Saturday 2 June 2018

Samyutta nikaya 36 vedana samyutta 36.1 sagaatha vaggo ಸಗಾಥಾ ವಗ್ಗೋ

36. ವೇದನಾಸಂಯುತ್ತ

ಸಗಾಥಾ ವಗ್ಗೋ (ಗಾಥೆಗಳೊಂದಿಗೆ ಇರುವ ವರ್ಗ)

36.1.1 ಸಮಾಧಿ ಸುತ್ತಂ (ಸಮಾಧಿ ಸುತ್ತ)

249. ಭಿಕ್ಷುಗಳೇ, ಮೂರುಬಗೆಯ ವೇದನೆಗಳಿವೆ. ಯಾವುವವು ಮೂರು? ಸುಖವೇದನೆ (ಪ್ರಿಯ), ದುಃಖ (ಅಪ್ರಿಯ) ವೇದನೆ, ಪ್ರಿಯಾಪ್ರಿಯಗಳಲ್ಲದ (ತಟಸ್ಥ) ವೇದನೆ.
ಬುದ್ಧರ ಶ್ರಾವಕನು, ಸಮಾಹಿತನೂ, ಸ್ಪಷ್ಟವಾಗಿ ಗ್ರಹಿಸುವವನು
ಜಾಗ್ರತನು ಆಗಿರುತ್ತಾನೆ. ವೇದನೆಗಳನ್ನು ಅರಿಯುತ್ತಾನೆ
ಅವುಗಳ ಉದಯವನ್ನು ಸಹಾ.
ಹೇಗೆ ಕೊನೆಯಲ್ಲಿ ಅಳಿಯುತ್ತವೆ, ಕ್ಷಯವಾಗುವ ಮಾರ್ಗವನ್ನು ಸಹಾ
ಅರಿಯುತ್ತಾನೆ, ಯಾವ ಭಿಕ್ಷುವಿನಲ್ಲಿ ವೇದನೆಗಳು ನಾಶವಾಗಿದೆಯೋ
ಅತನು ಪರಿನಿಬ್ಬಾಣ ಪಡೆದಿರುತ್ತಾನೆ.

36.1.2 ಸುಖ ಸುತ್ತಂ (ಸುಖಸುತ್ತ)

250. ಭಿಕ್ಷುಗಳೇ, ಮೂರುಬಗೆಯ ವೇದನೆಗಳಿವೆ. ಯಾವುವವು? ಅವೇ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳು. ಇವೇ ಆ ಮೂರು ವೇದನೆಗಳು.
ಪ್ರಿಯವಾಗಿರಲಿ, ಅಪ್ರಿಯವಾಗಿರಲಿ, ಪ್ರಿಯಾಪ್ರಿಯಗಳಲ್ಲದೆಯೂ ಇರಲಿ
ಆಂತರ್ಯದ್ದಾಗಿರಲಿ, ಬಾಹ್ಯದ್ದಾಗಿರಲಿ, ಯಾವುದೇ ತರಹದ ವೇದನೆಗಳಿರಲಿ.
ಅವನ್ನು ದುಃಖವೆಂದು ಪರಿಗಣಿಸಲಿ, ಮೋಸ ಧರ್ಮವೆಂದು
ತಿಳಿಯಲಿ, ಯಾವ ರಾಗದ ರೀತಿಯಲ್ಲಿ ಸ್ಪರ್ಶವಾಗುತ್ತದೆಯೋ
ಹಾಗೆಯೇ ಬೀಳುವಿಕೆಯು ಸಹಾ ಕಾಣುತ್ತಾನೆ ಹೀಗೆ ಅವುಗಳ
ಬಗೆಗಿನ ಆಕರ್ಷಣೆ ಕಳೆದುಕೊಳ್ಳುತ್ತಾನೆ.

36.1.3 ಪಹಾನ ಸುತ್ತಂ

251. ಭಿಕ್ಷುಗಳೇ, ಮೂರುಬಗೆಯ ವೇದನೆಗಳಿವೆ, ಯಾವುವವು? ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆ. ಪ್ರಿಯವಾದ ವೇದನೆಗಳ ಮೇಲಿರುವ ರಾಗ ಅನುಶಯವನ್ನು ವಜರ್ಿಸಬೇಕು. ಅಪ್ರಿಯವಾದ ವೇದನೆಗಳ ಮೇಲಿರುವ ದ್ವೇಷ ಆನುಶಯವನ್ನು ವಜರ್ಿಸಬೆಕು. ಪ್ರಿಯಾಪ್ರಿಯಗಳಲ್ಲದ ವೇದನೆಗಳ ಮೇಲಿರುವ ಅಜ್ಞಾನದ (ಅವಿದ್ಯೆ) ಅನುಶಯವನ್ನು ವಜರ್ಿಸಬೇಕು. ಯಾವಾಗ ಭಿಕ್ಷುವು ಸುಖವೇದನೆಗಳ ರಾಗ ಅನುಶಯವನ್ನು, ಅಪ್ರಿಯ ವೇದನೆಗಳ ದ್ವೇಷ ಅನುಶಯವನ್ನು ಮತ್ತು ಪ್ರಿಯಾಪ್ರಿಯಗಳಲ್ಲದ ವೇದನೆಗಳ ಅವಿದ್ಯೆಯು ಅನುಶಯವನ್ನು ವಜರ್ಿಸಬೆಕು. ಯಾರಲ್ಲಿ ಅನುಶಯಗಳಿಲ್ಲವೋ, ಯಾರು ಸಮಂಜಸವಾಗಿ ದಶರ್ಿಸುವನೋ ತೃಷ್ಣೆಯನ್ನು ಕತ್ತರಿಸಿಹಾಕಿದ್ದನೋ, ಸಂಯೋಜನೆಗಳನ್ನು ಮುರಿದಿರುವನೋ ಅಹಂಕಾರವನ್ನು ಪೂರ್ಣವಾಗಿ ಇಲ್ಲವಾಗಿಸಿರುವನೋ, ಆತನು ದುಃಖದ ಅಂತ್ಯವನ್ನು ಮಾಡಿರುತ್ತಾನೆ, ಆತನಿಗೆ ಭಿಕ್ಷು ಎನ್ನುತ್ತಾರೆ.
ಸುಖವೇದನೆಗಳನ್ನು ಅನುಭವಿಸುತ್ತಿರುವಾಗ
ಒಬ್ಬನು ಅವುಗಳನ್ನು ಅರ್ಥಮಾಡಿಕೊಳ್ಳದಿದ್ದರೆ
ರಾಗದ ಅನುಶಯವು ಹಾಗೆ ಇರುತ್ತದೆ
ಅಂತಹವನಿಗೆ ವಿಮುಕ್ತಿಯು ದರ್ಶನವಾಗುವುದಿಲ್ಲ.
ದುಃಖ ವೇದನೆಗಳನ್ನು ಅನುಭವಿಸುತ್ತಿರುವಾಗ
ಒಬ್ಬನು ಅವುಗಳನ್ನು ಅರ್ಥಮಾಡಿಕೊಳ್ಳದಿದ್ದರೆ
ದ್ವೇಷದ ಅನುಶಯವು ಹಾಗೇ ಇರುತ್ತದೆ.
ಅಂತಹವನಿಗೆ ವಿಮುಕ್ತಿದಶರ್ಿನವಾಗುವುದಿಲ್ಲ.
ವಿಶಾಲಪ್ರಜ್ಞರು (ಭೂರಿಪಞ್ಞಾ) ಹೇಳಿರುವುದೇನೆಂದರೆ
ಅದುಃಖ ಅಸುಖ ವೇದನೆಗಳಲ್ಲಿಯೂ
ಒಬ್ಬನು ಆನಂದವನ್ನು ಹುಡುಕಿದರೆ
ಅಂತಹವನು ದುಃಖದಿಂದ ವಿಮುಕ್ತನಾಗುವುದಿಲ್ಲ.
ಆದರೆ ಯಾವ ಭಿಕ್ಷುವು ಉತ್ಸಾಹಿಯೋ
ಸ್ಪಷ್ಟವಾದ ಏಕಾಗ್ರಹಿಕೆಯನ್ನು ಅಲಕ್ಷಿಸುವುದಿಲ್ಲವೋ
ಅಂತಹ ಪಂಡಿತನು ಎಲ್ಲವನ್ನು
ಅರ್ಥಮಾಡಿಕೊಳ್ಳುತ್ತಾನೆ.
ಪೂರ್ಣವಾಗಿ ವೇದನೆಗಳನ್ನು ಅರ್ಥಮಾಡಿಕೊಂಡು
ಈ ಜನ್ಮದಲ್ಲೇ ಅನಾಸವನಾಗುತ್ತಾನೆ.
ಧಮ್ಮದಲ್ಲೇ ನೆಲೆನಿಂತಂತಹ ಅಂತಹ ವೇದಜ್ಞನನ್ನು
ಶರೀರದ ಭೇದವ (ಸಾವಿನ) ನಂತರ ಕಾಣಲಾಗುವುದಿಲ್ಲ.


