲ್ಲ) ಎಂದು ಅರಿಯುತ್ತಾನೆ.

35.9.8. ದುತಿಯ ಏಜಾ ಸುತ್ತಂ

91. ಭಿಕ್ಷುಗಳೇ, ಕದಡುವಿಕೆಯು (ತೀವ್ರಬಯಕೆ) ರೋಗವಾಗಿದೆ, ಗಡ್ಡೆಯಾಗಿದೆ, ಶಲ್ಯವಾಗಿದೆ. ಆದ್ದರಿಂದಲೇ ಭಿಕ್ಷುಗಳೇ, ತಥಾಗತರು ನಿಶ್ಚಲರಾಗಿ ವಿಹರಿಸುತ್ತಾರೆ, ಅವರಿಂದ ಶಲ್ಯನಿವಾರಣೆಯಾಗಿದೆ. ಆದ್ದರಿಂದಲೇ ಭಿಕ್ಷುಗಳೇ, ಚಕ್ಷುವೇನಾದರೂ ಅಪೇಕ್ಷೆ ಪಡುವುದಾದರೆ, ನಾನು ಕದಡುವಿಕೆಯಿಲ್ಲದೆ, ನಿಶ್ಚಲನಾಗಿ, ಶಲ್ಯವು ನಿವಾರಣೆಯಾಗಲಿ. ಹೀಗಾಗಿ ಆತನು ಕಣ್ಣನ್ನು ಗ್ರಹಿಸದಿರಲಿ. ಹಾಗೆಯೇ ರೂಪಗಳನ್ನು... ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶವನ್ನು... ಚಕ್ಷು ವೇದನೆಗಳನ್ನು ಗ್ರಹಿಸದಿರಲಿ. ಹಾಗೆಯೇ ಇವ್ಯಾವುದನ್ನು ಇದು ನನ್ನದು ಎಂದು ಭಾವಿಸದಿರಲಿ. ಯಾವುದೆಲ್ಲವನ್ನು ಗ್ರಹಿಸದಿರಲಿ, ಯಾವುದರಿಂದಲೂ ಗ್ರಹಿಸದಿರಲಿ, ಯಾವುದನ್ನು ನನ್ನದೆಂದು ಗ್ರಹಿಸದಿರಲಿ. ಈ ರೀತಿಯಾಗಿ ಗ್ರಹಿಸದಿದ್ದಾಗ, ಆತನು ಲೋಕದ ಯಾವುದಕ್ಕೂ ಅಂಟಿಕೊಳ್ಳಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ, ಭವಕ್ಕೆ ಅಂಟಿಕೊಳ್ಳುತ್ತನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಜಿಹ್ವಾವನ್ನು ಗ್ರಹಿಸದಿರಲಿ, ಜಿಹ್ವಾದಲ್ಲಿ ಗ್ರಹಿಸದಿರಲಿ, ಜಿಹ್ವಾದಿಂದ ಗ್ರಹಿಸದಿರಲಿ, ಜಿಹ್ವಾ ನನ್ನದೆಂದು ಗ್ರಹಿಸದಿರಲಿ. ರಸವನ್ನು ಗ್ರಹಿಸದಿರಲಿ... ಜಿಹ್ವಾ ವಿಞ್ಞಾನವನ್ನು... ಜಿಹ್ವಾಸಂಸ್ಪರ್ಶವನ್ನು... ಜಿಹ್ವಾಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳನ್ನು ಗ್ರಹಿಸದಿರಲಿ. ಹೀಗೆ ಯಾವುದೆಲ್ಲವನ್ನು ಗ್ರಹಿಸದಿರಲಿ, ಯಾವುದರಿಂದಲೂ ಗ್ರಹಿಸದಿರಲಿ, ಯಾವುದನ್ನೂ ನನ್ನದೆಂದು ಗ್ರಹಿಸದಿರಲಿ. ಈ ರೀತಿ ಗ್ರಹಿಸದಿದ್ದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ, ಭವಕ್ಕೆ ಅಂಟಿಕೊಳ್ಳುತ್ತಾನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಮನಸ್ಸನ್ನು ಗ್ರಹಿಸದಿರಲಿ, ಮನಸ್ಸಿನಲ್ಲಿ ಗ್ರಹಿಸದಿರಲಿ, ಮನಸ್ಸಿನಿಂದ ಗ್ರಹಿಸದಿರಲಿ, ಮನಸ್ಸು ನನ್ನದೆಂದು ಗ್ರಹಿಸದಿರಲಿ.... ಮನೋವಿಞ್ಞಾನವನು... ಮನೋಸಂಸ್ಪರ್ಶವನ್ನು... ಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಗ್ರಹಿಸದಿರಲಿ. ವೇದನೆಗಳಲ್ಲಿ ಗ್ರಹಿಸದಿರಲಿ, ವೇದನೆಗಳಿಂದ ಗ್ರಹಿಸದಿರಲಿ, ವೇದನೆಗಳನ್ನು ತನ್ನದೆಂದು ಗ್ರಹಿಸದಿರಲಿ. ಈ ರೀತಿ ಗ್ರಹಿಸಿದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ ಭವಕ್ಕೆ ಅಂಟುತ್ತಾನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಆದ್ದರಿಂದಾಗಿ ಭಿಕ್ಷುಗಳೇ, ಖಂಧಗಳಾಗಲಿ, ಧಾತುಗಳಾಗಲಿ, ಇಂದ್ರೀಯ ಆಧಾರಗಳಾಗಲಿ (ಸಳಾಯತನ) ಅವನ್ನು ಗ್ರಹಿಸದಿರಲಿ, ಅವುಗಳಲ್ಲೇ ಗ್ರಹಿಸದಿರಲಿ, ಅವುಗಳಿಂದಲೇ ಗ್ರಹಿಸದಿರಲಿ, ಅವನ್ನು ನನ್ನದೆಂದು ಗ್ರಹಿಸದಿರಲಿ. ಏಕೆಂದರೆ ಹೀಗೆ ಗ್ರಹಿಸಿದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಅಂಟದಿರುವುದರಿಂದಾಗಿ ಯಾವುದೇ ಕ್ಷೊಭೆಗೆ ಒಳಗಾಗುವುದಿಲ್ಲ, ಹೀಗೆ ತಾನಾಗಿಯೇ ನಿಬ್ಬಾಣವನ್ನು ಪಡೆಯುತ್ತಾನೆ. ನಂತರ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.9.9. ಪಠಮ ದ್ವಯ ಸುತ್ತಂ

92. ಭಿಕ್ಷುಗಳೇ, ದ್ವಯ (ಜೋಡಿಗಳ) ಬಗ್ಗೆ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಆಲಿಸಿರಿ. ಯಾವುದು ಭಿಕ್ಷುಗಳೇ, ದ್ವಯವು (ಜೋಡಿಗಳು). ಚಕ್ಷು ಮತ್ತು ರೂಪ, ಶ್ರೋತ ಹಾಗು ಶಬ್ದ, ಘ್ರಾಣ ಹಾಗು ಗಂಧ, ಜಿಹ್ವೆ ಹಾಗು ರಸ, ಕಾಯ ಮತ್ತು ಸ್ಪರ್ಶ, ಮನಸ್ಸು ಹಾಗು ಧಮ್ಮ. ಇದನ್ನೇ ಭಿಕ್ಷುಗಳೇ ದ್ವಯವೆನ್ನುತ್ತಾರೆ.
ಭಿಕ್ಷುಗಳೇ, ಯಾರಾದರೊಬ್ಬ ಹೀಗೆ ಕೇಳಬಹುದು, ನಾನು ಈ ಜೋಡಿಗಳು ಹೊರತು ಬೇರೆ ಜೋಡಿಗಳ ಬಗ್ಗೆ ಹೇಳುವೆನು. ಆದರೆ ಅದು ಕೇವಲ ಆತನ ಸ್ವಪ್ರಶಂಸೆಯಾಗಿದೆ. ಆತನಿಗೆ ಯಾರಾದರೂ ಪ್ರಶ್ನಿಸಿದರೆ ಆತನು ಉತ್ತರಿಸಲು ಅಸಮರ್ಥನಾಗುತ್ತಾನೆ. ಪುನಃ ಆತನಿಗೆ ಏನಾದರೂ ಪ್ರಶ್ನಿಸಲು ಹೊರಟರೆ ಆತನು ವ್ಯಗ್ರನಾಗುತ್ತಾನೆ. ಏಕೆಂದರೆ ಭಿಕ್ಷುಗಳೇ, ಅದು ಆತನ ಕ್ಷೇತ್ರವಲ್ಲ.

