Thursday, 31 May 2018

Samyutta nikaya 35.15 ನವಪುರಾಣ ವಗ್ಗೋ

ನವಪುರಾಣ ವಗ್ಗೋ


35.15.1 ಕಮ್ಮನಿರೋಧ ಸುತ್ತಂ

146. ಭಿಕ್ಷುಗಳೇ, ನವೀನ (ಹೊಸ) ಕಮ್ಮಗಳ ಬಗ್ಗೆ ಹಾಗು ಹಳೆಯ ಕಮ್ಮಗಳ ಉಪದೇಶಿಸುತ್ತಿದ್ದೇನೆ, ಜೊತೆಗೆ ಕಮ್ಮ ನಿರೋಧದ ಬಗ್ಗೆ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗದ ಬಗ್ಗೆಯೂ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಆಲಿಸಿರಿ, ಗಮನವಿಟ್ಟು ಆಲಿಸಿ ನೆನಪಿನಲ್ಲಿಟ್ಟುಕೊಳ್ಳಿ. ಯಾವುದು ಭಿಕ್ಷುಗಳೇ ಹಳೆಯ ಕಮ್ಮಗಳು? ಚಕ್ಷುವು ಹಳೆಯ ಕಮ್ಮವಾಗಿದೆ, (ಏಕೆಂದರೆ ಹಳೆಯ ಕಮ್ಮದ ಫಲವಾಗಿಯೇ) ಅದರಿಂದಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ, ಅದರ ಮೂಲವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತವೆ ಹಾಗು ವೇದನೆಗಳನ್ನು ಅನುಭವಿಸುತ್ತವೆ. ಕಿವಿಯು ಹಳೆಯ ಕಮ್ಮವಾಗಿದೆ, ಅದರಿಂದಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ, ಅದರ ಮೂಲಕವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತದೆ ಹಾಗು ವೇದನೆಗಳನ್ನು ಅನುಭವಿಸುತ್ತದೆ. ಮೂಗು... ಹಳೆಯ ಕಮ್ಮವಾಗಿದೆ... ನಾಲಿಗೆಯು... ದೇಹವು... ಮನಸ್ಸು ಹಳೆಯ ಕಮ್ಮವಾಗಿದೆ, ಅದರ ಫಲವಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ. ಅದರ ಮೂಲಕವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತದೆ ಹಾಗು ವೇದನೆಗಳನ್ನು ಅನುಭವಿಸುತ್ತವೆ. ಇದೇ ಹಳೆಯ (ಪುರಾಣ) ಕಮ್ಮವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ ನವೀನ ಕಮ್ಮಗಳು (ನವಕಮ್ಮ)? ಯಾವುದೆಲ್ಲಾ ಕಮ್ಮಗಳು ಈಗ ಶರೀರದಿಂದ, ಮಾತಿನಿಂದ ಹಾಗು ಮನಸ್ಸಿನಿಂದ ನಡೆಯುತ್ತವೆಯೋ ಇವೆಲ್ಲಾ ನವಕಮ್ಮ (ನವೀನ ಕಮ್ಮ)ವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ ಕಮ್ಮ ನಿರೋಧವು? ಕಾಯದಿಂದಾಗುವ ಕರ್ಮಗಳು, ವಾಚದಿಂದಾಗುವ ಕಮ್ಮಗಳು ಮತ್ತು ಮನಸ್ಸಿನಿಂದಾಗುವ ಕಮ್ಮಗಳು ನಿರೋಧ ಸಾಧಿಸಿ, ವಿಮುಕ್ತಿ ಹೊಂದುವುದೇ ಕಮ್ಮ ನಿರೋಧವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗ? ಅದೇ ಆರ್ಯರ ಅಷ್ಠಾಂಗಿಕ ಮಾರ್ಗ. ಅದೆಂದರೆ, ಸಮ್ಯಕ್ದೃಷ್ಟಿಕೋನ, ಸಮ್ಯಕ್ಸಂಕಲ್ಪ.... ಮತ್ತು ಸಮ್ಯಕ್ಸಮಾಧಿ. ಇದೇ ಭಿಕ್ಷುಗಳೇ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗವಾಗಿದೆ. ಹೀಗೆ ಭಿಕ್ಷುಗಳೇ, ನಾನು ಪುರಾಣ (ಹಳೆಯ) ಕಮ್ಮವನ್ನು ಬೋಧಿಸಿದ್ದೇನೆ ಹಾಗು ನವೀನ (ಹೊಸ) ಕಮ್ಮವನ್ನು ಬೋಧಿಸಿದ್ದೇನೆ ಹಾಗೆಯೇ ಕರ್ಮನಿರೋಧವನ್ನು, ಅದರೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸಿದ್ದೇನೆ. ಭಿಕ್ಷುಗಳೇ, ಓರ್ವ ಕರುಣಾಮಯಿ ಗುರುವು ಅನುಕಂಪದಿಂದ ಕ್ಷೇಮದಿಂದ ಏನೆಲ್ಲಾ ತನ್ನ ಶಿಷ್ಯರಿಗೆ ಮಾಡಬಹುದೋ, ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇದೇ ವೃಕ್ಷದ ಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ, ಧ್ಯಾನಿಗಳಾಗಿ ಧ್ಯಾನಿಸಿರಿ. ಭಿಕ್ಷುಗಳೇ ನಿರ್ಲಕ್ಷರಾಗದಿರಿ, ಇಲ್ಲದಿದ್ದಲ್ಲಿ ಪಶ್ಚಾತ್ತಾಪಕ್ಕೆ ಗುರಿಯಾಗುವಿರಿ. ಇದೇ ನಿಮಗೆ ನನ್ನ ಅನುಶಾಸನವಾಗಿದೆ.


35.15.2 ಅನಿಚ್ಚ ನಿಬ್ಬಾನಸಪ್ಪಾಯ ಸುತ್ತಂ (ನಿಬ್ಬಾಣ ಪ್ರಾಪ್ತಿಗೆ ಸೂಕ್ತವಾದ ಸುತ್ತ)

147. ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗೆ ಯಾವುದು ಸೂಕ್ತವೋ ಅದನ್ನು ಉಪದೇಶಿಸುತ್ತಿದ್ದೇನೆ, ಅದನ್ನು ಗಮನವಿಟ್ಟು ಆಲಿಸಿರಿ. ಮತ್ತೆ ಭಿಕ್ಷುಗಳೇ ನಿಬ್ಬಾಣ ಪ್ರಾಪ್ತಿಗೆ ಸೂಕ್ತವಾದ ವಿಧಾನ ಯಾವುದು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಕ್ಷುವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಆತನು ರೂಪಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುವಿಞ್ಞಾಣವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಆತನು ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋವಿಞ್ಞಾಣವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋಸಂಸ್ಪರ್ಶಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಇವೇ ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಮಾಡಲು ಸೂಕ್ತವಾದ ವಿಧಾನವಾಗಿದೆ.

35.15.3 ದುಃಖ ನಿಬ್ಬಾನಸಪ್ಪಾಯ ಸುತ್ತಂ

148. ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಚಕ್ಷುವಿನಲ್ಲಿ ದುಃಖವನ್ನು ದಶರ್ಿಸುತ್ತಾನೆ. ಚಕ್ಷುವಿಞ್ಞಾಣದಲ್ಲಿ... ಚಕ್ಷುಸಂಸ್ಪರ್ಶದಲ್ಲಿ... ದುಃಖವನ್ನು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶಗಳಲ್ಲಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ದುಃಖವನ್ನು ದಶರ್ಿಸುತ್ತಾನೆ. ಮಾನಸಿಕ ವಿಷಯಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಮನೋವಿಞ್ಞಾಣದಲ್ಲಿ... ಮನೋಸಂಸ್ಪರ್ಶಗಳಲ್ಲಿ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಇದೇ ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಇರುವಂತಹ ಸೂಕ್ತ ವಿಧಾನವಾಗಿದೆ.


35.15.4 ಅನತ್ತ ನಿಬ್ಬಾನಸಪ್ಪಾಯ ಸುತ್ತಂ

149. ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಚಕ್ಷುವಿನಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಚಕ್ಷುವಿಞ್ಞಾಣದಲ್ಲಿ... ಚಕ್ಷುಸಂಸ್ಪರ್ಶದಲ್ಲಿ... ಅನಾತ್ಮವನ್ನು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶಗಳಲ್ಲಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಮಾನಸಿಕ ವಿಷಯಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಮನೋವಿಞ್ಞಾಣದಲ್ಲಿ... ಮನೋಸಂಸ್ಪರ್ಶಗಳಲ್ಲಿ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಇದೇ ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಇರುವಂತಹ ಸೂಕ್ತ ವಿಧಾನವಾಗಿದೆ.


35.15.5 ನಿಬ್ಬಾನಸಪ್ಪಾಯ ಪಟಿಪದಾ ಸುತ್ತಂ

150. ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ, ಯಾವುದು ಭಿಕ್ಷುಗಳೇ ನಿಬ್ಬಾಣ ಪ್ರಾಪ್ತಿಗಾಗಿ ಇರುವಂತಹ ಸೂಕ್ತವಾದ ವಿಧಾನವು? ನೀವು ಹೇಗೆ ಪರಿಗಣಿಸುವಿರಿ ಭಿಕ್ಷುಗಳೇ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅವು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ ಅಂತಹವನ್ನು ಇದು ನನ್ನದು, ಇದೇ ನಾನು ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾಣ... ಚಕ್ಷುಸಂಸ್ಪರ್ಶ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ ಅಂತಹವನ್ನು ಇದು ನನ್ನದು, ಇದೇ ನಾನು ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ. ಚಕ್ಷುವಿಞ್ಞಾನದಿಂದ... ಚಕ್ಷುಸಂಸ್ಪರ್ಶಗಳಿಂದ... ವೇದನೆಗಳಿಂದ ವಿಕಷರ್ಿತನಾಗುತ್ತಾನೆ... ವಿರಾಗ ಹೊಂದುತ್ತಾನೆ... ಕಿವಿಯು ನಿತ್ಯವೋ ಅಥವಾ ಅನಿತ್ಯವೋ?.... ಮೂಗು... ನಾಲಿಗೆ... ದೇಹ... ಮನಸ್ಸು... ಮನೋವಿಞ್ಞಾಣ... ಮನೋಸಂಸ್ಪರ್ಶಗಳು... ಅದರಿಂದ ಉಂಟಾಗುವ ವೇದನೆಗಳಿಂದ ವಿಕಷರ್ಿಸುತ್ತಾನೆ... ವಿರಾಗ ಹೊಂದುತ್ತಾನೆ... ವಿಮುಕ್ತಿ ಹೊಂದುತ್ತಾನೆ... ವಿಮುಕ್ತಿಜ್ಞಾನ ಹೊಂದುತ್ತಾನೆ. ಈ ಸ್ಥಿತಿಯು ಇನ್ನಿಲ್ಲ... ಎಂದು ಅರಿಯುತ್ತಾನೆ. ಇದೇ ಭಿಕ್ಷುಗಳೇ ನಿಬ್ಬಾಣಪ್ರಾಪ್ತಿಗಾಗಿ ಇರುವ ವಿಧಾನವಾಗಿದೆ.


35.15.6 ಅನ್ತೇವಾಸಿಕ ಸುತ್ತಂ (ಶಿಷ್ಯನ ಕುರಿತು ಸುತ್ತ)

151. ಭಿಕ್ಷುಗಳೇ, ಬ್ರಹ್ಮಚರ್ಯ (ಧಮ್ಮ) ಜೀವನವು ಶಿಷ್ಯರ ರಹಿತವಾಗಿ ಹಾಗು ಆಚಾರ್ಯರ ರಹಿತವಾಗಿರಬೇಕು (ಗುರು ಇಲ್ಲದೆಯೇ). ಏಕೆಂದರೆ ಯಾವ ಭಿಕ್ಷುವು ಶಿಷ್ಯರನ್ನು ಹಾಗು ಆಚಾರ್ಯರನ್ನು ಹೊಂದಿರುತ್ತಾನೋ ಆತನು ದುಃಖದಲ್ಲಿರುತ್ತಾನೆ. ಆದರೆ ಯಾವ ಭಿಕ್ಷುವಿಗೆ ಶಿಷ್ಯರಿಲ್ಲವೋ ಹಾಗು ಗುರುವೂ ಇಲ್ಲವೊ ಆತನು ಸುಖಿಯಾಗಿರುತ್ತಾನೆ. ಮತ್ತೆ ಹೇಗೆ ಭಿಕ್ಷುಗಳೇ ಯಾವ ಭಿಕ್ಷುವಿಗೆ ಶಿಷ್ಯರು ಹಾಗು ಗುರುಗಳು ಇದ್ದಾಗ ದುಃಖದಲ್ಲಿರುತ್ತಾನೆ, ಸುಖಕರವಾಗಿರುವುದಿಲ್ಲ? ಭಿಕ್ಷುಗಳೇ, ಇಲ್ಲಿ ಯಾವಾಗ ಭಿಕ್ಷುವು ಕಣ್ಣಿನಿಂದ ರೂಪಗಳನ್ನು ನೋಡಿದಾಗ ಆತನಲ್ಲಿ ಅಕುಶಲ ಪಾಪಮಯವಾದ ಮಾನಸಿಕ ಸ್ಥಿತಿಗಳು ಉಂಟಾಗಬಹುದು, ಸಂಕೋಲೆಗಳಿಗೆ ಸಂಬಂಧಿಸಿದ ನೆನಪುಗಳು ಹಾಗು ಇಚ್ಛೆಗಳು ಉಂಟಾಗಬಹುದು. ಅಂತಹ ಯೋಚನೆಗಳು ಆತನಲ್ಲಿ ನೆಲೆಸಬಹುದು. ಹೀಗೆ ಅಕುಶಲವಾದ ಪಾಪಮಯವಾದ ಸ್ಥಿತಿಗಳು ಆತನಲ್ಲಿ ನೆಲೆಸಿದಾಗ ಆತನು ಶಿಷ್ಯರನ್ನು ಹೊಂದಿದವನು ಎಂದು ಕರೆಯಲ್ಪಡುತ್ತಾನೆ. ಅವು ಆತನಲ್ಲಿ ಆಕ್ರಮಿಸುವುದು, ಯಾವಾಗ ಅಕುಶಲ ಪಾಪಮಯ ಸ್ಥಿತಿಗಳು ಆತನಲ್ಲಿ ಆಕ್ರಮಿಸುವುದೋ ಆಗ ಆತನು ಆಚಾರ್ಯರನ್ನು (ಗುರುವನ್ನು) ಹೊಂದಿರುವವನು ಎಂದು ಕರೆಯಲ್ಪಡುತ್ತಾನೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಿವಿಯಿಂದ ಶಬ್ದವನ್ನು ಆಲಿಸಿದಾಗ... ಮೂಗಿನಿಂದ ವಾಸನೆಯನ್ನು ಗ್ರಹಿಸಿದಾಗ... ನಾಲಿಗೆಯಿಂದ ರಸವನ್ನು ಆಸ್ವಾದಿಸಿದಾಗ ಆತನಲ್ಲಿ ಅಕುಶಲ ಪಾಪಯುತ ಮಾನಸಿಕ ಸ್ಥಿತಿಗಳು, ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗಬಹುದು. ಅಂತಹ ಸ್ಥಿತಿಗಳು ಆತನಲ್ಲಿ ನೆಲೆಸಬಹುದು. ಆಗ ಆತನಿಗೆ ಶಿಷ್ಯರನ್ನು ಹೊಂದಿದವನು ಎನ್ನುತ್ತಾರೆ. ಯಾವಾಗ ಅಕುಶಲ ಪಾಪಸ್ಥಿತಿಗಳು ಆತನಲ್ಲಿ ಆಕ್ರಮಿಸಿದಾಗ ಆಗ ಆತನು ಆಚಾರ್ಯರನ್ನು ಹೊಂದಿದವನು ಎನ್ನುತ್ತಾರೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಾಯದಿಂದ ಸ್ಪರ್ಶವನ್ನು ಗ್ರಹಿಸಿದಾಗ... ಮನಸ್ಸಿನಿಂದ ಧಮ್ಮವನ್ನು ಅರಿಯುವಾಗ ಪಾಪಯುತ ಅಕುಶಲ ಧಮ್ಮಗಳು, ಸಂಯೋಜನಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗುವುದು. ಅವು ಆತನಲ್ಲಿ ಆಕ್ರಮಿಸಬಹುದು, ನೆಲೆಸಬಹುದು. ಆಗ ಆತನನ್ನು ಶಿಷ್ಯರನ್ನು ಹೊಂದಿದವನು ಎನ್ನುತ್ತಾರೆ. ಯಾವಾಗ ಹೀಗೆ ಅಕುಶಲ ಪಾಪಸ್ಥಿತಿಗಳು ಆತನಲ್ಲಿ ಆಕ್ರಮಿಸಿದಾಗ ಆಗ ಆತನನ್ನು ಆಚಾರ್ಯರನ್ನು ಹೊಂದಿದನು ಎನ್ನುತ್ತಾರೆ. ಈ ರೀತಿಯಾಗಿ ಶಿಷ್ಯರನ್ನು ಹೊಂದಿರುವವನು ಹಾಗು ಗುರುವನ್ನು ಹೊಂದಿರುವವನು ದುಃಖದಿಂದ ವಾಸಿಸುತ್ತಾನೆ, ಸುಖದಿಂದಲ್ಲ.
ಭಿಕ್ಷುಗಳೇ, ಮತ್ತೆ ಯಾವರೀತಿಯಲ್ಲಿ ಶಿಷ್ಯರಿಲ್ಲದವನು ಹಾಗು ಗುರುವಿಲ್ಲದವನು ಸುಖವಾಗಿ ವಾಸಿಸುತ್ತಾನೆ? ಭಿಕ್ಷುಗಳೇ, ಇಲ್ಲಿ ಯಾವಾಗ ಭಿಕ್ಷುವು ರೂಪಗಳನ್ನು ವೀಕ್ಷಿಸುತ್ತಾನೋ ಆಗ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮವು ಉದಯಿಸುವುದಿಲ್ಲ. ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗುವುದಿಲ್ಲ. ಅವೆಲ್ಲಾ ಆತನಲ್ಲಿ ನೆಲೆಸುವುದಿಲ್ಲ. ಏಕೆಂದರೆ ಪಾಪಯುತವಾದ ಅಕುಶಲಗಳು ಆತನನ್ನು ಆಕ್ರಮಿಸಲಾರವು. ಆತನು ಆಚಾರ್ಯನಿಲ್ಲದಿರುವವನು ಎಂದು ಕರೆಯಲ್ಪಡುತ್ತಾನೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಿವಿಯಿಂದ ಶಬ್ದಗಳನ್ನು ಕೇಳುತ್ತಾನೋ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಧಮ್ಮವನ್ನು ಗ್ರಹಿಸುತ್ತಾನೋ ಆಗ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮಗಳು, ಅತೀತಕ್ಕೆ ಸಂಬಂಧಿಸಿದಂತೆ ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಆತನಲ್ಲಿ ಉದಯಿಸಲಾರವು. ಹೀಗಾಗಿ ಆತನಿಗೆ ಶಿಷ್ಯರಿಲ್ಲದವನು ಎಂದು ಕರೆಯುತ್ತಾರೆ. ಹಾಗೆಯೇ ಆತನಲ್ಲಿ ಅಕುಶಲಗಳ ಸಮೂಹವು ಆಕ್ರಮಿಸುವುದಿಲ್ಲ. ಆಗ ಆತನನ್ನು ಆಚಾರ್ಯರಿಲ್ಲದವನು ಎನ್ನುತ್ತಾರೆ. ಭಿಕ್ಷುಗಳೇ, ಹೀಗೆ ಭಿಕ್ಷು ಶಿಷ್ಯರಹಿತನು ಹಾಗು ಗುರುರಹಿತನು ಎನ್ನುತ್ತಾರೆ. ಅಂತಹವನು ಸುಖವಾಗಿ ವಿಹರಿಸುವನು. ಭಿಕ್ಷುಗಳೇ, ಈ ಪವಿತ್ರ ಜೀವನವನ್ನು ಶಿಷ್ಯರಹಿತರಾಗಿಯೂ ಹಾಗು ಗುರುರಹಿತರಾಗಿಯೂ ಸುಖವಾಗಿ ಜೀವಿಸಬಲ್ಲೆವು ಹಾಗೂ ಯಾವ ಭಿಕ್ಷುವಿಗೆ ಗುರು ಮತ್ತು ಶಿಷ್ಯರು ಇಲ್ಲವೋ ಅಂತಹವನು ಸುಖವಾಗಿ ಕ್ಷೇಮವಾಗಿ ವಾಸಿಸಬಲ್ಲನು.


35.15.7 ಕಿಮತ್ಥಿಯ ಬ್ರಹ್ಮಚರಿಯ ಸುತ್ತಂ (ಬ್ರಹ್ಮಚರ್ಯೆ ಜೀವನದ ಉದ್ದೇಶದ ಸುತ್ತ)

152. ಭಿಕ್ಷುಗಳೇ, ಅನ್ಯತೀರ್ಥಕರ ಪರಿವ್ರಾಜಕರು ನಿಮ್ಮನ್ನು ಹೀಗೆ ಪ್ರಶ್ನಿಸಬಹುದು. ಸಮಣಗೋತಮರ ಬಳಿಯಲ್ಲಿ ನಡೆಸುವ ಬ್ರಹ್ಮಚರ್ಯೆ (ಶ್ರೇಷ್ಠ) ಜೀವನದ ಉದ್ದೇಶವಾದರೂ ಏನು? ಹೀಗೆ ಪ್ರಶ್ನಿಸಿದಾಗ ನೀವು ಆ ಪರಿವ್ರಾಜಕರಿಗೆ ಹೀಗೆ ಉತ್ತರಿಸಬೇಕು: ಮಿತ್ರರೇ, ದುಃಖದ ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯ ಜೀವನ ನಡೆಸುತ್ತಿದ್ದೇವೆ. ಆಗ ಭಿಕ್ಷುಗಳೇ, ಅ ಪರಿವ್ರಾಜಕರು ನಿಮ್ಮನ್ನು ಹೀಗೆ ಕೇಳಬಹುದು ಆಯುಷ್ಮಂತರೇ, ಯಾವರೀತಿಯ ದುಃಖ ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆ ಜೀವನ ನಡೆಸುತ್ತಿರುವಿರಿ ಆಗ ನೀವು ಹೀಗೆ ಉತ್ತರಿಸಬೇಕು: ಮಿತ್ರರೇ, ಚಕ್ಷು ದುಃಖಕರವಾಗಿದೆ. ಈ ಬಗೆಯ ಸ್ಪಷ್ಟತೆಯುಳ್ಳ ಸಮಗ್ರ ಅರಿವಿಗಾಗಿ (ಪರಿಜ್ಞಯ) ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯ ಜೀವನವನ್ನು ನಡೆಸುತ್ತಿದ್ದೇವೆ. ರೂಪಗಳು ದುಃಖಕರ... ಚಕ್ಷು ವಿಞ್ಞಾನವು ದುಃಖಕರ... ಚಕ್ಷುಸಂಸ್ಪರ್ಶವು ದುಃಖಕರ... ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಮತ್ತು ತಟಸ್ಥ ವೇದನೆಗಳು ದುಃಖಕರ. ಈ ಬಗೆಯ ಸ್ಪಷ್ಟತೆಯನ್ನು ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದೇವೆ. ಹಾಗೆಯೇ ಕಿವಿಯು ದುಃಖಕರ... ಮೂಗು ದುಃಖಕರ... ನಾಲಿಗೆಯು ದುಃಖಕರ... ಕಾಯವು ದುಃಖಕರ... ಮನಸ್ಸು ದುಃಖಕರ... ಮಾನಸಿಕ ವಿಷಯಗಳು ದುಃಖಕರ... ಮನೋವಿಞ್ಞಾನವು ದುಃಖಕರ... ಮನೋಸಂಸ್ಪರ್ಶವು ದುಃಖಕರ... ಮನೋಸಂಸ್ಪರ್ಶದಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ದುಃಖಕರ. ಈ ಬಗೆಯ ಸ್ಪಷ್ಟತೆಯ ಸಮಗ್ರ ಅರಿವಿಗಾಗಿ ನಾವು ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆಯ ಶ್ರೇಷ್ಠ ಜೀವನವನ್ನು ನಡೆಸುತ್ತಿದ್ದೇವೆ. ಆ ರೀತಿಯ ಪ್ರಶ್ನೆಯು ಬಂದಾಗ ಹೀಗೆ ಈ ವಿಧದಲ್ಲಿ ಉತ್ತರಿಸಬೇಕು ಭಿಕ್ಷುಗಳೇ.