36.1.4 ಪಾತಾಳ ಸುತ್ತಂ

252. ಭಿಕ್ಷುಗಳೇ, ಆಶ್ರತುವಾದ, ಸಾಮಾನ್ಯ ವ್ಯಕ್ತಿಯು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾನೆ: ಮಹಾಸಮುದ್ರದಲ್ಲಿ ಪಾತಾಳವಿದೆ (ತಳವಿಲ್ಲದ ಪ್ರಪಾತ). ಆತನು ಇಲ್ಲದಂತಹ, ನೈಜ್ಯವಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಭಿಕ್ಷುಗಳೇ, ಶಾರೀರಿಕ ದುಃಖ ವೇದನೆಗೆ ಇದು ಅಂಕಿತವಾಗಿದೆ. ಯಾವ ಆಶ್ರುತನಾದ ಪ್ರಾಪಂಚಿಕನು ಶಾರೀರಿಕ ದುಃಖಸ್ಪರ್ಶವನ್ನು ಪಡೆದಾಗ ಆತನು ಶೋಕಿಸುತ್ತಾನೆ, ದುಃಖಿಸುತ್ತಾನೆ, ಪ್ರಲಾಪಿಸುತ್ತಾನೆ, ಅಳುತ್ತಾನೆ, ಎದೆಬಡಿದುಕೊಳ್ಳುತ್ತಾನೆ, ಚಿತ್ತವಿಕ್ಷೇಪಗೊಳ್ಳುತ್ತಾನೆ. ಅಂತಹನಿಗೆ ಪಾತಾಳದಿಂದ ಮೇಲೇಳದ, ಕಾಲೂರದವನೆಂದು ಕರೆಯುತ್ತಾರೆ. ಆದರೆ ಭಿಕ್ಷುಗಳೇ, ಒಬ್ಬ ಸುಶಿಕ್ಷಿತ ಆರಿಯ ಶ್ರಾವಕನು ಶಾರೀತಿಕ ದುಃಖವೇದನೆಗಳನ್ನು ಸ್ಪಶರ್ಿಸಿದಾಗಲೂ ಶೋಕಿಸುವುದಿಲ್ಲ, ದುಃಖಿಸುವುದಿಲ್ಲ, ಪ್ರಲಾಪಿಸುವುದಿಲ್ಲ, ಅಳುವುದಿಲ್ಲ, ಎದೆಬಡಿದುಕೊಂಡು ಗೋಳಾಡುವುದಿಲ್ಲ, ಚಿತ್ತವಿಕ್ಷೇಪಗೊಳ್ಳುವುದಿಲ್ಲ. ಅಂತಹವನಿಗೆ ಪಾತಾಳದಿಂದ ಮೇಲೇಳುವವನು ಹಾಗು ಕಾಲೂರಿದವನು ಎನ್ನುತ್ತಾರೆ.
ಯಾರು ಉದಯಿಸಿದ ದುಃಖಕರ
ವೇದನೆಗಳನ್ನು ಸಹಿಸಲಾರನೋ
ಪ್ರಾಣಹರಿಸುವಂತಹ ಶಾರೀರಿಕ ನೋವುಗಳು
ಸ್ಪಶರ್ಿಸಿದರೂ ಕಂಪಿಸುವನೋ
ಅಂತಹವನಿಗೆ ಅಲ್ಪಶಕ್ತಿಯ ದುರ್ಬಲನೆನ್ನುತ್ತಾರೆ.
ಆತನು ಗಟ್ಟಿಯಾಗಿ ಪ್ರಲಾಪಿಸುತ್ತಾನೆ
ಅಂತಹವನು ಪಾತಾಳದಿಂದ ಎದ್ದಿಲ್ಲ
ಕಾಲೂರುವುದನ್ನು ಕಲಿತಿಲ್ಲ.
ಆದರೆ ಯಾರು ಇವೆಲ್ಲವನ್ನು ಸಹಿಸುವನೋ
ಉದಯಿಸಿದ ದುಃಖವೇದನೆಗಳನ್ನು ಸಹಿಸುವನೋ
ಪ್ರಾಣಹರಿಸುವಂತಹ ಶಾರೀರಿಕ ನೋವುಗಳು
ಸ್ಪಶರ್ಿಸಿದರೂ ಕಂಪಿಸಲಾರನೋ
ಅಂತಹವನು ಪಾತಾಳದಿಂದ ಎದ್ದಿರುವನು
ಕಾಲೂರುವುದನ್ನು ಕಲಿತಿರುವನು.


36.1.5 ದಟ್ಠಬ್ಬ ಸುತ್ತಂ (ದಶರ್ಿಸುವಂತಹ ಸುತ್ತ)

253. ಭಿಕ್ಷುಗಳೇ, ಮೂರುಬಗೆಯ ವೇದನೆಗಳಿವೆ. ಯಾವುವವು? ಸುಖವೇದನೆ, ದುಃಖವೇದನೆ ಮತ್ತು ಅಸುಖ-ಅದುಃಖ ವೇದನೆ. ಭಿಕ್ಷುಗಳೇ, ಸುಖಕರ ವೇದನೆಗಳನ್ನು ದುಃಖದಂತೆ ದಶರ್ಿಸಬೇಕು. ದುಃಖಕರ ವೇದನೆಗಳನ್ನು ಶಲ್ಯದಂತೆ ದಶರ್ಿಸಬೇಕು. ಸುಖವೂ ಅಲ್ಲದ, ದುಃಖವೂ ಅಲ್ಲದ ವೇದನೆಗಳನ್ನು ಅನಿತ್ಯವೆಂದು ದಶರ್ಿಸಬೇಕು. ಯಾವಾಗ ಭಿಕ್ಷುವು ಸುಖವೇದನೆಗಳನ್ನು ದುಃಖದಂತೆಯೋ, ದುಃಖಕರ ವೇದನೆಗಳನ್ನು (ಅಪರಿಯ) ಶಲ್ಯದಂತೆ ಮತ್ತು ತಟಸ್ಥ ವೇದನೆಗಳನ್ನು ಅನಿತ್ಯದಂತೆ ದಶರ್ಿಸುವನೋ ಅಂತಹವನು ಸರಿಯಾಗಿ ದಶರ್ಿಸುತ್ತಿದ್ದಾನೆ. ಆತನು ತೃಷ್ಣೆಯನ್ನು ಕತ್ತರಿಸಿದ್ದಾನೆ. ಸಂಕೋಲೆಗಳನ್ನು ಕತ್ತರಿಸಿದ್ದಾನೆ ಮತ್ತು ಅಹಂಕಾರವನ್ನು ಮುರಿದಿದ್ದಾನೆ ಹಾಗು ದುಃಖದ ಅಂತ್ಯ ಮಾಡಿದ್ದಾನೆ ಎನ್ನುತ್ತಾರೆ.
ಯಾರು ಸುಖವನ್ನು ದುಃಖದಂತೆ, ದುಃಖವನ್ನು ಶಲ್ಯದಂತೆ
ಸುಖ-ದುಃಖಗಳಲ್ಲದ ಶಾಂತವಾದ ವೇದನೆಗಳಲ್ಲಿ ಅನಿತ್ಯ ದಶರ್ಿಸುವನೋ
ಅಂತಹ ಭಿಕ್ಷುವೇ ಸರಿಯಾಗಿ ದಶರ್ಿಸುವವನಾಗಿದ್ದಾನೆ.
ವೇದನೆಗಳನ್ನು ಪರಿಪೂರ್ಣವಾಗಿ ಅರಿಯುವವನಾಗಿದ್ದಾನೆ.
ಯಾರು ಹೀಗೆ ವೇದನೆಗಳನ್ನು ಪೂರ್ಣವಾಗಿ ಅರಿಯುವನೋ
ಅಂತಹವನು ಈ ಜನ್ಮದಲ್ಲೇ ಅನಾಸ್ರವನಾಗುತ್ತಾನೆ.
ಸಾವಿನನಂತರ ಅಂತಹ ಧಮ್ಮದಲ್ಲಿ ನಿಂತಿರುವ
ವೇದಜ್ಞನು ಅಂಟಿಕೊಂಡಿರುವುದಿಲ್ಲ.