35.9.10. ದುತಿಯ ದ್ವಯ ಸುತ್ತಂ

93. ಭಿಕ್ಷುಗಳೇ, ವಿಞ್ಞಾನವು ಈ ದ್ವಯ (ಜೋಡಿಗಳ) ಗಳನ್ನು ಅವಲಂಬಿಸಿಯೇ ಉದಯಿಸುವುದು ಮತ್ತು ಹೇಗೆ ಭಿಕ್ಷುಗಳೇ, ವಿಞ್ಞಾನವು ದ್ವಯಗಳನ್ನು ಅವಲಂಬಿಸಿ ಉದಯಿಸುವುದು? ಹೇಗೆಂದರೆ ಕಣ್ಣು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುವುದು. ಈ ಕಣ್ಣು ಅನಿತ್ಯವಾಗಿದೆ, ಪರಿವರ್ತನೆಯಾಗಿದೆ, ಬೇರೆ ವಿಧವಾಗಿ ಆಗಿಹೋಗುತ್ತವೆ. ಈ ರೂಪಗಳು ಅನಿತ್ಯವಾಗಿವೆ, ಪರಿವರ್ತನಿಯವಾಗಿದೆ. ಬೇರೆ ವಿಧವಾಗಿ ಆಗಿಹೋಗುವುದು. ಹೀಗಾಗಿ ಈ ದ್ವಯವು ಅಸ್ಥಿರವು, ಕ್ಷಣಿಕವು, ಅನಿತ್ಯವು ಮತ್ತು ಬದಲಾವಣೆ ಹೊಂದುವಂತಹುದು ಆಗಿದೆ. ಚಕ್ಷು ವಿಞ್ಞಾನವು ಅನಿತ್ಯಕರವಾಗಿದೆ, ಪರಿವರ್ತನೀಯವಾಗಿದೆ. ಬೇರೆ ರೀತಿಯೇ ಬದಲಾವಣೆಯಾಗುವಂತಹದ್ದಾಗಿದೆ. ಈ ಚಕ್ಷುವಿಞ್ಞಾನಕ್ಕೆ ಕಾರಣವಾಗಿರುವಂತಹುದು ಕೂಡ ಅನಿತ್ಯಕರ, ಪರಿವರ್ತನೆ ಬೇರೊಂದು ವಿಧವಾಗಿ ಬದಲಾವಣೆಯಾಗುವಂತಹದ್ದಾಗಿದೆ. ಯಾವಾಗ ಚಕ್ಷು ವಿಞ್ಞಾನಕ್ಕೆ ಕಾರಣವಾದ ಸ್ಥಿತಿಗಳೇ ಅನಿತ್ಯಕರವಾಗಿರುವಾಗ ಹೇಗೆತಾನೇ ಇದು ನಿತ್ಯವಾದೀತು? ಈ ಚಕ್ಷು ರೂಪಗಳು ಮತ್ತು ಚಕ್ಷುವಿಞ್ಞಾನದ ಸಂಗಮವು ಚಕ್ಷುಸಂಸ್ಪರ್ಶದಿಂದ ಆಗುವುದು. ಈ ಚಕ್ಷು ಸಂಸ್ಪರ್ಶವು ಸಹಾ ಅನಿತ್ಯಕರವಾಗಿದೆ. ಬದಲಾವಣೆ ಹೊಂದುತ್ತಿರುತ್ತದೆ. ಯಾವಾಗ ಚಕ್ಷುಸಂಸ್ಪರ್ಶದ ಉದಯವೇ ಅನಿತ್ಯಕರಗಳಿಂದ ಸ್ಥಿತಿಗಳಿಂದ ಆಗಿರಬೇಕಾದರೆ ಅದು ಹೇಗೆ ನಿತ್ಯವಾಗುವುದು? ಸಂಸ್ಪರ್ಶದಿಂದಲೇ ವೇದನೆ ಅನುಭವಿಸುತ್ತಾನೆ, ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ ಹಾಗು ಗ್ರಹಿಸುತ್ತಾನೆ. ಹೀಗಾಗಿ ಈ ವಿಷಯಗಳು ಸಹಾ ಚಲಿಸುವಂತಹುದು, ಅನಿತ್ಯಕಾರಿಯು, ಪರಿವರ್ತನಿಯವಾದದ್ದು ಬೇರೆ ವಿಧವಾಗಿ ಆಗುವಂತದ್ದಾಗಿದೆ. ಅದೇ ವಿಧವಾಗಿ ಕಿವಿ ಮತ್ತು ಶಬ್ದಗಳನ್ನು ಅವಲಂಬಿಸಿ ಶ್ರೋತ ವಿಞ್ಞಾನವು ಉದಯಿಸುತ್ತದೆ...
ಜಿಹ್ವೆ ಹಾಗು ರಸಗಳನ್ನು ಅವಲಂಬಿಸಿ ಜಿಹ್ವಾವಿಞ್ಞಾಣವು ಉದಯಿಸುತ್ತದೆ. ನಾಲಿಗೆಯು ಅನಿತ್ಯಕಾರಕವೂ, ಪರಿವರ್ತನಿಯವು ಹಾಗು ಬೇರೆ ವಿಧವಾಗಿ ಆಗುವಂತಹುದು. ಹಾಗೆಯೇ ರಸಗಳು ಸಹಾ. ಆದ್ದರಿಂದಾಗಿ ಇವೆರಡೂ ಸಹ ಅಸ್ಥಿರವು, ಅನಿತ್ಯವು, ಪರಿವರ್ತನಶೀಲವು ಹಾಗು ಬದಲಾಗುವಂತಹದ್ದಾಗಿದೆ. ಇವುಗಳಿಂದ ಹುಟ್ಟುವಂತಹ ಜಿಹ್ವಾವಿಞ್ಞಾಣವು ಸಹಾ ಅನಿತ್ಯ ಹಾಗು ಪರಿವರ್ತನಿಯವಾಗಿದೆ. ಹಾಗೆಯೇ ಜಿಹ್ವಾವಿಞ್ಞಾನದಿಂದ ಉದಯಿಸುವ ಉತ್ಪನ್ನಗಳು ಸಹಾ ಅನಿತ್ಯಕರ ಹಾಗು ಬದಲಾಗುವಂತಹದ್ದಗಿದೆ. ಯಾವ ಅನಿತ್ಯಕಾರಕಗಳಿಂದ ಉದಯಿಸಿದಂತಹ ಜಿಹ್ವಾವಿಞ್ಞಾನವೂ ಹೇಗೆತಾನೆ ನಿತ್ಯವಾದೀತು? ಭಿಕ್ಷುಗಳೇ, ಈ ಮೂರು ಧಮ್ಮಗಳ ಸಂಗತಿ ಹಾಗು ಪರಸ್ಪರ ಉದಯಿಸುವಿಕೆ ಜಿಹ್ವಾಸಂಸ್ಪರ್ಶದಿಂದಲೇ ಆಗುವುದು. ಜಿಹ್ವಾಸಂಸ್ಪರ್ಶವು ಅನಿತ್ಯಕರವಾಗಿದೆ, ಪರಿವರ್ತನಾಶೀಲವಾಗಿದೆ, ಬದಲಾಗುವಂತಹದ್ದಾಗಿದೆ. ಯಾವ ಕಾರಣದಿಂದಾಗಿ, ಯಾವ ಬೆಂಬಲದಿಂದಾಗಿ ಜಿಹ್ವಾಸಂಸ್ಪರ್ಶವು ಉದಯಿಸುತ್ತದೋ ಅವು ಸಹಾ ಅಂತ್ಯಕಾರಕ, ಪರಿವರ್ತನಿಯ, ಬದಲಾವಣೆಯ ಧಮ್ಮವುಳ್ಳದ್ದಾಗಿದೆ. ಹೀಗೆ ಯಾವುದರ ಉದಯದಲ್ಲಿ ಬೆಂಬಲವೂ ಅನಿತ್ಯಕಾರಕವಾಗಿದೆಯೋ ಅದರ ಉತ್ಪನ್ನಗಳು ಹೇಗೆತಾನೇ ನಿತ್ಯವಾಗುವುವು? ಭಿಕ್ಷುಗಳೇ, ಸ್ಪರ್ಶದಿಂದಲೇ ವೇದನೆಗಳನ್ನು ಅನುಭವಿಸುತ್ತಾರೆ. ಇಚ್ಛೆಗಳನ್ನು ಪಡುತ್ತಾರೆ ಹಾಗು ಗ್ರಹಿಸುತ್ತಾರೆ. ಈ ವಿಷಯಗಳು ಸಹಾ ಅನಿತ್ಯಕರವೂ, ಪರಿವರ್ತನಶೀಲವೂ ಹಗು ಬದಲಾಗುವಂತಹದ್ದಾಗಿದೆ. ಕಾಯ ಹಾಗು ಸ್ಪರ್ಶಗಳು ಅವಲಂಬಿಸಿ...
ಮನಸ್ಸು ಹಾಗು ಧಮ್ಮ (ಮಾನಸಿಕ ವಿಷಯ/ವಸ್ತು) ಗಳನ್ನು ಅವಲಂಬಿಸಿ ಮನೋವಿಞ್ಞಾಣವು ಉದಯಿಸುವುದು. ಮನಸ್ಸು ಅನಿತ್ಯಕರವಾದುದು, ಪರಿವರ್ತನೆಯಾಗುವಂತಹುದು, ಬದಲಾಗುವಂತಹುದು ಹಾಗೆಯೇ ಧಮ್ಮವೂ ಸಹಾ ಅನಿತ್ಯಕರ, ಪರಿವರ್ತನಾಶೀಲ, ಬದಲಾಗುವಂತಹುದು. ಹೀಗಾಗಿ ಇವೆರಡು ಜೋಡಿಯು ಅನಿತ್ಯಕರ, ಪರಿವರ್ತನಶೀಲ, ಬದಲಾಗುವಂತಹುದು. ಮನೋವಿಞ್ಞಾನಕ್ಕೆ ಕಾರಣವಾದ ಹೇತು ಹಾಗು ಬೆಂಬಲವೂ ಸಹಾ ಅನಿತ್ಯಕರ, ಪರಿವರ್ತನಾಶೀಲ, ಬದಲಾಗುವಂತಹದ್ದಾಗಿದೆ. ಭಿಕ್ಷುಗಳೇ, ಯಾವಾಗ ಮನೋವಿಞ್ಞಾನದ ಕಾರಣವೂ ಅನಿತ್ಯವಾಗಿರಬೇಕಾದರೆ ಹೇಗೆತಾನೇ ಮನೋವಿಞ್ಞಾನ ನಿತ್ಯವಾದೀತು? ಭಿಕ್ಷುಗಳೇ, ಈ ಮೂರು ಧಮ್ಮಗಳ ಸಮ್ಮಿಲನವೂ ಪರಸ್ಪರ ಉದಯಿಸುವಿಕೆ ಮನೋಸಂಸ್ಪರ್ಶದಿಂದಲೇ ಆಗುವುದು. ಮನೋಸಂಸ್ಪರ್ಶವೂ ಸಹಾ ಅನಿತ್ಯಕರವಾಗಿದೆ. ಹೀಗೆ ಯಾವುದರ ಉದಯವು ಬೆಂಬಲವು ಅನಿತ್ಯಕಾರಕವೋ ಅದರ ಉತ್ಪನ್ನಗಳು ಹೇಗೆತಾನೇ ನಿತ್ಯವಾಗುವುದು? ಭಿಕ್ಷುಗಳೇ, ಸ್ಪರ್ಶವು ಸ್ಪರ್ಶದಿಂದಲೇ ವೇದನೆಗಳು ಉದಯಿಸುತ್ತವೆ, ಇಚ್ಛೆಗಳು ಉದಯಿಸುತ್ತವೆ ಹಾಗು ಗ್ರಹಿಕೆಯು ಉಂಟಾಗುತ್ತದೆ. ಈ ವಿಷಯಗಳು ಸಹಾ ಅನಿತ್ಯಕಾರಕವು, ಪರಿವರ್ತನಿಯವು ಹಾಗು ಬದಲಾಗುವಂತಹುದು. ಈ ರೀತಿಯಾಗಿ ಭಿಕ್ಷುಗಳೇ, ಈ ಜೋಡಿಯಿಂದ (ದ್ವಯ) ವಿಞ್ಞಾವು ಅಸ್ತಿತ್ವಕ್ಕೆ ಬರುವುದು.
ಛನ್ನ ವರ್ಗ ಮುಗಿಯಿತು.