35.15.8 ಅತ್ಥಿನುಖೋಪರಿಯಾಯ ಸುತ್ತಂ (ವಿಧಾನವಿದೆ ಎಂಬ ಸುತ್ತ)

153. ಭಿಕ್ಷುಗಳೇ, ಶ್ರದ್ಧೆಯನ್ನು ಹೊರತುಪಡಿಸಿ, ವೈಯಕ್ತಿಕ ಅಭಿರುಚಿಯನ್ನು ಹೊರತುಪಡಿಸಿ, ಅನ್ಯರಿಂದ ಆಲಿಸುವಿಕೆಯನ್ನು ಹೊರತುಪಡಿಸಿ, ವಿತರ್ಕದಿಂದಾದ ಚಿಂತನೆಯನ್ನು ಹೊರತುಪಡಿಸಿ, ಚಿಂತನೆಯ ನಂತರ ಉಂಟಾದ ದೃಷ್ಟಿಕೋನದ ಸ್ವೀಕಾರವನ್ನು ಹೊರತುಪಡಿಸಿ, ಇನ್ಯಾವುದಾದರೂ ನೇರ ವಿವರಣೆಯ ಸ್ಪಷ್ಟೀಕರಣದ ವಿಧಾನವಿದೆಯೇ? ಅದರಿಂದಾಗಿ ವಿಮುಕ್ತಿ ಜ್ಞಾನವಾದ ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂಬುದನ್ನು ಸ್ಪಷ್ಟೀಕರಿಸಬಹುದೇ? - ಭಂತೆ, ಭಗವಂತರ ಮೂಲಕವಾಗಿಯೇ ನಮಗೆ ಧಮ್ಮವು ದೊರೆತಿದೆ, ಭಗವಂತರೇ, ನಮಗೆ ಮಾರ್ಗದಶರ್ಿ, ಭಗವಾನರೇ ನಮ್ಮ ಅವಲಂಬನೆ. ಹೀಗಾಗಿ ಭಗವಾನರೇ ಇದನ್ನು ಸ್ಪಷ್ಟೀಪಡಿಸಿದರೆ ಅದನ್ನು ಆಲಿಸಿ ಭಿಕ್ಷುಗಳು ನೆನಪಿನಲ್ಲಿಟ್ಟುಕೊಳ್ಳುವರೇ - ಹಾಗಾದರೆ ಗಮನವಿಟ್ಟು ಆಲಿಸಿರಿ, ಭಿಕ್ಷುಗಳೇ ನಾನು ವಿವರಿಸುವೆನು. - ಆಯಿತು ಭಂತೆ. ನಂತರ ಭಗವಾನರು ಹೀಗೆ ನುಡಿದರು: ಅಂಥಹದ್ದೊಂದು ವಿಧಾನವಿದೆ ಭಿಕ್ಷುಗಳೇ, ಅದು ಶ್ರದ್ಧೆಯನ್ನು ಹೊರತುಪಡಿಸಿ, ಅನ್ಯರಿಂದ ಆಲಿಸುವಿಕೆಯನ್ನು ಹೊರತುಪಡಿಸಿ, ವಿತರ್ಕ... ದೃಷ್ಟಿಕೋನದ... ನೇರವಿವರಣೆಯ ಸ್ಪಷ್ಟವಾದ ವಿಧಾನವಿದೆ. ಅದರಿಂದಾಗಿ ವಿಮುಕ್ತಿ ಜ್ಞಾನವಾದ ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟವಾಗಿ ಅರಿಯಬಹುದು.
ಯಾವುದು ಭಿಕ್ಷುಗಳೇ, ಆ ಸ್ಪಷ್ಟವಾದ ವಿವರಣೆ? ಅದು ಶ್ರದ್ಧೆಯಿಂದ ಹೊರತಾದದ್ದು... ದೃಷ್ಟಿಕೋನದ ಸ್ವೀಕಾರಕ್ಕೂ ಹೊರತಾದದ್ದು, ವಿಮುಕ್ತಿಜ್ಞಾನವಾದ ಜನ್ಮವು ನಾಶವಾಯಿತು... ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ ಮತ್ತು ಯಾವುದು ಅದು ವಿವರಣೆ? ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ರೂಪವನ್ನು ನೋಡಿದಾಗ ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಅಥವಾ ಮೋಹವಿದೆ ಎಂಬುದನ್ನು ಅರಿಯಬಹುದು. ಆಗ ಭಿಕ್ಷುವು ಅರ್ಥಮಾಡಿಕೊಳ್ಳುತ್ತಾನೆ. ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಮತ್ತು ಮೋಹವಿದೆ ಅಥವಾ ರಾಗವಿಲ್ಲ, ದ್ವೇಷವಿಲ್ಲ ಮತ್ತು ಮೋಹವಿಲ್ಲ ಎಂದು ಅರಿಯುತ್ತಾನೆ. ಈಗ ಹೇಳಿ ಭಿಕ್ಷುಗಳೇ, ಈ ರೀತಿಯ ಅರ್ಥಮಾಡಿಕೊಳ್ಳುವಿಕೆಯು ಶ್ರದ್ಧೆಯಿಂದ ಆಗಿದೆ. ವೈಯಕ್ತಿಕ ಅಭಿರುಚಿಯಿಂದ ಬಂದಿರುವುದೇ ಅಥವಾ ಶ್ರವಣದಿಂದ ಬಂದಿರುವುದೇ ಅಥವಾ ತರ್ಕದ ಫಲಿತಾಂಶವೇ ಅಥವಾ ದೃಷ್ಟಿಕೋನದ ಸ್ವೀಕಾರದಿಂದ ಬಂದಿರುವುದೇ? - ಇಲ್ಲ ಭಂತೆ. ಇವು ಪ್ರಜ್ಞಾದಿಂದ ದಶರ್ಿಸಿ ಬಂದಿರುವುದಲ್ಲವೇ? - ಹೌದು ಭಂತೆ. - ಇದೇ ಭಿಕ್ಷುಗಳೇ, ಹೀಗೆ ನೇರವಾಗಿ ಸ್ಪಷ್ಟೀಕರಣದಿಂದ ಭಿಕ್ಷುವು ವಿಮುಕ್ತಿಜ್ಞಾನವನ್ನು ಹೀಗೆ ಹೊಂದುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಮತ್ತೆ ಭಿಕ್ಷುಗಳೇ, ಕಿವಿಯಿಂದ ಶಬ್ದಗಳನ್ನು ಆಲಿಸಿದಾಗ... ನಾಸಿಕದಿಂದ ಗಂಧವನ್ನು ಆಘ್ರಾಣಿಸಿದಾಗ... ನಾಲಿಗೆಯಿಂದ ರುಚಿಯನ್ನು ಆಸ್ವಾದಿಸಿದಾಗ... ಕಾಯದಿಂದ ಸ್ಪಶರ್ಿಸಿದಾಗ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುವಾಗ ಆಂತರ್ಯದಲ್ಲಿ ರಾಗವು, ದ್ವೇಷವು ಅಥವಾ ಮೋಹವು ಉದಯಿಸಿದಾಗ ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಅಥವಾ ಮೋಹವಿದೆ ಎಂದು ಅರಿಯುತ್ತಾನೆ ಅಥವಾ ಆಂತರ್ಯದಲ್ಲಿ ರಾಗವಿಲ್ಲದಿದ್ದಾಗ, ದ್ವೇಷವಿಲ್ಲದಿದ್ದಾಗ, ಮೋಹವಿಲ್ಲದಿದ್ದಾಗ ಆಂತರ್ಯದಲ್ಲಿ ರಾಗವಿಲ್ಲ, ದ್ವೇಷವಿಲ್ಲ ಮತ್ತು ಮೋಹವಿಲ್ಲ ಎಂದು ಅರಿಯುತ್ತಾನೆ. ಇದು ಹೀಗಿರುವಾಗ ಈ ರೀತಿಯ ಅರ್ಥಮಾಡಿಕೊಳ್ಳುವಿಕೆಯು ಶ್ರದ್ಧೆಯಿಂದ ಉದಯಿಸಿತೆ ಅಥವಾ ವೈಯಕ್ತಿಕ ಅಭಿರುಚಿಯಿಂದ ಬಂದಿರುವುದೇ ಅಥವಾ ಶ್ರವಣದಿಂದ ಬಂದಿರುವುದೇ ಅಥವಾ ತರ್ಕದ ಫಲಿತಾಂಶವೇ ಅಥವಾ ದೃಷ್ಟಿಕೋನದ ಸ್ವೀಕಾರದಿಂದ ಬಂದಿರುವುದೇ? - ಇಲ್ಲ ಭಂತೆ. - ಭಿಕ್ಷುಗಳೇ ಹೀಗೆ ನೇರವಾಗಿ ಸ್ಷಷ್ಟೀಕರಣದಿಂದ ಭಿಕ್ಷುವು ವಿಮುಕ್ತಿಜ್ಞಾನವನ್ನು ಹೀಗೆ ಹೊಂದುತ್ತಾನೆ. ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.15.9 ಇಂದ್ರೀಯ ಸಂಪನ್ನ ಸುತ್ತಂ

154. ಆಗ ಭಿಕ್ಷುವೊಬ್ಬನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಇಂದ್ರೀಯ ಸಂಪನ್ನ, ಇಂದ್ರೀಯ ಸಂಪನ್ನ ಎನ್ನುತ್ತಾರಲ್ಲ, ಯಾವ ವಿಧವಾಗಿ ಭಂತೆ ಒಬ್ಬನು ಇಂದ್ರೀಯಸಂಪನ್ನನಾಗುತ್ತಾನೆ?
ಇಲ್ಲಿ ಭಿಕ್ಷುವು ಚಕ್ಷು ಇಂದ್ರೀಯದ ಉದಯ ಹಾಗು ವ್ಯಯ (ಅಳಿಯುವಿಕೆ)ದಲ್ಲಿ (ಉದಯಬ್ಬಯಾನುಪ್ಪಸ್ಸಿ) ವಿಪಸ್ಸನ ಸಾಧಿಸಿದಾಗ ಚಕ್ಷು ಇಂದ್ರೀಯದಲ್ಲಿ ವಿಕಷರ್ಿತನಾಗುತ್ತನೆ... ಶ್ರೋತ ಇಂದ್ರೀಯದಿಂದ... ಜಿಹ್ವೇಂದ್ರಿಯದಿಂದ ವಿಕಷರ್ಿತನಾಗುತ್ತಾನೆ... ಕಾಯೇಂದ್ರಿಯದಿಂದ... ಮನೀಂದ್ರೀಯದಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನ ಹೊಂದುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಭಿಕ್ಷು ಇಂದ್ರೀಯ ಸಂಪನ್ನನಾಗುತ್ತಾನೆ.


35.15.10 ಧಮ್ಮಕಥಿಕ ಪುಚ್ಚ ಸುತ್ತಂ (ಧರ್ಮ ಬೋಧಿಸುವವನ ಸುತ್ತ)

155. ಭಿಕ್ಷುವೊಬ್ಬನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಧಮ್ಮಕಥಿಕ (ಧಮ್ಮವನ್ನು ಬೋಧಿಸುವವ) ಧಮ್ಮಕಥಿಕ ಎನ್ನುತ್ತಾರಲ್ಲ ಯಾವ ವಿಧದಲ್ಲಿ ಒಬ್ಬನು ಧಮ್ಮಕಥಿಕನಾಗುತ್ತಾನೆ?
ಭಿಕ್ಷು, ಧಮ್ಮ ಬೋಧಿಸುವವನು ಚಕ್ಷುವಿನ ವಿಕರ್ಷಣೆಗೆ (ನಿಟ್ಟಿದ) ಗುರಿಯಾಗಿರಿಸಿ ಬೋಧಿಸಿದರೆ ವಿರಾಗವನ್ನು (ವೈರಾಗ್ಯ) ಗುರಿಯಗಿಸಿ ಬೋಧಿಸಿದದರೆ ಮತ್ತು ನಿರೋಧವನ್ನು (ನಿಲ್ಲಿಸುವಿಕೆ/ಅಂಟದಿರುವಿಕೆ/ಉದಯಿಸದಿರುವಿಕೆ) ಗುರಿಯಾಗಿರಿಸಿ ಬೋಧಿಸಿದರೆ ಅಂತಹವನು ಧಮ್ಮಕಥಿಕನಾಗುತ್ತಾನೆ (ಧಮ್ಮಬೋಧಕ). ಹಾಗೆಯೇ ಒಬ್ಬನು ಚಕ್ಷುವಿನ ವಿಕರ್ಷಣೆ, ವಿರಾಗ, ನಿರೋಧದೆಡೆಗೆ ಅಭ್ಯಸಿಸುವವನಾದರೆ, ಅಂತಹ ಗುರಿಯನ್ನಿರಿಸಿ ಸಾಧನೆ ಮಾಡುವವನಾಗಿದ್ದರೆ ಆತನು ಭಿಕ್ಷು ಎಂದು ಕರೆಯಲ್ಪಡುತ್ತಾನೆ. ಆತನು ಧಮ್ಮಕ್ಕೆ ಅನುಸಾರವಾಗಿಯೇ ಸಾಧಿಸುತ್ತಿದ್ದಾನೆ. ಹೀಗೆ ಆತನು ಚಕ್ಷುವಿನಿಂದ ವಿಕರ್ಷಣೆ ಹೊಂದಿ, ವಿರಾಗಹೊಂದಿ, ನಿರೋಧ ಸಾಧಿಸಿದರೆ ಅಂತಹವನು ದಿಟ್ಠಧಮ್ಮನಿಬ್ಬಾನಪನ್ನೋ ಭಿಕ್ಷು (ಅಂಟುವಿಕೆಯಿಂದ ವಿಮುಕ್ತನಾದ ಭಿಕ್ಷು) ಎನ್ನುತ್ತಾರೆ. ಅಂತಹವನು ಈ ಜನ್ಮದಲ್ಲೇ ನಿಬ್ಬಾಣ ಪಡೆಯುತ್ತಾನೆ. ಅದೇರೀತಿ ಧಮ್ಮಕಥಿಕನು ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸಿನ ವಿಕರ್ಷಣೆ, ವಿರಾಗಕ್ಕೆ, ನಿರೋಧಕ್ಕೆ ಬೋಧಿಸಿದರೆ ಆತನು ಧಮ್ಮಕಥಿಕನಾಗುತ್ತಾನೆ. ಅಂತಹವನ್ನು ಸಾಧಿಸುವವನು ನಿಜವಾದ ಭಿಕ್ಷು ಎನಿಸುತ್ತಾನೆ. ಹೀಗೆ ಎಲ್ಲದರಿಂದ ವಿಕರ್ಷಣೆ, ವಿರಾಗ, ನಿರೋಧ ಹೊಂದಿದವನು ದಿಟ್ಟಧಮ್ಮನಿಬ್ಬಾನಪನ್ನೋ ಭಿಕ್ಷು ಎನ್ನುತ್ತಾರೆ. ಅಂತಹವನು ಈ ಜನ್ಮದಲ್ಲೇ ನಿಬ್ಬಾಣ ಸಾಧಿಸುತ್ತಾನೆ.
ಇಲ್ಲಿಗೆ ನವಪುರಾಣ ವರ್ಗ ಮುಗಿಯಿತು.

Samyutta nukaya 35.14 ದೇವದಹ ವಗ್ಗೋ

ದೇವದಹ ವಗ್ಗೋ


35.14.1 ದೇವದಹ ಸುತ್ತಂ

134. ಒಮ್ಮೆ ಭಗವಾನರು ಶಾಕ್ಯರ ದೇವದಹನಾಮದ ನಿಗಮದಲ್ಲಿ ವಾಸಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಸಂಭೋಧಿಸಿದರು: ಭಿಕ್ಷುಗಳೇ, ನಾನು ಎಲ್ಲಾ ಭಿಕ್ಷುಗಳಿಗೂ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬೇಕು ಎಂದು ಹೇಳಲಾರೆ. ಹಾಗೆಯೇ ನಾನು ಎಲ್ಲಾ ಭಿಕ್ಖುಗಳಿಗೂ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬಾರದು ಎಂದು ಹೇಳಲಾರೆ. ಭಿಕ್ಷುಗಳೇ, ಯಾವ ಭಿಕ್ಷುಗಳು ಅರಹಂತರಾಗಿರುವರೋ, ಯಾರ ಆಸವಗಳು ನಾಶವಾಗಿವೆಯೋ, ಯಾರು ಪವಿತ್ರವಾದ ಜೀವನವನ್ನು ಜೀವಿಸಿದ್ದಾರೆಯೋ, ಮಾಡಬೇಕಾದುದನ್ನು ಮಾಡಿರುವರೋ, ಭಾರವನ್ನೆಲ್ಲಾ ಇಳಿಸಿದ್ದಾರೋ, ಗುರಿಯನ್ನು ತಲುಪಿದ್ದಾರೋ, ಭವದ ಸಂಕೋಲೆಗಳನ್ನು ಕತ್ತರಿಸಿಹಾಕಿದ್ದಾರೋ, ಅಂತಿಮ ಜ್ಞಾನದಿಂದ ಪೂರ್ಣವಾಗಿ ವಿಮುಕ್ತರೋ, ಅಂತಹವರಿಗೆ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬೇಕು ಎಂದು ಹೇಳಲಾರೆ. ಏಕೆ? ಏಕೆಂದರೆ, ಅವರು ತಮ್ಮ ಕಾರ್ಯವನ್ನು ಅಪ್ರಮತ್ತರಾಗಿಯೇ ಪೂರ್ಣಗೊಳಿಸಿದ್ದಾರೆ. ಅವರಿಂದ ಪ್ರಮತ್ತರಾಗಲು ಸಾಧ್ಯವಿಲ್ಲ. ಆದರೆ ಯಾವ ಭಿಕ್ಷುಗಳು ಇನ್ನೂ ಶಿಕ್ಷಣ ಕಲಿಯುತ್ತಿರುವರೋ (ಸೇಖ) ಯಾರು ಇನ್ನೂ ತಮ್ಮ ಮನಸ್ಸಿನ ಆದರ್ಶವನ್ನು ಪ್ರಾಪ್ತಿಮಾಡಿಲ್ಲವೋ, ಯಾರು ಅನುತ್ತರ ಕ್ಷೇಮವನ್ನು ಬಯಸುತ್ತ, ಬಂಧನಮುಕ್ತರಾಗಲು ಬಯಸುತ್ತಿರುವರೋ ಅವರೆಲ್ಲಾ ಇನ್ನೂ ಆರು ಆಯತನ (ಇಂದ್ರೀಯ)ಗಳ ಸ್ಪರ್ಶಗಳ ಬಗ್ಗೆ ಅಪ್ರಮತ್ತರಾಗಿರಬೇಕಾಗಿದೆ. ಏಕೆ ಹೀಗೆ? ಭಿಕ್ಷುಗಳೇ, ಕಣ್ಣಿನಿಂದ ಗ್ರಹಸಿಬಹುದಾದಂತಹ ರೂಪಗಳಿವೆ, ಅವು ಒಪ್ಪುವಂತಹದ್ದಾಗಿರುತ್ತದೆ, ಹಾಗೆಯೇ ಒಪ್ಪದಿರುವಂತಹುದು ಆಗಿರುತ್ತದೆ. ಇಂತಹ ಅನುಭವಗಳು ಪುನರಾವತರ್ಿಸುತ್ತಿದ್ದರೂ ಅವರು ಸತತ ಪ್ರಯತ್ನಶಾಲಿಗಳಾಗಿರುವುದಿಲ್ಲ. ಮನಸ್ಸಿಗೆ ಯಾವಾಗ ಈ ಗೀಳಿರುವುದಿಲ್ಲವೋ ಆಗ ಅದಮ್ಯ ಪ್ರಯತ್ನಶೀಲತೆಯು ಜಾಗೃತವಾಗುವುದು. ಗೊಂದಲರಹಿತ ಸ್ಪಷ್ಟವಾದ ಸಂಯಕ್ ಸ್ಮೃತಿಯು ಸ್ಥಾಪಿತವಾಗುವುದು. ಆಗ ಶರೀರವು ಪ್ರಶಾಂತವಾಗುವುದು, ಅಬಾಧಿತವಾಗುವುದು ಹಾಗು ಚಿತ್ತವು ಏಕಾಗ್ರತೆಯಾಗುವುದು, ಸಮಾಧಿಸ್ಥವಾಗುವುದು. ಹೀಗೆ ಅಪ್ರಮತ್ತತೆಯ ಫಲವನ್ನು ಗಮನಿಸಿ ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಈ ಭಿಕ್ಷುಗಳು ಆರು ಇಂದ್ರೀಯಗಳ ಬಗ್ಗೆ ಇನ್ನೂ ಅಪ್ರಮತ್ತತೆಯನ್ನು ಸಾಧಿಸಬೇಕಿದೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ (ಧಮ್ಮ) ಅವು ಸ್ವೀಕಾರಾರ್ಹವಾಗಿರುತ್ತವೆ ಅಥವಾ ಅಸ್ವೀಕಾರಾರ್ಹವಾಗಿರುತ್ತವೆ. ಇವು ಪುನರಾವರ್ತನೆ ಆಗುತ್ತಿದ್ದರೂ ಇದನ್ನು ದಾಟಲು ಈ ಹಿಂದೆ ಶ್ರಮಿಸುತ್ತಿಲ್ಲ. ಆದರೆ ಯಾವಾಗ ಮನಸ್ಸಿಗೆ ಇವು ಆಕ್ರಮಿತವಾಗುವುದಿಲ್ಲವೋ, ಆಗ ಸತತ ಪರಿಶ್ರಮಶೀಲತೆ ಜಾಗೃತವಾಗುವುದು, ಕ್ರಿಯಾಶೀಲವಾಗುವುದು, ಅವಿಚಲ ಜಾಗ್ರತೆ ಸ್ಥಾಪಿತವಾಗುವುದು. ಆಗ ಶರೀರವು ಪ್ರಶಾಂತವಾಗುವುದು, ಚಿತ್ತವು ಏಕಾಗ್ರತೆ ಹೊಂದಿ ಸಮಸ್ಥಿತವಾಗುವುದು. ಅಪ್ರಮತ್ತತೆಯ ಈ ಫಲವನ್ನು ಗಮನಿಸಿ, ನಾನು ಹೇಳುತ್ತಿದ್ದೇನೆ ಭಿಕ್ಷುಗಳೇ, ಏನೆಂದರೆ ಈ ಭಿಕ್ಷುವು ಇನ್ನೂ ಅಪ್ರಮತ್ತತೆಯನ್ನು ಸಾಧಿಸಬೇಕಿದೆ. ಆರು ಇಂದ್ರೀಯಗಳ ಸ್ಪರ್ಶಗಳಲ್ಲಿ ಎಚ್ಚರಿಕೆಯನ್ನು ಇಡಬೇಕಿದೆ.


35.14.2 ಖಣಸುತ್ತಂ (ಸಂಗಯ್ಹ ಸುತ್ತ)

(ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳುವಿಕೆಯ ಸುತ್ತ)
135. ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ, ನೀವು ಪವಿತ್ರಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ. ಭಿಕ್ಷುಗಳೇ, ನಾನು ಛಪಸ್ಸಾಯತನಿಕಾ (ಆರು ಸ್ಪರ್ಶಗಳ ಆಧಾರ) ಎಂಬ ನಿರಯವನ್ನು ಕಂಡಿರುವೆನು. ಅಲ್ಲಿ ಕಣ್ಣಿನಿಂದ ಕಾಣುವ ಯಾವುದೇ ರೂಪಗಳಾಗಲಿ ಅವೆಲ್ಲವೂ ಆಸೆಪಡುವಂತಹದ್ದಾಗಿಲ್ಲ, ಎಂದಿಗೂ ಬಯಸುವಂಥಹದ್ದಲ್ಲ. ಅಪ್ರಿಯವಾದವು ಎಂದಿಗೂ ಪ್ರಿಯವಾದುದಲ್ಲ. ತಿರಸ್ಕೃತವಾಗಿರುವಂತಹುದು ಎಂದಿಗೂ ಒಪ್ಪುವಂತಹುದಲ್ಲ. ಯಾವುದೆಲ್ಲವೂ ಒಬ್ಬನು ಆಲಿಸುತ್ತಾನೋ... ಯಾವುದೆಲ್ಲವನ್ನು ಒಬ್ಬನು ಆಘ್ರಾಣಿಸುತ್ತಾನೋ... ಯಾವುದೆಲ್ಲವನ್ನು ಒಬ್ಬನು ರುಚಿಸುತ್ತಾನೋ.... ಯಾವುದೆಲ್ಲವನ್ನು ಒಬ್ಬನು ಸ್ಪರ್ಶದ ಅನುಭವ ಪಡೆಯುತ್ತಾನೋ... ಯಾವುದೆಲ್ಲ ಮಾನಸಿಕ ವಿಷಯಗಳು ಮನಸ್ಸಿಗೆ ತಾಕುವುದೋ, ಅವೆಲ್ಲ ಆಸೆಪಡುವಂತಹುದಲ್ಲ. ಎಂದಿಗೂ ಬಯಸುವಂತಹುದಲ್ಲ. ಅಪ್ರಿಯವಾದವು ಎಂದಿಗೂ ಪ್ರಿಯವಾದುದಲ್ಲ. ತಿರಸ್ಕೃತವಾಗಿರುವಂತಹುದು ಎಂದಿಗೂ ಒಪ್ಪುವಂತಹುದಲ್ಲ. ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ ನೀವು ಪವಿತ್ರಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ. ಭಿಕ್ಷುಗಳೇ, ನಾನು ಛಪಸ್ಸಾಯಾತನಿಕಾ (ಆರು ಸ್ಪರ್ಶಗಳ ಆಧಾರ) ಎಂಬ ಸ್ವರ್ಗವನ್ನು ಕಂಡಿರುವೆನು. ಅಲ್ಲಿ ನೀವು ಯಾವುದೆಲ್ಲವನ್ನು ಗಮನಿಸಿದರೂ ಅವು ಆಸೆ ಹುಟ್ಟಿಸುವಂತಹದಿರುತ್ತದೆ ಎಂದಿಗೂ ಅನಾಸಕ್ತಿ ಉಂಟುಮಾಡುವುದಿಲ್ಲ. ಪ್ರಿಯವಾಗಿರುತ್ತದೆ ಎಂದಿಗೂ ಅಪ್ರಿಯವಾಗಿರುವುದಿಲ್ಲ. ಒಪ್ಪುವಂತಿರುತ್ತದೆ ಎಂದಿಗೂ ತಿರಸ್ಕರತವಾಗಿರುವುದಿಲ್ಲ. ಅಲ್ಲಿ ಯಾವುದೆಲ್ಲಾ ಶಬ್ದಗಳು ಇರುತ್ತವೆಯೋ ಅವೆಲ್ಲಾ ಆಸೆಹುಟ್ಟಿಸುವಂತದ್ದಾಗಿರುತ್ತದೆ... ಮೂಗಿನಿಂದ ಯಾವುದೆಲ್ಲಾ ವಾಸನೆಗಳನ್ನು... ನಾಲಿಗೆಯಿಂದ ಯಾವುದೆಲ್ಲಾ ರುಚಿಸ್ವಾದವನ್ನು ಆಸ್ವಾದಿಸುವೆವೋ... ಮನಸ್ಸಿನಿಂದ ಯಾವುದೆಲ್ಲಾ ಮಾನಸಿಕ ವಿಷಯಗಳು ಅರಿಯುತ್ತೇವೆಯೋ ಅವೆಲ್ಲಾ ಆಸೆಯನ್ನು ಹುಟ್ಟಿಸುವಂತಿರುತ್ತವೆ, ಎಂದಿಗೂ ಅನಾಸಕ್ತಿಯನ್ನುಂಟುಮಾಡುವುದಿಲ್ಲ, ಪ್ರಿಯವಾಗಿರುತ್ತದೆ ಎಂದಿಗೂ ಅಪ್ರಿಯವಾಗಿರುವುದಿಲ್ಲ. ಒಪ್ಪುವಂತಿರುತ್ತದೆ ಎಂದಿಗೂ ತಿರಸ್ಕರತವಾಗಿರುವುದಿಲ್ಲ. ಆದ್ದರಿಂದಾಗಿ ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ ನೀವು ಪವಿತ್ರ ಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ.