36.1.6 ಸಲ್ಲ ಸುತ್ತಂ (ಶಲ್ಯ ಸುತ್ತ)

254. ಭಿಕ್ಷುಗಳೇ, ಅಶ್ರುತವಾದ ಪ್ರಾಪಂಚಿಕನು ಸುಖವೇದನೆಗಳನ್ನು ದುಃಖವೇದನೆಗಳನ್ನು, ತಟಸ್ಥವೇದನೆಗಳನ್ನು ಅನುಭವಿಸುತ್ತಾನೆ. ಹಾಗೆಯೇ ಆರ್ಯಶ್ರಾವಕನು ಸಹಾ ಸುಖವೇದನೆಗಳನ್ನು ದುಃಖವೇದನೆಗಳನ್ನು ಮತ್ತು ತಟಸ್ಥವೇದನೆಗಳನ್ನು ಅನುಭವಿಸುತ್ತಾನೆ. ಹಾಗಿರುವಾಗ ಭಿಕ್ಷುಗಳೇ, ಇವರೀರ್ವರಲ್ಲಿ ವ್ಯತ್ಯಾಸವೇನು, ವಿಭಿನ್ನತೆಯೇನು, ಅಂತರವೇನು? - ಭಂತೆ ನಮಗೆ ಭಗವಾನರ ಮೂಲಕವಾಗಿಯೇ ಧಮ್ಮವು ಸಿಕ್ಕಿದೆ. ಹಾಗಾಗಿ ಇದರ ಸ್ಪಷ್ಟತೆಯನ್ನು ಭಗವಾನರೇ ತಿಳಿಯಪಡಿಸಬೇಕು, ಭಗವಾನರು ಈ ಹೇಳಿಕೆಗೆ ಅಥರ್ೈಸಿದರೆ ಸಾಧುವಾಗುವುದು. ಭಗವಾನರಿಂದ ಹೇಳಲ್ಪಟ್ಟ ಮತ್ತು ತಿಳಿಯಲ್ಪಟ್ಟಂ ನಂತರ ಭಿಕ್ಷುಗಳು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. - ಹಾಗಾದರೆ ಆಲಿಸಿ ಭಿಕ್ಷುಗಳೇ, ನಾನು ಹೇಳುವೆನು. - ಆಯಿತು ಭಂತೆ. - ಭಿಕ್ಷುಗಳೇ, ಅಶ್ರುತನಾದ ಪ್ರಾಪಂಚಿಕನು ದುಃಖಕರ ವೇದನೆಗಳನ್ನು ಸ್ಪಶರ್ಿಸಲ್ಪಟ್ಟಾಗ ಶೋಕಿಸುತ್ತಾನೆ, ದುಃಖಿಸುತ್ತಾನೆ, ಪ್ರಲಾಪಿಸುತ್ತಾನೆ. ಎದೆಬಡಿದುಕೊಂಡು ರೋಧಿಸುತ್ತಾನೆ. ಆತನು ಎರಡು ವಿಧದ ವೇದನೆಗಳನ್ನು ಅನುಭವಿಸುತ್ತಾನೆ. ಅವೆಂದರೆ: ಶಾರೀರಿಕ ವೇದನೆ ಮತ್ತು ಮಾನಸಿಕ ವೇದನೆ. ಊಹಿಸಿರಿ, ಆತನಿಗೆ ಶಲ್ಯದಿಂದ ಹೊಡೆದರೆ ಪ್ರತಿಯಾಗಿ ಎರಡನೆಯ ಶಲ್ಯದಿಂದ ಹೊಡೆಯುವರು. ಹೀಗಾಗಿ ಆ ಮುನಷ್ಯನು ಎರಡು ಶಲ್ಯಗಳಿಂದ ನೋವು ಅನುಭವಿಸುತ್ತಾನೆ. ಹೀಗಾಗಿ ಅಶ್ರುತನಾದ ಪ್ರಾಪಂಚಿಕನು ದುಃಖವೇದನೆಯಿಂದ ಸ್ಪಶರ್ಿಸಲ್ಪಟ್ಟಾಗ... ಆತನು ಶಾರೀರಿಕ ಹಾಗು ಮಾನಸಿಕ ಎರಡು ವೇದನೆಗಳನ್ನು ಅನುಭವಿಸುತ್ತಾನೆ.
ಯಾವಾಗ ಆತನಿಗೆ ನೋವಿನ (ದುಃಖ) ವೇದನೆಯು ಸ್ಪಶರ್ಿಸಲ್ಪಡುವುದೋ ಆಗ ಆತನು ಅದನ್ನು ದ್ವೇಷಿಸುತ್ತಾನೆ. ಇದಕ್ಕೆ ಕಾರಣವೇನೆಂದರೆ, ದುಃಖವೇದನೆಯನ್ನು ದ್ವೇಷಿಸುವ ಅನುಶಯ (ಪ್ರವೃತ್ತಿ) ಇದ್ದುದರಿಂದಲೇ ಹಾಗೆ ಆಗುವುದು. ಹಾಗೆಯೇ ಆತನಿಗೆ ನೋವಿನ (ದುಃಖಗಳು) ವೇದನೆ ಸ್ಪಶರ್ಿಸಿದಾಗ ಆತನು ಇಂದ್ರೀಯ ಸುಖದ ಹುಡುಕಾಟದಲ್ಲಿ ಆನಂದಿಸುತ್ತಿರುತ್ತಾನೆ. ಕಾರಣವೇನು? ಏಕೆಂದರೆ ಅಶಿಕ್ಷಿತ ಪ್ರಾಪಂಚಿಕನಿಗೆ ದುಃಖವೇದನೆಯಿಂದ ಪಾರಾಗಲು ಸುಖವೇದನೆಯ ವಿನಃ ಬೇರೇನೂ ತೋಚದು. ಯಾವಾಗ ಆತನು ಇಂದ್ರೀಯ ಸುಖಗಳಲ್ಲಿ ಆನಂದ ಹುಡುಕುವನು. ಪ್ರಿಯವೇದನೆಗಳಲ್ಲಿ ರಾಗಾಸಕ್ತಿಯಿರುವ ಅನುಶಯವೇ ಇದಕ್ಕೆ ಕಾರಣವಾಗಿದೆ. ಆತನಿಗೆ ಇದರ ಉದಯ ಹಾಗು ಅಳಿವು ಅರ್ಥವಾಗುವುದಿಲ್ಲ. ಆಸ್ವಾದತೆಯಾಗಲಿ, ಅಪಾಯವಾಗಲಿ ಹಾಗು ಈ ವೇದನೆಗಳ ಬಿಡುಗಡೆಯಾಗಲಿ ತಿಳಿದಿಲ್ಲ. ಯಾವಾಗ ಆತನಿಗೆ ಇವೆಲ್ಲಾ ತಿಳಿಯುವುದಿಲ್ಲವೋ ಆಗ ಅಸುಖ-ಅದುಃಖ ವೇದನೆಯಲ್ಲಿನ ಅವಿದ್ಯೆಯ ಅನುಶಯವೇ ಇದಕ್ಕೆ ಕಾರಣವಾಗಿದೆ.
ಆತನು ಸುಖವೇದನೆಯಲ್ಲಿ ಆನಂದಿಸಿದರೆ ಆತನು ಅಂಟಿಕೊಳ್ಳುತ್ತಾನೆ. ಆತನು ದುಃಖವೇದನೆಯಲ್ಲಿ ದ್ವೇಷಿಸಿದರೆ ಆಗಲೂ ಅಂಟಿಕೊಳ್ಳುತ್ತಾನೆ. ಆತನು ಅಸುಖ-ಅದುಃಖ ವೇದನೆಗಳಲ್ಲಿ ಅನುಭವಿಸಲು ತೊಡಗಿದರೆ ಆಗಲೂ ಅಂಟಿಕೊಳ್ಳುತ್ತಾನೆ. ಇದನ್ನೇ ಭಿಕ್ಷುಗಳೇ ಅಶ್ರುತವಾದ ಪ್ರಾಪಂಚಿಕನು ಜನ್ಮಕ್ಕೆ ಜರಾ ಮರಣಕ್ಕೆ ದುಃಖ, ಪ್ರಲಾಪ, ನೋವು-ನಿರಾಶೆಗಳ ದುಃಖರಾಶಿಗೆ ಅಂಟುವಂತಾಗುತ್ತದೆ. ಅದಕ್ಕೆ ನಾನು ಹೇಳುತ್ತಿದ್ದೇನೆ, ಇವನು ದುಃಖಕ್ಕೆ ಅಂಟಿದ್ದಾನೆ.