samyutta nikaya 35.8. ಗಿಲಾನ ವಗ್ಗೋ (ರೋಗಿ ವರ್ಗ)

35.8.1. ಗಿಲಾನ ವಗ್ಗೋ (ರೋಗಿ ವರ್ಗ)

74. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಂತೆ, ಇಂತಿಂಥ ವಿಹಾರದಲ್ಲಿ ಹೊಸತಾಗಿ ಸಂಘ ಸೇರಿದ, ಅಖ್ಯಾತಿಯ ಭಿಕ್ಷುವು ರೋಗಿಯಾಗಿದ್ದಾನೆ, ತೀವ್ರತೆಗೆ ಗುರಿಯಾಗಿದ್ದಾನೆ, ನರಳುತ್ತಿದ್ದಾನೆ, ಭಗವಾನರು ಕರುಣೆಯಿಂದ ಅಲ್ಲಿಗೆ ಭೇಟಿ ನೀಡಿದರೆ ಒಳಿತಾಗುವುದು.

ಆಗ ಭಗವಾನರು ಹೊಸತಾಗಿ ಸಂಘ ಸೇರಿದ ಹಾಗು ಅಖ್ಯಾತಿ ಅಂದರೆ ಅಷ್ಟಾಗಿ ಪ್ರಸಿದ್ಧಿಯಿಲ್ಲದ ಎಂಬ ಪದಗಳು ಕೇಳುತ್ತಲೇ ಭಗವಾನರು ದಯೆಯಿಂದ ಆತನನ್ನು ಕಾಣಲು ಹೊರಟರು. ದೂರದಲ್ಲಿ ಭಗವಾನರು ಬರುತ್ತಿರುವುದನ್ನು ಕಂಡಂತಹ ಭಿಕ್ಷುವು ಏಳಲು ಯತ್ನಿಸಿದನು. ಆಗ ಭಗವಾನರು ಹೀಗೆ ನುಡಿದರು: ಸಾಕು, ಸಾಕು ಭಿಕ್ಖುವೇ, ಅಲುಗಾಡದಿರು, ಹಾಸಿಗೆಯಲ್ಲಿ ಹಾಗೆಯೇ ಇರುವಂತಾಗು. ಇಲ್ಲೇ ಆಸನಗಳು ಸಿದ್ಧವಾಗಿವೆ, ನಾನಿಲ್ಲೇ ಕುಳಿತುಕೊಳ್ಳುವೆನು. ನಂತರ ಭಗವಾನರು ಆ ರೋಗಿ ಭಿಕ್ಷುವಿಗೆ ಸಮೀಪದಲ್ಲಿದ್ದಂತಹ ಆಸನದಲ್ಲಿ ಕುಳಿತು ಹೀಗೆ ಪ್ರಶ್ನಿಸಿದರು: ಭಿಕ್ಷುವೇ, ನೀನು ಸಹಿಸಿಕೊಳ್ಳುತ್ತಿದ್ದೆಯೇ, ಹಾಗು ಗುಣಮುಖವಾಗುತ್ತಿರುವೆ ಎಂದು ನಂಬುತ್ತಿದ್ದೇನೆ. ನಿನ್ನಲ್ಲಿ ಅಪ್ರಿಯ ವೇದನೆಗಳು ಕ್ಷೀಣವಾಗುತ್ತಾ ಇವೆ ಹಾಗು ವೃದ್ಧಿಯಾಗುತ್ತಿಲ್ಲ ಎಂದು ನಂಬುತ್ತಿರುವೆ. ಕ್ಷೀಣವಾಗುತ್ತಿರುವುದು ಸ್ಪಷ್ಟವಾಗಿದೆಯೇ?