35.14.3 ಪಠಮ ರೂಪಾರಾಮ ಸುತ್ತಂ (ಪ್ರಥಮ ರೂಪಗಳಲ್ಲಿ ರಮಿಸುವಿಕೆಯ ಸುತ್ತ)

136. ಭಿಕ್ಷುಗಳೇ, ದೇವತೆಗಳು ಮತ್ತು ಮಾನವರು ರೂಪಗಳಲ್ಲಿ ರಮಿಸುತ್ತಾರೆ. ರೂಪಗಳಲ್ಲೇ ರತ (ಆನಂದ) ರಾಗಿರುತ್ತಾರೆ, ರೂಪಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ರೂಪಗಳ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸದಿರುವ ದೇವೆತೆಗಳು ಮತ್ತು ಮಾನವು ದುಃಖದಲ್ಲಿರುತ್ತಾರೆ. ದೇವತೆಗಳು ಹಾಗು ಮಾನವರು ಶಬ್ದಗಳಲ್ಲಿ ರಮಿಸುವರು... ಗಂಧಗಳಲ್ಲಿ ರತರಾಗಿರುವರು... ರುಚಿಸ್ವಾದಗಳಲ್ಲಿ ಆನಂದ ತಾಳುತ್ತಾರೆ... ಕಾಯಸ್ಪರ್ಶಗಳಲ್ಲೇ ಆನಂದಿಸುತ್ತಾರೆ... ಧಮ್ಮಗಳಲ್ಲಿ (ಮಾನಸಿಕ ವಿಷಯಗಳಲ್ಲಿ) ಆನಂದಿಸುತ್ತಾರೆ, ಅವುಗಳಲ್ಲಿ ರಮಿಸುತ್ತಾರೆ, ಅವುಗಳಲ್ಲೇ ರತರಾಗಿರುತ್ತಾರೆ, ಅವುಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸಿಸದಿರುವ ದೇವತೆಗಳು ಮತ್ತು ಮಾನವರು ದುಃಖದಲ್ಲಿರುತ್ತಾರೆ. ಆದರೆ ಭಿಕ್ಷುಗಳೇ, ತಥಾಗತರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಯಥಾಭೂತವಾಗಿ ಅವುಗಳ ಉದಯವನ್ನು ಹಾಗು ಅಳಿಯುವಿಕೆಯನ್ನು ಅರಿಯುತ್ತಾರೆ. ಇಂದ್ರೀಯಗಳ ಆಸ್ವಾದನೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ರೂಪಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಆನಂದ ತಾಳುವುದಿಲ್ಲ. ಅವುಗಳ ಅನಿತ್ಯತೆ, ವಿರಾಗ ಹಾಗು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಅವರು ಈ ಎಲ್ಲದರ ಉದಯ ಹಾಗು ಅಳಿಯುವಿಕೆ, ಅವುಗಳ ಆಸ್ವಾದತೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ಶಬ್ದಗಳಲ್ಲಿ. ಗಂಧಗಳಲ್ಲಿ... ರಸಗಳಲ್ಲಿ... ಸ್ಪರ್ಶಗಳಲ್ಲಿ... ಮಾನಸಿಕ ವಿಷಯಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಅನಂದ ತಾಳುವುದಿಲ್ಲ. ಬದಲಾಗಿ ಅವುಗಳ ಅನಿತ್ಯತೆ, ವಿರಾಗ ಮತ್ತು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಹೀಗೆ ನುಡಿದ ಭಗವಾನರು ನಂತರ ಸುಗತರು ಹೀಗೆ ಗಾಥೆಗಳನ್ನು ನುಡಿದರು.
ರೂಪಗಳು, ಶಬ್ದಗಳು, ರುಚಿಸ್ವಾದ, ಗಂಧ, ಸ್ಪರ್ಶ ಹಾಗು
ಮಾನಸಿಕ ವಿಷಯಗಳು ಆಸೆ ಹುಟ್ಟಿಸುವುವು
ಪ್ರಿಯವಾದವು, ಒಪ್ಪುವಂತಹವು, ಸ್ವಾಗತಿಸುವಂತಹವು.
ದೇವತೆಗಳ ಸಹಿತ ಈ ಲೋಕದಲ್ಲಿ ಇವೆಲ್ಲಾ
ಸುಖವೆಂದು ಸಮ್ಮತಿ ನೀಡಿದ್ದಾರೆ.
ಯಾವಾಗ ಇವು ಕರಗುತ್ತದೆಯೋ
ಅದು ದುಃಖವೆಂದು ಮಾನ್ಯತೆ ನೀಡುತ್ತಾರೆ.
ಈ ಯಾವುದೆಲ್ಲಾ ನನ್ನವು ಎಂಬುದರ ನಿರೋಧದಲ್ಲೆ
ಆರ್ಯರು ಸುಖವೆಂದು ಭಾವಿಸುವರು.
ಈ ದೃಷ್ಟಿಕೋನವುಳ್ಳವರು
ಇಡೀ ಲೋಕಗಳಿಗೆ ವಿರುದ್ಧವಾದ ಪಥದಲ್ಲಿ ಸಾಗುತಿಹರು.
ಯಾವುದನ್ನು ಪರರು ಸುಖವೆಂದು ಪರಿಗಣಿಸುವರೋ
ಅದನ್ನೇ ಆರ್ಯರು ದುಃಖವೆಂದು ನುಡಿಯುವರು
ಯಾವುದನ್ನು ಪರರು ದುಃಖವೆಂದು ಪರಿಗಣಿಸುವರೋ
ಅದನ್ನೇ ಆರ್ಯರು ಸುಖವೆಂದು ನುಡಿಯುವರು.
ಅರಿಯಲು ಕಡುಕಷ್ಟಕರವಾದ ಈ ಧಮ್ಮವನ್ನು ಹಿಡಿಯಿರಿ,
ಇಲ್ಲಿ ಮೂಢರು ದಿಗ್ಭ್ರಮೆಗೊಳ್ಳುತ್ತಾರೆ.
ತಡೆಗಳುಳ್ಳ ಚಿತ್ತದವರಿಗೆ ಇದು ಅಸ್ಪಷ್ಟವಾಗಿರುತ್ತದೆ
ದಶರ್ಿಸದವರಿಗೆ ಅಂಧಕಾರವಾಗಿದೆ.
ಉತ್ತಮರಿಗೆ ಇದು ತೆರೆದುಕೊಳ್ಳುವುದು
ದಶರ್ಿಸುವವರಿಗೆ ಇದು ಮಹಾನ್ ಬೆಳಕಾಗಿದೆ.
ಆದರೆ ಮಾರ್ಗ ಹಾಗು ಧಮ್ಮವನ್ನು ಅರಿಯದ
ಹಾಗು ಚುರುಕಿಲ್ಲದವರು ಇದರ ಸಾನಿದ್ಯದಲ್ಲಿದ್ದರೂ ಅರಿಯಲಾರರು.
ಯಾರಿಗೆ ಭವದಲ್ಲಿರಲು ರಾಗವಿದೆಯೋ
ಯಾರು ಭವಶ್ರೋತದ ಜೊತೆಗೆ ಹರಿಯುತ್ತಿರುವರೋ
ಯಾರು ಮಾರನ ಕ್ಷೇತ್ರದಲ್ಲಿ ಆಳವಾಗಿ ಸಿಲುಕಿರುವರೋ
ಅಂತಹವರಿಗೆ ಈ ಉದಾತ್ತ ಧಮ್ಮವು ಸುಲಭವಾಗಿ ಅರಿಯಲಾಗುವುದಿಲ್ಲ.
ಆರ್ಯರ ಹೊರತು ಇನ್ಯಾರಿಗೆ ಈ ಉತ್ಕೃಷ್ಟ ಸ್ಥಿತಿಯನ್ನು
ಅರಿಯಲು ಸಾಧ್ಯ?
ಯಾವಾಗ ಈ ಸ್ಥಿತಿಯನ್ನು ಸಮಂಜಸವಾಗಿ ಅರಿಯುವರೋ
ಆಗ ಆನಾಸ್ರಾವರು ಪರಿನಿಬ್ಬಾಣ ಪಡೆಯುವರು.


35.14.4 ದುತಿಯ ರೂಪಾರಾಮ ಸುತ್ತಂ (ಗ್ರಾಹ್ಯ ಸುತ್ತಂ)

137. ಭಿಕ್ಷುಗಳೇ, ದೇವತೆಗಳು ಮತ್ತು ಮಾನವರು ರೂಪಗಳಲ್ಲಿ ರಮಿಸುತ್ತಾರೆ. ರೂಪಗಳಲ್ಲೇ ರತ (ಆನಂದ) ರಾಗಿರುತ್ತಾರೆ, ರೂಪಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ರೂಪಗಳ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸದಿರುವ ದೇವೆತೆಗಳು ಮತ್ತು ಮಾನವು ದುಃಖದಲ್ಲಿರುತ್ತಾರೆ. ದೇವತೆಗಳು ಹಾಗು ಮಾನವರು ಶಬ್ದಗಳಲ್ಲಿ ರಮಿಸುವರು... ಗಂಧಗಳಲ್ಲಿ ರತರಾಗಿರುವರು... ರುಚಿಸ್ವಾದಗಳಲ್ಲಿ ಆನಂದ ತಾಳುತ್ತಾರೆ... ಕಾಯಸ್ಪರ್ಶಗಳಲ್ಲೇ ಆನಂದಿಸುತ್ತಾರೆ... ಧಮ್ಮಗಳಲ್ಲಿ (ಮಾನಸಿಕ ವಿಷಯಗಳಲ್ಲಿ) ಆನಂದಿಸುತ್ತಾರೆ, ಅವುಗಳಲ್ಲಿ ರಮಿಸುತ್ತಾರೆ, ಅವುಗಳಲ್ಲೇ ರತರಾಗಿರುತ್ತಾರೆ, ಅವುಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸಿಸದಿರುವ ದೇವತೆಗಳು ಮತ್ತು ಮಾನವರು ದುಃಖದಲ್ಲಿರುತ್ತಾರೆ. ಆದರೆ ಭಿಕ್ಷುಗಳೇ, ತಥಾಗತರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಯಥಾಭೂತವಾಗಿ ಅವುಗಳ ಉದಯವನ್ನು ಹಾಗು ಅಳಿಯುವಿಕೆಯನ್ನು ಅರಿಯುತ್ತಾರೆ. ಇಂದ್ರೀಯಗಳ ಆಸ್ವಾದನೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ರೂಪಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಆನಂದ ತಾಳುವುದಿಲ್ಲ. ಅವುಗಳ ಅನಿತ್ಯತೆ, ವಿರಾಗ ಹಾಗು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಅವರು ಈ ಎಲ್ಲದರ ಉದಯ ಹಾಗು ಅಳಿಯುವಿಕೆ, ಅವುಗಳ ಆಸ್ವಾದತೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ಶಬ್ದಗಳಲ್ಲಿ. ಗಂಧಗಳಲ್ಲಿ... ರಸಗಳಲ್ಲಿ... ಸ್ಪರ್ಶಗಳಲ್ಲಿ... ಮಾನಸಿಕ ವಿಷಯಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಅನಂದ ತಾಳುವುದಿಲ್ಲ. ಬದಲಾಗಿ ಅವುಗಳ ಅನಿತ್ಯತೆ, ವಿರಾಗ ಮತ್ತು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ.


35.14.5 ಪಠಮ ನ ತುಮ್ಹಕ ಸುತ್ತಂ (ಪಲಾಸಿನಾ ಸುತ್ತಂ)

138. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೊ, ಅವನ್ನೆಲ್ಲಾ ವಜರ್ಿಸಿಬಿಡಿ. ಯಾವಾಗ ನೀವು ದಶರ್ಿಸುವಿರೋ, ಆಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ ಮತ್ತು ಭಿಕ್ಷುಗಳೇ, ಯಾವುದು ನಿಮ್ಮದಲ್ಲ? ಕಣ್ಣು ನಿಮ್ಮದಲ್ಲ, ಅದನ್ನು ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಅಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ. ಕಿವಿಯು ನಿಮ್ಮದಲ್ಲ ಅದನ್ನು ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಅಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ. ಮೂಗು ನಿಮ್ಮದಲ್ಲ... ನಾಲಿಗೆಯ ನಿಮ್ಮದಲ್ಲ... ದೇಹ ನಿಮ್ಮದಲ್ಲ... ಮನಸ್ಸು ನಿಮ್ಮದಲ್ಲ. ಅವನ್ನೆಲ್ಲಾ ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಆಗ ಅದು ನಿಮ್ಮ ಕ್ಷೇಮಕ್ಕೆ ಮತ್ತು ಸುಖಕ್ಕೆ ಕೊಂಡೊಯ್ಯುತ್ತದೆ.
ಭಿಕ್ಷುಗಳೇ, ಬಹುಶಃ ಜನರು ಇದೇ ಜೇತವನದಲ್ಲಿ ಹುಲ್ಲು, ಕಟ್ಟಿಗೆಗಳು, ಕೊಂಬೆಗಳು, ರೆಂಬೆಗಳು ಹಾಗು ಒಣ ಎಲೆಗಳ ಗೊಂಚಲುಗಳನ್ನು ಸುಡುತ್ತಾರೆ ಅಥವಾ ತಮಗಿಷ್ಟ ಬಂದಹಾಗೆ ಮಾಡುತ್ತಾರೆ. ಆಗ ನೀವು ಹೀಗೆ ಯೋಚಿಸುವಿರೇನು? ಜನರು ನಮ್ಮನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಥವಾ ನಮ್ಮನ್ನು ಸುಡುತ್ತಿದ್ದರೆ ಅಥವಾ ಅವರಿಷ್ಟ ಬಂದಹಾಗೆ ಮಾಡುತ್ತಿದ್ದಾರೆ - ಇಲ್ಲ ಭಂತೆ. - ಏಕೆ? - ಭಂತೆ, ಏಕೆಂದರೆ ಅವ್ಯಾವುದೂ ತಾನಲ್ಲ ಹಾಗು ತನ್ನದು ಅಲ್ಲ. - ಹೀಗೆಯೇ ಭಿಕ್ಷುಗಳೇ, ಕಣ್ಣು ನಿಮ್ಮದಲ್ಲ... ಕಿವಿಯು... ಮೂಗು... ನಾಲಿಗೆ... ಕಾಯವು... ಮನಸ್ಸು ಸಹಾ ನಿಮ್ಮದಲ್ಲ. ನಿಮ್ಮದಲ್ಲದ್ದನ್ನು ಯಾವಾಗ ನೀವು ತ್ಯಜಿಸುವಿರೋ ಆಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ.

35.14.6 ದುತಿಯ ನ ತುಮ್ಹಕ ಸುತ್ತಂ

139. ಭಿಕ್ಷುಗಳೇ, ಯಾವುದು ನಿಮ್ಮದಲ್ಲವೋ ಅವನ್ನೆಲ್ಲಾ ಪರಿತ್ಯಜಿಸಿರಿ. ಅದರಿಂದಾಗಿ ಹಿತವು ಸುಖವು ಲಭಿಸುವುದು. ಯಾವುದು ಭಿಕ್ಷುಗಳೇ, ನಿಮ್ಮದಲ್ಲ? ಭಿಕ್ಷುಗಳೇ, ರೂಪವು ನಿಮ್ಮದಲ್ಲ, ಅದನ್ನು ಪರಿತ್ಯಜಿಸಿರಿ. ಅದರಿಂದಾಗಿ ಭವಿಷ್ಯದಲ್ಲಿ ಹಿತವು ಹಾಗು ಸುಖವು ಲಭಿಸುವುದು. ಭಿಕ್ಷುಗಳೇ, ಶಬ್ದವು ನಿಮ್ಮದಲ್ಲ... ವಾಸನೆಗಳು ನಿಮ್ಮದಲ್ಲ... ರಸ(ರುಚಿ)ಗಳು ನಿಮ್ಮದಲ್ಲ... ಸ್ಪರ್ಶಗಳು ನಿಮ್ಮದಲ್ಲ... ಮಾನಸಿಕ ವಿಷಯಗಳು ನಿಮ್ಮದಲ್ಲ. ಇದನ್ನು ಪರಿತ್ಯಜಿಸಿರಿ. ಅದರಿಂದಾಗಿ ಹಿತವೂ, ಸುಖವೂ ಲಭಿಸುವುದು. ಬಹುಶಃ ಜನರು ಇದೇ ಜೇತವನದಲ್ಲಿ ಹುಲ್ಲು, ಕಟ್ಟಿಗೆಗಳು, ಕೊಂಬೆಗಳು, ರೆಂಬೆಗಳು ಹಾಗು ಒಣ ಎಲೆಗಳ ಗೊಂಚಲುಗಳನ್ನು ಸುಡುತ್ತಾರೆ ಅಥವಾ ತಮಗಿಷ್ಟ ಬಂದಹಾಗೆ ಮಾಡುತ್ತಾರೆ. ಆಗ ನೀವು ಹೀಗೆ ಯೋಚಿಸುವಿರೇನು? ಜನರು ನಮ್ಮನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಥವಾ ನಮ್ಮನ್ನು ಸುಡುತ್ತಿದ್ದರೆ ಅಥವಾ ಅವರಿಷ್ಟ ಬಂದಹಾಗೆ ಮಾಡುತ್ತಿದ್ದಾರೆ - ಇಲ್ಲ ಭಂತೆ. - ಏಕೆ? - ಭಂತೆ, ಏಕೆಂದರೆ ಅವ್ಯಾವುದೂ ತಾನಲ್ಲ ಹಾಗು ತನ್ನದು ಅಲ್ಲ. - ಹೀಗೆಯೇ ಭಿಕ್ಷುಗಳೇ, ಕಣ್ಣು ನಿಮ್ಮದಲ್ಲ... ಕಿವಿಯು... ಮೂಗು... ನಾಲಿಗೆ... ಕಾಯವು... ಮನಸ್ಸು ಸಹಾ ನಿಮ್ಮದಲ್ಲ. ನಿಮ್ಮದಲ್ಲದ್ದನ್ನು ಯಾವಾಗ ನೀವು ತ್ಯಜಿಸುವಿರೋ ಆಗ ಹಿತವೂ ಸುಖವೂ ಲಭಿಸುವುದು.

35.14.7 ಅಜ್ಝತ್ತಾನಿಚ್ಚ ಹೇತು ಸುತ್ತಂ

140. ಭಿಕ್ಷುಗಳೇ, ಚಕ್ಷು ಅನಿತ್ಯವಾಗಿದೆ. ಚಕ್ಷು ಉತ್ಪನ್ನಕ್ಕೆ ಕಾರಣವ ಹಾಗು ಯಾವುದು ಬೆಂಬಲವೋ ಅದು ಸಹಾ ಅನಿತ್ಯಕರವಾಗಿದೆ. ಯಾವ ಚಕ್ಷು ಅನಿತ್ಯದಿಂದ ಉದಯಿಸಿದೆಯೋ ಅದು ಹೇಗೆ ನಿತ್ಯವಾಗಬಲ್ಲದು? ಕಿವಿಯು ಅನಿತ್ಯಕರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯಕರವಾಗಿದೆ. ಮನಸ್ಸಿನ ಉತ್ಪನ್ನಕ್ಕೆ ಯಾವುದು ಕಾರಣವೂ ಹಾಗು ಬೆಂಬಲವೂ ಅದು ಸಹಾ ಅನಿತ್ಯಕರವಾಗಿದೆ. ಯಾವ ಮನಸ್ಸು ಅನಿತ್ಯದಿಂದಾಗಿ ಉದಯಿಸಿದೆಯೋ ಅದು ಹೇಗೆ ನಿತ್ಯವಾಗಬಲ್ಲದು? ಹೀಗೆ ಅರಿತ ಆರ್ಯಶ್ರಾವಕ ಭಿಕ್ಷುವು ಆರು ಇಂದ್ರೀಯಗಳಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗವು ಉಂಟಾಗುತ್ತದೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತಿಜ್ಞಾನವು ಲಭಿಸುತ್ತದೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.8 ಅಜ್ಝತ್ತ ದುಃಖ ಹೇತು ಸುತ್ತಂ

141. ಭಿಕ್ಷುಗಳೇ, ಚಕ್ಷು ದುಃಖಕರವಾಗಿದೆ. ಚಕ್ಷು ಉದಯಕ್ಕೆ ಕಾರಣವು ಹಾಗು ಬೆಂಬಲವೂ ಸಹಾ ದುಃಖಕರವಾಗಿದೆ. ಯಾವ ಚಕ್ಷುವಿನ ಉದಯಕ್ಕೆ ಕಾರಣವು ದುಃಖವಾಗಿರುವಾಗ ಅದು ಹೇಗೆ ಸುಖಕಾರಿಯಾಗಬಲ್ಲದು? ಕಿವಿಯು ದುಃಖಕರವಾಗಿದೆ... ಮೂಗು ದುಃಖಕರವಾಗಿದೆ... ನಾಲಿಗೆಯು... ದೇಹವು... ಮನಸ್ಸು ದುಃಖಕರವಾಗಿದೆ. ಯಾವ ಮನಸ್ಸಿನ ಉದಯಕ್ಕೆ ಕಾರಣವು ದುಃಖಕರವಾಗಿರುವಾಗ ಅದನ್ನು ಹೇಗೆ ಸುಖಕರವಾಗಬಲ್ಲದು. ಹೀಗೆ ಅರಿತಂತಹ ಆರ್ಯ ಶ್ರಾವಕನು ಇವುಗಳಿಂದ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.9 ಅಜ್ಝತ್ತನತ್ತ ಹೇತು ಸುತ್ತಂ

142. ಭಿಕ್ಷುಗಳೇ, ಚಕ್ಷುವು ಅನಾತ್ಮವಾಗಿದೆ. ಯಾವುದು ಚಕ್ಷುವಿನ ಉದಯಕ್ಕೆ ಕಾರಣ (ಹೇತು) ಹಾಗು ಬೆಂಬಲವೋ ಅದು ಸಹಾ ಅನಾತ್ಮವಾಗಿದೆ. ಯಾವುದು ಅನಾತ್ಮದ ಕಾರಣದಿಂದಾಗಿ ಉದಯಿಸಿದೆಯೋ ಅದು ಹೇಗೆ ಆತ್ಮವಾಗಲು ಸಾಧ್ಯವಿದೆ? ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸಿನ ಉದಯಕ್ಕೆ ಯಾವುದು ಕಾರಣ ಹಾಗು ಬೆಂಬಲವೂ ಅನಾತ್ಮವಾಗಿದೆಯೊ ಅದು ಹೇಗೆ ಆತ್ಮವಾಗಲು ಸಾಧ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.10 ಬಾಹಿರಾನಿಚ್ಚ ಹೇತು ಸುತ್ತಂ

143. ಭಿಕ್ಷುಗಳೇ, ರೂಪಗಳು ಅನಿತ್ಯವಾಗಿವೆ. ಯಾವುದು ರೂಪಗಳ ಕಾರಣವೋ ಹಾಗು ಬೆಂಬಲವೋ ಅವು ಸಹಾ ಅನಿತ್ಯವಾಗಿವೆ. ಅನಿತ್ಯದ ಕಾರಣದಿಂದಾಗಿ ಉದಯಿಸಿದ ರೂಪಗಳು ಹೇಗೆ ನಿತ್ಯವಾಗಲು ಸಾಧ್ಯ? ಶಬ್ದಗಳು... ವಾಸನೆಗಳು... ರುಚಿಗಳು... ಸ್ಪರ್ಶಗಳು... ಮಾನಸಿಕ ವಿಷಯಗಳು ಸಹಾ ಅನಿತ್ಯವಾಗಿವೆ. ಯಾವುದು ಮಾನಸಿಕ ವಿಷಯಗಳಿಗೆ ಕಾರಣವೋ ಹಾಗು ಬೆಂಬಲವೋ ಅವು ಸಹಾ ಅನಿತ್ಯವಾಗಿವೆ. ಅನಿತ್ಯದ ಕಾರಣಗಳಿಂದ ಉದಯಿಸಿದ ಧಮ್ಮಗಳು ಹೇಗೆ ನಿತ್ಯವಾಗಲು ಸಾದ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕ ಭಿಕ್ಷುವು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.11 ಬಾಹಿರಾ ದುಃಖ ಹೇತು ಸುತ್ತಂ

144. ಭಿಕ್ಷುಗಳೇ, ರೂಪಗಳು ದುಃಖಕರವಾಗಿವೆ. ಯಾವುದು ರೂಪಗಳ ಕಾರಣವೊ ಹಾಗು ಬೆಂಬಲವೋ ಅವು ಸಹಾ ದುಃಖಕರವಾಗಿವೆ. ದುಃಖದ ಕಾರಣದಿಂದಾಗಿ ಉದಯಿಸಿದ ರೂಪಗಳು ಹೇಗೆ ಸುಖವಾಗಲು ಸಾದ್ಯ? ಶಬ್ದಗಳು... ವಾಸನೆಗಳು... ರಸಗಳು... ಸ್ಪರ್ಶಗಳು... ಮತ್ತು ಧಮ್ಮಗಳು (ಮಾನಸಿಕ ವಿಷಯಗಳು) ದುಃಖಕರವಾಗಿವೆ. ಯಾವ ಧಮ್ಮಗಳ ಉದಯಕ್ಕೆ ಕಾರಣವು ಹಾಗು ಬೆಂಬಲವೋ ಅದು ಸಹಾ ದುಃಖಕರವಾಗಿವೆ. ದುಃಖ ಕಾರಣದಿಂದ ಉದಯಿಸಿದಂತಹ ಧಮ್ಮಗಳು ಹೇಗೆ ಸುಖಕರವಾಗಲು ಸಾಧ್ಯ.? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.12 ಬಾಹಿರಾನತ್ತ ಹೇತು ಸುತ್ತಂ

145. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿವೆ. ರೂಪಗಳ ಉದಯಕ್ಕೆ ಕಾರಣ ಹಾಗು ಬೆಂಬಲವು ಸಹಾ ಅನಾತ್ಮವಾಗಿವೆ. ಅನಾತ್ಮದಿಂದ ಉದಯಿಸಿದಂತಹ ರೂಪಗಳು ಹೇಗೆತಾನೇ ಆತ್ಮವಾಗಲು ಸಾಧ್ಯ? ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಾತ್ಮವಾಗಿವೆ. ಧಮ್ಮಗಳ ಉದಯಕ್ಕೆ ಕಾರಣ ಹಾಗು ಬೆಂಬಲವೂ ಸಹಾ ಅನಾತ್ಮವಾಗಿವೆ. ಅನಾತ್ಮದಿಂದ ಉದಯಿಸಿದಂತಹ ಧಮ್ಮಗಳು ಹೇಗೆತಾನೆ ಆತ್ಮವಾಗಲು ಸಾಧ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಇಲ್ಲಿಗೆ ದೇವದಹವರ್ಗವು ಮುಗಿಯಿತು.