ಭಿಕ್ಷುಗಳೇ, ಯಾವಾಗ ಸುಶಿಕ್ಷಿತ ಆರ್ಯಶ್ರಾವಕನು, ದುಃಖ ವೇದನೆಗಳಿಂದ ಸ್ಪಶರ್ಿಸಲ್ಪಟ್ಟಾಗ ಆತನು ಶೋಕಿಸಲಾರನು, ದುಃಖಿಸಲಾರನು, ಪ್ರಲಾಪಿಸಲಾರನು. ಆತನು ಎದೆಬಡಿದುಕೊಂಡು ಶೋಕಿಸಲಾರನು. ಆತನು ಕೇವಲ ಒಂದೇ ವೇದನೆಯನ್ನು ಅನುಭವಿಸುತ್ತಾನೆ. ಅದೇ ಶಾರೀರಿಕ ಮಾತ್ರ. ಆದರೆ ಮಾನಸಿಕ ವೇದನೆ ತಾಳಲಾರನು. (ಹೇಗೆಂದರೆ ಆತನ ಕಾಲಿಗೆ ಗಾಯವಾಗಿ ಅತ್ಯಂತ ನೋವು ಕಾಡುತ್ತಿರುತ್ತದೆ. ಆದರೆ ಮಾನಸಿಕವಾಗಿ ಆತನು ವಿರೋಧಿಸಲಾರನು, ಶೋಕಿಸಲಾರನು, ಬೇಗ ಗುಣವಾಗಲಿ ಎಂದು ಇಚ್ಛಿಸಲಾರನು). ಊಹಿಸಿರಿ, ಒಬ್ಬನಿಗೆ ಭಜರ್ಿಯಿಂದ ಹೊಡೆದಿದ್ದಾರೆ, ಆದರೆ ಆತನಿಗೆ ಮತ್ತೆ ಅಲ್ಲೇ ಇನ್ನೊಮ್ಮೆ ಹೊಡೆಯಲಾರರು. ಹೀಗಾಗಿ ಆ ಮುನಷ್ಯ ಒಂದು ಭಜರ್ಿಯ ಹೊಡೆತ ಮಾತ್ರ ಆನುಭವಿಸುತ್ತಾನೆ. ಹೀಗೆಯೇ ಸುಶಿಕ್ಷಿತ ಆರ್ಯಶ್ರಾವಕನು ನೋವಿನ ವೇದನೆಗಳಿಗೆ ಸ್ಪಶರ್ಿಸಲ್ಪಟ್ಟಾಗ ಕೇವಲ ಶಾರೀರಿಕ ವೇದನೆ ಅನುಭವಿಸುತ್ತಾನೆ, ಮಾನಸಿಕವಲ್ಲ. ಅದೇ ನೋವಿನ ವೇದನೆಗಳನ್ನು ಸ್ಪಶರ್ಿಸಲ್ಪಟ್ಟಾಗ ಅದನ್ನು ದ್ವೇಷಿಸುವುದಿಲ್ಲ. ಯಾವಾಗ ಆತನಿಗೆ ನೋವಿನ ವೇದನೆಗಳಲ್ಲಿ ದ್ವೇಷವಿಲ್ಲವೋ ಅಗ ಆತನಲ್ಲಿ ದ್ವೇಷದ ಅನುಶಯವು ಇಲ್ಲವಾಗುತ್ತದೆ. ಹಾಗೆಯೇ ಆತನು ನೋವಿನ ವೇದನೆಗಳನ್ನು ಸ್ಪಶರ್ಿಸಲ್ಪಟ್ಟಾಗ ಆತನು ಇಂದ್ರೀಯ ಸುಖಗಳಲ್ಲಿ ಆನಂದ ಹುಡುಕುವುದಿಲ್ಲ. ಏಕೆಂದರೆ ಸುಶಿಕ್ಷಿತ ಆರ್ಯಶ್ರಾವಕನಿಗೆ ನೋವಿನಿಂದ ಪಾರಾಗಲು ಇಂದ್ರೀಯ ಸುಖದಲ್ಲಿ ಆನಂದಿಸುವುದಕ್ಕಿಂತ ಬೇರೆಯ ಉನ್ನತ ವಿಧಾನ ತಿಳಿದಿರುತ್ತದೆ. ಯಾವಾಗ ಆತನು ಇಂದ್ರೀಯ ಸುಖಗಳಲ್ಲಿ ಆನಂದಿಸಲಾರನೋ, ಆತನಲ್ಲಿ ಪ್ರಿಯವೇದನೆಗಳಿಗೆ ಸ್ಪಂದಿಸುವಂತಹ ರಾಗ ಅನುಶಯವು ಇಲ್ಲವಾಗಿರುತ್ತದೆ. ಆತನು ಯಥಾಭೂತವಾಗಿ ಉದಯ ಹಾಗು ಅಳಿವನ್ನು ದಶರ್ಿಸುತ್ತಾನೆ. ವೇದನೆಗಳ ಆಸ್ವಾದನೆ, ಅಪಾಯ, ಬಿಡುಗಡೆ ಅರಿತಿರುತ್ತಾನೆ. ಯಾವಾಗ ಆತನು ಇವನ್ನು ಅರಿತಿರುವನೋ ಅಗ ಆತನಲ್ಲಿ ಸುಖವೂ ಅಲ್ಲದ ದುಃಖವೂ ಅಲ್ಲದ ವೇದನೆಗಳ ಹಿನ್ನೆಲೆಯಲ್ಲಿರುವ ಅಜ್ಞಾನದ ಅನುಶಯವೂ ಇರುವುದಿಲ್ಲ. ಆತನು ಸುಖವೇದನೆಯನ್ನು ಅನುಭವಿಸಿದರೆ ಆತನು ವಿಮುಖನಾಗುತ್ತಾನೆ (ಅನಾಸಕ್ತನಾಗುತ್ತಾನೆ/ಸಜ್ಞಾರಹಿತನಾಗುತ್ತಾನೆ). ಆತನು ನೋವಿನ ವೇದನೆ ಅನುಭವಿಸಿದಾಗಲು ವಿಮುಖನಾಗುತ್ತಾನೆ. ಆತನು ಅಸುಖ-ಅದುಃಖ (ತಟಸ್ಥ) ವೇದನೆಗಳನ್ನು ಅನುಭವಿಸಿದಾಗಲು ಆತನು ವಿಮುಖನಾಗುತ್ತಾನೆ. ಹೀಗೆ ಭಿಕ್ಷುಗಳೇ, ಆರ್ಯಶ್ರಾವಕನು ಜನ್ಮದಿಂದ ಜರಾಮರಣಗಳಿಂದ, ಮೃತ್ಯುವಿನಿಂದ, ವಿಮುಖನಾಗಿ ದುಃಖರಾಶಿಯಿಂದಲೇ ವಿಮುಖನಾಗುತ್ತಾನೆ. ಹೀಗೆ ನಾನು ಹೇಳುತ್ತಿದ್ದೇನೆ, ಇದೇ ಭಿಕ್ಷುಗಳೇ ಅಶ್ರುತ ಪ್ರಾಪಂಚಿಕನಿಗೂ ಹಾಗೂ ಆರ್ಯಶ್ರಾವಕನಿಗೂ ಇರುವಂತಹ ವ್ಯತ್ಯಾಸವಾಗಿದೆ, ವಿಭಿನ್ನತೆಯಾಗಿದೆ, ಅಂತರವಾಗಿದೆ.
ಪ್ರಜ್ಞಾವಂತನು ವೇದನೆಗಳನ್ನು ಅನುಭವಿಸುವುದಿಲ್ಲ.
ಅವು ಸುಖಗಳೇ ಆಗಲಿ, ದುಃಖಗಳೇ ಆಗಲಿ
ಇದೇ ಪ್ರಾಪಂಚಿಕನಿಗೂ ಹಾಗೂ ಕುಶಲ ವಿಶೇಷಗಳನ್ನು
ಹೊಂದಿರುವ ಧೀರ ಪ್ರಜ್ಞಾವಂತನಿಗೂ ಇರುವ ವ್ಯತ್ಯಾಸವಾಗಿದೆ.
ಬಹುಶ್ರುತನು, ಧಮ್ಮಗ್ರಾಹ್ಯಿಯು ಆದ ಆತನು
ಈ ಲೋಕವನ್ನು ಸ್ಪಷ್ಟವಾಗಿ ಕಾಣುತ್ತಾನೆ ಹಾಗು ಪರಲೋಕವನ್ನು ಸಹಾ.
ಆಕರ್ಷಕ ವಿಷಯಗಳು ಆತನ ಚಿತ್ತವನ್ನು ಉತ್ತೇಜಿಸಲಾರವು
ಅಪ್ರಿಯ ಆಗಮನದಲ್ಲೂ ಆತನು ವಿರೋಧ ಹೊಂದಲಾರನು.
ಯಾರಲ್ಲಿ ಆಕರ್ಷಣೆ ಹಾಗು ವಿರೋಧ ಎರಡು ಇಲ್ಲವೋ
ನಂದಿಹೋಗಿವೆಯೋ, ಅಂತ್ಯವಾಗಿವೆಯೋ,
ವಿರಜವೂ ಅಶೋಕವೂ ಆದಂತಹ ಸ್ಥಿತಿಗಳ ಜ್ಞಾನಿಯೋ
ಅಂತಹ ಭವ ದಾಟಿದವನು ಸಮಂಜಸವಾಗಿಯೇ ಅರಿತಿರುತ್ತಾನೆ.