ಭಂತೆ, ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ, ನಾನು ಗುಣಮುಖನಾಗುತ್ತಿಲ್ಲ, ಪ್ರಬಲವಾದ ನೋವಿನ ವೇದನೆಗಳು ವೃದ್ಧಿಯಾಗುತ್ತಲೇ ಇವೆ, ಕ್ಷೀಣವಾಗುತ್ತಿಲ್ಲ. ಇದೇರೀತಿ ಸ್ಪಷ್ಟವಾಗುತ್ತಿದೆ.
ಹಾಗಾದರೆ ಭಿಕ್ಷುವೇ, ನೀನು ಪಶ್ಚಾತ್ತಾಪದಿಂದ, ಚಿಂತೆಯಿಂದ ತೊಂದರೆಗೀಡಾಗುತ್ತಿಲ್ಲ ಎಂದು ನಂಬುತ್ತೇನೆ.
ನಿಜಕ್ಕೂ ಭಂತೆ, ನಾನು ಅಪಾರ ಪಶ್ಚಾತ್ತಾಪದಿಂದ ಹಾಗು ಚಿಂತೆಯಿಂದ ಕೂಡಿರುವೆನು.
ಭಿಕ್ಖುವೇ, ನೀನು ಶೀಲಕ್ಕೆ ಸಂಬಂಧಿಸಿದ ಪಶ್ಚಾತ್ತಾಪದಲ್ಲಿ ಕೂಡಿಲ್ಲವೆಂದು ನಂಬುತ್ತೇನೆ.
ಇಲ್ಲ ಭಂತೆ, ಶೀಲಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಪಶ್ಚಾತ್ತಾಪವಿಲ್ಲ.
ಹಾಗಾದರೆ ಭಿಕ್ಷುವೇ, ಶೀಲಕ್ಕೆ ಸಂಬಂಧಿಸಿದಂತೆ ಪಶ್ಚಾತ್ತಾಪವಿಲ್ಲದಿದ್ದರೆ ಮತ್ಯಾವುದರಿಮದಾಗಿ ಪಶ್ಚಾತ್ತಾಪ ಚಿಂತೆಗಳೂ ಉಂಟಾಗುತ್ತಿವೆ.
ಭಂತೆ, ಭಗವಾನರಿಂದ ಬೋಧಿಸಲ್ಪಟ್ಟಂತಹ ಧಮ್ಮವು ಕೇವಲ ಶೀಲದ ಪರಿಶುದ್ಧಿಗೆ ಅಲ್ಲವೆಂದು ನಾನು ಅರಿತಿರುವೆ.
ಓ ಭಿಕ್ಷುವೇ, ನನ್ನಿಂದ ಬೋಧಿಸಲ್ಪಟ್ಟಂತಹ ಧಮ್ಮವು ಕೇವಲ ಶೀಲ ವಿಶುದ್ಧಿಗಾಗಿ ಅಲ್ಲವೆಂದು ತಿಳಿದಿರುವ ನೀನು ಮಾತ್ಯಾವುದಕ್ಕಾಗಿ ಎಂದು ತಿಳಿದಿರುವೆ?
ಭಂತೆ, ಭಗವಾನರಿಂದ ಬೋಧಿಸಲ್ಪಟ್ಟಂತಹ ಧಮ್ಮವು ರಾಗರಹಿತನಾಗಿ ವಿರಾಗಿಯಾಗುವುದು ಎಂದು ನಾನು ಅರ್ಥ ಮಾಡಿಕೊಂಡಿರುವೆನು.

ಸಾಧು, ಸಾಧು ಭಿಕ್ಷುವೇ, ನನ್ನಿಂದ ಬೋಧಿಸಲ್ಪಟ್ಟಂತಹ ಧಮ್ಮವು ರಾಗರಹಿತನಾಗಿ ವಿರಾಗದಲ್ಲಿ ಸ್ಥಾಪಿತವಾಗುವುದು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ. ಒಳ್ಳೆಯದು ಭಿಕ್ಷುವೇ, ಇದನ್ನು ಹೇಗೆ ಭಾವಿಸುವೆ? ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ಕಾಯ... ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ, ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ದುಃಖಕಾರಿಯೋ, ವಿಪರಿಣಾಮ ಧಮ್ಮವುಳ್ಳದ್ದೋ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಈ ರೀತಿಯಾಗಿ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಶ್ರೋತದಿಂದ... ಪ್ರಾಣದಿಂದ... ಜಿಹ್ವೆಯಿಂದ... ಕಾಯದಿಂದ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗಿಯಾಗುತ್ತಾನೆ. ವಿರಾಗಿಯಾದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಞ್ಞಾನವು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣಗೊಂಡಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನು ಪುನರ್ಜನ್ಮವಿಲ್ಲ ಎಂದು.

ಇದನ್ನು ಆಲಿಸಿದಂತಹ ಭಿಕ್ಷುವು ಅಭಿನಂದನೆಯನ್ನು ಮಾಡಿದನು, ಆನಂದಿತನಾದನು. ಆ ಸುತ್ತವು ಮುಗಿಯುತ್ತಿದ್ದಂತೆಯೇ ಆತನಲ್ಲಿ ವಿರಜವೂ, ವಿಮಲವೂ ಆದಂತಹ ಧಮ್ಮಚಕ್ಷು ಉದಯಿಸಿತು. ಯಾವುದೆಲ್ಲಾ ಉದಯವಾಗುವ ಧಮ್ಮವುಳ್ಳದ್ದೋ ಅವೆಲ್ಲವೂ ನಿರೋಧ ಧಮ್ಮವನ್ನು ಹೊಂದುತ್ತವೆ ಎಂದು ಸ್ಪಷ್ಟವಾಗಿ ಅರಿತನು, ಸೋತಪನ್ನನಾದನು.

35.8.2. ದುತಿಯಾ ಗಿಲಾನ ಸುತ್ತಂ

75. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಂತೆ, ಇಂತಿಂಥ ವಿಹಾರದಲ್ಲಿ ಹೊಸತಾಗಿ ಸಂಘ ಸೇರಿದ, ಅಖ್ಯಾತಿಯ ಭಿಕ್ಷುವು ರೋಗಿಯಾಗಿದ್ದಾನೆ, ತೀವ್ರತೆಗೆ ಗುರಿಯಾಗಿದ್ದಾನೆ, ನರಳುತ್ತಿದ್ದಾನೆ, ಭಗವಾನರು ಕರುಣೆಯಿಂದ ಅಲ್ಲಿಗೆ ಭೇಟಿ ನೀಡಿದರೆ ಒಳಿತಾಗುವುದು.