Samyutta nikaya 35.13.ಗಹಪತಿವಗ್ಗೋ (ಗೃಹಪತಿ ವರ್ಗ)

ಗಹಪತಿವಗ್ಗೋ (ಗೃಹಪತಿ ವರ್ಗ)



35.13.1 ವೇಸಾಲಿ ಸುತ್ತಂ


124. ಒಮ್ಮೆ ಭಗವಾನರು ವೈಶಾಲಿಯ ಮಹಾವನದಲ್ಲಿರುವ ಕೂಟಾಗಾರಸಾಲಯದಲ್ಲಿ (ಶಿಬಿರಗಳನ್ನು ಹೊಂದಿದ್ದ ಛಾವಣಿಯ ಬೃಹತ್ ಸಭಾಂಗಣದಲ್ಲಿ) ವಾಸಿಸುತ್ತಿದ್ದರು. ಆಗ ವೈಶಾಲಿಯ ಗೃಹಸ್ಥನಾಗಿದ್ದ ಉಗ್ಗ (ಉಗ್ರ)ನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು.

ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ.

ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...

ಓ ಉಗ್ಗನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.

ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.

ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.

ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಗ್ಗನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.2 ವಜ್ಜಿ ಸುತ್ತಂ


125. ಒಮ್ಮೆ ಭಗವಾನರು ವಜ್ಜಿಗಳ ಹತ್ಥಿಗಾಮ (ಆನೆಗಳ ಗ್ರಾಮ)ದಲ್ಲಿ ವಿಹರಿಸುತ್ತಿದ್ದರು. ಆಗ ಹತ್ಥಿಗಾಮದ ಉಗ್ಗನೆಂಬ ಗೃಹಸ್ಥನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು: ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ... ಓ ಉಗ್ಗನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಗ್ಗನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.3 ನಾಳನ್ದ ಸುತ್ತಂ


126. ಒಮ್ಮೆ ಭಗವಾನರು ನಳಂದದ ಪಾವಾರಿಕದ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಉಪಾಲಿ ಎಂಬ ಗೃಹಸ್ಥನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು: ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಉಪಾಲಿಯೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ.... ಓ ಉಪಾಲಿಯೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಉಪಾಲಿಯೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಉಪಾಲಿಯೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಪಾಲಿಯೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.4 ಭಾರದ್ವಾಜ ಸುತ್ತಂ


127. ಒಮ್ಮೆ ಆಯುಷ್ಮಂತ ಪಿಂಡೋಲ ಭಾರದ್ವಜನು ಕೋಸಂಬಿಯ ಘೋಷಿತ ಆರಾಮದಲ್ಲಿ ವಾಸಿಸುತ್ತಿದ್ದನು. ಆಗ ರಾಜ ಉದೇನನು ಆಯುಷ್ಮಂತ ಪಿಂಡೂಲ ಭಾರದ್ವಜರಲ್ಲಿಗೆ ಬಂದು ವಂದಿಸಿ, ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸಿದನು: ಭಾರದ್ವಜ ಗುರುಗಳೇ, ಯಾವ ಕಾರಣದಿಂದಾಗಿ ಮತ್ತು ಯಾವ ಉದ್ದೇಶದಿಂದಾಗಿ ಈ ಕಿರಿಯ ವಯಸ್ಸಿನ ಯುವಕರು ಇನ್ನೂ ಕೂದಲು ಕಪ್ಪಾಗಿರುವಾಗಲೇ, ಯೌವ್ವನದ ಪ್ರಧಾನ ಕಾಲದಲ್ಲೇ ಇಂದ್ರೀಯ ಸುಖಗಳನ್ನು ವಜರ್ಿಸಿ, ಪವಿತ್ರವಾದ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದಾರೆ ಹಾಗು ಮುಂದುವರೆಸುತ್ತಿದ್ದಾರೆ?

ಮಹಾರಾಜ, ಭಗವಾನರು ಅರಹಂತರು, ಸಮ್ಮಾಸಂಬುದ್ಧರು ಆಗಿರುವರು. ಅವರಿಗೆ ಎಲ್ಲಾ ತಿಳಿದಿದೆ. ಅವರು ಭಿಕ್ಷುಗಳಿಗೆ ಹೀಗೆ ಉಪದೇಶಿಸಿದ್ದಾರೆ, ಏನೆಂದರೆ ಬನ್ನಿ ಭಿಕ್ಖುಗಳೇ, ಯಾವ ಸ್ತ್ರೀಯರು ನಿಮ್ಮ ಮಾತೆಯ ವಯಸ್ಸಿನವರೋ ಅವರನ್ನೆಲ್ಲಾ ನಿಮ್ಮ ಮಾತೆಯರಂತೆಯೇ ಕಾಣಿರಿ, ಯಾವ ಸ್ತ್ರೀಯರು ನಿಮ್ಮ ಭಗಿನಿಯ (ಸಹೋದರಿ) ವಯಸ್ಸಿನವರೋ ಅವರನ್ನೆಲ್ಲಾ ನಿಮ್ಮ ಭಗಿನಿಯರಂತೆಯೇ ಕಾಣಿರಿ ಮತ್ತು ಯಾವ ಸ್ತ್ರೀಯರು ನಿಮ್ಮ ಮಗಳ (ಕಿರಿ) ವಯಸ್ಸಿನವರೋ ಅಂತಹವನ್ನೆಲ್ಲಾ ಮಗಳಂತೆಯೇ ಕಾಣಿರಿ. ಆದ್ದರಿಂದಲೇ ಮಹಾರಾಜ, ಇದೇ ಕಾರಣವಾಗಿದೆ ಹಾಗು ಇದೇ ಉದ್ದೇಶವಾಗಿದೆ. ಹಾಗಾಗಿಯೇ ಭಿಕ್ಷುಗಳು ಕಿರಿವಯಸ್ಸಿನ ಯುವಕರಾಗಿದ್ದರ, ಇನ್ನೂ ಕೂದಲು ಕಪ್ಪಾಗಿಯೇ ಇದ್ದರೂ, ಯೌವ್ವನದ ಪ್ರಧಾನ ಕಾಲದಲ್ಲೇ ಇದ್ದರೂ ಸಹಾ ಇಂದ್ರೀಯ ಸುಖಗಳನ್ನು ವಜರ್ಿಸಿ, ಪರಿಶುದ್ಧವಾದ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದಾರೆ.

ಆದರೆ ಭಾರದ್ವಜ ಗುರುಗಳೇ, ಈ ಮನಸ್ಸು ಪರಮ ಚಂಚಲವಾದುದು, ಹಲವುವೇಳೆ ಮಾತೃಸಮಾನ ವಯಸ್ಸಿದ್ದರೂ ಸಹಾ ಲೋಭವು ಉಂಟಾಗುತ್ತದೆ, ಭಗಿನಿ ಸಮಾನ ವಯಸ್ಸಿದ್ದರೂ ಸಹಾ ಲೋಭವು ಉದಯಿಸುವುದು. ಹಾಗೆಯೇ ಪುತ್ರಿಸಮಾನ ವಯಸ್ಸಿದ್ದರೂ ಸಹಾ ಲೋಭವು ಉದಯಿಸುವುದು. ಹೀಗಾಗಿ ಈ ಕಿರಿ ವಯಸ್ಸಿನ ಯುವಕರು ಇನ್ನೂ ಕೂದಲು ಕಪ್ಪಾಗಿರುವಾಗಲೇ... ಬೇರೆ ಕಾರಣವೂ, ಬೇರೆ ಉದ್ದೇಶ ಇರುವುದೇ? ಹೇಗೆ ಅವರ ಬ್ರಹ್ಮಚರ್ಯೆಯು ವಿಶುದ್ಧವಾಗುವುದು?

ಮಹಾರಾಜರೇ, ಭಗವಾನರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಎಲ್ಲವನ್ನು ಅರಿತಿದ್ದಾರೆ. ಅವರು ಹೀಗೆ ಉಪದೇಶಿಸಿರುವರು: ಬನ್ನಿ ಭಿಕ್ಷುಗಳೇ, ನೀವು ಶರೀರವನ್ನು ಹೀಗೆ ಪರಿಶೀಲಿಸಿರಿ. ಈ ಶರೀರವು ಪಾದತಲದಿಂದ ಶಿರದ ಕೂದಲಿನವರೆಗೂ ಅನೇಕರೀತಿಯ ಅಸಹ್ಯಕರ, ಅಶುಚಿಗಳನ್ನು ಹೊಂದಿವೆ. ಹೇಳುವುದಾದರೆ ತಲೆಗೂದಲು, ಶರೀರದ ಕೂದಲು, ಉಗುರುಗಳು, ದಂತ, ಚರ್ಮ, ಮಾಂಸ, ಸ್ನಾಯು, ಮೂಳೆ, ಅಸ್ಥಿಮಚ್ಚೆ, ಮೂತ್ರಪಿಂಡಗಳು, ಹೃದಯ, ಯಕೃತ್, ಪ್ಲೀಹ, ಶ್ವಾಸಕೋಶಗಳು, ಕರುಳು, ಜಠರ, ಹೊಟ್ಟೆಯಲ್ಲಿರುವ ಮಲ, ಪಿತ್ತರಸ, ಕಫ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು, ಜೊಲ್ಲು, ಕೀಲುದ್ರವ, ಮೂತ್ರ ಇತ್ಯಾದಿ. ಓ ಮಹಾರಾಜ, ಶರೀರದ ಯಥಾಸ್ಥಿತಿಯು ಹೀಗಿರುವುದರಿಂದಾಗಿ ಇದೇ ಕಾರಣಕ್ಕಗಿ, ಇದೇ ಉದ್ದೇಶದಿಂದಾಗಿ ಪರಿಶುದ್ಧ ಬ್ರಹ್ಮಚರ್ಯ ಜೀವನವನ್ನು ಪಾಲಿಸುತ್ತಿದ್ದಾರೆ....

ಆದರೆ ಭಾರದ್ವಜ ಗುರುಗಳೇ, ಯಾವ ಭಿಕ್ಷುಗಳು ಶಾರೀರಿಕವಾಗಿ ಅಭಿವೃದ್ಧಿ ಹೊಂದಿದವರೊ, ಶೀಲದಲ್ಲಿ ಅಭಿವೃದ್ಧಿ ಹೊಂದಿರುವರೊ, ಚಿತ್ತಾಭಿವೃದ್ಧಿಯಲ್ಲಿ ನಿಷ್ಣಾತರೊ, ಪ್ರಜ್ಞಾಶೀಲತೆಯಲ್ಲಿ ಅಭಿವೃದ್ಧಿ ಹೊಂದಿಲ್ಲವೋ ಅಂತಹವರಿಗೆ ಇದು ಖಂಡಿತವಾಗಿ ದುಷ್ಕರವಾಗಿದೆ. ಆತನು ಈ ಶರೀರವೂ ಅಸಹ್ಯವೂ, ಅಶುಚಿಯು (ಅಶುಭ) ಆಗಿದೆ ಎಂದು ಪ್ರಯತ್ನಿಸಿದಾಗಲು ಆತನಿಗೆ ಸುಂದರವಾಗಿ (ಶುಭವಾಗಿ) ಕಾಣುತ್ತದೆ. ಹೀಗಾಗಿ ಬೇರೆ ಯಾವುದಾದರೂ ಕಾರಣವು ಹಾಗು ಉದ್ದೇಶವು ಇದೆಯೇ? ಈ ಕಿರಿವಯಸ್ಸಿನ ಯುವಕರು... ಹೇಗೆ ವಿಶುದ್ಧವಾದ ಬ್ರಹ್ಮಚರ್ಯೆ ಜೀವನವನ್ನು ಪಾಲಿಸುತ್ತಾರೆ?

ಮಹಾರಾಜ, ಭಗವಾನರು ಅರಹಂತರು, ಸಮ್ಮಾಸಂಬುದ್ಧರು ಆಗಿದ್ದಾರೆ, ಅವರು ಸರ್ವವನ್ನು ತಿಳಿದವರಾಗಿದ್ದಾರೆ. ಅವರು ಹೀಗೆ ಬೋಧಿಸಿದ್ದಾರೆ: ಬನ್ನಿ ಭಿಕ್ಷುಗಳೇ, ನಿಮ್ಮ ಇಂದ್ರೀಯಗಳನ್ನೆಲ್ಲಾ ಜೋಪಾನವಾಗಿ ಸಂರಕ್ಷಿಸಿರಿ. ಕಣ್ಣಿನಿಂದ ರೂಪಗಳನ್ನು ನೋಡುವಾಗ, ರೂಪಗಳ (ಸ್ತ್ರೀಯರ) ಸಂಕೇತಗಳನ್ನಗಲಿ, ವಿವರ ವಿಶೇಷಗಳನ್ನಾಗಲಿ ಹಿಡಿಯಬೇಡಿ. ಏಕೆಂದರೆ ನೀವು ಕಣ್ಣನ್ನು ರಕ್ಷಿಸದೆ ಹೋದರೆ, ಚಕ್ಷುವಿನ ಮೂಲಕ ಅಕುಶಲ ಸ್ಥಿತಿಗಳಾದ ದುರಾಸೆ, ಹಗೆತನ ಇತ್ಯಾದಿಗಳು ನಿಮ್ಮಲ್ಲಿ ಆಕ್ರಮಣ ಮಾಡಬಹುದು. ಹೀಗಾಗಿ ನಿಗ್ರಹವನ್ನು ಅಭ್ಯಸಿಸಿರಿ. ಚಕ್ಷು ಇಂದ್ರೀಯವನ್ನು ಕಾಪಾಡಿರಿ, ಕಣ್ಣನ್ನು ನಿಗ್ರಹಿಸಿರಿ. ಹಾಗೆಯೇ ಕಿವಿಯಿಂದ ಶಬ್ದಗಳನ್ನು ಕೇಳುವಾಗ ಸಂಕೇತಗಳನ್ನಾಗಲಿ, ವಿವರ ವಿಶೇಷತೆಗಳನ್ನಾಗಲಿ ಹಿಡಿಯಬೇಡಿ, ಏಕೆಂದರೆ ಆಗ ನಿಮ್ಮಲ್ಲಿ ದುರಾಸೆ ಮತ್ತು ಹಗೆತನಗಳು ಇತ್ಯಾದಿಗಳು ಉಂಟಾಗಬಹುದು. ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುವಾಗ ಅವರ ಸಂಕೇತಗಳಾಗಲಿ, ಅದರ ವಿವರ ವಿಶೇಷತೆಗಳಾಗಲಿ ಹಿಡಿಯಬೇಡಿರಿ. ಏಕೆಂದರೆ ಮನೇಂದ್ರಿಯವು ಪಹರೆರಹಿತವಾಗಿರುತ್ತದೆ. ಅಂತಹ ಸಮಯದಲ್ಲಿ ಅಕುಶಲ ಸ್ಥಿತಿಗಳಾದ ದುರಾಸೆಯಾಗಲಿ, ಹಗೆತನವಾಗಲಿ ಇತ್ಯಾದಿ ಆಕ್ರಮಿಸಬಹುದು. ಆದ್ದರಿಂದಾಗಿ ನಿಗ್ರಹದ ಹಾದಿಯನ್ನು ಅಭ್ಯಸಿಸಿರಿ, ಮನೇಂದ್ರಿಯವನ್ನು ಚೆನ್ನಾಗಿ ಸಂರಕ್ಷಿಸಿ, ಮನೋನಿಗ್ರಹ ಕೈಗೊಳ್ಳಿರಿ. ಓ ಮಹಾರಾಜನೇ, ಇದೇ ಕಾರಣ ಹಾಗು ಇದೇ ಉದ್ದೇಶದಿಂದಾಗಿ ಭಿಕ್ಖುಗಳು... ವಿಶುದ್ಧಿ ಸಾಧಿಸುತ್ತಾರೆ. ಪರಿಪೂರ್ಣವಾದ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸುತ್ತಾರೆ.

ಆಶ್ಚರ್ಯ ಭಾರದ್ವಜರೇ! ಅದ್ಭುತ ಭಾರದ್ವಜ ಗುರುಗಳೇ, ಭಗವಾನರು ಅರಹಂತರು ಹಾಗು ಸಮ್ಮಾಸಂಬುದ್ಧರಿಂದ ಎಂತಹ ಸುಭಾಷಿತವು ಹೇಳಲ್ಪಟ್ಟಿದೆ. ಹೀಗೆ ಈ ವಿಶುದ್ದಿ ಕಾರಣಕ್ಕಾಗಿ ಈ ಉದ್ದೇಶಕ್ಕಾಗಿಯೇ ಯುವ ಭಿಕ್ಖುಗಳು ಕೂದಲು ಕಪ್ಪಾಗಿರುವಾಗಲೇ, ಯೌವ್ವನದ ಶುಭ ವೇಳೆಯಲ್ಲಿಯೇ ಇಂದ್ರಿಯ ಸುಖಗಳಿಗೆ ಬಲಿಯಾಗದೆ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸುತ್ತಾರೆ. ನಾನು ಸಹಾ ಅಂತಃಪುರದಲ್ಲಿ ಪ್ರವೇಶಿಸುವಾಗ ಅರಕ್ಷಿತ ಕ್ರಿಯೆ, ಅರಕ್ಷಿತ ಮಾತು ಹಾಗು ಅರಕ್ಷಿತ ಮನಸ್ಸಿನಿಂದ ಇರುತ್ತಿದ್ದೆನು. ಎಚ್ಚರಿಕೆಯಿಲ್ಲದೆ, ನಿಗ್ರಹವಿಲ್ಲದೆ ಇರುತ್ತಿದ್ದೆನು. ಆಗ ನನ್ನಲ್ಲಿ ರಾಗವು ಆಕ್ರಮಣ ಮಾಡುತ್ತಿತ್ತು. ಆದರೆ ಯಾವಾಗ ನಾನು ರಕ್ಷಿತ ಸ್ಮೃತಿಯಲ್ಲಿ ಅಂತಃಪುರವನ್ನು ಪ್ರವೇಶಿಸಿದಾಗ ನನ್ನ ಶಾರೀರಿಕ ಕ್ರಿಯೆಗಳು ಪಹರೆಯಿಂದಿರುತ್ತಿದ್ದವು. ರಕ್ಷಿತವಾದ ಮಾತು ಕ್ರಿಯೆ ನಡೆಯುತ್ತದೆ ಮತ್ತು ಚಿತ್ತವೂ ರಕ್ಷಣೆಯಲ್ಲಿರುತ್ತಿತ್ತು. ಜಾಗರೂಕತೆಯು ಸ್ಥಾಪಿತವಾಗಿರುತ್ತಿತ್ತು. ಇಂದ್ರೀಯಗಳೆಲ್ಲಾ ನಿಗ್ರಹದಿಂದಿರುತ್ತಿತ್ತು. ಅಂತಹ ಸಮಯದಲ್ಲಿ ನನ್ನಲ್ಲಿ ರಾಗವು ಆಕ್ರಮಿಸುತ್ತಿರಲಿಲ್ಲ.

ಭವ್ಯವಾಗಿದೆ ಭಾರದ್ವಜರೇ, ಶೋಭಾಯಮಾನವಾಗಿದೆ ಭಾರದ್ವಜ ಗುರುಗಳೇ, ಧಮ್ಮವು ಗುರು ಭಾರದ್ವಜರಿಂದ ಹಲವಾರು ವಿಧಗಳಿಂದ ಪ್ರಕಾಶಿಸಲ್ಪಟ್ಟಿತು. ಹೇಗೆಂದರೆ ತಲೆಕೆಳಗಾಗಿರುವುದು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದು ಪ್ರಕಾಶಪಡಿಸುವಂತೆ, ದಾರಿತಪ್ಪಿರುವವರನ್ನು ಯೋಗ್ಯ ಹಾದಿ ತೋರಿಸುವಂತೆ, ಗಾಢ ಕತ್ತಲಿನಲ್ಲಿರುವವರಿಗೆ ಪ್ರಕಾಶಮಾನವಾದ ದೀಪವನ್ನು ಹಿಡಿದು ರೂಪಗಳನ್ನು ತೋರಿಸುವಂತೆ ನಿಮ್ಮಿಂದ ತೋರಿಸಲ್ಪಟ್ಟಿದೆ. ಗುರು ಭಾರದ್ವಜರೇ, ನಾನು ಭಗವಂತರಲ್ಲಿ ಶರಣು ಹೋಗುತ್ತೇನೆ. ಅವರ ಅನುಪಮ ಧಮ್ಮಕ್ಕೂ ಶರಣು ಹೋಗುತ್ತೇನೆ. ಹಾಗೆಯೇ ಸರಿಸಾಟಿಯಿಲ್ಲದ ಸಂಘಕ್ಕೂ ಶರಣು ಹೋಗುತ್ತೇನೆ. ಇಂದಿನಿಂದ ಗುರುಗಳಾದ ಭಾರದ್ವಜರು ನನ್ನನ್ನು ಉಪಾಸಕನೆಂದು ಪರಿಗಣಿಸಲಿ, ನಾನು ಪ್ರಾಣ ಇರುವವರೆಗೂ ಶರಣು ಹೋಗುತ್ತೇನೆ.

35.13.5 ಸೋಣ ಸುತ್ತಂ


128. ಒಮ್ಮೆ ಭಗವಾನರು ರಾಜಗೃಹದ ವೇಳುವನದ ಕಲನ್ದಕ ನಿವಾಪದಲ್ಲಿ ವಿಹರಿಸುತ್ತಿದ್ದರು. ಆಗ ಸೋಣನೆಂಬ ಗೃಹಪತಿ ಪುತ್ರನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಹೀಗೆ ಕೇಳಿದನು: ಭಂತೆ, ಯಾವ ಹೇತುವಿನಿಂದ ಹಾಗು ಯಾವ ಬೆಂಬಲದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗು ಯಾವ ಹೇತುವಿನಿಂದ ಹಾಗು ಉದ್ದೇಶದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ? - ಓ ಸೋಣನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ... ಓ ಸೋಣನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಸೋಣನೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಸೋಣನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಸೋಣನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.6 ಘೋಸಿತ ಸುತ್ತಂ


129. ಒಮ್ಮೆ ಆಯುಷ್ಮಂತ ಆನಂದರವರು ಕೊಸಂಬಿಯ ಘೋಷಿತ ಆರಾಮದಲ್ಲಿ ವಾಸಿಸುತ್ತಿದ್ದರು. ಆಗ ಘೋಷಿತ ಗೃಹಪತಿಯು ಆನಂದರವರ ಬಳಿಗೆ ಬಂದನು. ಹಾಗೂ ಗೌರವಯುತವಾಗಿ ವಂದಿಸಿ ಒಂದೆಡೆ ಕುಳಿತು, ನಂತರ ಹೀಗೆ ಪ್ರಶ್ನಿಸಿದನು. ಭಂತೆ ಆನಂದರವರೇ, ಹೀಗೆ ಹೇಳಲ್ಪಟ್ಟಿದೆ, ಏನೆಂದರೆ ಧಾತುಗಳ ವೈವಿದ್ಯತೆ, ಧಾತುಗಳ ವೈವಿದ್ಯತೆ ಎನ್ನುತ್ತಾರಲ್ಲ. ಭಂತೆ ಭಗವಾನರಿಂದ ಯಾವ ರೀತಿಗಳಲ್ಲಿ ಧಾತುಗಳ ವೈವಿದ್ಯತೆಗಳು ಹೇಳಲ್ಪಟ್ಟಿದೆ.

ಗೃಹಸ್ಥನೇ, ಇಲ್ಲಿ ಚಕ್ಷುಧಾತು ಇದೆ ಮತ್ತು ರೂಪಗಳಿವೆ. ಅವು ಒಪ್ಪುವಂತಹದು ಮತ್ತು ಚಕ್ಷುವಿಞ್ಞಾಣವು ಹಾಗು ಸ್ಪರ್ಶಗಳ ಅವಲಂಬನೆಯಿಂದಾಗಿ ಪ್ರಿಯವೇದನೆಗಳು ಉಂಟಾಗುವುವು. ಹಾಗೆಯೇ ಇಲ್ಲಿ ಚಕ್ಷುಧಾತುವಿದೆ, ಒಪ್ಪದೆ ಇರುವಂತಹ ರೂಪಗಳಿವೆ. ಹೀಗೆ ಚಕ್ಷುವಿಞ್ಞಾಣವು ಉದಯಿಸುತ್ತದೆ. ಹಾಗೆಯೇ ಸ್ಪರ್ಶಗಳ ಅವಲಂಬನೆಯಿಂದಾಗಿ ಅಪ್ರಿಯವೇದನೆಗಳು ಉಂಟಾಗುವುದು. ಅದೇರೀತಿಯಲ್ಲಿ ಇಲ್ಲಿ ಚಕ್ಷು ಧಾತುವಿರುವುದು. ತಟಸ್ಥ ರೂಪಗಳಿವೆ. ಆಗ ಚಕ್ಷುವಿಞ್ಞಾಣವು ಉದಯಿಸುತ್ತದೆ ಹಾಗು ಸ್ಪರ್ಶಗಳ ಅವಲಂಬನೆಯಿಂದಾಗಿ ಪ್ರಿಯವಾಗಿಲ್ಲದ ಅಪ್ರಿಯವಾಗಿಲ್ಲದ ತಟಸ್ಥ ವೇದನೆಗಳು ಉಂಟಾಗುತ್ತದೆ.... ಶ್ರೋತ ರೂಪವಿದೆ... ಜಿಹ್ವಾಧಾತು... ಮೂಗಿನಧಾತುವಿದೆ... ಕಾಯಧಾತುವಿದೆ... ಇಲ್ಲಿ ಮನೋಧಾತುವಿದೆ. ಒಪ್ಪುವಂತಹ ಧಮ್ಮಧಾತುವಿದೆ. ಆಗ ಮನೋವಿಞ್ಞಾಣವು ಸುಖವೇದನೆಯು ಉಂಟಾಗುವುದು. ಇಲ್ಲಿ ಸ್ಪರ್ಶಗಳಿಂದ ಪ್ರಿಯವಾದ ವೇದನೆಗಳು ಉಂಟಾಗುವುವು. ಹಾಗೆಯೇ ಗೃಹಪತಿಯೇ, ಇಲ್ಲಿ ಮನೋಧಾತುವಿದೆ. ಒಪ್ಪದೆಯಿರುವ ಮಾನಸಿಕ ವಿಷಯಗಳಿವೆ. ಆಗ ಮನೋವಿಞ್ಞಾಣವು ಜೊತೆಗೆ ಅಪ್ರಿಯ ವೇದನೆಗಳು ಉಂಟಾಗುವುವು. ಸ್ಪರ್ಶಗಳನ್ನು ಅವಲಂಬಿಸಿ ಅಪ್ರಿಯ ವೇದನೆಗಳು ಉಂಟಾಗುವುವು. ಇಲ್ಲಿ ಮನೋಧಾತುವಿದೆ. ಮಾನಸಿಕ ವಿಷಯಗಳಿವೆ ಅವಕ್ಕೆ ಆಧಾರವು ಉಪೇಕ್ಷೆಯಾಗಿದೆ. ಹೀಗಾಗಿ ಮನೋವಿಞ್ಞಾಣವು ಹಾಗು ತಟಸ್ಥ ವೇದನೆಗಳು ಉಂಟಾಗುವುದು. ಇಲ್ಲಿ ಸ್ಪರ್ಶಗಳನ್ನು ಅವಲಂಬಿಸಿ ಪ್ರಿಯವೂ ಅಲ್ಲದ ಅಪ್ರಿಯವೂ ಅಲ್ಲದ ತಟಸ್ಥ ವೇದನೆಗಳು ಉಂಟಾಗುತ್ತವೆ. ಈ ರೀತಿಯಾಗಿ ಗೃಹಸ್ಥನೇ ಭಗವಾನರಿಂದ ಅನೇಕ ಬಗೆಯಲ್ಲಿ ಧಾತುಗಳು ವಿವಿರಿಸಲ್ಪಟ್ಟಿವೆ.