36.1.7 ಪಠಮ ಗೇಲಞ್ಞ ಸುತ್ತಂ (ಪ್ರಥಮ ರೋಗಿ ವಿಭಾಗ ಸುತ್ತ)

255. ಒಮ್ಮೆ ಭಗವಾನರು ವೈಶಾಲಿಯಲ್ಲಿನ ಮಹಾವನದ ಕೂಟಾಗಾರ (ಶಿಖರಗಳ ಛಾವಣಿ) ಸಭಾಂಗಣದಲ್ಲಿದ್ದರು. ಆ ದಿನ ಸಾಯಂಕಾಲದಲ್ಲಿ ಭಗವಾನರು ಏಕಾಂತದಿಂದ ಎದ್ದು ರೋಗಿಗಳ ಶಾಲೆಗೆ (ರೋಗಿಗಳ ವಿಭಾಗ) ಹೋದರು. ಅಲ್ಲಿ ಅಸೀನರಾಗಿ ಭಿಕ್ಷುಗಳಿಗೆ ಹೀಗೆ ನುಡಿದರು: ಭಿಕ್ಷುಗಳೇ, ಭಿಕ್ಷುವು ತನ್ನ ಕಾಲವನ್ನು ಸ್ಮೃತಿಯಿಂದ ಹಾಗು ಸ್ಪಷ್ಟವಾದ ಗ್ರಹಿಕೆಯಿಂದ ಬಳಸಬೇಕು ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಮತ್ತೆ ಭಿಕ್ಷುಗಳೇ, ಹೇಗೆ ಭಿಕ್ಷುವು ಸ್ಮೃತಿಸಂಪನ್ನನಾಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಾಯಗತಾಸ್ಮೃತಿಯಲ್ಲಿ ಇರುತ್ತಾನೆ. ಉತ್ಸಾಹಿಯಾಗಿ, ಸ್ಪಷ್ಟವಾದ ಗ್ರಹಿಕೆಯುಳ್ಳವನಾಗಿ, ಜಾಗ್ರತವಾಗಿ ಲೋಕದ ಯಾವುದಕ್ಕೂ ದುರಾಸೆಪಡದೆ ಹಾಗೆಯೇ ಅಸಂತುಷ್ಟನಾಗದೆ ಇರುತ್ತಾನೆ. ಹಾಗೆಯೇ ಆತನು ವೇದನೆಗಳಲ್ಲಿ ವೇದಾನುಪಸ್ಸಿಯಾಗಿ ವಿಹರಿಸುತ್ತಾನೆ... ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ... ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿಯಾಗಿ ಸ್ಪಷ್ಟವಾದ ಗ್ರಹಿಕೆಯುಳ್ಳವನಾಗಿ, ಜಾಗ್ರತೆಯುಳ್ಳವನಾಗಿ, ಲೋಕದ ಯಾವುದಕ್ಕೂ ದುರಾಸೆಯಾಗಲಿ, ದ್ವೇಷವಾಗಲಿ ತಾಳದೆ ಇರುತ್ತಾನೆ. ಈ ಬಗೆಯಲ್ಲಿ ಭಿಕ್ಷುವು ಸ್ಮೃತಿವಂತನಾಗಿರುತ್ತಾನೆ.
ಮತ್ತೆ ಭಿಕ್ಷುಗಳೇ, ಹೇಗೆ ಭಿಕ್ಷುವು ಸಂಪಜ್ಞಾನನಾಗುತ್ತಾನೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಹೋಗುವಾಗಾಗಲಿ, ಹಿಂತಿರುಗುವಾಗಾಗಲಿ, ಮುಂದೆ, ಪಕ್ಕದಲ್ಲಿ ನೋಡುವಾಗಾಗಲಿ, ಅಂಗಗಳನ್ನು ಸಂಕುಚಿತ ಅಥವಾ ವಿಸ್ತಾರ ಮಾಡುವುದಾಗಲಿ, ಚೀವರ ಧರಿಸುವಾಗ ಆಹಾರ ಸೇವಿಸುವಾಗ, ನೀರು ಕುಡಿಯುವಾಗ, ಅಗಿಯುವಾಗ, ರುಚಿ ನೋಡುವಾಗ, ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ, ನಿದ್ರೆ ಹೋಗುವಾಗ, ನಿದ್ರೆಯಿಂದ ಎದ್ದನಂತರ, ಮಾತನಾಡುವಾಗ, ನಿಶ್ಶಬ್ಧ ಹೊಂದಿರುವಾಗ ಹೀಗೆ ಸರ್ವ ಅವಸ್ಥೆಯಲ್ಲೂ ಭಿಕ್ಷು ಜಾಗರೂಕನಾಗಿ ಸ್ಪಷ್ಟ ಗ್ರಹಿಕೆಯುಳ್ಳವನಾಗುತ್ತಾನೆ. ಭಿಕ್ಷುಗಳೇ, ಸರ್ವ ಕಾಲದಲ್ಲೂ ಸ್ಮೃತಿಯನ್ನು ಹಾಗು ಸ್ಪಷ್ಟಗ್ರಹಿಕೆಯನ್ನು ಅಭ್ಯಸಿಸುತ್ತಾನೆ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ಯಾವಾಗ ಭಿಕ್ಷುವು ಈ ರೀತಿಯಾಗಿ ಸ್ಮೃತಿಯಿಂದ ಹಾಗು ಸ್ಪಷ್ಟ ಜ್ಞಾನದಿಂದ (ಸ್ಪಷ್ಟ ಗ್ರಹಿಕೆ) ಇದ್ದಾಗ, ಅಪ್ರಮತ್ತನಾಗಿರುವಾಗ, ಉತ್ಸಾಹಿಯಾಗಿರುವಾಗ, ದೃಢಪರಿಶ್ರಮಿಯಾಗಿರುವಾಗ ಆತನಿಗೆ ಅಪ್ರಿಯವಾದ ವೇದನೆಗಳು ಉದಯಿಸುತ್ತವೆ. ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ನನ್ನಲ್ಲಿ ಈಗ ಅಪ್ರಿಯವೇದನೆಗಳು ಉಂಟಾಗಿವೆ, ಅದು ಅವಲಂಬನೆಯಾಗಿದೆ, ಸ್ವತಂತ್ರವಾಗಿ ಅಲ್ಲ. ಹಾಗಾದರೆ ಇದು ಯಾವುದರಿಂದ ಅವಲಂಬಿತವಾಗಿದೆ? ದೇಹಕ್ಕೆ ಅವಲಂಬಿತವಾಗಿದೆ. ಆದರೆ ಈ ಶರೀರವು ಅನಿತ್ಯಕರವಾಗಿದೆ, ಕಾರಣಬದ್ಧವಾಗಿದೆ, ಅವಲಂಬನೆಯಿಂದ ಉದಯಿಸಿದೆ. ಯಾವಾಗ ಹೀಗೆ ಅನಿತ್ಯಕರ, ಕಾರಣಬದ್ಧ, ಅವಲಂಬನೆಯಿಂದಾದ ಶರೀರದಿಂದ ಉಂಟಾಗಿರುವ ಈ ಅಪ್ರಿಯ ವೇದನೆಯು ಹೇಗೆತಾನೆ ನಿತ್ಯವಾಗಬಲ್ಲದು? ಹೀಗೆ ಆತನು ಶರೀರದಲ್ಲಿ ಮತ್ತು ದುಃಖ ವೇದನೆಯಲ್ಲಿ ಅನಿತ್ಯವನ್ನು ಕಾಣುತ್ತಾನೆ. ಹಾಗೆಯೇ ಆತನು ಮರೆಯಾಗುವಿಕೆಯ ಬಗ್ಗೆ ಚಿಂತನೆ ನಡೆಸುತ್ತಾನೆ. ಅಳಿವಾಗುತ್ತಿರುವುದರ ಬಗ್ಗೆ ಚಿಂತನೆ ನಡೆಸುತ್ತಾನೆ. ನಿರೋಧದ ಬಗ್ಗೆಯೂ ಚಿಂತನೆ ನಡೆಸುತ್ತಾನೆ. ಹಾಗೆಯೇ ಬಿಟ್ಟುಬಿಡುವುದರ (ಪರಿತ್ಯಾಗ) ಬಗ್ಗೆಯು ಚಿಂತನೆ ನಡೆಸುತ್ತಾನೆ. ಯಾವಾಗ ಹೀಗೆ ವಿಹರಿಸುತ್ತಾನೆಯೋ ಆಗ ಕಾಯಕ್ಕೆ ಸಂಬಂಧಿಸಿದ ಹಾಗು ಅದುಃಖ-ಅಸುಖ ವೇದನೆಗಳ ಬಗ್ಗೆ ಇರುವ ಅಜ್ಞಾನವು ಆತನಿಂದ ವಜರ್ಿತವಾಗುತ್ತದೆ.
ಆತನು ಪ್ರಿಯವಾದ ವೇದನೆಯನ್ನು ಅನುಭವಿಸುತ್ತಿರುವಾಗ, ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ಇದು ಅನಿತ್ಯಕರವಾದುದು, ಹಾಗೆಯೇ ಇದನ್ನು ಹಿಡಿಯಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಇದರಲ್ಲಿ ಆನಂದಿಸಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆತನು ದುಃಖಕರ ವೇದನೆ ಅನುಭವಿಸುವಾಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ, ಇದು ಅನಿತ್ಯಕರ, ಇದನ್ನು ಹಿಡಿಯಬಾರದು. ವೇದನೆಗಳನ್ನು ಅನುಭವಿಸುವಾಗ ಇದು ಅನಿತ್ಯಕರ, ಇದನ್ನು ಹಿಡಿಯಬಾರದು, ಇದರಲ್ಲಿ ಆನಂದಿಸಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆತನು ಪ್ರಿಯವಾದ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಆತನು ದುಃಖಕರ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಆತನು ತಟಸ್ಥ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಅವುಗಳಲ್ಲಿ ಕಳಚಿದಂತಹ ಅನುಭೂತಿ ಪಡೆಯುತ್ತಾನೆ.
ಯಾವಾಗ ಅವನು ಶರೀರದಲ್ಲೆಲ್ಲಾ ವೇದನೆಗಳು ಅಂತ್ಯವಾಗುತ್ತದೆ ಎಂದು ಅನುಭವಿಸುತ್ತಾನೋ ಆಗ ಆತನು ಶರೀರದಲ್ಲಿ ವೇದನೆಗಳು ಅಂತ್ಯವಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತಾನೆ. ಯಾವಾಗ ಅತನಿಗೆ ಜೀವವನ ಅಂತ್ಯವಾಗುವ ವೇದನೆಯನ್ನು ಅನುಭವಿಸುತ್ತಾನೆ ಎಂದು ಅನುಭವಕ್ಕೆ ಬಂದಾಗ ಹಾಗೆಯೇ ಅರ್ಥಮಾಡಿಕೊಳ್ಳುತ್ತಾನೆ. ಕಾಯವು ಬೇದವಾಗಿ ಜೀವನ ಅಂತ್ಯವಾಗುತ್ತದೆ, ಅವೆಲ್ಲಾ ಅನುಭವಿಸುವಾಗ ಆನಂದಿಸಲು ಆಗುವುದಿಲ್ಲ. ಅವೆಲ್ಲವೂ ಅಲ್ಲಿ ತಣ್ಣಗಾಗುತ್ತದೆ (ಸೀತಿ) ಎಂದು ಅರ್ಥಮಾಡಿಕೊಳ್ಳುತ್ತಾನೆ.
ಭಿಕ್ಷುಗಳೇ, ಇದು ಹೇಗೆಂದರೆ ಒಂದು ದೀಪವು ಎಣ್ಣೆಯ ಹಾಗು ಬತ್ತಿಯ ಅವಲಂಬನೆಯಿಂದಾಗಿ ಉರಿಯುತ್ತದೆ ಮತ್ತು ನಂತರ ಎಣ್ಣೆಯ ಇಲ್ಲವಾಗುವಿಕೆಯಿಂದ ಹಾಗು ಬತ್ತಿಯು ಮುಗಿಯುವಿಕೆಯಿಂದ ಅದು ನಂದಿಹೋಗುವುದು. ಅದೇರೀತಿಯಲ್ಲಿ ಭಿಕ್ಷುಗಳೇ, ಶರೀರದಲ್ಲಿ ವೇದನೆಗಳೆಲ್ಲಾ ಅಂತ್ಯವಾಗುತ್ತಿವೆ... ಕಾಯವು ಭೇದವಾಗಿ ಜೀವನವು ಅಂತ್ಯವಾಗುತ್ತದೆ. ಅವೆಲ್ಲಾ ಅನುಭವಿಸುವಾಗ ಆನಂದಿಸಲು ಆಗುವುದಿಲ್ಲ, ಅವೆಲ್ಲವೂ ಅಲ್ಲಿ ತಣ್ಣಗಾಗುತ್ತದೆ.