ಆಗ ಭಗವಾನರು ಹೊಸತಾಗಿ ಸಂಘ ಸೇರಿದ ಹಾಗು ಅಖ್ಯಾತಿ ಅಂದರೆ ಅಷ್ಟಾಗಿ ಪ್ರಸಿದ್ಧಿಯಿಲ್ಲದ ಎಂಬ ಪದಗಳು ಕೇಳುತ್ತಲೇ ಭಗವಾನರು ದಯೆಯಿಂದ ಆತನನ್ನು ಕಾಣಲು ಹೊರಟರು. ದೂರದಲ್ಲಿ ಭಗವಾನರು ಬರುತ್ತಿರುವುದನ್ನು ಕಂಡಂತಹ ಭಿಕ್ಷುವು ಏಳಲು ಯತ್ನಿಸಿದನು. ಆಗ ಭಗವಾನರು ಹೀಗೆ ನುಡಿದರು: ಸಾಕು, ಸಾಕು ಭಿಕ್ಖುವೇ, ಅಲುಗಾಡದಿರು, ಹಾಸಿಗೆಯಲ್ಲಿ ಹಾಗೆಯೇ ಇರುವಂತಾಗು. ಇಲ್ಲೇ ಆಸನಗಳು ಸಿದ್ಧವಾಗಿವೆ, ನಾನಿಲ್ಲೇ ಕುಳಿತುಕೊಳ್ಳುವೆನು. ನಂತರ ಭಗವಾನರು ಆ ರೋಗಿ ಭಿಕ್ಷುವಿಗೆ ಸಮೀಪದಲ್ಲಿದ್ದಂತಹ ಆಸನದಲ್ಲಿ ಕುಳಿತು ಹೀಗೆ ಪ್ರಶ್ನಿಸಿದರು: ಭಿಕ್ಷುವೇ, ನೀನು ಸಹಿಸಿಕೊಳ್ಳುತ್ತಿದ್ದೆಯೇ, ಹಾಗು ಗುಣಮುಖವಾಗುತ್ತಿರುವೆ ಎಂದು ನಂಬುತ್ತಿದ್ದೇನೆ. ನಿನ್ನಲ್ಲಿ ಅಪ್ರಿಯ ವೇದನೆಗಳು ಕ್ಷೀಣವಾಗುತ್ತಾ ಇವೆ ಹಾಗು ವೃದ್ಧಿಯಾಗುತ್ತಿಲ್ಲ ಎಂದು ನಂಬುತ್ತಿರುವೆ. ಕ್ಷೀಣವಾಗುತ್ತಿರುವುದು ಸ್ಪಷ್ಟವಾಗಿದೆಯೇ?
ಭಂತೆ, ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ, ನಾನು ಗುಣಮುಖನಾಗುತ್ತಿಲ್ಲ, ಪ್ರಬಲವಾದ ನೋವಿನ ವೇದನೆಗಳು ವೃದ್ಧಿಯಾಗುತ್ತಲೇ ಇವೆ, ಕ್ಷೀಣವಾಗುತ್ತಿಲ್ಲ. ಇದೇರೀತಿ ಸ್ಪಷ್ಟವಾಗುತ್ತಿದೆ.
ಭಿಕ್ಷುವೇ, ನಿನ್ನಲ್ಲಿ ಸಂಶಯವಾಗಲಿ ಅಥವಾ ಪಶ್ಚಾತ್ತಾಪವಾಗಲಿ ಇದೆಯೇ? - ಹೌದು ಭಂತೆ, ನನ್ನಲ್ಲಿ ಸಂಶಯಗಳು ಹಾಗು ಪಶ್ಚಾತ್ತಾಪಗಳು ಇವೆ.
ಭಿಕ್ಷುವೇ, ಶೀಲದ ಕಾರಣಕ್ಕಾಗಿ, ನಿನ್ನಲ್ಲಿ ಪಶ್ಚಾತ್ತಾಪವಿದೆಯೇ? ಇಲ್ಲ ಭಂತೆ, ಭಗವಾನರ ಬೋಧನೆಯು ಕೇವಲ ಶೀಲ ವಿಶುದ್ಧಿಗಾಗಿಯೇ ಅಲ್ಲವಲ್ಲ.
ಭಿಕ್ಷುವೇ, ನನ್ನ ಬೋಧನೆಯ ಸಾರವು ಶೀಲವಿಶುದ್ದಿಯಲ್ಲದೆ, ಉಳಿದ ಸಾರವೇನು? - ಭಗವಾನ್ ತಮ್ಮ ಬೋಧನೆಯ ಸಾರವು ಉಪಾದಿಯಿಲ್ಲದ ನಿಬ್ಬಾಣ ಎಂದು ನಾನು ಅರ್ಥ ಮಾಡಿಕೊಂಡಿರುವೆನು.
ಸಾಧು ಸಾಧು ಭಿಕ್ಷುವೇ, ಉಪಾದಿಯಿಲ್ಲದ ನಿಬ್ಬಾಣವೇ ಧಮ್ಮದ ಗುರಿಯೆಂದು ಅರಿತಿರುವುದು ಸಾಧುಕರವಾಗಿದೆ. ಖಂಡಿತವಾಗಿ ಅನುಪಾದಿ ನಿಬ್ಬಾಣವೇ ಧಮ್ಮದ ಸಾರವಾಗಿದೆ. ಭಿಕ್ಷುವೇ, ಇದು ಹೇಗೆ ಭಾವಿಸುವೆ? ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ಕಾಯ... ಮನಸ್ಸು... ಮನೋವಿಞ್ಞಾನ... ಮನೋಸಂಸ್ಪರ್ಶ... ಅದರಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ, ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ದುಃಖಕಾರಿಯೋ, ವಿಪರಿಣಾಮ ಧಮ್ಮವುಳ್ಳದ್ದೋ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಈ ರೀತಿಯಾಗಿ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಮದ ವಿಕಷರ್ಿತನಾಗುತ್ತಾನೆ. ಹಾಗೆಯೇ ಮನೋವಿಞ್ಞಾನ... ಮನೋಸಂಸ್ಪರ್ಶ... ಅವುಗಳಿಂದ ಉಂಟಾಗುವ ಮನೋವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವು ಸಿಗುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣಗೊಂಡಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನು ಪುನರ್ಜನ್ಮವಿಲ್ಲ ಎಂಬ ಜ್ಞಾನವು ಸಿಗುವುದು.
ಹೀಗೆ ಭಗವಾನರು ಬೋಧನೆ ನೀಡಿದಾಗ ಆ ಭಿಕ್ಷುವು ಭಗವಾನರ ಬೋಧನೆಯಿಂದಾಗಿ ಆನಂದದಿಂದ ತೇಲಿಹೋದನು. ಹಾಗೆಯೇ ಈ ಬೋಧನೆಯು ಪೂರ್ಣಗೊಳ್ಳುತ್ತಿದ್ದಂತೆಯೇ ಆ ಭಿಕ್ಷುವಿನ ಚಿತ್ತವು ಆಸವಗಳಿಂದ ಮುಕ್ತವಾಯಿತು. ಅನುಪಾದ ವಿಮುಕ್ತಿಯನ್ನು ಪಡೆದನು.


35.8.3. ರಾಧ ಅನಿಚ್ಚ ಸುತ್ತಂ


76. ಆಗ ಆಯುಷ್ಮಂತ ರಾಧನು ಭಗವಾನರ ಬಳಿಗೆ ಬಂದನು.... ಭಂತೆ, ನನಗೆ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುತವಂತಾಗಲಿ, ಅದನ್ನು ಭಗವಾನರಿಂದ ಆಲಿಸಿ, ಏಕಾಂತದಲ್ಲಿ ನೆಲೆಸಿ, ಏಕಾಂತವಾಸಿಯಾಗಿ, ಅಪ್ರಮತ್ತನಾಗಿ, ಪರಿಶ್ರಮಿಯಾಗಿ, ಉತ್ಸಾಹಿಯಾಗಿ, ದೃಢಪೂರ್ವಕವಾಗಿ ಸಾಧಿಸುವಂತಾಗಲಿ.