35.13.7 ಹಾಲಿದ್ದಿಕಾನಿ ಸುತ್ತಂ


130. ಒಮ್ಮೆ ಆಯುಷ್ಮಂತರಾದ ಮಹಾಕಚ್ಚಾನರು ಅವಂತಿಯಲ್ಲಿನ ಕುಕುರಘರದ ಪಪಾತ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ಗೃಹಸ್ಥನಾದ ಹಾಲಿದ್ದಿಕಾನಿಯು ಮಹಾಕಚ್ಚಾನರ ಬಳಿಗೆ ಬಂದನು. ಪೂಜ್ಯ ಕಚ್ಚಾನರಿಗೆ ವಂದಿಸಿ ಒಂದೆಡೆ ಕುಳಿತನು, ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ, ವೈವಿಧ್ಯತೆಯ ಧಾತುಗಳನ್ನು ಅವಲಂಬಿಸಿ ವೈವಿದ್ಯತೆಯ ಸ್ಪರ್ಶಗಳು, ವೈವಿದ್ಯತೆಯ ಸ್ಪರ್ಶಗಳನ್ನು ಅವಲಂಬಿಸಿ ವೈವಿದ್ಯತೆಯ ವೇದನೆಗಳು ಉಂಟಾಗುತ್ತವೆ ಇದು ಹೇಗೆ ಭಂತೆ?

ಗೃಹಪತಿಯೇ, ಇಲ್ಲಿ ಭಿಕ್ಷುವೊಬ್ಬನು ಚಕ್ಷುವಿನಿಂದ ರೂಪಗಳನ್ನು ನೋಡುತ್ತಾನೆ. ಅವು ಪ್ರಿಯವಾದವು ಎಂದು ಅರಿಯುತ್ತಾನೆ. ಆಗ ಚಕ್ಷುವಿಞ್ಞಾನವು ಹಾಗು ಪ್ರಿಯವೇದನೆಯು ಉಂಟಾಗುವುದು. ಪ್ರಿಯವಾದ ಸ್ಪರ್ಶದ ಕಾರಣದಿಂದಾಗಿ ಅತನಲ್ಲಿ ಪ್ರಿಯವಾದ ವೇದನೆಗಳು ಉಂಟಾಗಿವೆ. ಹಾಗೆಯೇ ಆತನು ಚಕ್ಷುವಿನಿಂದ ರೂಪಗಳನ್ನು ನೋಡುತ್ತಾನೆ. ಅವು ಅಪ್ರಿಯವಾದವು ಎಂದು ಅರಿವಾದಾಗ ಚಕ್ಷುವಿಞ್ಞಾನವು ಹಾಗು ಅಪ್ರಿಯ ವೇದನೆಯು ಉಂಟಾಗುವುದು. ಅಪ್ರಿಯವಾದ ಸ್ಪರ್ಶದಿಂದಾಗಿ ಆತನಲ್ಲಿ ಅಪ್ರಿಯವಾದ ವೇದನೆಗಳು ಉಂಟಾಗುವುವು. ಹಾಗೆಯೇ ಇಲ್ಲಿ ಭಿಕ್ಷುವೊಬ್ಬನು ರೂಪಗಳನ್ನು ನೋಡುತ್ತಾನೆ. ಅದು ಪ್ರಿಯವಲ್ಲದ ಹಾಗೆಯೇ ಅಪ್ರಿಯವಲ್ಲದ್ದಾಗಿರುತ್ತದೆ. ಆಗ ಆತನಲ್ಲಿ ಚಕ್ಷುವಿಞ್ಞಾನವು ಹಾಗು ಪ್ರಿಯಾಪ್ರಿಯವಲ್ಲದ ವೇದನೆಗಳು (ತಟಸ್ಥ) ಉಂಟಾಗುತ್ತವೆ. ಆಗ ಆತನಿಗೆ ತಟಸ್ಥ ಸ್ಪರ್ಶಗಳಿಂದಾಗಿ ತಟಸ್ಥ ವೇದನೆಗಳು ಉಂಟಾಗಿವೆ ಎಂದು ಅರಿಯುತ್ತಾನೆ.

ಮತ್ತೆ ಗೃಹಸ್ಥನೇ, ಇಲ್ಲಿ ಭಿಕ್ಷುವು ಕಿವಿಯಿಂದ ಶಬ್ದಗಳನ್ನು ಆಲಿಸಬಹುದು... ಮೂಗಿನಿಂದ ಗಂಧಗಳನ್ನು ಆಘ್ರಾಣಿಸಬಹುದು... ಜಿಹ್ವೆಯಿಂದ ರುಚಿಗಳನ್ನು ಆಸ್ವಾದಿಸಬಹುದು... ಕಾಯದಿಂದ ಸ್ಪರ್ಶಗಳನ್ನು ಗ್ರಹಿಸಬಹುದು... ಮನಸ್ಸಿನಿಂದ ಧಮ್ಮ (ಮಾನಸಿಕ ವಿಷಯಗಳು)ಗಳನ್ನು ಅರಿಯಬಹುದು. ಅವು ಪ್ರಿಯವಾದ ವಿಷಯಗಳಿದ್ದಾಗ ಮನೋವಿಞ್ಞಾನವು ಹಾಗು ಪ್ರಿಯವೇದನೆಯು ಉದಯಿಸುವುದು. ಪ್ರಿಯವಾದ ಸ್ಪರ್ಶಗಳಿಂದ ಪ್ರಿಯವೇದನೆಗಳು ಉಂಟಾಗುತ್ತವೆ. ಹಾಗೆಯೇ ಮನಸ್ಸಿನಿಂದ ಧಮ್ಮಗಳನ್ನು ಅರಿಯುವಾಗ ಅವು ಅಪ್ರಿಯವಾದ ವಿಷಯಗಳಿದ್ದಾಗ, ಮನೋವಿಞ್ಞಾನವು ಹಾಗು ಅಪ್ರಿಯ ವೇದನೆಯು ಉದಯಿಸುವುದು. ಅಪ್ರಿಯವಾದ ಸ್ಪರ್ಶದಿಂದ ಅಪ್ರಿಯ ವೇದನೆಗಳು ಉಂಟಾಗುತ್ತವೆ. ಹಾಗೆಯೇ ಮನಸ್ಸಿನಿಂದ ಧಮ್ಮವನ್ನು ಅರಿಯುವಾಗ ಅವು ಪ್ರಿಯವಲ್ಲದ ಅಪ್ರಿಯವಲ್ಲದ ವಿಷಯಗಳಿದ್ದಾಗ, ಮನೋವಿಞ್ಞಾನವು ಹಾಗು ಪ್ರಿಯಾಪ್ರಿಯಗಳಲ್ಲ (ತಟಸ್ಥ) ವೇದನೆಗಳು ಉಂಟಾಗುತ್ತವೆ. ತಟಸ್ಥ ಸ್ಪರ್ಶದಿಂದ ತಟಸ್ಥ ವೇದನೆಗಳು ಉಂಟಾಗುತ್ತವೆ. ಈ ರೀತಿಯಾಗಿ ಗೃಹಪತಿಯೇ ವಿವಿಧ ಧಾತುಗಳಿಂದ ವೈವಿದ್ಯತೆಯ ಸ್ಪರ್ಶಗಳು, ವೈವಿದ್ಯತೆಯ ಸ್ಪರ್ಶಗಳಿಂದಾಗಿ ವೈವಿದ್ಯತೆಯ ವೇದನೆಗಳು ಉಂಟಾಗುವುವು.

35.13.8 ನಕುಲಪಿತು ಸುತ್ತಂ


131. ಒಮ್ಮೆ ಭಗವಾನರು ಭಗ್ಗೆಸುವಿನ ಸುಸುಮಾರಗಿರದಲ್ಲಿನ ವೇಸಕಾರಾಮದಲ್ಲಿನ ಜಿಂಕೆಗಳ ಉದ್ಯಾನದಲ್ಲಿ ವಿಹರಿಸುತ್ತಿದ್ದರು. ಆಗ ಗೃಹಸ್ಥನಾದ ನಕುಲಪಿತನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು:  ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಗೃಹಸ್ಥನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ.... ಓ ಗೃಹಸ್ಥನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಗೃಹಸ್ಥನೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.

ಓ ಗೃಹಸ್ಥನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಗೃಹಸ್ಥನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.9 ಲೋಹಿಚ್ಚ ಸುತ್ತಂ


132. ಒಮ್ಮೆ ಆಯುಷ್ಮಂತರಾದ ಮಹಾಕಚ್ಚಾನರು ಅವಂತಿಯ ಮಕ್ಕರಕಟೆಯಲ್ಲಿನ ಅರಣ್ಯಕುಟಿಯಲ್ಲಿ ವಾಸಿಸುತ್ತಿದ್ದರು. ಆಗ ಲೋಹಿಚ್ಚ ಬ್ರಾಹ್ಮಣನ ಮಾಣವಕರು (ಶಿಷ್ಯರು) ಹಾಗು ಕಿರಿಯರು ಸೌದೆಯನ್ನು ಆಯುತ್ತಾ ಅಲ್ಲಿಗೆ ಬಂದರು. ಅವರು ಅರಣ್ಯಕುಟಿಯೊಳಗೆ ಪ್ರವೇಶಿಸದೆ ಅದರ ಸುತ್ತಲು ಅಡ್ಡಾಡುತ್ತ ಜೋರಾಗಿ ಟೀಕೆಗಳನ್ನು ಮಾಡುತ್ತ, ತಮ್ಮಲ್ಲೇ ಹಾಸ್ಯಚಟಾಕಿಗಳನ್ನು ಹರಿಸುತ್ತ, ಶಬ್ದಗಳನ್ನು ಮಾಡುತ್ತಿದ್ದರು, ಹೀಗೆ ಅವಹೇಳನವನ್ನು ಮಾಡಿದರು: ಈ ಮುಂಡಕ ಸಮಣರು ಮನೆ ಕೆಲಸದವರು, ಬ್ರಹ್ಮನ ಪಾದದಿಂದ ಹುಟ್ಟಿರುವರು, ಇವರು ಗುಲಾಮ ಭಕ್ತಾದಿಗಳಿಂದ ಮಾನ್ಯತೆ ಪಡೆದವರು, ಪೂಜಿತರಾಗಿರುವವರು, ಗೌರವಿಸಲ್ಪಡುವವರು ಆಗಿದ್ದಾರೆ. ಆಗ ಆಯುಷ್ಮಂತರಾದ ಮಹಾಕಚ್ಚಾನರು ತಮ್ಮ ಕುಟಿಯಿಂದ ಹೊರಬಂದರು. ಆ ಬ್ರಾಹ್ಮಣ ಯುವಕರಿಗೆ ಹೀಗೆ ಹೇಳಿದರು: ಓ ಮಾಣವಕರೇ, ಗದ್ದಲ ಮಾಡದಿರಿ, ನಾನು ನಿಮಗೆ ಧಮ್ಮವನ್ನು ಉಪದೇಶಿಸಲಿದ್ದೇನೆ. ಆಗ ಆ ಬ್ರಾಹ್ಮಣ ಯುವಕರು ನಿಶ್ಶಬ್ದರಾದರು. ನಂತರ ಆಯುಷ್ಮಂತ ಮಹಾಕಚ್ಚಾನರು ಈ ಗಾಥೆಗಳನ್ನು ನುಡಿದರು:

ಹಿಂದಿನ ಬ್ರಾಹ್ಮಣರು ಶೀಲಗಳಲ್ಲಿ ಉತ್ತಮರಾಗಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಅವರ ಇಂದ್ರಿಯ ದ್ವಾರಗಳೆಲ್ಲವೂ ಸುರಕ್ಷಿತವಾಗಿರುತ್ತಿತ್ತು,

ಅವರು ಕ್ರೋಧವನ್ನು ಜಯಿಸಿ ವಾಸಿಸುತ್ತಿದ್ದರು.

ಅವರು ಧಮ್ಮದಲ್ಲಿ ಹಾಗು ಧ್ಯಾನದಲ್ಲಿ ರತರಾಗಿರುತ್ತಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಆದರೆ ಇವರು ಬಿದ್ದಿರುವರು ತಾವು ಜಪಿಸುವೆವೆಂದು

ಗೋತ್ರಗಳಿಂದ ಮತ್ತರಾಗಿರುವರು, ವಿಷಮವಾಗಿ ವತರ್ಿಸುತಿಹರು.

ಕ್ರೋಧದಿಂದ ಅಭಿಭೂತವಾಗಿ ವಿವಿಧ ಶಸ್ತ್ರಗಳಿಂದ

ಬಲಹೀನ ಬಲಯುತರಿಗೆ ಕಿರುಕುಳ ನೀಡುತಿಹರು

ಹೀಗೆ ಇಂದ್ರಿಯ ದ್ವಾರಗಳಲ್ಲಿ ಅಸುರಕ್ಷರಾಗಿರುವವರು

ಸ್ವಪ್ನಗಳಲ್ಲಿ ಐಶ್ವರ್ಯಗಳನ್ನು ಗಳಿಸಿದಂತಹ ಮೂರ್ಖರಾಗಿರುವರು.

ಉಪವಾಸದಲ್ಲಿ ತೊಡಗಿ, ನೆಲದಲ್ಲಿ ಮಲಗಿ

ಮುಂಜಾನೆಯಲ್ಲಿ ಸ್ನಾನಮಾಡಿ, ವೇದಗಳಲ್ಲಿ ತೊಡಗುತ್ತಾರೆ.

ಒರಟಾದ ಚರ್ಮದ ವಸ್ತ್ರತೊಟ್ಟು ಜಟಾಧಾರಿಗಳಾಗಿರುತ್ತಾರೆ

ವ್ಯರ್ಥವಾದ ಶೀಲಾಚರಣೆಗಳಲ್ಲಿ ತೊಡಗಿ, ಕಠಿಣ ತಪೋಗಳಲ್ಲಿ ನಿರತರಾಗುತ್ತಾರೆ.

ಆದರೆ ಕುಹಕತನವಿರುತ್ತದೆ, ಬಾಗಿದ ದಂಡಧಾರಿಗಳಾಗಿರುತ್ತಾರೆ

ಸ್ನಾನಗಳನ್ನು ಪದೇಪದೇ ಮಾಡುವವರಾಗಿರುತ್ತಾರೆ, ಇದು ಬ್ರಾಹ್ಮಣತನ ಚಿಹ್ನೆಗಳಾಗಿರುತ್ತವೆ

ಇವುಗಳಿಂದಾಗಿ ಕೇವಲ ಪ್ರಾಪಂಚಿಕ ಗಳಿಕೆಯಾಗುತ್ತವೆಯಷ್ಟೆ.

ಆದರೆ ಯಾರ ಚಿತ್ತವೂ ಸುಸಮಾಹಿತವಾಗಿದೆಯೋ

ವಿಪಸ್ಸನಾದಿಂದ ಸ್ಪಷ್ಟವಾಗಿದೆಯೋ, ಕಲೆಗಳಿಂದ ನಿರ್ಮಲವಾಗಿದೆಯೋ

ಸರ್ವಜೀವಿಗಳಲ್ಲಿ ಕೋಮಲತೆಯ (ಮೆತ್ತ) ಭಾವದಿಂದಿರುವರೋ

ಅಂತಹವರು ಮಾತ್ರವೇ ಈ ಮಾರ್ಗದಿಂದಾಗಿ ಬ್ರಹ್ಮಪ್ರಾಪ್ತಿ ಗಳಿಸುವರು.

ಇದನ್ನು ಆಲಿಸಿದಂತಹ ಆ ಬ್ರಾಹ್ಮಣ ಯುವಕರು ಕ್ಷುದ್ರರಾದರು, ಅಸಂತುಷ್ಟರಾದರು, ಅಲ್ಲಿಂದ ನಿರ್ಗಮಿಸಿ, ಬ್ರಾಹ್ಮಣ ಲೋಹಿಚ್ಚನ ಬಳಿಗೆ ಬಂದು, ಹೀಗೆ ನುಡಿದರು: ಗುರುವರ್ಯರೇ ನೋಡಿ, ಮಹಾಸಮಣರಾದ ಮಹಾಕಚ್ಚಾನರು ಬ್ರಾಹ್ಮಣರ ಶ್ಲೋಕಗಳಿಗೆ ತಿರಸ್ಕಾರ ಮಾಡಿ, ಮನಬಂದಂತೆ ನುಡಿದಿದ್ದಾರೆ. ಇದನ್ನು ಆಲಿಸಿದಂತಹ ಲೋಹಿಚ್ಚ ಬ್ರಾಹ್ಮಣನು ಕುಪಿತನಾದನು, ಅಸಂತುಷ್ಟನಾದನು. ಆದರೂ ಹೀಗೆ ಚಿಂತನೆ ಮಾಡಿದನು: ಕೇವಲ ನನ್ನ ಶಿಷ್ಯರಿಂದ ಕೇಳಿದೆ ಎಂಬ ಮಾತ್ರಕ್ಕೆ ನಾನು ಸಮಣ ಮಹಾಕಚ್ಚಾನರಿಗೆ ನಿಂದಿಸುವುದು ಸರಿಯಲ್ಲ, ನಾನೇ ಸ್ವಯಂ ಪರಿಶೀಲಿಸುವೆ ಎಂದು ನಿರ್ಧರಿಸಿದನು.

ನಂತರ ಬ್ರಾಹ್ಮಣ ಲೋಹಿಚ್ಚನು ತಮ್ಮ ಮಾಣವಕರ ಸಹಿತವಾಗಿ ಮಹಾಚ್ಚಾನರಲ್ಲಿಗೆ ಬಂದನು. ಮಹಾಕಚ್ಚಾನರ ತೇಜಸ್ಸು ಗಮನಿಸಿ ವಂದಿಸಿದನು. ನಂತರ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಹೀಗೆ ಕೇಳಿದನು: ಮಹಾಕಚ್ಚಾನರೇ, ಕೆಲವು ಬ್ರಾಹ್ಮಣ ಯುವಕರು ಹಾಗು ನನ್ನ ಮಾಣವಕರು ಈ ಹಾದಿಯಲ್ಲಿ ಸೌದೆ ಆರಿಸಲು ಬಂದಿದ್ದರೇ? - ಹೌದು ಬ್ರಾಹ್ಮಣರೇ. - ಅವರೊಂದಿಗೆ ಮಹಾಕಚ್ಚಾನರು ಸಂಭಾಷಣೆಯನ್ನು ನಡೆಸಿದರೆ? - ಹೌದು ಬ್ರಾಹ್ಮಣರೇ - ಯಾವರೀತಿಯ ಸಂಭಾಷಣೆಯು ನಡೆಯಿತು? - ಅವರೊಂದಿಗೆ ಹೀಗೆ ಗಾಥೆಗಳಿಂದ ಹೇಳಿದೆನು.

ಹಿಂದಿನ ಬ್ರಾಹ್ಮಣರು ಶೀಲಗಳಲ್ಲಿ ಉತ್ತಮರಾಗಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಅವರ ಇಂದ್ರಿಯ ದ್ವಾರಗಳೆಲ್ಲವೂ ಸುರಕ್ಷಿತವಾಗಿರುತ್ತಿತ್ತು.....

ಸರ್ವಜೀವಿಗಳಲ್ಲಿ ಕೋಮಲತೆಯ (ಮೆತ್ತ) ಭಾವದಿಂದಿರುವರೋ

ಅಂತಹವರು ಮಾತ್ರವೇ ಈ ಮಾರ್ಗದಿಂದಾಗಿ ಬ್ರಹ್ಮಪ್ರಾಪ್ತಿ ಗಳಿಸುವರು.

ಈ ರೀತಿಯಲ್ಲಿ ನಮ್ಮ ಸಂಭಾಷಣೆಯು ನಡೆಯಿತು. ಎಂದರು.

ಮಹಾಕಚ್ಚಾನರೇ, ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷತೆ ಎಂದು ನುಡಿದಿದ್ದೀರಿ, ಯಾವ ವಿಧದಲ್ಲಿ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿರುತ್ತಾನೆ? - ಬ್ರಾಹ್ಮಣನೇ, ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡುತ್ತಾ ಪ್ರಿಯವಾದ ರೂಪಗಳಿಂದ ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯವಾದ ರೂಪಗಳಿಂದ ವಿಕಷರ್ಿತನಾಗುತ್ತಾನೆ. ಆತನು ಕಾಯದಿಂದ ಸ್ಮೃತಿರಹಿತನಾಗಿ ವಿಹರಿಸುತ್ತಾನೆ. ಪರಿಮಿತವಾದ ಚಿತ್ತದವನಾಗಿರುತ್ತಾನೆ. ಹಾಗು ಅಂತಹವನಿಗೆ ಚಿತ್ತವಿಮುಕ್ತಿಯು ಅರ್ಥವಾಗದು. ಪ್ರಜ್ಞಾವಿಮುಕ್ತಿಯು ಅರ್ಥವಾಗದು. ಯಥಾಭೂತವಾಗಿ ದಶರ್ಿಸುವ, ನಿಶ್ಶೇಷವಾಗಿ ಅಕುಶಲ ಸ್ಥಿತಿಗಳು ನಿರೋಧವಾಗುವ ಬಗ್ಗೆಯೂ ಆತನಿಗೆ ತಿಳಿಯದು. ಇಲ್ಲಿ ಕಿವಿಯಿಂದ ಶಬ್ದಗಳನ್ನು ಕೇಳುತ್ತಾ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುತ್ತಾ ಪ್ರಿಯವಾದ ವಿಷಯಗಳಿಂದ ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯವಾದ ವಿಷಯಗಳಿಂದ ವಿಕಷರ್ಿತನಾಗುತ್ತಾನೆ. ಸ್ಮೃತಿರಹಿತನಾಗಿರುತ್ತಾನೆ.... ತಿಳಿಯದು. ಈ ರೀತಿಯಾಗಿ ಬ್ರಾಹ್ಮಣನೇ, ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿರುತ್ತಾನೆ.

ಆಶ್ಚರ್ಯಕರ ಭಂತೆ ಕಚ್ಚಾನರೇ, ಅದ್ಭುತವು ಭಂತೆ ಕಚ್ಚಾನರೇ, ತಮ್ಮಿಂದ ಹೇಗೆ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿತ್ತಾನೆ ಎಂದು ವಿವರಿಸಿದಿರಿ. ಆದರೆ ಮಹಾಕಚ್ಚಾನರೇ, ಯಾವ ವಿಧವಾಗಿ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಸುರಕ್ಷತೆಯನ್ನು ತಾಳುತ್ತಾನೆ ಎಂಬುದನ್ನು ಸಹಾ ವಿವರಿಸಿರಿ.

ಬ್ರಾಹ್ಮಣನೇ, ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡುವಾಗ ಆ ರೂಪಗಳು ಪ್ರಿಯವಾಗಿದ್ದರೂ ಆಕಷರ್ಿತನಾಗಲಾರ ಹಾಗು ಅಪ್ರಿಯವಾಗಿದ್ದರೆ ವಿಕಷರ್ಿತನಾಗಲಾರನು. ಜೊತೆಗೆ ಆತನು ಶಾರೀತಿಕ ಕ್ರಿಯೆಗಳಲ್ಲೆಲ್ಲಾ ಜಾಗರೂಕತೆಯನ್ನು ಸ್ಥಾಪಿಸುತ್ತಾನೆ. ಆತನು ಅಪರಿಮಿತ ಮನಸ್ಸಿನಿಂದ ಕೂಡಿರುತ್ತಾನೆ. ಹಾಗು ಆತನು ವಿಮುಕ್ತಿಚಿತ್ತವನ್ನು ಯಥಾಭೂತವಾಗಿ ಅರಿಯುತ್ತಾನೆ. ಪ್ರಜ್ಞಾವಿಮುಕ್ತಿಯನ್ನು ಯಥಾಭೂತವಾಗಿ ಅರಿಯುತ್ತಾನೆ. ಆತನಲ್ಲಿ ಅಕುಶಲ ಸ್ಥಿತಿಗಳು ನಿಶ್ಶೇಷವಾಗಿ ನಿರೋಧಗೊಳ್ಳುತ್ತವೆ. ಅದೇರೀತಿಯಲ್ಲಿ ಕಿವಿಯಿಂದ ಶಬ್ದಗಳನ್ನು ಆಲಿಸುವಾಗ... ಮೂಗಿನಿಂದ ವಾಸನೆಗಳನ್ನು ಗ್ರಹಿಸುವಾಗ... ನಾಲಿಗೆಯಿಂದ ರಸಸ್ವಾದ ಮಾಡುವಾಗ.... ದೇಹದಿಂದ ಸ್ಪಶರ್ಿಸುವಾಗ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುವಾಗ ಅವು ಪ್ರಿಯವಾಗಿದ್ದರೆ ಅವುಗಳಲ್ಲಿ ಆಕಷರ್ಿತನಾಗುವುದಿಲ್ಲ. ಅವು ಅಪ್ರಿಯವಾಗಿದ್ದರೆ ಅವುಗಳಲ್ಲಿ ವಿಕಷರ್ಿತನಾಗುವುದಿಲ್ಲ. ಆತನು ಕಾಯದಲ್ಲಿ ಜಾಗರೂಕತೆಯನ್ನು ಸ್ಥಾಪಿಸುತ್ತಾನೆ. ಆತನು ಅಪರಿಮಿತ ಚಿತ್ತದಿಂದ ಕೂಡಿರುತ್ತಾನೆ. ಆತನು ಯಥಾಭೂತವಾಗಿ ಚಿತ್ತವಿಮುಕ್ತಿಯನ್ನು, ಪ್ರಜ್ಞಾವಿಮುಕ್ತಿಯನ್ನು ಅರಿಯುತ್ತಾನೆ. ಹಾಗೆಯೇ ಆತನಲ್ಲಿ ಎಲ್ಲಾ ಅಕುಶಲ ಸ್ಥಿತಿಗಳು ನಿಶ್ಶೇಷವಾಗಿ ನಾಶವಾಗಿರುತ್ತವೆ. ಬ್ರಾಹ್ಮಣನೇ, ಈ ರೀತಿಯಾಗಿ ಒಬ್ಬನ ಇಂದ್ರೀಯಗಳು ಸುರಕ್ಷಿತವಾಗಿರುತ್ತವೆ.