36.1.8 ದುತಿಯ ಗೇಲಞ್ಞ ಸುತ್ತಂ (ದ್ವಿತೀಯ ರೋಗಿ ಸುತ್ತ)

256. ಒಮ್ಮೆ ಭಗವಾನರು ವೈಸಾಲಿಯ ಮಹಾವನದಲ್ಲಿರುವ ಕೂಟಾಗಾರ ಸಾಲಯದಲ್ಲಿ (ಶಿಖರಗಳಿರುವ ಛಾವಣಿಯ ಸಭಾಂಗಣ) ಭಗವಾನರು ಸಾಯಂಕಾಲದ ಸಮಯದಲ್ಲಿ ಏಕಾಂತದಿಂದೆದ್ದು, ರೋಗಿಗಳ ಶಾಲೆಗೆ ಆಗಮಿಸಿದರು. ತಮಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತು ಭಿಕ್ಷುಗಳಿಗೆ ಹೀಗೆಂದರು: ಭಿಕ್ಷುಗಳೇ, ಭಿಕ್ಷುವು ತನ್ನ ಕಾಲವನ್ನು ಸ್ಮೃತಿಯಿಂದ ಹಾಗು ಸ್ಪಷ್ಟವಾದ ಗ್ರಹಿಕೆಯಿಂದ ಬಳಸಬೇಕು ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಮತ್ತೆ ಭಿಕ್ಷುಗಳೇ, ಹೇಗೆ ಭಿಕ್ಷುವು ಸ್ಮೃತಿಸಂಪನ್ನನಾಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಾಯಗತಾಸ್ಮೃತಿಯಲ್ಲಿ ಇರುತ್ತಾನೆ. ಉತ್ಸಾಹಿಯಾಗಿ, ಸ್ಪಷ್ಟವಾದ ಗ್ರಹಿಕೆಯುಳ್ಳವನಾಗಿ, ಜಾಗ್ರತವಾಗಿ ಲೋಕದ ಯಾವುದಕ್ಕೂ ದುರಾಸೆಪಡದೆ ಹಾಗೆಯೇ ಅಸಂತುಷ್ಟನಾಗದೆ ಇರುತ್ತಾನೆ. ಹಾಗೆಯೇ ಆತನು ವೇದನೆಗಳಲ್ಲಿ ವೇದಾನುಪಸ್ಸಿಯಾಗಿ ವಿಹರಿಸುತ್ತಾನೆ... ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ... ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿಯಾಗಿ ಸ್ಪಷ್ಟವಾದ ಗ್ರಹಿಕೆಯುಳ್ಳವನಾಗಿ, ಜಾಗ್ರತೆಯುಳ್ಳವನಾಗಿ, ಲೋಕದ ಯಾವುದಕ್ಕೂ ದುರಾಸೆಯಾಗಲಿ, ದ್ವೇಷವಾಗಲಿ ತಾಳದೆ ಇರುತ್ತಾನೆ. ಈ ಬಗೆಯಲ್ಲಿ ಭಿಕ್ಷುವು ಸ್ಮೃತಿವಂತನಾಗಿರುತ್ತಾನೆ.
ಮತ್ತೆ ಭಿಕ್ಷುಗಳೇ, ಹೇಗೆ ಭಿಕ್ಷುವು ಸಂಪಜ್ಞಾನನಾಗುತ್ತಾನೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಹೋಗುವಾಗಾಗಲಿ, ಹಿಂತಿರುಗುವಾಗಾಗಲಿ, ಮುಂದೆ, ಪಕ್ಕದಲ್ಲಿ ನೋಡುವಾಗಾಗಲಿ, ಅಂಗಗಳನ್ನು ಸಂಕುಚಿತ ಅಥವಾ ವಿಸ್ತಾರ ಮಾಡುವುದಾಗಲಿ, ಚೀವರ ಧರಿಸುವಾಗ ಆಹಾರ ಸೇವಿಸುವಾಗ, ನೀರು ಕುಡಿಯುವಾಗ, ಅಗಿಯುವಾಗ, ರುಚಿ ನೋಡುವಾಗ, ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ, ನಿದ್ರೆ ಹೋಗುವಾಗ, ನಿದ್ರೆಯಿಂದ ಎದ್ದನಂತರ, ಮಾತನಾಡುವಾಗ, ನಿಶ್ಶಬ್ಧ ಹೊಂದಿರುವಾಗ ಹೀಗೆ ಸರ್ವ ಅವಸ್ಥೆಯಲ್ಲೂ ಭಿಕ್ಷು ಜಾಗರೂಕನಾಗಿ ಸ್ಪಷ್ಟ ಗ್ರಹಿಕೆಯುಳ್ಳವನಾಗುತ್ತಾನೆ. ಭಿಕ್ಷುಗಳೇ, ಸರ್ವ ಕಾಲದಲ್ಲೂ ಸ್ಮೃತಿಯನ್ನು ಹಾಗು ಸ್ಪಷ್ಟಗ್ರಹಿಕೆಯನ್ನು ಅಭ್ಯಸಿಸುತ್ತಾನೆ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ಯಾವಾಗ ಭಿಕ್ಷುವು ಹೀಗೆ ವಿಹರಿಸುತ್ತಾನೆಯೋ ಸ್ಮೃತಿವಂತನಾಗಿ ಮತ್ತು ಸ್ಪಷ್ಟ ಗ್ರಹಿಕೆಯಳ್ಳವನಾಗಿ ಉತ್ಸಾಹಿಯಾಗಿ, ಅಪ್ರಮತ್ತನಾಗಿ, ದೃಢನಾಗಿ ಶ್ರಮಿಸುತ್ತಾನೆ. ಆಗ ಆತನಲ್ಲಿ ಪ್ರಿಯವಾದ ವೇದನೆಗಳು ಉದಯಿಸುತ್ತವೆ. ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ನನ್ನಲ್ಲಿ ಸುಖವಾದ ವೇದನೆಗಳು ಉದಯಿಸಿವೆ. ಆದರೆ ಅವು ಅವಲಂಬಿತವಾಗಿದೆ, ಸ್ವತಂತ್ರವಾಗಿಲ್ಲ. ಯಾವುದಕ್ಕೆ ಅವಲಂಬಿತವಾಗಿದೆ? ಅವೆಲ್ಲಾ ಸ್ಪರ್ಶಕ್ಕೆ ಅವಲಂಬಿತವಾಗಿದೆ. ಆದರೆ ಈ ಸ್ಪರ್ಶವು ಅನಿತ್ಯಕರವಾಗಿದೆ, ಕಾರಣಬದ್ಧವಾಗಿದೆ. ಅವಲಂಬನೆಯಿಂದ ಉದಯಿಸುವಂತಹದ್ದಾಗಿದೆ. ಹೀಗಾಗಿ ಯಾವಾಗ ಪ್ರಿಯವೇದನೆಯು ಸ್ಪರ್ಶವನ್ನು ಅವಲಂಬಿಸಿ ಉದಯಿಸುತ್ತದೋ, ಆ ಸ್ಪರ್ಶವು ಅನಿತ್ಯಕರವಾಗಿದೆ, ಕಾರಣಬದ್ಧವಾಗಿದೆ. ಹೀಗಾಗಿ ಇದು ಹೇಗೆ ನಿತ್ಯವಾಗಲು ಸಾಧ್ಯ? ಹೀಗೆ ಆತನು ಸ್ಪರ್ಶದ ಅನಿತ್ಯ ಹಾಗು ಸುಖವೇದನೆಯ ಕುರಿತು ಚಿಂತನೆ ಮಾಡುತ್ತಾನೆ. ನಂತರ ವಯಾನುಪಸ್ಸತಿ (ಎಲ್ಲವೂ ಅಳಿಯುವುದು). ನಂತರ ವಿರಾಗಾನುಪಸ್ಸತಿ, ನಂತರ ನಿರೋಧಾನುಪಸ್ಸತಿ, ಆನಂತರ ಪಟಿನಿಸ್ಸಗಾನುಪಸ್ಸೀ (ಬಿಟ್ಟಿಬಿಡುವುದರ ಕುರಿತು ಚಿಂತನೆ) ಚಿಂತನೆ ಮಾಡುತ್ತಾನೆ. ಯಾವ ಸ್ಪರ್ಶದಿಂದ ಸುಖವೇದನೆಯು ಉದಯಿಸುವುದೋ ಅವೆಲ್ಲಾ ರಾಗಾನುಶಯವನ್ನು ಹೊಂದಿರುತ್ತವೆ.
ಆತನು ಪ್ರಿಯವಾದ ವೇದನೆಯನ್ನು ಅನುಭವಿಸುತ್ತಿರುವಾಗ, ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ಇದು ಅನಿತ್ಯಕರವಾದುದು, ಹಾಗೆಯೇ ಇದನ್ನು ಹಿಡಿಯಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಇದರಲ್ಲಿ ಆನಂದಿಸಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆತನು ದುಃಖಕರ ವೇದನೆ ಅನುಭವಿಸುವಾಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ, ಇದು ಅನಿತ್ಯಕರ, ಇದನ್ನು ಹಿಡಿಯಬಾರದು. ವೇದನೆಗಳನ್ನು ಅನುಭವಿಸುವಾಗ ಇದು ಅನಿತ್ಯಕರ, ಇದನ್ನು ಹಿಡಿಯಬಾರದು, ಇದರಲ್ಲಿ ಆನಂದಿಸಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆತನು ಪ್ರಿಯವಾದ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಆತನು ದುಃಖಕರ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಆತನು ತಟಸ್ಥ ವೇದನೆಗಳನ್ನು ಅನುಭವಿಸುವಾಗ ಸಂಜ್ಞಾತೀತನಾಗುತ್ತಾನೆ (ವಿಸಞ್ಞತೋ). ಅವುಗಳಲ್ಲಿ ಕಳಚಿದಂತಹ ಅನುಭೂತಿ ಪಡೆಯುತ್ತಾನೆ.
ಯಾವಾಗ ಅವನು ಶರೀರದಲ್ಲೆಲ್ಲಾ ವೇದನೆಗಳು ಅಂತ್ಯವಾಗುತ್ತದೆ ಎಂದು ಅನುಭವಿಸುತ್ತಾನೋ ಆಗ ಆತನು ಶರೀರದಲ್ಲಿ ವೇದನೆಗಳು ಅಂತ್ಯವಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತಾನೆ. ಯಾವಾಗ ಅತನಿಗೆ ಜೀವವನ ಅಂತ್ಯವಾಗುವ ವೇದನೆಯನ್ನು ಅನುಭವಿಸುತ್ತಾನೆ ಎಂದು ಅನುಭವಕ್ಕೆ ಬಂದಾಗ ಹಾಗೆಯೇ ಅರ್ಥಮಾಡಿಕೊಳ್ಳುತ್ತಾನೆ. ಕಾಯವು ಬೇದವಾಗಿ ಜೀವನ ಅಂತ್ಯವಾಗುತ್ತದೆ, ಅವೆಲ್ಲಾ ಅನುಭವಿಸುವಾಗ ಆನಂದಿಸಲು ಆಗುವುದಿಲ್ಲ. ಅವೆಲ್ಲವೂ ಅಲ್ಲಿ ತಣ್ಣಗಾಗುತ್ತದೆ (ಸೀತಿ) ಎಂದು ಅರ್ಥಮಾಡಿಕೊಳ್ಳುತ್ತಾನೆ.
ಭಿಕ್ಷುಗಳೇ, ಇದು ಹೇಗೆಂದರೆ ಒಂದು ದೀಪವು ಎಣ್ಣೆಯ ಹಾಗು ಬತ್ತಿಯ ಅವಲಂಬನೆಯಿಂದಾಗಿ ಉರಿಯುತ್ತದೆ ಮತ್ತು ನಂತರ ಎಣ್ಣೆಯ ಇಲ್ಲವಾಗುವಿಕೆಯಿಂದ ಹಾಗು ಬತ್ತಿಯು ಮುಗಿಯುವಿಕೆಯಿಂದ ಅದು ನಂದಿಹೋಗುವುದು. ಅದೇರೀತಿಯಲ್ಲಿ ಭಿಕ್ಷುಗಳೇ, ಶರೀರದಲ್ಲಿ ವೇದನೆಗಳೆಲ್ಲಾ ಅಂತ್ಯವಾಗುತ್ತಿವೆ... ಕಾಯವು ಭೇದವಾಗಿ ಜೀವನವು ಅಂತ್ಯವಾಗುತ್ತದೆ. ಅವೆಲ್ಲಾ ಅನುಭವಿಸುವಾಗ ಆನಂದಿಸಲು ಆಗುವುದಿಲ್ಲ, ಅವೆಲ್ಲವೂ ಅಲ್ಲಿ ತಣ್ಣಗಾಗುತ್ತದೆ.