ರಾಧ, ನೀವು ಯಾವುದೆಲ್ಲವೂ ಅನಿತ್ಯವೋ ಅವೆಲ್ಲದರ ಬಗ್ಗೆ ನೀನು ಆಸೆಗಳನ್ನು ವಜರ್ಿಸಬೇಕು. ಯಾವುದು ಅನಿತ್ಯವು? ಚಕ್ಷುವು ಅನಿತ್ಯವಾಗಿದೆ. ಅದರ ಬಗೆಗಿನ ಆಸೆಯನ್ನು ವಜರ್ಿಸು... ರೂಪಗಳು ಅನಿತ್ಯವಾಗಿವೆ... ಚಕ್ಷುವಿಞ್ಞಾನವು ಅನಿತ್ಯವಾಗಿದೆ... ಚಕ್ಷು ಸಂಸ್ಪರ್ಶವು ಅನಿತ್ಯವಾಗಿದೆ... ಚಕ್ಷುವಿನಿಂದ ಉಂಟಾದ ವೇದನೆಗಳು ಅನಿತ್ಯವಾಗಿವೆ... ಅದನ್ನೆಲ್ಲಾ ವಜರ್ಿಸು. ಹಾಗೆಯೇ ಕಿವಿಯು ಅನಿತ್ಯವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯವಾಗಿದೆ. ಮಾನಸಿಕ ವಿಷಯಗಳು ಅನಿತ್ಯವಾಗಿವೆ... ಮನೋವಿಞ್ಞಾನ, ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ಅನಿತ್ಯವಾಗಿವೆ. ಇವುಗಳ ಬಗೆಗಿನ ಆಸೆಗಳನ್ನೆಲ್ಲಾ ವಜರ್ಿಸಬೇಕು. ಹೀಗೆ ರಾಧ, ನೀನು ಯಾವೆಲ್ಲವೂ ಅನಿತ್ಯಕಾರಕವೋ, ಅವುಗಳ ಬಗೆಗೆಲ್ಲಾ ಆಸೆಗಳನ್ನು ವಜರ್ಿಸಬೇಕು.

35.8.4. ರಾಧ ದುಃಖ ಸುತ್ತಂ


77. ರಾಧ, ಯಾವುದೆಲ್ಲವೂ ದುಃಖಕಾರಿಯೋ, ಅವುಗಳೆಲ್ಲದರ ಮೇಲಿನ ಆಸೆಗಳನ್ನು ನೀನು ವಜರ್ಿಸಬೇಕು; ರಾಧ ಯಾವೆಲ್ಲವೂ ದುಃಖಕಾರಿಯು? ರಾಧ, ಚಕ್ಷು ದುಃಖಕಾರಿಯು, ಅದರ ಬಗೆಗಿನ ಆಸೆಗಳನ್ನು ವಜರ್ಿಸುವಂತಾಗು. ರೂಪ ದುಃಖಕಾರಿ.... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಚಕ್ಷು ಸಂವೇದನೆಗಳು... ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು ದುಃಖಕಾರಿ... ಮನೋವಿಷಯಗಳು (ಧಮ್ಮ) ದುಃಖಕಾರಿ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ದುಃಖಕರವಾಗಿವೆ. ಇವುಗಳ ಬಗೆಗಿನ ಆಸೆಗಳೆಲ್ಲವನ್ನು ವಜರ್ಿಸಬೇಕು.

35.8.5. ರಾಧ ಅನತ್ತ ಸುತ್ತಂ


78. ರಾಧ, ಯಾವುದೆಲ್ಲವೂ ಅನಾತ್ಮಕಾರಿಯೋ ಅವುಗಳೆಲ್ಲದರ ಆಸೆಗಳನ್ನು ವಜರ್ಿಸಬೇಕು. ರಾಧ, ಯಾವೆಲ್ಲವು ಅನಾತ್ಮಕಾರಿ? ರಾಧ, ಚಕ್ಷು ಅನಾತ್ಮವಾಗಿದೆ... ರೂಪಗಳು ಅನಾತ್ಮವಾಗಿದೆ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಚಕ್ಷುವೇದನೆಗಳು... ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ಅನಾತ್ಮವಾಗಿವೆ. ಇವುಗಳ ಬಗೆಗಿನ ಆಸೆಗಳನ್ನು ವಜರ್ಿಸಬೇಕು.

35.8.6. ಪಠಮ ಅವಿಜ್ಞಾಪಹಾನ ಸುತ್ತಂ

79. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಆತನು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಯಾವ ಏಕ ಧಮ್ಮವನ್ನು ಭಿಕ್ಷುವು ದೂರೀಕರಿಸಿದರೆ ಅವಿದ್ಯೆಯು (ಅಜ್ಞಾನವು) ದೂರವಾಗುತ್ತದೆ ಹಾಗು ವಿದ್ಯೆಯು (ಪ್ರಜ್ಞೆ) ಉದಯಿಸುವುದು? ಅಂತಹ ಧಮ್ಮವಿದೆಯೇ?
ಭಿಕ್ಷುವೇ, ಅಂತಹ ಒಂದು ಧಮ್ಮವಿದೆ. ಆ ಏಕಧಮ್ಮವನ್ನು ದೂರೀಕರಿಸಿದರೆ ಅವಿದ್ಯೆಯು ದೂರವಾಗುತ್ತದೆ ಹಾಗು ವಿದ್ಯೆಯು ಉದಯಿಸುವುದು.
ಭಗವಾನ್ ಯಾವುದದು ಏಕಧಮ್ಮ, ಅದನ್ನು ದೂರೀಕರಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯಿಸುವುದು?
ಅವಿದ್ಯೆಯೇ ಆ ಧಮ್ಮವಾಗಿದೆ ಭಿಕ್ಷುವೇ. ಅದನ್ನು ದೂರೀಕರಿಸಿದಾಗ ವಿದ್ಯೆಯು ಉದಯಿಸುವುದು.
ಭಂತೆ, ಆದರೆ ಆತನಿಂದ ಹೇಗೆ ವೀಕ್ಷಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯವಾಗುವುದು? ಹೇಗೆ ಆತನಿಗೆ ಇದು ಗೊತ್ತಾಗುವುದು?
ಭಿಕ್ಷು, ಯಾವಾಗ ಭಿಕ್ಷುವು ಕಣ್ಣನ್ನು ಅನಿತ್ಯವೆಂದು ನೋಡಿದಾಗ ಹಾಗು ಅರಿತಾಗ ಅವಿದ್ಯೆಯು ವಜರ್ಿತವಾಗುವುದು, ವಿದ್ಯೆಯು ಉದಯವಾಗುವುದು. ಯಾವಾಗ ಭಿಕ್ಷುವು ರೂಪಗಳನ್ನು ಅನಿತ್ಯವೆಂದು ಅರಿತಾಗ ಹಾಗು ದಶರ್ಿಸಿದಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗುವುದು ಹಾಗು ವಿದ್ಯೆಯು ಉದಯವಾಗುವುದು. ಯಾವಾಗ ಭಿಕ್ಷುವು ಚಕ್ಷುವಿಞ್ಞಾನವನ್ನು... ಚಕ್ಷು ಸಂಸ್ಪರ್ಶವನ್ನು... ಚಕ್ಷುವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿತಾಗ ಹಾಗು ದಶರ್ಿಸಿದಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗುವುದು, ವಿದ್ಯೆಯು ಉದಯವಾಗುವುದು, ಯಾವಾಗ ಭಿಕ್ಷುವು ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಧಮ್ಮವನ್ನು... ಮನೋವಿಞ್ಞಾನವನ್ನು... ಮನೋಸಂಸ್ಪರ್ಶವನ್ನು... ಮನೋವೇದನೆಗಳನ್ನು ಅನಿತ್ಯವೆಂದು ದಶರ್ಿಸಿದಾಗ, ಅರಿತಾಗ ಆತನಲ್ಲಿ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯವಾಗುವುದು. ಈ ರೀತಿಯಾಗಿ ಭಿಕ್ಷುವೇ ಭಿಕ್ಷುವು ವೀಕ್ಷಿಸಿದಾಗ ಹಾಗು ಅರಿತಾಗ ಆತನಲ್ಲಿನ ಅವಿದ್ಯೆಯು ದೂರವಾಗುತ್ತದೆ ಹಾಗು ಆತನಲ್ಲಿ ವಿದ್ಯೆಯು ಉದಯವಾಗುವುದು.