ಆಶ್ಚರ್ಯಕರವು ಭಂತೆ ಕಚ್ಚಾಯನರೆ, ಅದ್ಭುತವು ಭಂತೆ ಕಚ್ಚಾಯನರೇ, ಯಾವರೀತಿಯಲ್ಲಿ ಇಂದ್ರೀಯ ದ್ವಾರಗಳನ್ನು ಕಾಪಾಡಬೇಕೆಂದು ಭಂತೆ ಕಚ್ಚಾಯನರಿಂದಾಗಿ ಬಹುಚೆನ್ನಾಗಿ ವಿವರಿಸಲ್ಪಟ್ಟಿದೆ. ಭವ್ಯವಾಗಿದೆ ಕಚ್ಚಾಯನರೇ, ಶೋಭಾಯಮಾನವಾಗಿದೆ. ತಮ್ಮಿಂದ ಧಮ್ಮವು ಹಲವಾರು ವಿಧಗಳಿಂದ ತಿಳಿಸಲ್ಪಟ್ಟಿದೆ. ಹೇಗೆಂದರೆ ತಲೆಕೆಳಗಾಗಿರುವುದು ನೆಟ್ಟಗೆ ನಿಲ್ಲಿಸುವಂತೆ, ಅಡಗಿರುವುದು ಕೆರೆದು ತೋರಿಸಿದಂತೆ, ಪ್ರಕಾಶಮಾನವಾದ ದೀಪವನ್ನು ಹಿಡಿದು ವಸ್ತುಗಳನ್ನು ತೋರಿಸುವಂತೆ ನಿಮ್ಮಿಂದ ತೋರಿಸಲ್ಪಟ್ಟಿದೆ. ಇಂದಿನಿಂದ ನಾನು ಭಗವಾನರಲ್ಲಿ ಶರಣು ಹೋಗುತ್ತೇನೆ, ಭಗವಾನರ ಧಮ್ಮಕ್ಕೂ ಶರಣು ಹೋಗುತ್ತೇನೆ, ಅವರ ಸಂಘಕ್ಕೂ ಶರಣು ಹೋಗುತ್ತೇನೆ. ನಾನು ಪ್ರಾಣವಿರುವತನಕ ಬುದ್ದೋಪಾಸಕನಾಗಿರುತ್ತೇನೆ ಎಂದು ಮಹಾಕಚ್ಚಾನರು ತಿಳಿಯಲಿ. ಮಹಾಕಚ್ಚಾನರವರು ಈ ಲೋಹಿಚ್ಚನ ಮನೆಗೂ ಆಗಮಿಸಲಿ. ಈ ಬ್ರಾಹ್ಮಣನ ಎಲ್ಲಾ ಯುವಶಿಷ್ಯ ಹಾಗು ಶಿಷ್ಯೆಯರು ಮಹಾಕಚ್ಚಾನರಿಗೆ ಗೌರವಿಸುತ್ತಾರೆ, ಎದ್ದು ವಂದಿಸುತ್ತಾರೆ, ತಮಗೆ ಆಸನ, ಉದಕ, ಔತಣವನ್ನು ನೀಡುತ್ತಾರೆ ಮತ್ತು ಅದರಿಂದಾಗಿ ಭವಿಷ್ಯದಲ್ಲಿ ಬಹುಕಾಲದವರೆಗೆ ಹಿತವು ಸುಖವು ಸಿಗುವುದು.

35.13.10 ವೇರಾಹಚ್ಚಾನಿ ಸುತ್ತಂ


133. ಒಮ್ಮೆ ಆಯುಷ್ಮಂತ ಉದಾಯಿಯು ಕಾಮಂಡಾಯದ ತೋದೆಯ್ಯ ಬ್ರಾಹ್ಮಣನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ವೇರಹಚ್ಚಾನಿ ಬ್ರಾಹ್ಮಣಿಯ ಗೋತ್ರದ ಯುವಕನು ಆಯುಷ್ಮಂತ ಉದಾಯಿಯ ಬಳಿಗೆ ಬಂದನು ಹಾಗು ವಂದಿಸಿದನು, ಕುಶಲ ಕ್ಷೇಮಗಳ ನಂತರ ಒಂದೆಡೆ ಕುಳಿತನು. ಆಗ ಆಯುಷ್ಮಂತ ಉದಾಯಿಯು ತಮ್ಮ ಧಮ್ಮ ಬೋಧನೆಯನ್ನು ಬಹುಚೆನ್ನಾಗಿ ಮಾಡಿದರು. ಅದರಲ್ಲಿ ಬುದ್ಧಿವಾದವಿತ್ತು, ಪ್ರೇರೇಪಣೆಯಿತ್ತು, ಸ್ಫೂತರ್ಿಯಿತ್ತು ಹಾಗು ಆನಂದದಾಯಕವಾಗಿತ್ತು. ಈ ಬಗೆಯ ಧಮ್ಮವನ್ನು ಆಲಿಸಿದಂತಹ ಆ ಬ್ರಾಹ್ಮಣ ಯುವಕನು ಈ ವಿಷಯವನ್ನು ವೇರಹಚ್ಚಾನಿ ಗೋತ್ರದ ಬ್ರಾಹ್ಮಿಣಿಗೆ ಹೇಳಿದನು. ನೋಡಿ ಅಮ್ಮನವರೇ, ನೀವು ಆಯುಷ್ಮಂತ ಉದಾಯಿಯು ಬೋಧಿಸುವುದನ್ನು ನೋಡಬೇಕು. ಅವರ ಧಮ್ಮವು ಆರಂಭದಲ್ಲಿ ಕಲ್ಯಾಣಕಾರಿಯು, ಮಧ್ಯದಲ್ಲಿಯು ಕಲ್ಯಾಣಕಾರಿಯು ಹಾಗು ಅಂತ್ಯದಲ್ಲಿಯೂ ಕಲ್ಯಾಣಕಾರಿಯೂ ಆಗಿದೆ. ಅವರು ಪರಿಶುದ್ಧವಾದ ಹಾಗು ಪರಿಪೂರ್ಣವಾದ ಬ್ರಹ್ಮಚರ್ಯದ ಬಗ್ಗೆ ವಿವರಿಸುವರು.

ಹಾಗಾದರೆ ಮಾಣವಕನೇ, ಸಮಣ ಉದಾಯಿಯನ್ನು ನನ್ನ ಹೆಸರಿನಲ್ಲಿ ನಾಳೆ ಭೋಜನಕ್ಕೆ ಆಹ್ವಾನಿಸು ಎಂದು ಬ್ರಾಹ್ಮಿಣಿಯು ಹೇಳಿದಳು. ಆಯಿತು ಅಮ್ಮ ಎಂದು ಯುವಕನು ನುಡಿದು ಆಯುಷ್ಮಂತ ಉದಾಯಿಯ ಬಳಿಗೆ ಬಂದು ಹೀಗೆ ನುಡಿದನು: ಆಯುಷ್ಮಂತರಾದ ಉದಾಯಿಯವರೇ, ವೇರಹಚ್ಚಾನಿ ಗೋತ್ರದ ಬ್ರಾಹ್ಮಿಣಿಯ ಮನೆಗೆ ನಾಳೆ ಭೋಜನಕ್ಕೆ ಆಹ್ವಾನಿಸುತ್ತಿದ್ದೇನೆ, ತಾವು ದಯವಿಟ್ಟು ಒಪ್ಪಿಗೆ ಸೂಚಿಸಬೇಕು. ಆಯುಷ್ಮಂತ ಉದಾಯಿಯು ಮೌನದಿಂದ ಒಪ್ಪಿಗೆ ಸೂಚಿಸಿದರು. ನಂತರ ರಾತ್ರಿಯು ಕಳೆದು, ಮಾರನೆಯದಿನ ಬೆಳಿಗ್ಗೆ ಆಯುಷ್ಮಂತರಾದ ಉದಾಯಿಯು ಚೀವರವನ್ನು ಸರಿಪಡಿಸಿಕೊಂಡು ಪಿಂಡಪಾತ್ರೆಯನ್ನು ಎತ್ತಿಕೊಂಡು ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯ ಬಳಿಗೆ ಬಂದರು. ಅಲ್ಲಿ ಅವರಿಗಾಗಿ ಮೀಸಲಾಗಿದ್ದಂತಹ ಆಸನದಲ್ಲಿ ಕುಳಿತರು. ನಂತರ ಆ ಬ್ರಾಹ್ಮಿಣಿಯು ತಮ್ಮ ಕೈಯಾರೆ ಆಹಾರವನ್ನು ಬಡಿಸಿದಳು. ವಿವಿಧರೀತಿಯ ಆಹಾರಗಳಿಂದ ಸತ್ಕರಿಸಿದಳು. ಆಯುಷ್ಮಂತರಾದ ಉದಾಯಿಯು ಭೋಜನವನ್ನು ಮುಗಿಸಿ, ಪಿಂಡಪಾತ್ರೆಯನ್ನು ತೆಗೆದುಕೊಂಡರು. ಆ ನಂತರ ಬ್ರಾಹ್ಮಣಿಯು ಚಪ್ಪಲಿಗಳನ್ನು ಧರಿಸಿ, ಉನ್ನತವಾದ ಆಸನದಲ್ಲಿ ಕುಳಿತು ತಲೆಗೆ ಬಟ್ಟೆಯನ್ನು ಆವರಿಸಿಕೊಂಡು ಧಮ್ಮವನ್ನು ಬೋಧಿಸಿರಿ ಸಮಣರೇ ಎಂದಳು. ಆದರೆ ಆಯುಷ್ಮಂತ ಉದಾಯಿಯು ಹೀಗೆ ನುಡಿದರು: ಅದಕ್ಕಾಗಿ ಬೇರೆ ಸಂದರ್ಭವಿದೆ ಸೋದರಿಯೇ ಎಂದು ನುಡಿದು ಅಲ್ಲಿಂದ ಹೊರಟರು.

ಈಗ ಎರಡನೆಯಬಾರಿ ಆ ಬ್ರಾಹ್ಮಣ ಯುವಕನು ಉದಾಯಿಯವರ ಬಳಿಗೆ ಧಮ್ಮವನ್ನು ಆಲಿಸಲು ಬಂದನು. ಆಯುಷ್ಮಂತ ಉದಾಯಿಯವರು ತಮ್ಮ ಬೋಧನೆಯಿಂದ ಆತನಿಗೆ ಬುದ್ಧಿವಾದವನ್ನು, ಜ್ಞಾನವನ್ನು, ಸ್ಫೂತರ್ಿಯನ್ನು ಹಾಗು ಆನಂದವನ್ನು ನೀಡಿದರು. ಇದನ್ನು ಆಲಿಸಿದಂತಹ ಆತನು ಮತ್ತೆ ಹಿಂದಿನಂತೆಯೇ ಅವರನ್ನು ಕುರಿತು ಬ್ರಾಹ್ಮಣಿಯ ಬಲಿಯಲ್ಲಿ ಹಿಂದಿನಂತೆಯೇ ಪ್ರಶಂಸಿಸಿದನು. ಆಗ ಬ್ರಾಹ್ಮಿಣಿಯು ಹೀಗೆ ನುಡಿದಳು: ಓ ಮಾಣವಕನೇ, ನೀನಂತೂ ಅವರ ಬಗ್ಗೆ ಹೀಗೆ ಪ್ರಶಂಸಿಸುತ್ತಲೇ ಇರುವೆ, ಆದರೆ ಅವರಿಗೆ ಧಮ್ಮವನ್ನು ಉಪದೇಶಿಸಿರಿ ಎಂದರೆ ಬೇರೆ ಸಂದರ್ಭವಿದೆ ಸೋದರಿ ಎಂದು ಆಸನದಿಂದೆದ್ದು ಹೊರಟುಹೋದರು.

ಆದರೆ ಅಮ್ಮನವರೇ, ಅದು ಏತಕ್ಕೆಂದರೆ ನೀವು ಚಪ್ಪಲಿಗಳನ್ನು ಧರಿಸಿ, ಉನ್ನತವಾದ ಪೀಠದ ಮೇಲೆ ಕುಳಿತು, ತಲೆಗೆ ವಸ್ತ್ರಧರಿಸಿ ಧಮ್ಮವನ್ನು ಬೋಧಿಸಿರಿ ಸಮಣರೇ ಎಂದರೆ ಅದು ಧಮ್ಮಕ್ಕೆ ಅಪಚಾರ ಎಸಗಿದಂತೆ. ಭಿಕ್ಷುಗಳು ಧಮ್ಮಕ್ಕೆ ಅಪಾರ ಗೌರವ ನೀಡುವರು. - ಹಾಗಾದರೆ ಮಾಣವಕನೇ ಈ ಬಾರಿ ನನ್ನ ಹೆಸರಿನಲ್ಲಿ ನಾಳೆಯೇ ಔತಣಕ್ಕೆ ಆಹ್ವಾನಿಸು. - ಆಯಿತು ಅಮ್ಮನವರೇ ಎಂದು ಆತನು ಅಲ್ಲಿಂದ ಎದ್ದು ಹೊರಟು ಆಯುಷ್ಮಂತ ಉದಾಯಿಯವರ ಬಳಿಗೆ ಬಂದನು. ಹೀಗೆ ನುಡಿದನು: ಆಯುಷ್ಮಂತರಾದ ಉದಾಯಿರವರಿಗೆ ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯು ಆದರಪೂರ್ವಕವಾಗಿ ಔತಣಕ್ಕೆ ನಾಳೆಯು ಆಹ್ವಾನಿಸಿದ್ದಾಳೆ. ತಾವುಗಳು ಬರಲು ದಯವಿಟ್ಟು ಒಪ್ಪಿಗೆ ಸೂಚಿಸಬೇಕು ಎಂದು ವಿನಂತಿಸಿಕೊಂಡನು. ಆಯುಷ್ಮಂತರಾದ ಉದಾಯಿಯು ಮೌನವಾಗಿ ಒಪ್ಪಿಗೆಯನ್ನು ಸೂಚಿಸಿದರು.

ನಂತರ ಆಯುಷ್ಮಂತರಾದ ಉದಾಯಿಯು ರಾತ್ರಿ ಕಳೆದು ಮಾರನೆಯದಿನ ಪೂವರ್ಾಹ್ನ ಸಮಯದಲ್ಲಿ ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯ ಮನೆಗೆ ಚೀವರ ಪಿಂಡಪಾತ್ರೆ ಸಹಿತ ಬಂದರು. ತಮಗಾಗಿ ಮೀಸಲಾಗಿದ್ದಂತಹ ಆಸನದಲ್ಲಿ ಕುಳಿತರು. ನಂತರ ಬ್ರಾಹ್ಮಣಿಯು ತನ್ನ ಕೈಯಾರೆ ವಿವಿಧರೀತಿಯ ಸ್ವಾದಿಷ್ಟ ಭೋಜನವನ್ನು ಅವರಿಗೆ ಬಡಿಸಿದಳು. ಆಹಾರ ಸೇವಿಸಿದ ನಂತರ ತಮ್ಮ ಪಿಂಡಪಾತ್ರೆಯನ್ನು ತೆಗೆದುಕೊಳ್ಳಲು ಹೋದಾಗ, ಆ ಬ್ರಾಹ್ಮಿಣಿಯು ತನ್ನ ಚಪ್ಪಲಿಗಳನ್ನು ತ್ಯಾಗಮಾಡಿ ತಗ್ಗಾದ ಆಸನದಲ್ಲಿ ಕುಳಿತಳು. ತಲೆಯಿಂದ ವಸ್ತ್ರವನ್ನು ತೆಗೆದಳು ಹಾಗು ಹೀಗೆ ಧಮ್ಮಪ್ರಶ್ನೆಯನ್ನು ಕೇಳಿದಳು. ಭಂತೆ, ಯಾವ ಉಪಸ್ಥಿತಿಯು ಇದ್ದಾಗ ಅರಹಂತರು ಸುಖ ಹಾಗು ದುಃಖಗಳನ್ನು ತೋರಿಸಿಕೊಳ್ಳುವರು ಮತ್ತು ಯಾವ ಅನುಪಸ್ಥಿತಿಯಲ್ಲಿ ಅರಹಂತರು ಸುಖ-ದುಃಖಗಳನ್ನು ತೋರಿಸಿಕೊಳ್ಳಲಾರರು?

ಭಗಿನಿಯೇ, ಚಕ್ಷು ಇದ್ದಾಗ ಅರಹಂತರು ಸುಖ ದುಃಖಗಳನ್ನು ತೋರಿಸಿಕೊಳ್ಳಬೇಕಾಗುತ್ತದೆ. ಆದರೆ ಚಕ್ಷುವಿಲ್ಲದಿದ್ದರೆ ಯಾವ ಸುಖ ದುಃಖಗಳು ಇಲ್ಲ. ಕಿವಿಯು ಇದ್ದಾಗ... ಮೂಗು ಇದ್ದಾಗ... ನಾಲಿಗೆಯಿದ್ದಾಗ... ಕಾಯವು ಇದ್ದಾಗ... ಮನಸ್ಸು ಇದ್ದಾಗ ಅರಹಂತರು ಸುಖ ದುಃಖಗಳನ್ನು ತೋರಿಸಿಕೊಳ್ಳಬೇಕಾಗುತ್ತದೆ. ಆದರೆ ಮನಸ್ಸೇ ಇಲ್ಲದಿದ್ದಾಗ ಸುಖವು ಇಲ್ಲ, ದುಃಖವೂ ಇಲ್ಲ.

ಆಯುಷ್ಮಂತ ಉದಾಯಿಯು ಯಾವಾಗ ಹೀಗೆ ಉತ್ತರಿಸಿದರೋ ಆಗ ಆ ಬ್ರಾಹ್ಮಿಣಿಯು ಹೀಗೆ ಪ್ರಶಂಸಿಸಿದಳು: ಭವ್ಯವಾಗಿದೆ ಭಂತೆ, ಶೋಭಾಯಮಾನವಾಗಿದೆ ಭಂತೆ, ಭಂತೆಯವರಿಂದ ಧಮ್ಮವು ಅನೇಕರೀತಿಯಲ್ಲಿ ಪ್ರಕಾಶಿಸಲ್ಪಟ್ಟಿದೆ. ಹೇಗೆಂದರೆ, ತಲೆಕೆಳಗಾಗಿರುವುದು ಸರಿಯಾಗಿ ನಿಲ್ಲಿಸಿದಂತೆ, ಅಡಗಿರುವುದು ತೆರೆದು ತೋರಿಸಿದಂತೆ, ದಾರಿತಪ್ಪಿದವರಿಗೆ ಯೋಗ್ಯ ಮಾರ್ಗದಶರ್ಿಯಂತೆ, ಕತ್ತಲಿರುವವರಿಗೆ ದೀಪವನ್ನು ಹಿಡಿದು ವಸ್ತುಗಳನ್ನು ತೋರಿಸುವಂತೆ ತಮ್ಮಿಂದ ಅನೇಕ ವಿಧವಾಗಿ ಧಮ್ಮ ಪ್ರಕಾಶಿಸಲ್ಪಟ್ಟಿದೆ. ಇಂದಿನಿಂದ ನಾನು ಜೀವವಿರುವವರೆಗೂ ಬುದ್ಧಶಾಸನಕ್ಕೆ ಉಪಾಸಕಿಯೆಂದು ಎಲ್ಲರೂ ಪರಿಗಣಿಸಲಿ. ನಾನು ಭಗವಂತರಲ್ಲಿ ಶರಣು ಹೋಗುವೆನು, ಧಮ್ಮಕ್ಕೂ ಮತ್ತು ಭಿಕ್ಷುಸಂಘಕ್ಕೆ ಸಹಾ ಶರಣು ಹೋಗುವೆನು.

ಇಲ್ಲಿಗೆ 13ನೇಯದಾದ ಗೃಹಪತಿ ವಗ್ಗವು ಮುಗಿಯಿತು

Thursday, 17 May 2018

Samyutta nikaya 35.12 ಲೋಕಕಾಮಗುಣ ವಗ್ಗೋ

ಲೋಕಕಾಮಗುಣ ವಗ್ಗೋ

35.12.1 ಪಠಮ ಮಾರಪಾಸ ಸುತ್ತಂ (ಪ್ರಥಮ ಮಾರಪಾಶ ಸುತ್ತ)

114. ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ, ಇವಕ್ಕೆ ಅಂಟಿಕೊಂಡರೆ, ಅಂತಹ ಭಿಕ್ಷುವಿಗೆ ಮಾರನ ಕ್ಷೇತ್ರಕ್ಕೆ ಪ್ರವೇಶಿಸಿದವನೆಂದು, ಮಾರನ ಬಲಕ್ಕೆ ವಶನಾಗಿರುವವನು ಎಂದು ಹಾಗೂ ಮಾರನ ಬಂಧನಕ್ಕೆ ಬದ್ದೃನಾಗಿರುವವನೆಂದು, ಪಾಪಿಯ ಇಚ್ಛೆಯಂತೆ ಆಡುತ್ತಿದ್ದಾನೆಂದು ಕರೆಯುತ್ತಾರೆ. ಭಿಕ್ಷುಗಳೇ, ಇಲ್ಲಿ ಕಿವಿಯಿಂದ ಗ್ರಹಿಸಬಹುದಾದ ಶಬ್ದಗಳಿವೆ... ಮೂಗಿನಿಂದ ಗ್ರಹಿಸಬಹುದಾದ ವಾಸನೆಗಳಿವೆ... ಇಚ್ಛೆಯಂತೆ ಆಡುತ್ತಿದ್ದಾನೆಂದು ಕರೆಯುತ್ತಾರೆ.
ಇಲ್ಲಿ ಭಿಕ್ಷುಗಳೇ, ಜಿಹ್ವೆಯಿಂದ ಗ್ರಹಿಸಬಹುದಾದಂತಹ ವಾಸನೆಗಳಿವೆ. ಅವು ಇಷ್ಟವನ್ನುಂಟುಮಾಡುವವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ರಂಜನಿಯವಾದದ್ದು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ, ಇವಕ್ಕೆ ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಮಾರನ ಕ್ಷೇತ್ರಕ್ಕೆ ಪ್ರವೇಶಿಸಿದವನೆಂದು, ಮಾರನ ಬಲಕ್ಕೆ ವಶನಾಗಿರುವನೆಂದು, ಮಾರನ ಬಂಧನಕ್ಕೆ ಬದ್ಧನಾಗಿರುವನೆಂದು, ಮಾರನ ಇಚ್ಛೆಯಂತೆ ಆಡುತ್ತಿದ್ದಾನೆಂದು ಹೇಳುತ್ತಾರೆ....
ಇಲ್ಲಿ ಭಿಕ್ಷುಗಳೇ, ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮ (ಮಾನಸಿಕ ವಿಷಯಗಳಿವೆ) ಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ರಂಜನಿಯವು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ ಇವಕ್ಕೆ ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಮಾರನ ಬಲಕ್ಕೆ ವಶವಾಗಿರುವನೆಂದು, ಮಾರನ ಕ್ಷೇತ್ರ ಪ್ರವೇಶಿಸಿದವನೆಂದು, ಮಾರನ ಇಚ್ಛೆಯಂತೆ ಆಡುತ್ತಿರುವನೆಂದು ಹೇಳುತ್ತಾರೆ.
ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಇಷ್ಟವನ್ನುಂಟು ಮಾಡುವವು, ಒಪ್ಪುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿ, ಪ್ರಲೋಭಕಾರಿ, ರಂಜನಿಯವಾದುದು. ಆದರೂ ಭಿಕ್ಷುವು ಇಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಜಿಹ್ವೆಯಿಂದ ಗ್ರಹಿಸಬಹುದಾದಂತಹ ವಿಷಯಗಳಿವೆ, ಅವು ಆಸೆ ಹುಟ್ಟಿಸುವಂತಹವು, ಒಪ್ಪುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೂ ಸಹಾ ಭಿಕ್ಷುಗಳು ಇಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಮನಸ್ಸಿನಿಂದ ಗ್ರಹಿಸಬಹುದಾದಂತಹ ವಿಷಯಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೂ ಸಹಾ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ.