36.1.9 ಅನಿಚ್ಚ ಸುತ್ತಂ (ಅನಿತ್ಯ ಸುತ್ತ)

257. ಭಿಕ್ಷುಗಳೇ, ಈ ಮೂರು ವೇದನೆಗಳು ಅನಿತ್ಯಕರವಾಗಿವೆ, ಸಂಖತಧಮ್ಮವಾಗಿವೆ (ಕಾರಣಬದ್ಧವಾಗಿವೆ). ಅವಲಂಬನೆಯಿಂದ ಉದಯಿಸುವಂತಹದ್ದಾಗಿದೆ, ನಾಶವಾಗುವ ಧಮ್ಮವಾಗಿದೆ. ವಿರಾಗ ಧಮ್ಮವನ್ನು ಹೊಂದಿವೆ ಮತ್ತು ನಿರೋಧ ಧಮ್ಮವನ್ನು ಹೊಂದಿವೆ. ಯಾವುವವು? ಅವೇ ಸುಖವೇದನೆ, ದುಃಖವೇದನೆ ಮತ್ತು ಅದುಃಖ-ಅಸುಖ ವೇದನೆ. ಭಿಕ್ಷುಗಳೇ, ಈ ಮೂರು ಇವು ಅನಿತ್ಯಕರವಾಗಿವೆ, ಕಾರಣಬದ್ಧವಾಗಿದೆ. ಅವಲಂಬನೆಯಿಂದ ಉದಯಿಸುವಂತಹದ್ದಾಗಿದೆ, ನಾಶವಾಗುವಂತಹದ್ದಾಗಿದೆ, ಮರೆಯಾಗುವಂತಹದ್ದಾಗಿದೆ, ವಿರಾಹ ಹೊಂದುವಂತಹದ್ದಾಗಿದೆ ಮತ್ತು ನಿರೋಧ ಧಮ್ಮವನ್ನು ಹೊಂದಿವೆ.


36.1.10 ಫಸ್ಸ ಮೂಲಕ ಸುತ್ತಂ (ಸ್ಪರ್ಶ ಮೂಲದ ಸುತ್ತ)

258. ಭಿಕ್ಷುಗಳೇ, ಈ ಮೂರು ವೇದನೆಗಳು ಸ್ಪರ್ಶದಿಂದ ಜನ್ಮತಾಳಿವೆ. ಸ್ಪರ್ಶದಲ್ಲಿ ಮೂಲಹೊಂದಿವೆ. ಸ್ಪರ್ಶವೇ ಅವುಗಳ ಮೂಲ ಮತ್ತು ಸ್ಥಿತಿ. ಯಾವುವವು? ಅವೇ ಸುಖವೇದನೆ, ದುಃಖವೇದನೆ ಮತ್ತು ಅದುಃಖ-ಅಸುಖ ವೇದನೆ. ಭಿಕ್ಷುಗಳೇ, ಸ್ಪರ್ಶವನ್ನು ಅವಲಂವಿಸಿ ಸುಖವೇದನೆ ಉದಯಿಸುತ್ತದೆ. ಸ್ಪರ್ಶದ ನಿರೋಧದಿಂದ ಸುಖವನ್ನು (ಲೋಕೋತ್ತರ ಸುಖ) ಅನುಭವಿಸಬಹುದು. ಆದರೆ ಯಾವ ಸುಖವೇದನೆಯು ಸ್ಪರ್ಶವನ್ನು ಅವಲಂಬಿಸಿದೆಯೋ ಅದು ನಿರೋಧವಾಗುತ್ತದೆ ಮತ್ತು ಮರೆಯಾಗುತ್ತದೆ. ಸ್ಪರ್ಶವನ್ನು ಅವಲಂಬಿಸಿ ದುಃಖವೇದನೆಯು ಉದಯಿಸುತ್ತದೆ. ಅಂತಹ ದುಃಖವೇದನೆಯು ಸ್ಪರ್ಶ ನಿರೋಧದಿಂದಲೇ ನಿರೋಧವಾಗುವುದು. ಯಾವ ದುಃಖ ವೇದನೆಯು ಸ್ಪರ್ಶದ ಅವಲಂಬನೆಯಿಂದ ಉದಯಿಸಿತೋ ಅವು ನಿರೋಧಗೊಳ್ಳುವುದು ಮತ್ತು ಮರೆಯಾಗುವುದು. ಸ್ಪರ್ಶದ ಅವಲಂಬಿನೆಯಿಂದಲೇ ಅದುಃಖ ಅಸುಖ ವೇದನೆಯು ಉದಯಿಸುವುದು. ಅಂತಹ ಅದುಃಖ ಅಸುಖ ವೇದನೆಯು ಸ್ಪರ್ಶದಿಂದಲೇ ನಿರೋಧವಾಗುವುದು. ಯಾವ ತಟಸ್ಥ ವೇದನೆಗಳು ಅವಲಂಬನೆಯಿಂದ ಉದಯಿಸಿತೋ ಅವೆಲ್ಲಾ ನಿರೋಧವಾಗುವುವು ಮತ್ತು ಮರೆಯಾಗುವುವು. ಭಿಕ್ಷುಗಳೇ ಹೇಗೆ ಎರಡು ಬೆಂಕಿಕಡ್ಡಿಗಳಿಂದ ಘರ್ಷಣೆಯನ್ನುಂಟುಮಾಡಿ ಕೂಡಿಸಿ ಅಗ್ನಿಯು ಹಾಗು ಶಾಖವನ್ನು ಮಾಡಬಹುದು. ಆದರೆ ಆ ಕಡ್ಡಿಗಳನ್ನು ಬೇರೆ ಮಾಡಿ, ಒಂದೆಡೆ ಇಟ್ಟುಬಿಟ್ಟರೆ ಶಾಖವು ನಿರೋಧವಾಗುವುದು ಮತ್ತು ಮರೆಯಾಗುವುದು. ಹೀಗೆ ಯಾವ ಮೂರು ವೇದನೆಗಳು ಸ್ಪರ್ಶದಿಂದ ಉದಯವಾಯಿತೋ, ಸ್ಪರ್ಶದಲ್ಲೇ ಮೂಲವಿದೆಯೋ, ಸ್ಪರ್ಶವೇ ಅದರ ಸಂಪನ್ಮೂಲ ಹಾಗು ಸ್ಥಿತಿಯೋ, ಸೂಕ್ತ ಸ್ಪರ್ಶಗಳಿಂದ ಅನುಗುಣವಾದ ವೇದನೆಗಳು ಉದಯಿಸುತ್ತವೆ. ಅಂತಹ ಸೂಕ್ತವಾದ ಸ್ಪರ್ಶಗಳನ್ನು ನಿರೋಧಗೊಳಿಸಿದಾಗ ಅದಕ್ಕೆ ಅನುಗುಣವಾದ ವೇದನೆಗಳು ನಿರೋಧಗೊಳ್ಳುತ್ತವೆ.
ಇಲ್ಲಿಗೆ ಸಗಾಥಾ ವರ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...