35.8.7. ದುತಿಯಾ ಅವಿಜ್ಞಾಪಹಾನ ಸುತ್ತಂ


80.  ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಆತನು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಯಾವ ಏಕ ಧಮ್ಮವನ್ನು ಭಿಕ್ಷುವು ದೂರೀಕರಿಸಿದರೆ ಅವಿದ್ಯೆಯು (ಅಜ್ಞಾನವು) ದೂರವಾಗುತ್ತದೆ ಹಾಗು ವಿದ್ಯೆಯು (ಪ್ರಜ್ಞೆ) ಉದಯಿಸುವುದು? ಅಂತಹ ಧಮ್ಮವಿದೆಯೇ?
ಭಿಕ್ಷುವೇ, ಅಂತಹ ಒಂದು ಧಮ್ಮವಿದೆ. ಆ ಏಕಧಮ್ಮವನ್ನು ದೂರೀಕರಿಸಿದರೆ ಅವಿದ್ಯೆಯು ದೂರವಾಗುತ್ತದೆ ಹಾಗು ವಿದ್ಯೆಯು ಉದಯಿಸುವುದು.
ಭಗವಾನ್ ಯಾವುದದು ಏಕಧಮ್ಮ, ಅದನ್ನು ದೂರೀಕರಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯಿಸುವುದು?
ಅವಿದ್ಯೆಯೇ ಆ ಧಮ್ಮವಾಗಿದೆ ಭಿಕ್ಷುವೇ. ಅದನ್ನು ದೂರೀಕರಿಸಿದಾಗ ವಿದ್ಯೆಯು ಉದಯಿಸುವುದು.
ಭಗವಾನ್, ಆದರೆ ಭಿಕ್ಷುವು ಹೇಗೆ ದಶರ್ಿಸಿದಾಗ, ಅವಿದ್ಯೆಯು ದೂರವಾಗುವುದು ಹಾಗು ಅವಿದ್ಯೆಯು ಉದಯವಾಗುವುದು?
ಭಿಕ್ಷುವೇ, ಇಲ್ಲಿ ಭಿಕ್ಷುವೊಬ್ಬನು ಹೀಗೆ ಕೇಳಲ್ಪಡುತ್ತಾನೆ. ಏನೆಂದರೆ, ಇಲ್ಲಿ ಯಾವುದು ಅಂಟಿಕೊಳ್ಳುವುದಕ್ಕೆ ಅರ್ಹವಲ್ಲ ಹೀಗೆ ಆತನು ಕೇಳಿ ಹಾಗು ಅದರ ಬಗ್ಗೆ ಚಿಂತನೆ ನಡೆಸಿ ನೇರವಾಗಿ ಎಲ್ಲವನ್ನು (ಧಮ್ಮವನ್ನು) ಅರಿಯುತ್ತಾನೆ. ನೇರವಾಗಿ ಎಲ್ಲವನ್ನು ಅರಿಯುತ್ತಾ, ಪ್ರತಿಯೊಂದರ ಬಗ್ಗೆಯು ಪೂರ್ಣವಾಗಿ ಅರಿಯುತ್ತಾನೆ, ಎಲ್ಲವನ್ನು ಪೂರ್ಣವಾಗಿ ಅರಿಯುತ್ತಾ, ಎಲ್ಲಾ ನಿಮಿತ್ತಗಳನ್ನು ವಿಭಿನ್ನವಾಗಿ ಕಾಣುತ್ತಾನೆ. ಹೇಗೆಂದರೆ ಆತನು ಕಣ್ಣನ್ನು ವಿಭಿನ್ನವಾಗಿ ದಶರ್ಿಸುತ್ತಾನೆ... ಚಕ್ಷು ವಿಞ್ಞಾನವನ್ನು... ಚಕ್ಷುಸಂಸ್ಪರ್ಶವನ್ನು... ಚಕ್ಷುವೇದನೆಗಳನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ಕಾಯವನ್ನು... ಮನಸ್ಸನ್ನು... ಧಮ್ಮವನ್ನು... ಮನೋವಿಞ್ಞಾನವನ್ನು... ಮನೋಸಂಸ್ಪರ್ಶವನ್ನು... ಮನೋವೇದನೆಗಳನ್ನು... ವಿಭಿನ್ನವಾಗಿ ದಶರ್ಿಸುತ್ತಾನೆ. ಯಾವಾಗ ಹೀಗೆ ಈ ಎಲ್ಲವನ್ನು ವಿಭಿನ್ನವಾಗಿ ದಶರ್ಿಸುತ್ತಾರೆಯೋ ಆಗ ಆತನಲ್ಲಿ ಅವಿದ್ಯೆಯು ತೊಡೆದು ಹೋಗುವುದು ಹಾಗು ವಿದ್ಯೆಯು ಉದಯಿಸುವುದು.

35.8.8. ಸಮ್ಬಹುಲ ಭಿಕ್ಷು ಸುತ್ತಂ


81.  ಬಹುಸಂಖ್ಯಾತ ಭಿಕ್ಷುಗಳು ಭಗವಾನರ ಬಳಿಗೆ ಬಂದರು. ವಂದಿಸಿ ಎಲ್ಲರೂ ಕುಳಿತರು, ನಂತರ ಅವರಲ್ಲಿ ಒಬ್ಬನು ಹೀಗೆ ಕೇಳಿದನು: ಭಗವಾನ್, ಪರಪಂಥಿಯು ಪರಿವ್ರಾಜಕರು ಈ ರೀತಿಯಾಗಿ ಪ್ರಶ್ನಿಸಿದ್ದರು: ಆಯುಷ್ಮಂತರೇ, ಯಾವ ಉದ್ದೇಶದಿಂದ ಸಮಣ ಗೋತಮರ ಬಳಿಯಲ್ಲಿ ಬ್ರಹ್ಮಚರ್ಯ ಜೀವನವನ್ನು ಆಚರಿಸುತ್ತಿರುವಿರಿ? ನಾವು ಹೀಗೆ ಕೇಳಲ್ಪಟ್ಟಾಗ ಭಂತೆ, ನಾನು ಆ ಪರಿವ್ರಾಜಕರಿಗೆ ಹೀಗೆ ಉತ್ತರಿಸಿದೆವು: ಆಯುಷ್ಮಂತರೇ, ದುಃಖದ ಬಗೆಗಿನ ಪರಿಪೂರ್ಣ ಅರಿವಿನಿಂದಾಗಿ ಭಗವಾನರಲ್ಲಿ ನಾವು ಬ್ರಹ್ಮಚರ್ಯವು ಶ್ರೇಷ್ಠ ಜೀವನ ನಡೆಸುತಿಹೆವು. ಭಗವಾನ್, ನಾವು ಹೀಗೆ ಹೇಳಿ ಭಗವಾನರಂತೆಯೇ ಹೇಳಿರುವೆವೆ? ನಾವು ತಪ್ಪಾಗಿ ಅಥರ್ೈಸಿಲ್ಲವಷ್ಟೇ? ಧಮ್ಮಕ್ಕೆ ಅನುಸಾರವಾಗಿ ಅಥರ್ೈಸಿರುವೆವೆ? ತಪ್ಪಾಗಿ ಅಥರ್ೈಸಿಲ್ಲವಷ್ಟೇ? ನಮ್ಮ ಹೇಳಿಕೆಯು ಟೀಕೆಗಳಿಗೆ ಆಸ್ವಾದ ನೀಡುವುದಿಲ್ಲ ತಾನೇ?