35.12.2 ದುತಿಯ ಮಾರಪಾಸ ಸುತ್ತಂ (ದ್ವಿತೀಯ ಮಾರಪಾಶ ಸುತ್ತ)

115. ಭಿಕ್ಷುಗಳೇ, ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದ ರೂಪಗಳು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವೇನಾದರೂ ಅವುಗಳಲ್ಲಿ ಅನಂದಿಸಿದರೆ, ಸ್ವಾಗತಿಸಿದರೆ, ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ರೂಪಗಳಿಗೆ ಬಂಧಿತನಾದ ಭಿಕ್ಷು ಎನ್ನುವರು. ಅಂತಹವ ಮಾರನ ವಲಯದಲ್ಲಿ ಪ್ರವೇಶಿಸಿರುತ್ತಾನೆ. ಅಂತಹವ ಮಾರನ ವಶದಲ್ಲಿದ್ದಾನೆ, ಮಾರನ ಬಿಗಿಪಾಶದಲ್ಲಿದ್ದಾನೆ. ಅಂತಹವ ಪಾಪಿಯ ಇಚ್ಛೆಯಂತೆ ಪ್ರವತರ್ಿಸುತ್ತಿದ್ದಾನೆ ಎನ್ನುತ್ತಾರೆ...
ಭಿಕ್ಷುಗಳೇ, ನಾಲಿಗೆಯ ವಿಞ್ಞಾನದಿಂದ ಗ್ರಹಿಸಬಹುದಾದ ರಸಗಳಿವೆ... ಮನೋವಿಞ್ಞಾನದಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಇಷ್ಟ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಧಮ್ಮಗಳಿಗೆ ಮತ್ತು ಮನೋವಿಞ್ಞಾನಕ್ಕೆ ಬದ್ಧನಾಗಿರುವನೆಂದು, ಮಾರನ ಆವಾಸದಲ್ಲಿ ಪ್ರವೇಶಿಸಿರುವನೆಂದು, ಮಾರನ ವಶನಾಗಿರುವನೆಂದು, ಮಾರಪಾಶದಿಂದ ಬಿಗಿಗೊಳಿಸಲ್ಪಟ್ಟಿದ್ದಾನೆಂದು, ಮಾರ ಬಂಧನದಲ್ಲಿ ಬದ್ಧನಾಗಿರುವನೆಂದು ಹಾಗು ಪಾಪಿಯ ಇಚ್ಛೆಯಂತೆ ವತರ್ಿಸುವನೆಂದು ಕರೆಯುತ್ತಾರೆ.
ಭಿಕ್ಷುಗಳೇ, ಇಲ್ಲಿ ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದಂತಹ ರೂಪಗಳಿವೆ, ಅವು ಇಷ್ಟ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾಇಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವುಗಳಲ್ಲಿ ಅಂಟದಿದ್ದರೆ, ಅಂತಹ ಭಿಕ್ಷುವಿಗೆ ಚಕ್ಷು ವಿಞ್ಞಾನದಿಂದ ಹಾಗು ರೂಪಗಳಿಂದ ಮುಕ್ತನಾದ ಭಿಕ್ಷುವೆನ್ನುತ್ತಾರೆ. ಅಂತಹವನಿಗೆ ಮಾರನ ಆವಾಸಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಅಂತಹವನು ಮಾರನಿಗೆ ವಶನಾಗಿಲ್ಲ, ಮಾರಪಾಶಕ್ಕೆ ಸಿಲುಕಿಲ್ಲ, ಮಾರ ಬಂಧನದಿಂದ ಮುಕ್ತನು, ಮಾರನ ಇಚ್ಛೆಯಂತೆ ವತರ್ಿಸದವನು ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಜಿಹ್ವಾ ವಿಞ್ಞಾನದಿಂದ ಗ್ರಹಿಸಬಹುದಾದಂತಹ ರಸಗಳಿವೆ... ಮನೋವಿಞ್ಞಾನದಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ. ಅವು ಇಷ್ಟಪಡುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವುಗಳಲ್ಲಿ ಅಂಟದಿದ್ದರೆ, ಅಂತಹ ಭಿಕ್ಷುವಿಗೆ ಮನೋವಿಞ್ಞಾನ ಹಾಗು ಧಮ್ಮಗಳಿಂದ ಮುಕ್ತನಾದ ಭಿಕ್ಷುವೆನ್ನುತ್ತಾರೆ. ಅಂತಹವನು ಮಾರನ ವಾಸಕ್ಕೆ ಪ್ರವೇಶಿಸಿಲ್ಲ, ಅಂತಹವನು ಮಾರನಿಗೆ ವಶನಾಗಿಲ್ಲ, ಮಾರಪಾಶಕ್ಕೆ ಸಿಲುಕಿಲ್ಲ, ಮಾರಬಂಧನದಿಂದ ಮುಕ್ತನು, ಪಾಪಿಯ ಇಚ್ಛೆಯಂತೆ ವತರ್ಿಸದವನು ಎನ್ನುತ್ತಾರೆ.

35.12.3 ಲೋಕನ್ತಗಮನ ಸುತ್ತಂ

116. ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ ಅಥವಾ ಪ್ರಯಾಣಿಸಲಾಗುವುದಿಲ್ಲ. ಆದರೂ ಭಿಕ್ಷುಗಳೇ, ಲೋಕದ ಅಂತ್ಯಕ್ಕೆ ತಲುಪದೆ ದುಃಖದ ಅಂತ್ಯವಿದೆ ಎಂದು ನಾನು ಘೋಷಿಸುವುದಿಲ್ಲ. ಹೀಗೆ ಭಗವಾನರು ಹೇಳಿದ ನಂತರ ಆಸನದಿಂದ ಎದ್ದು ತಮ್ಮ ವಾಸಸ್ಥಳದಲ್ಲಿ ಸೇರಿದರು. ಹೀಗೆ ಭಗವಾನರು ಹೊರಟನಂತರ ಭಿಕ್ಷುಗಳು ಹೀಗೆ ಯೋಚಿಸಿದರು: ಆಯುಷ್ಮಂತರೇ, ಈಗ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ, ವಿಶ್ರಾಂತಿಗೆ ತೆರಳಿರುವರು. ಆದರೆ ವಿವರವಾಗಿ ವ್ಯಾಖ್ಯಾನಿಸಿಲ್ಲ. ಈಗ ಭಗವಾನರಿಂದ ಸಂಕ್ಷಿಪ್ತವಾಗಿ ಗಳಿಸಿರುವ ಈ ಧಮ್ಮವನ್ನು ವಿವರವಾಗಿ ತಿಳಿಸುವವರು ಯಾರು?
ಆಗ ಅವರು ನಿರ್ಧರಿಸಿದರು: ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿದ್ದಾರೆ. ಸಂಘದಲ್ಲಿರುವ ಜ್ಞಾನಿ ಸಹಬ್ರಹ್ಮಚಾರಿಗಳಿಂದಲೂ ಸಹಾ ಪ್ರಶಂಸಿತರಾಗಿರುವರು. ಖಂಡಿತವಾಗಿ ಆಯುಷ್ಮಂತ ಆನಂದರವರೇ ಇದರ ಅರ್ಥ ವಿವರವಾಗಿ ನುಡಿಯಲು ಸಮರ್ಥರಾಗಿರುವರು. ಹೀಗಾಗಿ ಅವರ ಬಳಿಗೆ ಹೋಗೋಣ ಹಾಗು ಅವರಿಂದ ವಿವರವಾದ ವಿವರಣೆ ಪಡೆಯೋಣ.
ನಂತರ ಅವರೆಲ್ಲ ಆಯುಷ್ಮಂತ ಆನಂದರ ಬಳಿಗೆ ಸಮೀಪಿಸಿದರು ಹಾಗು ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯಿಸಿಕೊಂಡರು. ನಂತರ ಒಂದೆಡೆ ಕುಳಿತರು. ಪೂಜ್ಯ ಆನಂದರವರು ವಿವರಿಸಲಿ ಎಂದರು.
ಆಗ ಆನಂದರವರು ಹೀಗೆ ವಿವರಿಸಿದರು: ಆಯುಷ್ಮಂತರೇ, ಇದು ಹೇಗೆಂದರೆ ಒಬ್ಬರು ಸಾರಯುಕ್ತವಾದ ಚೇಗುವನ್ನು (ಮರದ ಮದ್ಯದ ತಿರುಳು) ಪಡೆಯಲಿಚ್ಛಿಸುತ್ತಾ, ಹುಡುಕುತ್ತಾ, ಅಲೆದಾಡುತ್ತಾ, ಮರದ ಬಳಿಗೆ ಬಂದು ಆತನು ಮರದ ಸಾರವನ್ನು ಹುಡುಕುತ್ತಾ ಅವನ್ನು ರೆಂಬೆಗಳಲ್ಲಿ ಹಾಗು ಎಲೆಗಳಲ್ಲಿ ಹುಡುಕುತ್ತಾನೆ. ಹಾಗೆ ನೀವೂ ಸಹಾ ಹುಡುಕಲಿದ್ದೀರಿ. ಯಾವಾಗ ನೀವು ಭಗವಾನರಿಗೆ ಮುಖಾಮುಖಿಯಾದರೋ, ಆಗಲೇ ಭಗವಾನರ ಬಳಿಯಲ್ಲಿ ಕೇಳಬಹುದಿತ್ತು. ಅಲ್ಲಿ ಅಲಕ್ಷಿಸಿ ಇಲ್ಲಿ ಬಂದಿರುವಿರಿ. ಆದರೆ ಮಿತ್ರರೇ, ಭಗವಾನರು ಏನನ್ನೆಲ್ಲಾ ಅರಿಯಬೇಕೋ ಅದೆಲ್ಲವನ್ನು ಅರಿತಿದ್ದಾರೆ, ಯಾವುದೆಲ್ಲವನ್ನು ದಶರ್ಿಸಬೇಕೋ ಅವನ್ನೆಲ್ಲಾ ದಶರ್ಿಸಿದ್ದಾರೆ. ಪ್ರವರ್ತಕರು, ಅರ್ಥಕಾರಿಯನ್ನೇ ಬೋಧಿಸುವವರು, ಅಮರತ್ವಧಾತರೂ, ಧಮ್ಮಸ್ವಾಮಿಗಳು, ತಥಾಗತರೂ ಆಗಿದ್ದಾರೆ. ಹೀಗಾಗಿ ನೀವು ಆಗಲೇ ಪ್ರಶ್ನಿಸಬೇಕಿತ್ತು. ಅವರು ವಿವರಿಸುತ್ತಿದ್ದಂತೆಯೇ ನೀವು ನೆನಪಿನಲ್ಲಿಡಬೇಕಿತ್ತು.
ಖಂಡಿತವಾಗಿ ಆಯುಷ್ಮಂತ ಆನಂದರವರೇ, ಭಗವಾನರು ಯಾವುದೆಲ್ಲವನ್ನು ಅರಿಯಬೇಕೋ ಅವೆಲ್ಲವನ್ನು ಅರಿತಿದ್ದಾರೆ. ಯಾವುದೆಲ್ಲವೂ ದಶರ್ಿಸಬೇಕೋ ಅವೆಲ್ಲವನ್ನು ದಶರ್ಿಸಿದ್ದಾರೆ. ಅವರು ಚಕ್ಷುವಂತರು, ಜ್ಞಾನಸ್ವರೂಪಿಗಳು, ಧಮ್ಮಸ್ವರೂಪಿಗಳು, ಬ್ರಹ್ಮಸ್ವರೂಪಿಗಳು, ಕ್ರಿಯಾಶೀಲರು, ಪ್ರವರ್ತಕರೂ, ಅರ್ಥವನ್ನೇ ಉಪದೇಶಿಸುವವರು, ಅಮರತ್ವದ ಧಾತರೂ ಧಮ್ಮಸ್ವಾಮಿಗಳು, ತಥಾಗತರೂ ಆಗಿದ್ದಾರೆ. ನಾವು ಆಗಲೇ ಅರ್ಥ ವ್ಯಾಖ್ಯಾನವನ್ನು ಕೇಳಬೇಕಿತ್ತು ಹಾಗು ಆಲಿಸಿ ನೆನಪಿಡಬೇಕಿತ್ತು. ಅವರೂ ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿರುವಿರಿ ಹಾಗು ಜ್ಞಾನವುಳ್ಳ ಸಹ ಬ್ರಹ್ಮಚಾರಿಗಳಿಂದಲೂ ಸ್ತುತಿಗೆ ಒಳಗಾರಿರುವಿರಿ. ಹೀಗಾಗಿ ಭಗವಾನರಿಂದ ಬೋಧಿತವಾದ ಈ ಸಂಕ್ಷಿಪ್ತ ಸುತ್ತಕ್ಕೆ ತಾವೇ ಇದರ ಅರ್ಥವನ್ನು ವಿವರವಾಗಿ ತಿಳಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಹಾಗಾದರೆ ಆಯುಷ್ಮಂತರೇ, ಗಮನವಿಟ್ಟು ಆಲಿಸಿರಿ ನಾನು ತಿಳಿಸುವೆನು.
ಸರಿ ಆಯುಷ್ಮಂತರೇ ಎಂದು ಭಿಕ್ಖುಗಳು ಪುನರುಚ್ಛರಿಸಿದರು. ನಂತರ ಆಯುಷ್ಮಂತ ಆನಂದರು ಹೀಗೆ ವಿವರಿಸತೊಡಗಿದರು.
ಆಯುಷ್ಮಂತರೇ, ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ ಭಗವಾನರು ಆಸನದಿಂದ ಎದ್ದು ತಮ್ಮ ನಿವಾಸಕ್ಕೆ ಹೊರಟರು. ಬೋಧನೆ ಹೀಗಿತ್ತು ಅಲ್ಲವೇ? ಭಿಕ್ಷುಗಳೇ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ, ಪ್ರಯಾಣದಿಂದ ತಲುಪಲಾಗುವುದಿಲ್ಲ. ಆದರೂ ಭಿಕ್ಷುಗಳೇ, ಲೋಕದ ಅಂತ್ಯವನ್ನು ತಲುಪಲಾಗದೆ ದುಃಖದ ಅಂತ್ಯವನ್ನು ಮಾಡಲಾಗುವುದಿಲ್ಲ. ಇದರ ವಿಸ್ತಾರವಾದ ಅರ್ಥವು ಹೀಗೆ ಬರುವುದು. ಈ ಲೋಕದಲ್ಲಿ ಲೋಕಸಂಜ್ಞೆ (ಗ್ರಹಿಕೆ) ಒಂದಿದೆ. (ಲೋಕದ ಬಗ್ಗೆ ಗ್ರಹಿಸುವವರು). ಹಾಗೆಯೇ ಲೋಕಮಾನಿಯೊಂದಿದೆ (ಲೋಕದ ಬಗ್ಗೆ ಅಳತೆ ಮಾಡುವವರು). ಹೀಗೆಂದು ಆರ್ಯರ ವಿನಯದಲ್ಲಿ ಹೇಳಲಾಗಿದೆ. ಮತ್ತೆ ಇಲ್ಲಿ ಭಿಕ್ಷುಗಳೇ, ಯಾವುದು ಲೋಕಸನ್ಯಾ ಹಾಗು ಲೋಕಮಾನಿಯ? ಇಲ್ಲಿ ಚಕ್ಷುವಿನಿಂದ ಲೋಕದ ಗ್ರಹಿಕೆಯಾಗುವುದು ಹಾಗು ಲೋಕದ ಅಳತೆಯಾಗುವುದು. ಅದೇರೀತಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಲೋಕದ ಬಗ್ಗೆ ಗ್ರಹಿಸುವವರು ಹಾಗು ಲೋಕವನ್ನು ಅಳತೆ ಮಾಡುತ್ತಾರೆ. ಹೀಗೆ ಇದನ್ನು ಆರ್ಯರ ವಿನಯದಲ್ಲಿ ಹೇಳಲಾಗುತ್ತದೆ.
ಆಯುಷ್ಮಂತರೇ, ಯಾವಾಗ ಭಗವಾನರು ಆಸನದಿಂದೆದ್ದು ವಾಸಸ್ಥಳಕ್ಕೆ ಹೋಗುವ ಮುನ್ನ ಇದನ್ನು ಸಂಕ್ಷಿಪ್ತವಾಗಿ ಹೇಳಿದರು. ಆದರೆ ವಿಸ್ತಾರವಾಗಿ ಹೇಳಲಿಲ್ಲ. ಹೇಗೆಂದರೆ: ಭಿಕ್ಷುಗಳೇ, ನಾನು ನುಡಿಯುತ್ತಿದ್ದೇನೆ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ ಮತ್ತು ತಲುಪಲಾಗುವುದಿಲ್ಲ. ಆದರೂ ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಲೋಕದ ಅಂತ್ಯವನ್ನು ತಲುಪಲಾಗದೆ ದುಃಖದ ಅಂತ್ಯವನ್ನು ಮಾಡಲಾಗುವುದಿಲ್ಲ. ಭಿಕ್ಷುಗಳೇ ಸಾರಾಂಶವನ್ನು ನಾನು ಹೀಗೆ ನುಡಿದಿದ್ದೇನೆ. ಆದರೂ ನಿಮಗೆ ಸಮಾಧಾನವಾಗಿಲ್ಲದಿದ್ದರೆ ಭಗವಾನರ ಬಳಿಯಲ್ಲಿ ವಿವರಣೆಯನ್ನು ಪಡೆಯೋಣ. ಹೇಗೆ ಭಗವಾನರು ನುಡಿಯುವರೋ ಹಾಗೆಯೇ ನೆನಪಿಡಿ.
ಹಾಗೇ ಆಗಲಿ ಆಯುಷ್ಮಂತರೇ ಹೀಗೆ ನುಡಿದ ಆ ಭಿಕ್ಷುಗಳೆಲ್ಲಾ ಅಲ್ಲಿಂದ ಎದ್ದು ಭಗವಾನರ ಬಳಿಯಲ್ಲಿ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತು ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದರು. ಹಾಗು ಹೀಗೆ ಮುಂದುವರಿಸಿದರು: ಭಂತೆ, ನಂತರ ನಾವು ಆನಂದರವನ್ನು ಭೇಟಿ ಮಾಡಿದಾಗ ಈ ರೀತಿಯಾಗಿ ಅವರು ಉತ್ತರಿಸಿದ್ದಾರೆ.
ಭಿಕ್ಷುಗಳೇ, ಆನಂದರವರು ಪಂಡಿತರಾಗಿದ್ದಾರೆ, ಮಹಾಪ್ರಜ್ಞಾವಂತರಾಗಿದ್ದಾರೆ, ನೀವು ನನಗೂ ಸಹಾ ಇದರ ವಿಸ್ತಾರ ಧಮ್ಮವನ್ನು ಕೇಳಿದ್ದಕ್ಕೆ ನಾವು ಸಹಾ ಇದೇ ವಿಧದಲ್ಲಿ ವಿವರಿಸುತ್ತಿದ್ದೆನು. ಇದೇ ಅರ್ಥದಲ್ಲಿ ತಿಳಿಸುತ್ತಿದ್ದೆನು. ನೀವು ಇದನ್ನೇ ಚೆನ್ನಾಗಿ ನೆನಪಿಡಿರಿ.

35.12.4 ಕಾಮಗುಣ ಸುತ್ತಂ

117. ಭಿಕ್ಷುಗಳೇ, ಸಮ್ಮಾಸಂಬೋಧಿ ಪ್ರಾಪ್ತಿಗೆ ಮುನ್ನ ನಾನಿನ್ನೂ ಬೋಧಿಸತ್ವನಾಗಿದ್ದಾಗ, ಸಮ್ಮಾಸಂಬುದ್ಧನಾಗುವ ಮುನ್ನ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು. ಈ ಹಿಂದೆ ಐದು ಇಂದ್ರೀಯಗಳ ಮೂಲಕ ಅನುಭವಿಸಿದ ಸುಖಗಳೆಲ್ಲ ಹೊರಟುಹೋಗಿವೆ, ನಿರೋಧಗೊಂಡಿವೆ ಹಾಗು ಬದಲಾಗಿವೆ. ಆದರೂ ಭೂತದಲ್ಲಿಯೇ ಹೆಚ್ಚು ಹರಿಯುತ್ತಿದೆ, ವರ್ತಮಾನ ಹಾಗು ಭವಿಷ್ಯದಲ್ಲಿ ಕಡಿಮೆ ಅಲೆದಾಡುತ್ತಿದೆ. ನನ್ನ ಮನಸ್ಸಿನಲ್ಲಿ ಅವುಗಳ ಗುರುತುಗಳು ಹಾಗೇ ಉಳಿದಿವೆ. ಆದ್ದರಿಂದ ನನ್ನ ಕ್ಷೇಮಕ್ಕಾಗಿ ನನ್ನ ಮನಸ್ಸನ್ನು ಅಪ್ರಮತ್ತವಾಗಿ ಹಾಗು ಜಾಗರೂಕವಾಗಿ ರಕ್ಷಿಸಬೇಕಾಗಿದೆ.
ಆದ್ದರಿಂದ ಭಿಕ್ಷುಗಳೇ, ನಿಮ್ಮ ಮನಸ್ಸಿನಲ್ಲಿಯು ಸಹಾ ನೀವು ಬಿಟ್ಟಂತಹ ಐದು ಇಂದ್ರೀಯಗಳ ಸುಖಭೋಗಗಳ ಛಾಯೆ ಅಥವಾ ಗುರುತುಗಳು ಉಳಿದಿರಬಹುದು. ಅವು ವರ್ತಮಾನ ಹಾಗು ಭವಿಷ್ಯಕ್ಕಿಂತ ಹೆಚ್ಚಾಗಿ ಕಾಡಬಹುದು. ಆದ್ದರಿಂದ ಭಿಕ್ಷುಗಳೇ, ನಿಮ್ಮ ಕ್ಷೇಮಕ್ಕಾಗಿ ಹೊಂದಿಕೆಯಾಗಿ, ಅಪ್ರಮತ್ತರಾಗಿ ಸಾಧಿಸಿರಿ. ಜಾಗರೂಕರಾಗಿ ಈ ಐದು ಇಂದ್ರೀಯಗಳ ಬಗ್ಗೆ ಚಿತ್ತರಕ್ಷಣೆಯನ್ನು ಮಾಡಿಕೊಳ್ಳಿರಿ. ನೀವು ಭೌತಿಕವಾಗಿ ತ್ಯಾಗ ಮಾಡಿದ್ದರೂ ಸಹಾ ಅವುಗಳ ಛಾಯೆ ಅಥವಾ ಗುರುತುಗಳು ನಿಮ್ಮ ಮನದಲ್ಲಿರುತ್ತವೆ.
ಆದ್ದರಿಂದ ಭಿಕ್ಷುಗಳೇ, ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಕಣ್ಣುಗಳು ನಿರೋಧವಾಗಿದೆಯೋ ಮತ್ತು ರೂಪಗಳ ಗ್ರಹಿಕೆಯು ಅಳಿಸಿಹೋಗಿದೆಯೋ ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಕಿವಿಯು ನಿರೋಧವಾಗಿದೆಯೋ ಮತ್ತು ಶಬ್ದಗಳ ಗ್ರಹಿಕೆಯು ಅಳಿಸಿಹೋಗಿದೆಯೋ ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ.... ಎಲ್ಲ ಮನಸ್ಸು ನಿರೋಧವಾಗಿದೆಯೋ ಮತ್ತು ಧಮ್ಮದ ಸಂಜ್ಞೆಯು ಮರೆಯಾಗಿದೆಯೋ ಆ ಆಧಾರವನ್ನು ಅಥರ್ೈಸಿಕೊಳ್ಳಿರಿ.
ಈ ರೀತಿಯಾಗಿ ನುಡಿದ ನಂತರ ಭಗವಾನರು ತಮ್ಮ ಆಸನದಿಂದೆದ್ದು ವಾಸಸ್ಥಾನಕ್ಕೆ ಹೊರಟರು. ಹೀಗೆ ಹೀಗೆ ಭಗವಾನರು ಹೊರಟನಂತರ ಭಿಕ್ಷುಗಳು ಹೀಗೆ ಯೋಚಿಸಿದರು: ಆಯುಷ್ಮಂತರೇ, ಈಗ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ, ವಿಶ್ರಾಂತಿಗೆ ತೆರಳಿರುವರು. ಆದರೆ ವಿವರವಾಗಿ ವ್ಯಾಖ್ಯಾನಿಸಿಲ್ಲ. ಈಗ ಭಗವಾನರಿಂದ ಸಂಕ್ಷಿಪ್ತವಾಗಿ ಗಳಿಸಿರುವ ಈ ಧಮ್ಮವನ್ನು ವಿವರವಾಗಿ ತಿಳಿಸುವವರು ಯಾರು?
ಆಗ ಅವರು ನಿರ್ಧರಿಸಿದರು: ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿದ್ದಾರೆ. ಸಂಘದಲ್ಲಿರುವ ಜ್ಞಾನಿ ಸಹಬ್ರಹ್ಮಚಾರಿಗಳಿಂದಲೂ ಸಹಾ ಪ್ರಶಂಸಿತರಾಗಿರುವರು. ಖಂಡಿತವಾಗಿ ಆಯುಷ್ಮಂತ ಆನಂದರವರೇ ಇದರ ಅರ್ಥ ವಿವರವಾಗಿ ನುಡಿಯಲು ಸಮರ್ಥರಾಗಿರುವರು. ಹೀಗಾಗಿ ಅವರ ಬಳಿಗೆ ಹೋಗೋಣ ಹಾಗು ಅವರಿಂದ ವಿವರವಾದ ವಿವರಣೆ ಪಡೆಯೋಣ.
ನಂತರ ಅವರೆಲ್ಲ ಆಯುಷ್ಮಂತ ಆನಂದರ ಬಳಿಗೆ ಸಮೀಪಿಸಿದರು ಹಾಗು ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯಿಸಿಕೊಂಡರು. ನಂತರ ಒಂದೆಡೆ ಕುಳಿತರು. ಪೂಜ್ಯ ಆನಂದರವರು ವಿವರಿಸಲಿ ಎಂದರು.
ಮಿತ್ರರೇ, ಯಾವಾಗ ಭಗವಾನರು ಸುತ್ತವನ್ನು ಸಂಕ್ಷಿಪ್ತವಾಗಿ ಹೇಳಿ, ವಿವರವಾಗಿ ಉಪದೇಶಿಸಿದ ಆ ಬೋಧನ ಸಾರಾಂಶವು ಹೀಗಿದೆಯಲ್ಲವೇ? ಆದ್ದರಿಂದ ಭಿಕ್ಷುಗಳೇ, ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲ ಕಣ್ಣುಗಳು ಹಾಗು ರೂಪಗಳೂ ನಿರೋಧವಾಗುತ್ತದೊ... ಆ ಆಧಾರಗಳನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಮನಸ್ಸು ಹಾಗು ಧಮ್ಮಗಳು ನಿರೋಧಗೊಳ್ಳುತ್ತದೋ ಆ ಆಧಾರಗಳನ್ನು ಅರ್ಥಮಾಡಿಕೊಳ್ಳಿರಿ. ನಾನು ಈ ವಿವರಣೆಯ ಸಾರಾಂಶವನ್ನು ಹೀಗೆ ಅರ್ಥಮಾಡಿಕೊಂಡಿದ್ದೇನೆ. ಹೀಗೆಂದು ಭಗವಾನರು ಆರು ಇಂದ್ರೀಯ ಆಯತನಗಳ ಆಧಾರಗಳ ಬಗ್ಗೆ ಹೀಗೆ ವಿವರಿಸಿದ್ದಾರೆ.
ಆಯುಷ್ಮಂತರೇ, ಯಾವಾಗ ಭಗವಾನರು ತಮ್ಮ ಆಸನದಿಂದೆದ್ದು ತಮ್ಮ ವಿಹಾರಕ್ಕೆ ಮರಳಿದರೋ ಅದಕ್ಕೆ ಮುಂಚೆ ಪ್ರವಚಿಸಿದ್ದಂತಹ ವಿವರವಿಲ್ಲದ ಸಾರಾಂಶವನ್ನು ತಿಳಿಸಿದ್ದರೋ ಅವರ ವಿವರಣೆಯನ್ನು ನಾನು ನಿಮಗೆ ತಿಳಿಸಿದ್ದೇನೆ. ಈಗ ಮಿತ್ರರೇ, ನೀವು ಬಯಸಿದ್ದಲ್ಲಿ ಭಗವಾನರನ್ನು ದಶರ್ಿಸಿ ಅವರಲ್ಲಿಯೇ ವಿವರವನ್ನು ಕೇಳಿರಿ. ಹೇಗೆ ಭಗವಾನರು ವಿವರಿಸುವೋ ಹಾಗೆಯೇ ಅವನ್ನು ನೆನಪಿಡಿ.
ಆಯಿತು ಆಯುಷ್ಮಂತರೇ ಎಂದು ಭಿಕ್ಷುಗಳು ವಂದಿಸಿ, ತಮ್ಮ ಆಸನದಿಂದ ಎದ್ದು ಭಗವಾನರಲ್ಲಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ವಿವರವನ್ನೆಲ್ಲಾ ನುಡಿದರು ಹಾಗು ಹೀಗೆ ಹೇಳಿದರು: ನಂತರ ಭಂತೆ, ನಾವು ಆಯುಷ್ಮಂತ ಆನಂದರವರ ಬಳಿಗೆ ಹೋಗಿ ಅರ್ಥವಿವರಣೆಯನ್ನು ಕೇಳಿದೆವು. ಆಯುಷ್ಮಂತ ಆನಂದರವರು ನಮಗೆ ಈ ವಿಧದಲ್ಲಿ ಅರ್ಥವನ್ನು ಈ ವಾಕ್ಯಗಳಲ್ಲಿ, ಈ ರೀತಿಯಲ್ಲಿ ವಿವರಿಸಿದರು.
ಭಿಕ್ಷುಗಳೇ, ಆಯುಷ್ಮಂತ ಆನಂದರವರು ಪಂಡಿತರಾಗಿದ್ದಾರೆ. ಆಯುಷ್ಮಂತ ಆನಂದರವರು ಮಹಾ ಪ್ರಜ್ಞಾರಾಗಿದ್ದಾರೆ. ನೀವು ನನ್ನಲ್ಲಿಯು ಇದರ ಅರ್ಥ ವಿವರಣೆಯನ್ನು ಕೇಳಿದ್ದರೆ ನಾನು ಸಹಾ ಇದೇರೀತಿಯಲ್ಲಿ ವಿತರಿಸುತ್ತಿದ್ದೆನು. ಇದರ ಅರ್ಥವು ಹೀಗೆಯೇ ಇದೆ ಮತ್ತು ನೀವು ಹೀಗೆಯೇ ಇದನ್ನು ನೆನಪಿಡಿರಿ.

35.12.5 ಸಕ್ಕಪಞ್ಞ ಸುತ್ತಂ (ಸಕ್ಕನ ಪ್ರಶ್ನೆಯ ಸುತ್ತ)

118. ಒಮ್ಮೆ ಭಗವಾನರು ರಾಜಗೃಹದ ಗೃದ್ದಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ದೇವತೆಗಳ ಒಡೆಯ ಸಕ್ಕನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ಮನಃಪೂರ್ವಕವಾಗಿ ವಂದಿಸಿ ಒಂದೆಡೆ ನಿಂತನು ಹಾಗು ಹೀಗೆ ಪ್ರಶ್ನಿಸಿದನು:  ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ.
ಓ ದೇವತೆಗಳ ಒಡೆಯನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...
ಓ ದೇವತೆಗಳ ಒಡೆಯನೆ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.
ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.
ಓ ದೇವತೆಗಳ ಒಡೆಯನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.
ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ದೇವತೆಗಳ ಒಡೆಯನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.12.6 ಪಂಚಸಿಖ ಸುತ್ತಂ

119. ಒಮ್ಮೆ ಭಗವಾನರು ರಾಜಗೃಹದ ಗೃದ್ದಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ಪಞ್ಞಸಿಖ (ಪಂಚಸಿಖ)ನೆಂಬ ಗಂಧರ್ವ ಪುತ್ರನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ನಿಂತನು. ನಂತರ ಭಗವಾನರಲ್ಲಿ ಹೀಗೆ ಪ್ರಶ್ನಿಸಿದನು: ಭಂತೆ ಯಾವ ಕಾರಣದಿಂದ ಹಾಗು ಯಾವ ಬೆಂಬಲದಿಂದಾಗಿ ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣ ಪಡೆಯುವುದಿಲ್ಲ ಹಾಗು ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣವನ್ನು ಪಡೆಯಬಲ್ಲವು?
ಓ ಪಂಚಸಿಖ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...
ಓ ಪಂಚಸಿಖ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.
ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.
ಓ ಪಂಚಸಿಖ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.
ಪಂಚಸಿಖ, ಇದೇ ಕಾರಣದಿಂದ ಇದೇ ಬೆಂಬಲದಿಂದಾಗಿ ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣ ಪ್ರಾಪ್ತಿಮಾಡುವರು.


35.12.7 ಸಾರಿಪುತ್ತ ಸದ್ದಿವಿಹಾರಿಕ ಸುತ್ತಂ

120. ಒಮ್ಮೆ ಆಯುಷ್ಮಂತ ಸಾರಿಪುತ್ರರು ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಿಕ್ಷುವೊಬ್ಬನು   ಆಯುಷ್ಮಂತ ಸಾರಿಪುತ್ರರ ಬಳಿಗೆ ಸಮೀಪಿಸಿದನು, ಅವರಿಗೆ ವಂದಿಸಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತನು. ನಂತರ ಸಾರಿಪುತ್ರರಿಗೆ ಹೀಗೆ ಹೇಳಿದನು: ಆಯುಷ್ಮಂತ ಸಾರಿಪುತ್ರರೇ, ನನ್ನೊಂದಿಗೆ ವಾಸಿಸುತ್ತಿದ್ದಂತಹ ಭಿಕ್ಷುವೊಬ್ಬನು ಭಿಕ್ಖುಶಿಕ್ಷಣವನ್ನು ತ್ಯಜಿಸಿ ತನ್ನ ಹಿಂದಿನ ಹೀನವಾದ ಜೀವನಕ್ಕೆ ಹಿಂತಿರುಗಿದ್ದಾನೆ.
ಅದು ಹೀಗೆಯೇ ಆಯುಷ್ಮಂತನೇ, ಯಾವಾಗ ಒಬ್ಬನು ಇಂದ್ರಿಯ ದ್ವಾರಗಳನ್ನು ರಕ್ಷಿಸದಿದ್ದರೆ, ಮಿತಹಾರಿಯಲ್ಲದಿದ್ದರೆ, ಜಾಗೃತೆಗೆ ಆಸಕ್ತಿ ತೋರದಿದ್ದರೆ, ಹಾಗೇ ಆಗುವುದು. ಯಾವ ಭಿಕ್ಷುವು ಇಂದ್ರೀಯಗಳ ರಕ್ಷಣೆ ಮಾಡುವುದಿಲ್ಲವೋ ಆಹಾರದಲ್ಲಿ ಮಿತಿ ಅರಿತಿಲ್ಲವೋ ಜಾಗ್ರತೆಯಲ್ಲಿ ನಿರ್ಲಕ್ಷನೋ ಅಂತಹವನು ಜೀವನವಿಡೀ ಪರಿಶುದ್ಧ ಜೀವನ ನಡೆಸುವುದು ಅಸಾಧ್ಯವಾಗಿದೆ. ಆದರೆ ಆಯುಷ್ಮಂತನೇ, ಯಾವ ಭಿಕ್ಷುವು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೋ ಆಹಾರದಲ್ಲಿ ಮಿತಿಯಿರುವನೋ, ಜಾಗೃತಿಯಲ್ಲಿ ನಿಷ್ಠನೋ, ಅಂತಹವನಿಗೆ ಪವಿತ್ರ ಜೀವನವನ್ನು ನಡೆಸುವುದು ಸಾಧ್ಯವಿದೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೆ, ಪಹರೆಯಿಡುತ್ತಾನೆ? ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡಿ, ಭಿಕ್ಷುವು ಅದರ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷಣಗಳನ್ನಾಗಲಿ ಗುರುತಿಸಲು ಹೋಗುವುದಿಲ್ಲ. ಏಕೆಂದರೆ ಆತನೇನಾದರೂ ಚಕ್ಷು ಇಂದ್ರೀಯವನ್ನು ಅನಿಯಂತ್ರಿತವಾಗಿ ಬಿಟ್ಟರೆ, ಕೆಟ್ಟ ಅಕುಶಲ ಸ್ಥಿತಿಗಳ (ದುರಾಸೆ ಹಗೆತನ ಇತ್ಯಾದಿ) ಆತನಲ್ಲಿ ಆಕ್ರಮಿಸಬಹುದು. ಆತನು ಅದರ ನಿಯಂತ್ರಣವನ್ನು ಅಭ್ಯಸಿಸುತ್ತಾನೆ. ಹೀಗೆ ಆತನು ಕಣ್ಣನ್ನು ನಿಯಂತ್ರಿಸುತ್ತಾನೆ. ಅದೇರೀತಿಯಾಗಿ ಯಾವಾಗ ಕಿವಿಯಿಂದ ಶಬ್ದಗಳನ್ನು ಆಲಿಸುತ್ತಾನೋ... ಮೂಗಿನಿಂದ ವಾಸನೆಗಳನ್ನು ಗ್ರಹಿಸುತ್ತಾನೆ... ನಾಲಿಗೆಯಿಂದ ರುಚಿಗಳನ್ನು ಗ್ರಹಿಸುತ್ತಾನೋ... ದೇಹದಿಂದ ಸ್ಪರ್ಶಗಳನ್ನು ಗ್ರಹಿಸುತ್ತಾನೋ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುತ್ತಾನೋ ಆಗ ಭಿಕ್ಷುವು ಅವುಗಳ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷಣೆಗಳನ್ನಾಗಲಿ ಗುರುತಿಸುವುದಿಲ್ಲ. ಏಕೆಂದರೆ ಆತನ ಮನೋ ಇಂದ್ರಿಯವು ಅನಿಯಂತ್ರಿತವಾದರೆ ಕೆಟ್ಟ ಅಕುಶಲ ಸ್ಥಿತಿಗಳಾದ ದುರಾಸೆ, ಹಗೆತನ ಇತ್ಯಾದಿಗಳು ಆತನಲ್ಲಿ ಆಕ್ರಮಿಸಬಹುದು. ಆತನು ನಿಯಂತ್ರಣದ ಮಾರ್ಗವನ್ನು ಅಭ್ಯಸಿಸುತ್ತಾನೆ. ತನ್ನ ಮನಸ್ಸನ್ನು ಚೆನ್ನಾಗಿ ರಕ್ಷಣೆ ಮಾಡುತ್ತಾನೆ. ಈ ರೀತಿಯಾಗಿ ಮಿತ್ರನೇ, ಒಬ್ಬನು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಭೋಜನದಲ್ಲಿ ಮಿತಿಯಿಂದಿರುತ್ತಾನೆ? ಆತನು ಜಾಗ್ರತೆಯಿಂದ ಈ ರೀತಿ ಚಿಂತನೆ ಮಾಡುತ್ತಾನೆ. ಈ ಭೋಜನವು ಮೋಜಿಗಾಗಿ ಅಲ್ಲ, ಮತ್ತೇರಿಸುವುದಕ್ಕಾಗಿಯೂ ಅಲ್ಲ. ಶಾರೀರಿಕ ಸೌಂದರ್ಯ ಆಕರ್ಷಣೆಗಾಗಿಯೂ ಅಲ್ಲ. ಆದರೆ ಕೇವಲ ಭೌತಿಕ ಶರೀರದ ಬೆಂಬಲ ಹಾಗು ಸುವ್ಯವಸ್ಥೆಗೆ, ಅಸುಖದ ಅಂತ್ಯಕ್ಕಾಗಿ, ಬ್ರಹ್ಮಚರ್ಯೆಯ ಸಹಾಯಕ್ಕಾಗಿ ಎಂದ ತಿಳಿಯುತ್ತಾನೆ ಹಾಗು ಹೀಗೆ ನಿರ್ಧರಿಸುತ್ತಾನೆ. ಹೀಗೆ ನಾನು ಹಳೆಯ ವೇದನೆಗಳನ್ನು ಕ್ಷೀಣಿಸುತ್ತೇನೆ ಹಾಗು ನವವೇದನೆಗಳನ್ನು ಉದಯಿಸಲು ಅವಕಾಶ ನೀಡಲಾರೆ, ಹೀಗೆ ನಾನು ಆರೋಗ್ಯಕರನು, ಕಳಂಕರಹಿತನೂ ಮತ್ತು ಸುಖಿಯಾಗಿ ಜೀವಿಸುವೆನು. ಈ ರೀತಿಯಾಗಿ ಮಿತ್ರನೆ, ಒಬ್ಬನು ಆಹಾರದಲ್ಲಿ ಮಿತಿಯಿಂದ ಇರುತ್ತಾನೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಜಾಗರೂಕತೆಯಲ್ಲಿ ನಿಷ್ಠನಾಗುತ್ತಾನೆ. ಇಲ್ಲಿ ಭಿಕ್ಷುವು ಹಗಲಿನಲ್ಲಿ, ನಡೆದಾಡುವಾಗಲೇ ಆಗಲಿ, ಕುಳಿತಿರುವಾಗಲೇ ಆಗಲಿ, ತನ್ನ ಮನಸ್ಸಿನಲ್ಲಿ ಆವೃತವಾಗಿರುವ ತಡೆಯುಂಟುಮಾಡುವ ಕ್ಷೊಭಾ ಸ್ಥಿತಿಗಳಿಂದ ಮನಸ್ಸನ್ನು ಪರಿಶುದ್ಧಿಗೊಳಿಸುತ್ತಾನೆ ಹಾಗು ರಾತ್ರಿಯ ಪ್ರಥಮ ಯಾಮದಲ್ಲಿ (ಸಂಜೆ 6 ರಿಂದ 10) ನಡಿಗೆಯ ಧ್ಯಾನದಲ್ಲಿಯಾಗಲಿ, ಕುಳಿತು ಧ್ಯಾನಿಸುವಾಗಾಗಲಿ, ತನ್ನ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ. ಹಾಗೆಯೇ ರಾತ್ರಿಯ ದ್ವಿತೀಯ ಯಾಮದಲ್ಲಿ ಆತನು ಸಿಂಹಶಯ್ಯೆಯಲ್ಲಿ ಮಲಗಿ ಪೂರ್ಣವಾಗ ಜಾಗೃತೆಯಿಂದಿರುತ್ತಾ ಸ್ಮೃತಿವಂತನಾಗಿ, ಸಂಪಜನ್ಯನಾಗಿ (ಅರಿವಿನಿಂದ ಕೂಡಿದ ಎಚ್ಚರಿಕೆ) ಮತ್ತೆ ಮೇಲೇಳುವ ಸಮಯವನ್ನು ನಿಗದಿಮಾಡುತ್ತಾ ನಿದ್ರಿಸುತ್ತಾನೆ. ನಂತರ ಅಂತಿಮ ಯಾಮದಲ್ಲಿ (ರಾತ್ರಿ 2 ರಿಂದ 6) ಎದ್ದು ಚಂಕ್ರಮಣ ಧ್ಯಾನವನ್ನು ಅಭ್ಯಸಿಸುತ್ತಾ ತನ್ನ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ, ತಡೆಗಳಿಂದ ಮುಕ್ತನಾಗುತ್ತಾನೆ. ಈ ರೀತಿಯಾಗಿ ಮಿತ್ರನೇ, ಒಬ್ಬನು ಜಾಗ್ರತೆಗೆ ನಿಷ್ಠನಾಗುತ್ತಾನೆ. ಆದ್ದರಿಂದಾಗಿ ಮಿತ್ರನೇ, ನೀವು ಹೀಗೆ ನಿಮ್ಮನ್ನು ಸುಶಿಕ್ಷಿತಗೊಳಿಸಬೇಕು. ಹೇಗೆಂದರೆ, ನಾವು ಇಂದ್ರೀಯಗಳನ್ನು ರಕ್ಷಿಸುತ್ತೇನೆ. ಆಹಾರದಲ್ಲಿ ಮಿತಿಯನ್ನು ಹೊಂದುತ್ತೇವೆ, ಜಾಗೃತಿ ಸ್ಥಾಪನೆಯಲ್ಲಿ ನಿಷ್ಠರಾಗಿರುತ್ತೇವೆ. ಹೀಗೆ ಆಯುಷ್ಮಂತರೇ, ನೀವು ನಿಮ್ಮನ್ನು ಸುಶಿಕ್ಷಿತಗೊಳಿಸಬೇಕು.


35.12.8 ರಾಹುಲೋವಾದ ಸುತ್ತಂ (ರಾಹುಲನಿಗೆ ಬುದ್ಧಿವಾದ)

121. ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಏಕಾಂತದಿಂದ ಎದ್ದನಂತರ ಅವರ ಮನಸ್ಸಿನಲ್ಲಿ ಈ ಬಗೆಯ ಯೋಚನೆ ಉಂಟಾಯಿತು: ರಾಹುಲನಲ್ಲಿ ವಿಮುಕ್ತಿ ಪಕ್ವತೆ ಸಿದ್ಧವಾಗಿದೆ, ಆತನಿಗೆ ಉಳಿದ ಆಸವಗಳು ನಾಶವಾಗುವಂತೆ ಮಾಡಬೇಕು. ನಂತರ ಮುಂಜಾನೆ ಭಗವಾನರು ವಸ್ತ್ರ ಸರಿಪಡಿಸಿಕೊಂಡು, ಚೀವರ ಹಾಗು ಪಿಂಡಪಾತ್ರೆಯನ್ನು ತೆಗೆದುಕೊಂಡು, ಶ್ರಾವಸ್ಥಿಯ ಕಡೆಗೆ ಹೊರಟರು. ನಂತರ ಅವರು ಆಹಾರವನ್ನು ಸೇವಿಸಿದ ನಂತರ ಆಯುಷ್ಮಂತ ರಾಹುಲನಿಗೆ ಹೀಗೆ ನುಡಿದರು: ರಾಹುಲ ಅನ್ದವನಕ್ಕೆ ಹೋಗೋಣ, ಕುಳಿತುಕೊಳ್ಳಲು ವಸ್ತ್ರವನ್ನು ತೆಗೆದುಕೋ? ಆಯಿತು ಭಂತೆ ಎನ್ನುತ್ತಾ ಕುಳಿತುಕೊಳ್ಳಲು ವಸ್ತ್ರ ತೆಗೆದುಕೊಂಡು ಭಗವಾನರನ್ನು ಅತಿ ಸನಿಹದಿಂದ ಹಿಂಬಾಲಿಸಿದನು.
ಅದೇ ಸಮಯದಲ್ಲಿ ಸಹಸ್ರಾರು ದೇವತೆಗಳು ಸಹಾ ಭಗವಾನರನ್ನು ಹಿಂಬಾಲಿಸುತ್ತಿದ್ದರು. ಅವರು ಸಹಾ ಹೀಗೆ ಯೋಚಿಸುತ್ತಿದ್ದರು. ಇಂದು ಭಗವಾನರು ಆಯುಷ್ಮಂತ ರಾಹುಲರಲ್ಲಿ ಮತ್ತಷ್ಟು ಆಸವಗಳು ನಾಶವಾಗುವಂತೆ ಮಾರ್ಗದರ್ಶನ ನೀಡುತ್ತಾರೆ. ನಂತರ ಭಗವಾನರು ಅಂಧವನವನ್ನು ಪ್ರವೇಶಿಸಿದರು. ನಂತರ ವೃಕ್ಷವೊಂದರ ಕೆಳಗೆ ಆಸೀನರಾದರು. ರಾಹುಲರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಆಗ ಭಗವಾನರು ಆತನೊಂದಿಗೆ ಹೀಗೆ ಸಂಭಾಷಣೆ ಆರಂಭಿಸಿದರು:
ರಾಹುಲ ನೀನು ಯಾವರೀತಿ ಭಾವಿಸುವೆ, ಕಣ್ಣು ಅನಿತ್ಯವೋ ಅಥವಾ ನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾನ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷು ಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವ ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ವಿಞ್ಞಾನಗಳಾಗಲಿ ಅವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಜಿಹ್ವೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮತ್ತೆ ಜಿಹ್ವಾ ಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಧಮ್ಮವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನೋವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನೋಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವ ಮನೋಸಂಸ್ಪರ್ಶಗಳಿಂದ ಉದಯಿಸುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರಾಹುಲ, ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿಸುತ್ತಾನೆ, ರೂಪಗಳಿಂದ ವಿಕಷರ್ಿಸುತ್ತಾನೆ, ಚಕ್ಷುವಿಞ್ಞಾನಗಳಿಂದ ವಿಕಷರ್ಿಸುತ್ತಾನೆ, ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿಸುತ್ತಾನೆ, ಹಾಗೆಯೇ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದಾಗಿ ವಿಕಷರ್ಿಸುತ್ತಾನೆ... ಜಿಹ್ವೆಯಿಂದ ವಿಕಷರ್ಿತನಾಗುತ್ತಾನೆ, ರಸಗಳಿಂದ ವಿಕಷರ್ಿತನಾಗುತ್ತಾನೆ. ಜಿಹ್ವಾವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ, ಜಿಹ್ವಾಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ, ಜಿಹ್ವಾಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದ ವಿಕಷರ್ಿಸುತ್ತಾನೆ...
ಆತನು ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ, ಧಮ್ಮಗಳಿಂದ ವಿಕಷರ್ಿತನಾಗುತ್ತಾನೆ, ಮನೋವಿಞ್ಞಾನಗಳಿಂದ ವಿಕಷರ್ಿತನಾಗುತ್ತಾನೆ, ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ, ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ. ಜನ್ಮವು ಕ್ಷಯಿಸಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಹೀಗೆ ಭಗವಾನರು ಉಪದೇಶಿಸಿದರು: ಅಯುಷ್ಮಂತ ರಾಹುಲರು ಭಗವಾನರ ಬೋಧನೆಗೆ ಆನಂದಿತರಾದರು. ಈ ಸುತ್ತವು ಪ್ರವಚಿಸುತ್ತಿದ್ದಂತೆಯೇ ಆಯುಷ್ಮಂತ ರಾಹುಲರ ಚಿತ್ತವೂ ಆಸವಗಳಿಂದ ಮುಕ್ತವಾಗಿ ಆಸವರಹಿತರಾದರು. ಜೊತೆಗೆ ಸಹಸ್ರಾರು ದೇವತೆಗಳ ಮನಸ್ಸಿನಲ್ಲಿ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು. ಯಾವುದೆಲ್ಲವೂ ಸಮುದಯ (ಉದಯ) ಧಮ್ಮವನ್ನು ಹೊಂದಿದೆಯೋ ಅವೆಲ್ಲವೂ ನಿರೋಧ ಧಮ್ಮವನ್ನು ಹೊಂದಿವೆ.

35.12.9 ಸಂಯೋಜನಿಯ ಧಮ್ಮ ಸುತ್ತಂ (ಸಂಕೋಲೆಕಾರಿ ಸುತ್ತ)

122. ಸಂಕೋಲೆಕಾರಿಗಳ ಧಮ್ಮವನ್ನು ಉಪದೇಶಿಸುತ್ತಿದ್ದೇನೆ. ಭಿಕ್ಷುಗಳೇ, ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಸಂಯೋಜನಕಾರಿ (ಸಂಕೋಲೆಕಾರಿ) ಧಮ್ಮ ಹಾಗು ಯಾವುದು ಸಂಯೋಜನೆಗಳು (ಸಂಕೋಲೆಗಳು)? ಇಲ್ಲಿ ಭಿಕ್ಷುಗಳೇ, ಚಕ್ಷುವಿಞ್ಞಾನದಿಂದ ಗ್ರಹಿಸುವ ರೂಪಗಳು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯು, ಸಂತೋಷಕಾರಿಯು ಆಗಿವೆ. ಇವೇ ಸಂಯೋಜನಕಾರಿಯಾಗಿವೆ. ಇವುಗಳ ಬಗ್ಗೆ ಆಸೆ ಹಾಗು ರಾಗಗಳೇ ಸಂಯೋಜನವಾಗಿವೆ.... ಜಿಹ್ವಾವಿಞ್ಞಾಣದಿಂದ... ಮನೋವಿಞ್ಞಾಣದಿಂದ ಗ್ರಹಿಸುವ ಧಮ್ಮಗಳು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಇವನ್ನೇ ಸಂಯೋಜನಕಾರಿ ಧಮ್ಮವೆನ್ನುತ್ತಾರೆ. ಇವುಗಳಿಂದ ಉದಯಿಸುವ ಆಸೆ ಹಾಗು ರಾಗಗಳೇ ಸಂಯೋಜನಗಳಾಗಿವೆ. (ಈ ಸುತ್ತವು 109ನೇ ಸುತ್ತದಂತೆಯೇ ಭಾಗಶಃ ಇರುತ್ತದೆ.)

35.12.10 ಉಪಾದಾನಿಯ ಧಮ್ಮ ಸುತ್ತಂ (ಅಂಟುಕಾರಿ ವಿಷಯಗಳ ಸುತ್ತ)

123. ಅಂಟುಕಾರಿ ವಿಷಯಗಳ ಧಮ್ಮವನ್ನು ಉಪದೇಶಿಸುತ್ತೇನೆ. ಭಿಕ್ಷುಗಳೇ, ಹಾಗೆಯೇ ಅಂಟುವಿಕೆಯ ಬಗ್ಗೆಯು ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಅಂಟುಕಾರಿ ವಿಷಯಗಳು? ಇಲ್ಲಿ ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿ ಹಾಗು ಪ್ರಲೋಭನೆಕಾರಿಯು ಆಗಿವೆ. ಇವನ್ನೇ ಅಂಟುಕಾರಿ ವಿಷಯಗಳೆನ್ನುತ್ತಾರೆ. ಇವುಗಳಿಂದಾಗಿ ಉಂಟಾಗುವ ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿದೆ... ಭಿಕ್ಷುಗಳೇ, ಜಿಹ್ವಾವಿಞ್ಞಾಣದಿಂದ ಗ್ರಹಿಸಬಹುದಾದ ರಸಗಳಿವೆ... ಭಿಕ್ಷುಗಳೇ, ಮನೋವಿಞ್ಞಾನದಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ. ಅದು ಇಷ್ಟಪಡುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು ಹಾಗು ಪ್ರಲೋಭನಕಾರಿಯು ಆಗಿವೆ. ಇವನ್ನೇ ಭಿಕ್ಷುಗಳೇ, ಅಂಟುಕಾರಿ ವಿಷಯಗಳೆನ್ನುತ್ತಾರೆ. ಇವುಗಳಿಂದ ಉದಯಿಸುವಂತಹ ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿವೆ.
ಇಲ್ಲಿಗೆ 12ನೆಯದಾದ ಲೋಕಕಾಮಗುಣ ವಗ್ಗವು ಮುಗಿಯಿತು.

.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...