ಓಹ್, ಭಿಕ್ಷುಗಳೇ, ನೀವು ನಾನು ಹೇಳುವಂತೆಯೇ ನುಡಿದಿದ್ದೀರಿ, ತಪ್ಪಾಗಿ ಅಥರ್ೈಸಲಿಲ್ಲ. ನೀವು ಧಮ್ಮಕ್ಕೆ ಅನುಸಾರವಾಗಿಯೇ ನುಡಿದಿರುವಿರಿ. ತಪ್ಪಾಗಿ ಅಥರ್ೈಸಲಿಲ್ಲ. ನೀವು ಟೀಕೆಗಳಿಗೆ ಆಸ್ವಾದ ನೀಡದಂತೆಯೇ ಉತ್ತರಿಸುವಿರಿ. ಏಕೆಂದರೆ ಭಿಕ್ಷುಗಳೇ, ದುಃಖಗಳ ಪರಿಪೂರ್ಣ ಅರಿವಿಗಾಗಿಯೇ ನೀವು ನನ್ನಲ್ಲಿ ಶ್ರೇಷ್ಠ ಬ್ರಹ್ಮಚರ್ಯೆಯ ಜೀವನ ನಡೆಸುತ್ತಿರುವಿರಿ. ಆದರೆ ಭಿಕ್ಷುಗಳೇ, ನಿಮಗೆ ಪರಪಂಥೀಯ ಪರಿವ್ರಾಜಕರು ಹೀಗೆ ಕೇಳಬಹುದು: ಸಮಣ ಗೋತಮರ ಶಾಸನದಲ್ಲಿ ಪರಿಪೂರ್ಣವಾಗಿ ದುಃಖವನ್ನು ನೀವು ಹೇಗೆ ಅರಿತಿರುವಿರಿ? ಆಗ ನೀವು ಈ ರೀತಿಯಾಗಿ ಉತ್ತರಿಸಬೇಕು: ಮಿತ್ರರೇ, ಕಣ್ಣುಗಳು ದುಃಖಕರವಾಗಿವೆ... ರೂಪಗಳು ದುಃಖಕರವಾಗಿವೆ... ಚಕ್ಷು ವಿಞ್ಞಾನವು ದುಃಖಕರವಾಗಿದೆ... ಚಕ್ಷುಸಂಸ್ಪರ್ಶ ದುಃಖಕರವಾಗಿದೆ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ದುಃಖಕರವಾಗಿದೆ. ಅದೇರೀತಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪಶ್... ಅದರಿಂದಾಗಿ ಉಂಟಾಗುವ ಮನೋ ಪ್ರಿಯವೇದನೆ, ಮನೋ ಅಪ್ರಿಯವೇದನೆ, ಮನೋ ತಟಸ್ಥವೇದನೆಗಳು ಸಹಾ ದುಃಖಕರವಾಗಿವೆ. ಹೀಗೆ ಮಿತ್ರರೇ, ನಾವು ಶ್ರೇಷ್ಠರಾದ ಭಗವಾನ್ ಬುದ್ಧರಿಂದ ದುಃಖವನ್ನು ಸ್ಪಷ್ಟವಾಗಿ ಅರಿತಿಹೆವು ಹಾಗು ಶ್ರೇಷ್ಠವಾದ ಬ್ರಹ್ಮಚರ್ಯೆ ಜೀವನ ಮಾಡುತಿಹೆವು. ಈ ರೀತಿಯಾಗಿ ಭಿಕ್ಷುಗಳೇ, ನೀವು ಪರಪಂಥೀಯರಾದ ಪರಿವ್ರಾಜಕರು ಪ್ರಶ್ನಿಸಿದಾಗ ಉತ್ತರಿಸಬೇಕು.

35.8.9. ಲೋಕ ಪಞ್ಞಾ ಸುತ್ತಂ

82. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಭಿಕ್ಷುವೊಬ್ಬನು ಭಗವಾನರ ಬಳಿಬಂದು, ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಗವಾನ್, ಲೋಕ ಲೋಕ ಎನ್ನುತ್ತಾರಲ್ಲ, ಯಾವರೀತಿಯಲ್ಲಿ ಲೋಕ ಎನ್ನುತ್ತೇವೆ?
ಭಿಕ್ಷುವೇ, ವಿಘಟನಿಯವಾಗುವುದರಿಂದಾಗಿ ಇವನ್ನು ಲೋಕ ಎನ್ನುತ್ತೇವೆ ಮತ್ತು ಏನು ವಿಘಟಿತವಾಗುತ್ತವೆ? ಭಿಕ್ಷುವೇ, ಚಕ್ಷು ವಿಘಟಿತವಾಗುವುದು, ರೂಪಗಳು ವಿಘಟಿತವಾಗುತ್ತವೆ, ಚಕ್ಷು ಸಂಸ್ಪರ್ಶವು ವಿಘಟಿತವಾಗುತ್ತವೆ. ಚಕ್ಷುವಿಞ್ಞಾನ ವಿಘಟಿತವಾಗುತ್ತದೆ. ಚಕ್ಷು ವೇದನೆಗಳು ವಿಘಟಿತವಾಗುತ್ತದೆ. ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋಪ್ರಿಯವೇದನೆ... ಮನೋ ಅಪ್ರಿಯವೇದನೆ... ಮನೋ ತಟಸ್ಥವೇದನೆಗಳು ಇವೆಲ್ಲವೂ ವಿಘಟಿತವಾಗುತ್ತವೆ. ಆದ್ದರಿಂದಾಗಿ ಇದನ್ನು ಲೋಕ ಎನ್ನುತ್ತೇವೆ.

35.8.10. ಫಗ್ಗುನ ಪಞ್ಞಾ ಸುತ್ತಂ


83. ಆಗ ಆಯುಷ್ಮಂತ ಫಗ್ಗುನ ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೇಳಿದರು: ಭಂತೆ, ಯಾವುದಾದರೂ ಚಕ್ಷುವಿದೆಯೇ, ಅದರಿಂದಾಗಿ ಅತೀತದ ಬುದ್ಧರ ಪರಿನಿಬ್ಬಾಣ, ಸರ್ವ ದುಃಖಗಳಿಂದ ಮುಕ್ತರಾಗುವುದು. ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟು, ಜನ್ಮಗಳಿಂದ ಪಾರಾಗಿರುವುದು, ಉತ್ಪತ್ತಿಗಳನ್ನು ಕತ್ತರಿಸಿದ್ದು ಅರಿಯಬಹುದೇ? ಭಂತೆ, ಯಾವುದಾದರೂ ಕಿವಿಯಿದೆಯೆ, ಅದರಿಂದಾಗಿ ಅತೀತ ಬುದ್ಧರ ಪರಿನಿಬ್ಬಾಣ, ಪ್ರಸರಣದಿಂದ ಕತ್ತರಿಸಲ್ಪಟ್ಟಿದ್ದು, ಜನ್ಮಗಳಿಂದ ಪಾರಾಗಿರುವುದು, ಉತ್ಪತ್ತಿಗಳ ಪ್ರವಾಹವನ್ನು ಕತ್ತರಿಸಿದ್ದು, ಸರ್ವ ದುಃಖಗಳಿಂದ ಮುಕ್ತರಾಗಿರುವುದು ಅರಿಯಬಹುದೇ? ಭಂತೆ ಯಾವುದಾದರೂ ಮೂಗಿದೆಯೇ... ನಾಲಿಗೆಯಿದೆಯೇ... ದೇಹವಿದೆಯೇ... ಮನಸ್ಸಿದೆಯೇ ಅದರಿಂದಾಗಿ ಅತೀತರ ಬುದ್ಧರ ಪರಿನಿಬ್ಬಾನ, ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟು, ಉತ್ಪತ್ತಿಗಳನ್ನು ಕತ್ತರಿಸಿ, ಜನ್ಮಗಳಿಂದ ಪಾರಾಗಿ, ಸರ್ವ ದುಃಖಗಳಿಂದ ಮುಕ್ತರಾಗಬಹುದು, ಅರಿಯಬಹುದು.
ಇಲ್ಲ ಫಗ್ಗುನ, ಅತೀತ ಬುದ್ಧರ ಪರಿನಿಬ್ಬಾಣವನ್ನು, ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟಿದ್ದು, ಉತ್ಪತ್ತಿಗಳ ರಾಶಿಯನ್ನು ಕತ್ತರಿಸಲ್ಪಟ್ಟಿದ್ದು, ಪ್ರಪಂಚದ ಸುತ್ತಾಟವನ್ನು ಅಂತ್ಯಗೊಳಿಸಿದ್ದು ಮತ್ತು ಸರ್ವ ದುಃಖಗಳಿಂದ ಪಾರಾಗಿರುವುದನ್ನು ವಿವರಿಸಲು ಯಾವುದೇ ಕಣ್ಣಿಲ್ಲ... ಕಿವಿಯಿಲ್ಲ... ಮೂಗಿಲ್ಲ... ನಾಲಿಗೆಯಿಲ್ಲ... ದೇಹವಿಲ್ಲ... ಮನಸ್ಸಿಲ್ಲ ಎಂದರು.
ಇಲ್ಲಿಗೆ ಗಿಲಾನ ವಗ್ಗ ಸಮಾಪ್ತಿಯಾಯಿತು.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...